ಸೌತೆಪ್ರಿಯನ ಸಂತರ್ಪಣೆ

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರ, ಬೆಳ್ತಂಗಡಿ ತಾ.

Team Udayavani, Oct 12, 2019, 4:07 AM IST

soute-priya

ಇಲ್ಲಿನ ಗಣಪನಿಗೆ ಗರ್ಭಗುಡಿ ಇಲ್ಲ; ಗೋಡೆ- ಗೋಪುರಗಳೂ ಇಲ್ಲ. ಬಯಲು ಗಣಪತಿ ಈತ. ಬೆಳ್ತಂಗಡಿ ತಾಲೂಕಿನ ಸೌತಡ್ಕದ ಸುಂದರ ಪರಿಸರದಲ್ಲಿ ನೆಲೆನಿಂತ ಮಹಾ ಗಣಪತಿಯ ಸನ್ನಿಧಾನದಲ್ಲಿ ಅನ್ನ ಸಂತರ್ಪಣೆಯೂ ಒಂದು ಸಂಭ್ರಮ. ಪ್ರತಿದಿನ ಮಧ್ಯಾಹ್ನದ ಅನ್ನಸಂತರ್ಪಣೆಗೆ ದೈವಿಕ ವಿಶೇಷವಿದೆ. ಮಕ್ಕಳಅನ್ನಪ್ರಾಶನಕ್ಕೆ ಸದ್ಭಕ್ತರು ಮುಗಿಬೀಳುತ್ತಾರೆ.

ಸೌತೆಯಿಂದ ಸಂತರ್ಪಣೆಯ ತನಕ…: ದಟ್ಟಾರಣ್ಯದ ಕಾಡಿನಲ್ಲಿ ಗೋಪಾಲಕರಿಗೆ ಗಣಪತಿಯ ಶಿಲಾವಿಗ್ರಹ ಸಿಗುತ್ತದೆ. ಗೋಪಾಲಕರು ಅದನ್ನು ಒಂದು ಸ್ಥಳದಲ್ಲಿ ಕಟ್ಟೆಯ ಮೇಲೆ ಪ್ರತಿಷ್ಠಾಪಿಸುತ್ತಾರೆ. ಆ ಸ್ಥಳವೇ ಸೌತಡ್ಕ ಕ್ಷೇತ್ರ ಆಯಿತು. ಗೋಪಾಲಕರು ಗಣಪತಿಗೆ ಸೌತೆಕಾಯಿಯನ್ನು ಸಮರ್ಪಿಸಿದ್ದರಂತೆ. ಅದಕ್ಕಾಗಿ ಇಲ್ಲಿಗೆ “ಸೌತಡ್ಕ’ ಎಂಬ ಹೆಸರು ಬಂತು. ಸೌತೆಕಾಯಿ ನೈವೇದ್ಯದ ಸಂಪ್ರದಾಯ ಇಂದಿಗೂ ಇದೆ.

ನಿತ್ಯ ಸಾವಿರ ಭಕ್ತರಿಗೆ ಭೋಜನ: ನಿತ್ಯವೂ ಇಲ್ಲಿ 1000ಕ್ಕೂ ಅಧಿಕ ಭಕ್ತರು, ಭೋಜನ ಸವಿಯುತ್ತಾರೆ. ಸಂಕಷ್ಟಿ, ಭಾನುವಾರ ಹಾಗೂ ರಜಾದಿನಗಳು ಭಕ್ತರ ಸಂಖ್ಯೆ ಹೆಚ್ಚುತ್ತದೆ. ಚೌತಿ, ಮೂಡಪ್ಪ ಸೇವೆಯ ದಿನಗಳಲ್ಲಿ 5- 6 ಸಾವಿರದ ಗಡಿ ದಾಟುತ್ತದೆ.

ಆಧುನಿಕ ಅಡುಗೆಮನೆ: ಸೋಲಾರ್‌ ಚಾಲಿತ ಆಧುನಿಕ ಶೈಲಿಯ, ದೊಡ್ಡ ಹಾಗೂ ಮಧ್ಯಮ ಗಾತ್ರದ 5 ಬಾಯ್ಲರ್‌ಗಳಿವೆ. ಅನ್ನ, ಪಾಯಸ, ಸಾಂಬಾರ್‌ ಸಿದ್ಧಗೊಳ್ಳುವುದು ಇವುಗಳಲ್ಲಿಯೇ. ಅಡುಗೆ ತಯಾರಿಕೆಗೆ ಗ್ಯಾಸ್‌ ಸಿಲಿಂಡರ್‌ ಜತೆಗೆ ಕಟ್ಟಿಗೆ ಒಲೆಯ ವ್ಯವಸ್ಥೆಯೂ ಇದೆ.

ಸುಸಜ್ಜಿತ ಭೋಜನಶಾಲೆ: ಇಲ್ಲಿನ ಭೋಜನ ಶಾಲೆಯು ಸುಸಜ್ಜಿತ. ಏಕಕಾಲದಲ್ಲಿ ಸಾವಿರ ಮಂದಿ ಕುಳಿತು ಭೋಜನ ಸವಿಯಬಹುದು. ವಿಶೇಷಚೇತನರಿಗೆ ಟೇಬಲ್‌ ಊಟದ ವ್ಯವಸ್ಥೆ ಇರುತ್ತದೆ.

ಭಕ್ಷ್ಯ ವಿಶೇಷ: ನಿತ್ಯವೂ ಅನ್ನ, ತಿಳಿಸಾರು, ಸಾಂಬಾರು, ಗಟ್ಟಿ ಪಲ್ಯ, ಪಾಯಸ, ಮಜ್ಜಿಗೆ. ಬಾಳೆಎಲೆ ಮತ್ತು ಊಟದ ತಟ್ಟೆಯಲ್ಲಿ ಭೋಜನ ವ್ಯವಸ್ಥೆ.

ಊಟದ ಸಮಯ: ಮಧ್ಯಾಹ್ನ 12.30- 2.30

ಏಕಾದಶಿಗೆ ಉಪಹಾರ: ಏಕಾದಶಿ ದಿನಗಳಲ್ಲಿ ಊಟವಿರುವುದಿಲ್ಲ. ಈ ದಿನಗಳಲ್ಲಿ ಉಪಾಹಾರ ವ್ಯವಸ್ಥೆ ಇರುತ್ತದೆ ಉಪ್ಪಿಟ್ಟು, ಅವಲಕ್ಕಿ, ಸಾಂಬಾರು, ಮೊಸರು, ಮಜ್ಜಿಗೆ ವಿತರಿಸಲಾಗುತ್ತದೆ.

ಹೆಚ್ಚು ಬಳಕೆಯಾಗುವ ತರಕಾರಿ: ಕುಂಬಳಕಾಯಿ, ಸಿಹಿ ಕುಂಬಳಕಾಯಿ, ಟೊಮೇಟೊ, ಬದನೆ, ಬೀನ್ಸ್‌, ಸೌತೆಕಾಯಿ, ಆಲೂಗಡ್ಡೆ, ಕೊತ್ತಂಬರಿ ಸೊಪ್ಪು, ಹಸಿಮೆಣಸು.

ಸಂಖ್ಯಾ ಸೋಜಿಗ
2- ಕ್ವಿಂಟಲ್‌ ಅಕ್ಕಿ ನಿತ್ಯ ಬಳಕೆ
3- ತಾಸಿನಲ್ಲಿ ಅಡುಗೆ ಸಿದ್ಧ
5- ಬಾಣಸಿಗರಿಂದ ಅಡುಗೆ
70- ಕಿಲೋ ತರಕಾರಿ ಬಳಕೆ
200- ಲೀಟರ್‌ ಸಾಂಬಾರು
1000- ಸದ್ಭಕ್ತರಿಗೆ ನಿತ್ಯ ಅನ್ನಸಂತರ್ಪಣೆ
5,00,000- ಭಕ್ತರಿಂದ ಕಳೆದವರ್ಷ ಭೋಜನ ಸ್ವೀಕಾರ

ಅನ್ನದಾನ ಎನ್ನುವುದು ಬಹಳ ಶ್ರೇಷ್ಠ ಕಾರ್ಯ. ಭಕ್ತರ ಹಸಿವು ನೀಗಿಸುವ ಕೆಲಸವನ್ನು ದೇವಸ್ಥಾನ ಸಮಿತಿ ಅತ್ಯಂತ ಯಶಸ್ವಿಯಾಗಿ ನಿರ್ವಹಿಸುತ್ತಿದೆ.
-ಹರಿಶ್ಚಂದ್ರ, ದೇವಸ್ಥಾನದ ಉಸ್ತುವಾರಿ

* ಬಾಲಕೃಷ್ಣ ಭೀಮಗುಳಿ

ಟಾಪ್ ನ್ಯೂಸ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.