ವಾಟ್ಸಾಪ್‌ ಕತೆ : ನೇಪಾಲಿ ಗಾರ್ಡ್‌


Team Udayavani, Oct 20, 2019, 4:00 AM IST

c-10

ನಾನು ವಿಶ್ವವಿದ್ಯಾನಿಲಯದಲ್ಲಿ ಪರೀಕ್ಷಾ ಉಪನಿಯಂತ್ರಕನಾಗಿ ಅಧಿಕಾರ ವಹಿಸಿಕೊಂಡು ವಾರವಷ್ಟೇ ಆಗಿತ್ತು. ಆಗ ಇಂಟರ್‌ನೆಟ್‌ ಸೌಲಭ್ಯವಿಲ್ಲದ ಕಾರಣ ಪ್ರಶ್ನೆಪತ್ರಿಕೆಗಳನ್ನು ಕಾಲೇಜುಗಳಿಗೆ ತೆಗೆದುಕೊಂಡು ಹೋಗಿ ಪರೀಕ್ಷೆ ನಡೆಸುವ ಪದ್ಧತಿ ಇತ್ತು.

ಆ ದಿನ ಬೆಳಿಗ್ಗೆ ಪ್ರಶ್ನೆಪತ್ರಿಕೆಗಳನ್ನು ತೆಗೆದುಕೊಂಡು ಹೋಗುವ ಹೊಣೆಗಾರಿಕೆ ನನ್ನದಾಗಿತ್ತು. ಪರೀಕ್ಷೆ 10 ಗಂಟೆಗೆ. ಆದ ರೂ ವಿವಿಯಿಂದ ಕಾಲೇಜು ತಲುಪಲು ಒಂದೂವರೆ ಗಂಟೆ ಪ್ರಯಾಣವಿದೆ. ಬೆಳಗ್ಗೆ 7.30ಕ್ಕೆ ಹೊರಡುವ ಒತ್ತಡವಿತ್ತು. ಕಾಲು ಗಂಟೆ ಮೊದಲೇ ವಿವಿ ತಲುಪಿ ಸೆಕ್ಯೂರಿಟಿ ಗಾರ್ಡನ ಬಳಿ ಪರೀಕ್ಷಾಂಗ ವಿಭಾಗದ ಮುಖ್ಯದ್ವಾರದ ಬೀಗದ ಕೈಯನ್ನು ತೆಗೆದುಕೊಂಡು, ಒಳಗಡೆ ಲಾಕರ್‌ನಲ್ಲಿರುವ ಪ್ರಶ್ನೆಪತ್ರಿಕೆಗಳ ಪ್ಯಾಕೆಟನ್ನು ಬ್ರಿàಫ್ಕೇಸಿನಲ್ಲಿ ಹಾಕಿ, ಡ್ರೈವರ್‌ ರಾಮನಿಗೆ ಕಾಯುವುದು ನನ್ನ ಯೋಜ ನೆ ಯಾಗಿತ್ತು.

ಆದರೆ, ನಡೆದದ್ದೇ ಬೇರೆ. ವಿವಿಯ ಸೆಕ್ಯೂರಿಟಿ ಗಾರ್ಡ್‌, “ಸಾರ್‌, ಮೈನೆ ಆಪ್ಕೊ ಪೆಹೆಲೆ ನಹಿ ದೆಖ ಹೈ, ಚಾವಿ ನಹಿ ದೆ ಸಕತ’ (ನಾನು ನಿಮ್ಮನ್ನು ಈ ಮೊದಲು ನೋಡಿಲ್ಲ, ಹಾಗಾಗಿ, ಕೀ ಕೊಡಲಾಗುವುದಿಲ್ಲ) ಎಂದುಬಿಟ್ಟ.

ನಾನು ನನ್ನ ಐಡಿ ಕಾರ್ಡ್‌ ತೋರಿಸಿದೆ. “ಐಸೆ ಕಾರ್ಡ್‌ ತೊ ಕೊಯಿಭೀ ಬನಾ ಸಕ್ತಾ ಹೈ ಸರ್‌’ (ಇಂತಹ ಕಾರ್ಡ್‌ ಯಾರು ಬೇಕಾದರೂ ಮಾಡಿಸಬಹುದು) ಎಂದು ಸುಮ್ಮನಾದ. ನನಗೋ, ಏಳೂವರೆಗೆ ಸಿದ್ಧನಾಗಬೇಕು ಎಂಬ ಒತ್ತಡ ಒಂದೆಡೆ, ಇಲ್ಲಿ ಕೀ ಕೊಡಲಾರೆ ಎನ್ನುತ್ತಿರುವ ಗಾರ್ಡ್‌ನ ಉದ್ಧಟತನ ಇನ್ನೊಂದೆಡೆ. ಏನು ಮಾಡುವುದು ಎಂದು ತೋಚದೆ, ಆತನಿಗೆ ನನ್ನ ಸಂಧಿಗ್ಧ ಪರಿಸ್ಥಿತಿ ವಿವರಿಸ ತೊಡಗಿದೆ. ನನ್ನ ಪರಿಸ್ಥಿತಿಯನ್ನು ಗ್ರಹಿಸಿದ ಆತನೇ ಒಂದು ಪರ್ಯಾಯ ಕ್ರಮವನ್ನು ಸೂಚಿಸಿದ. ಹತ್ತಿರದ ಅಪಾರ್ಟ್‌ಮೆಂಟ್‌ ನಲ್ಲಿರುವ ಯಾರಾದರೂ ಪರೀಕ್ಷಾಂಗ ವಿಭಾಗದ ನೌಕರರನ್ನು ಕರೆಸಿದರೆ, ಅವರ ಹೇಳಿಕೆಯ ನಂತರ ಕೀ ಕೊಡುವ ಆಶ್ವಾಸನೆ ಕೊಟ್ಟ. ಅಷ್ಟರಲ್ಲಿ ದೂರ ದಿಂದ ಡ್ರೈವರ್‌ ರಾಮ ಓಡಿ ಬರುತ್ತಿರುವುದು ಕಂಡಿತು. ಮೊದಲಿನಿಂದಲೂ ಪರೀಕ್ಷಾಂಗ ವಿಭಾಗದ ಕಾರನ್ನು ರಾಮನೇ ಓಡಿಸುತ್ತಿದ್ದರಿಂದ, ಅವನನ್ನು ನೋಡುತ್ತಲೇ ಗಾರ್ಡ್‌ ಕೀಯನ್ನು ನನ್ನ ಕೈಗಿಟ್ಟ. ನಂತರ ಎಲ್ಲವೂ ಸುಖಾಂತ.

ಆ ಕ್ಷಣಕ್ಕೆ ಆ ಗಾರ್ಡ್‌ನ ವರ್ತನೆ ನನಗೆ ಉದ್ಧಟತನ ಅನ್ನಿಸಿರಬಹುದು. ಆದರೆ, ಯಾರಾ ದರೂ ಕರ್ತವ್ಯ ನಿಷ್ಠೆಯ ಬಗ್ಗೆ ಮಾತನಾಡುವಾಗ ಅಥವಾ ಆಲೋಚಿಸಿದಾಗ ಆ ನೇಪಾಲಿಗಾರ್ಡ್‌ನ ಮುಖ ಇಂದಿಗೂ ಕಣ್ಣೆದುರು ಬರುತ್ತದೆ.

ಮಧುಕರ ಮಲ್ಯ ಎಚ್‌.

ಸೃಷ್ಟಿಯ ಸೋಜಿಗ
ಪಡಸಾಲೆಯಲ್ಲೊಂದು ಕೂಸು ಹುಟ್ಟಿತು. ಸರಿ ಸುಮಾರು ಅದೇ ಸಂದರ್ಭ ಅಡುಗೆ ಮನೆಯ ಮೂಲೆಯಲ್ಲಿ ಬೆಕ್ಕು ಮರಿ ಇಟ್ಟಿತು.

ಶಿಶುವಿನ ಹಸಿವರಿತು ಹೆತ್ತವಳು ಹಾಲುಣಿಸುವಳು. ಶುದ್ಧ ಜಳಕ ಮಾಡಿಸುವಳು. ಮುದ್ದಾಡುತ್ತ ಮಲಗಿಸುವಳು. ಅವಳೇನು, ಮನೆಮಂದಿಗಳೆಲ್ಲ ಕಾಲ ಕಾಲಕ್ಕೆ ಕಂದನ ಆರೈಕೆಯಲ್ಲಿಯೇ ನಿರತರು. ಬಂಧುಗಳು ಆಗಮಿಸುವರು. ಶುಭ ಹಾರೈಸಿ ಹೋಗುವರು.

ಮಗು ಬೆಳೆಯುವ ವಿವಿಧ ಹಂತಗಳನ್ನು ನೋಡಿ ಎಲ್ಲರೂ ಪುಳಕಗೊಳ್ಳುವರು. ಏನೇ ಇರಲಿ, ಪಾಪು ಎದ್ದು ಅಂಬೆಗಾಲಿಕ್ಕಲು ಸಹಜವಾಗಿ ಹತ್ತು ತಿಂಗಳ ಅವಧಿ ತುಂಬಬೇಕಲ್ಲವೆ?  ಅತ್ತ ಬೆಕ್ಕಿನ ಬಿಡಾರದಲ್ಲಿ ಅಮ್ಮನ ಮಡಿಲಲ್ಲಿ ಬಿದ್ದುಕೊಂಡಿದ್ದ ಮರಿಗಳೆರಡು ಬೆಳೆದು ಓಡಲಾರಂಭಿಸಿವೆ. ತಿಂಗಳೊಂದು ಕಳೆದಿಲ್ಲ, ಅಷ್ಟ ರಲ್ಲಿಯೇ ಅಂಗಳವಿಡೀ ಅವುಗಳ ತಕಥೈ ಆಟದ ಸಡಗರ.
ಏನು ಸೃಷ್ಟಿಯ ಸೋಜಿಗವೋ !

ಸುಬ್ರಹ್ಮಣ್ಯ ಬೈಪಾಡಿತ್ತಾಯ

ಟಾಪ್ ನ್ಯೂಸ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್‌ಕುಮಾರ್‌

ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್‌ಕುಮಾರ್‌

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.