ವಿನಾಯಕ ಚಿತ್ರಕಥಾ


Team Udayavani, Sep 7, 2019, 1:43 PM IST

bhu-3

ಪೌರಾಣಿಕ ಜಗತ್ತಿನ ಅದ್ಭುತಗಳನ್ನು ಒಂದು ಸಾಲಿನಲ್ಲಿ ನಿಲ್ಲಿಸುತ್ತಾ ಹೋದರೆ, ಅಲ್ಲಿನ ಪ್ರಥಮಪಂಕ್ತಿಯಲ್ಲಿ ಗಜಮುಖನೇ ಕಾಣಿಸುತ್ತಾನೆ. ಅದರಲ್ಲೂ ಮಕ್ಕಳಿಗೆ ಗಣಪತಿಯ ರೂಪವೇ ಒಂದು ಕುತೂಹಲದ ಆಕರ್ಷಣೆ. ಮನುಷ್ಯನಂತೆ ಇದ್ದ ದೇವರಿಗೆ, ಆನೆಯ ಮುಖ ಹೇಗೆ ಬಂತು ಎನ್ನುವ ಪ್ರಶ್ನೆ ಎಲ್ಲರ ಬಾಲ್ಯದಲ್ಲೂ ಕಾಡಿದ ಸಹಜ ಸುಂದರ ಪ್ರಶ್ನೆ. ಗಣೇಶನ ಈ ಜನ್ಮವೃತ್ತಾಂತವನ್ನು ತೆರೆದಿಡುವ ಪಾರ್ಕ್‌ ಒಂದು ಜನರನ್ನು ಸೆಳೆಯುತ್ತದೆ. ಹೊನ್ನಾವರದಿಂದ ಇಡಗುಂಜಿಗೆ ಬರುವ ದಾರಿಯಲ್ಲಿ ವಿನಾಯಕ ಪ್ರತಿದಿನ ಬರುವ ಪ್ರವಾಸಿಗರನ್ನು ಸ್ವಾಗತಿಸಿ, ತನ್ನ ಜನ್ಮ ವೃತ್ತಾಂತವನ್ನು ಹೇಳುತ್ತಿದ್ದಾನೆ. ಈ “ವಿನಾಯಕ ವನ’ದಲ್ಲಿರುವ ಪ್ರತಿ ಕಲಾಕೃತಿಗಳೂ, ಜೀವದೃಶ್ಯಗಳಾಗಿ ಕತೆ ಹೇಳುತ್ತವೆ.

ಪಾರ್ವತಿ ಸ್ನಾನಕ್ಕೆ ಹೋಗುವಾಗ ಬಾಗಿಲು ಕಾಯುವ ಗಣಪ; ಅದೇ ಸಮಯಕ್ಕೆ ಆಗಮಿಸಿದ ಶಿವನನ್ನು ತಡೆದ ಬಾಲ ಗಣಪ; ಕೋಪಗೊಂಡ ಶಿವನು ಗಣಪನ ಶಿರವನ್ನು ಕತ್ತರಿಸಿದಾಗ, ಪಾರ್ವತಿಯ ಗೋಳಾಟ; ಆಗ ವ್ಯಕ್ತವಾಗುವ ಪಾರ್ವತಿಯ ಮಾತೃಪ್ರೇಮ… ಇವೆಲ್ಲವನ್ನೂ ಕಣ್ಣಿಗೆ ಕಟ್ಟಿದ ಹಾಗೆ ಇಲ್ಲಿನ ಕಲಾಕೃತಿಗಳಲ್ಲಿ ನಿರೂಪಿಸಲಾಗಿದೆ. ಶಿವನ ಸೂಚನೆಯಂತೆ ಉತ್ತರ ದಿಕ್ಕಿಗೆ ಮಲಗಿದ ವ್ಯಕ್ತಿಯ ತಲೆಯನ್ನು ತರಲು ಹೊರಟವನಿಗೆ ಕಂಡಿದ್ದು ಆನೆ. ಅದರ ತಲೆಯನ್ನು, ಗಣಪನಿಗೆ ಜೋಡಿಸಿ, ಜೀವ ತುಂಬಿದ ರೋಮಾಂಚಕ ಕ್ಷಣ, ಹಾವನ್ನು ಬಿಗಿದು ಕಟ್ಟಿದ ಡೊಳ್ಳು ಹೊಟ್ಟೆಯ ಲಂಬೋದರನ ಬದುಕಿನ ನಾನಾ ಸನ್ನಿವೇಶಗಳು ಇಲ್ಲಿ ಹೃನ್ಮನ ಸೆಳೆಯುವಂತೆ ಕೆತ್ತಲಾಗಿದೆ.

ಇದೆಲ್ಲದರ ಜತೆಗೆ ಪೋಷಕರಿಗೊಂದು ಪಾಠವೂ ಇಲ್ಲಿ ದರ್ಶನವಾಗುತ್ತದೆ. ಯಾವುದೇ ಮಗು “ವಿಶೇಷ’ ರೂಪದಲ್ಲಿ ಜನಿಸಿದರೆ ಅದನ್ನು ಕಡೆಗಣಿಸಬೇಡಿ, ಪ್ರೀತಿಯಿಂದ ನೋಡಿಕೊಳ್ಳಿ. ಅದಕ್ಕೆ ಆತ್ಮವಿಶ್ವಾಸ ತುಂಬಿ. ಅದಕ್ಕೂ ವಿಶೇಷ ಶಕ್ತಿಯಿದೆ. ಅದನ್ನು ಗುರುತಿಸುವ ಕೆಲಸ ಮಾಡಿ… ಎನ್ನುವ ಸಂದೇಶದ ಮೂಲಕ ಈ ಗಣಪನ ದೃಶ್ಯಗಳು ನಮ್ಮ ಮನದಾಳದಲ್ಲಿ ನೆಲೆ ನಿಲ್ಲುತ್ತವೆ.

 

ಚಿತ್ರ-ಲೇಖನ: ಟಿ. ಶಿವಕುಮಾರ್‌

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.