ಅಡುಗೆ ಮನೇಲಿ ಅನಾನಸ್‌ ಸ್ವಾದ


Team Udayavani, Feb 6, 2019, 12:30 AM IST

s-6.jpg

ನೋಡಲು ಮುಳ್ಳು ಮುಳ್ಳಾಗಿದ್ದರೂ, ಹುಳಿ-ಸಿಹಿ ಸ್ವಾದದ ಅನಾನಸ್‌ ತಿನ್ನಲು ಬಲು ರುಚಿಯಾದ ಹಣ್ಣು. ತಿನ್ನಲಷ್ಟೇ ಅಲ್ಲ, ಸಿಹಿತಿಂಡಿಗಳ ತಯಾರಿಕೆಯಲ್ಲೂ ಅನಾನಸ್‌ಅನ್ನು ಬಳಸುತ್ತಾರೆ. ಅನಾನಸ್‌ ಬಳಸಿ ತಯಾರಿಸಬಹುದಾದ ಕೆಲವು ತಿನಿಸುಗಳ ರೆಸಿಪಿ ಇಲ್ಲಿದೆ.

1. ಅನಾನಸ್‌ ಗೊಜ್ಜು 
ಬೇಕಾಗುವ ಪದಾರ್ಥ: ಹೆಚ್ಚಿದ ಅನಾನಸ್‌- 1 ಕಪ್‌, ಬೆಲ್ಲ- ಅರ್ಧ ಕಪ್‌, ಹುಣಸೆಹಣ್ಣು- ಲಿಂಬೆ ಗಾತ್ರದ್ದು, ಎಳ್ಳು-2 ಚಮಚ, ಉದ್ದಿನಬೇಳೆ-2 ಚಮಚ, ಮೆಂತ್ಯೆ- ಅರ್ಧ ಚಮಚ, ಬ್ಯಾಡಗಿ ಮೆಣಸಿನಕಾಯಿ- 8, ಕರಿಬೇವಿನ ಸೊಪ್ಪು, ತೆಂಗಿನ ತುರಿ- 1 ಕಪ್‌, ಸಾಸಿವೆ- ಅರ್ಧ ಚಮಚ, ಕರಿಬೇವು- ಸ್ವಲ್ಪ, ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಚಿಟಿಕೆ ಇಂಗು. 

ಮಾಡುವ ವಿಧಾನ: ಸಿಪ್ಪೆ ತೆಗೆದು ಹೆಚ್ಚಿದ ಅನಾನಸ್‌ ಹೋಳುಗಳನ್ನು ಬೇಯಿಸಿಕೊಳ್ಳಿ. ಬಾಣಲೆಗೆ ಒಂದೆರಡು ಚಮಚ ಎಣ್ಣೆ ಹಾಕಿ, ಎಳ್ಳು, ಉದ್ದಿನಬೇಳೆ, ಮೆಂತ್ಯೆ, ಮೆಣಸಿನಕಾಯಿ ಮತ್ತು ಕರಿಬೇವನ್ನು ಹುರಿಯಿರಿ. ನಂತರ ಅದಕ್ಕೆ ತೆಂಗಿನತುರಿ ಹಾಕಿ, ಸ್ವಲ್ಪ ನೀರು ಸೇರಿಸಿ ನುಣ್ಣಗೆ ಮಸಾಲೆ ರುಬ್ಬಿಕೊಳ್ಳಿ. ಈಗ ಬೆಂದ ಅನಾನಸ್‌ಗೆ ರುಬ್ಬಿದ ಮಿಶ್ರಣ ಹಾಕಿ ಕುದಿಯಲು ಇಡಿ. ಹುಣಸೆ ರಸ, ಬೆಲ್ಲದ ಪುಡಿ, ಉಪ್ಪು, ಸ್ವಲ್ಪ ನೀರು ಸೇರಿಸಿ ಹತ್ತು ನಿಮಿಷ ಕುದಿಸಿ. ನಂತರ ಸಾಸಿವೆ, ಇಂಗು, ಒಣಮೆಣಸಿನಕಾಯಿ ಒಗ್ಗರಣೆ ಕೊಡಿ. ಈ ಗೊಜ್ಜನ್ನು ಅನ್ನದ ಜೊತೆ ತಿನ್ನಲು ಬಲು ರುಚಿ. 

2. ಅನಾನಸ್‌ ಲಸ್ಸಿ 
ಬೇಕಾಗುವ ಪದಾರ್ಥ: ತುರಿದ ಅನಾನಸ್‌ ಹೋಳು -1 ಕಪ್‌, ಸಕ್ಕರೆ- ಅರ್ಧ ಕಪ್‌, ಗಟ್ಟಿ ಮೊಸರು- 2 ಕಪ್‌, ಫ್ರೆಷ್‌ ಕ್ರೀಂ- ಕಾಲು ಕಪ್‌, ಚಿಟಿಕೆ ಉಪ್ಪು, ಐಸ್‌ ಕ್ಯೂಬ್ಸ್- 4.

ಮಾಡುವ ವಿಧಾನ: ಮೊದಲು ಅನಾನಸ್‌ ಹಣ್ಣನ್ನು ಸಣ್ಣಗೆ ತುರಿದು, ಸಕ್ಕರೆ ಜೊತೆ ಬೆರೆಸಿ ಸ್ವಲ್ಪ ಹುರಿಯಿರಿ. ಸಕ್ಕರೆ ಕರಗಿದ ನಂತರ ಅನಾನಸ್‌ ತುರಿ ಹದವಾಗಿ ಬೇಯುತ್ತದೆ. ಗಟ್ಟಿ ಮೊಸರು, ಕ್ರೀಂ, ಐಸ್‌ಕ್ಯೂಬ್ಸ್, ಚಿಟಿಕೆ ಉಪ್ಪು ಹಾಕಿ ಮಿಕ್ಸಿಯಲ್ಲಿ ಒಂದೆರಡು ಸುತ್ತು ರುಬ್ಬಿ. ಈ ಮಿಶ್ರಣಕ್ಕೆ, ಸಕ್ಕರೆಯಲ್ಲಿ ಬೆಂದ ಅನಾನಸ್‌ ಸೇರಿಸಿ, ತಂಪಾದ ಮೇಲೆ ಸವಿಯಿರಿ. 

3.ಅನಾನಸ್‌ ಕೇಸರಿಬಾತ್‌
ಬೇಕಾಗುವ ಪದಾರ್ಥ:
ಹೆಚ್ಚಿದ ಅನಾನಸ್‌- ಅರ್ಧ ಕಪ್‌, ರವೆ- 1 ಕಪ್‌, ತುಪ್ಪ- 1 ಕಪ್‌, ಸಕ್ಕರೆ- ಮುಕ್ಕಾಲು ಕಪ್‌, ದ್ರಾಕ್ಷಿ-ಗೋಡಂಬಿ- 2 ಚಮಚ, ಏಲಕ್ಕಿ ಪುಡಿ-1 ಚಮಚ, ಕೇಸರಿ ಅಥವಾ ಫ‌ುಡ್‌ ಕಲರ್‌- ಚಿಟಿಕೆ, ಹಾಲು- ಅರ್ಧ ಕಪ್‌.

ಮಾಡುವ ವಿಧಾನ: ರವೆಯನ್ನು ಘಂ ಎನ್ನುವವರೆಗೆ ಹುರಿದುಕೊಳ್ಳಿ. ಬಾಣಲೆಗೆ ತುಪ್ಪ ಹಾಕಿ ದ್ರಾಕ್ಷಿ, ಗೋಡಂಬಿಯನ್ನು ಹುರಿದು ತೆಗೆದಿರಿಸಿ. ಅದೇ ಬಾಣಲೆಗೆ ಅನಾನಸ್‌ ಹೋಳು ಹಾಕಿ 2 ನಿಮಿಷ ಹುರಿಯಿರಿ. ಇದಕ್ಕೆ 3 ಕಪ್‌ ನೀರು ಹಾಕಿ, ಸಣ್ಣ ಉರಿಯಲ್ಲಿ ಕುದಿಸಿ. ನಂತರ ಹುರಿದ ರವೆಯನ್ನು ಸ್ವಲ್ಪ ಸ್ವಲ್ಪವೇ ಹಾಕುತ್ತಾ, ಗಂಟುಗಳಾಗದಂತೆ ಬೆರೆಸಿ. ಈಗ ಸಕ್ಕರೆ ಹಾಕಿ ಕೂಡಿಸಿ. ಏಲಕ್ಕಿ ಪುಡಿ, ಹಾಲಿನಲ್ಲಿ ನೆನೆಸಿಟ್ಟ ಕೇಸರಿಯನ್ನು ಬೆರೆಸಿ ತಳ ಹತ್ತದಂತೆ ಕೈಯಾಡಿಸಿ. ಸಣ್ಣ ಉರಿಯಲ್ಲಿ ಹತ್ತು ನಿಮಿಷ ಬೇಯಿಸಿದರೆ ಅನಾನಸ್‌ ಕೇಸರಿಬಾತ್‌ ತಯಾರು.

4. ಅನಾನಸ್‌ಬರ್ಫಿ 
ಬೇಕಾಗುವ ಪದಾರ್ಥ:
ಅನಾನಸ್‌ ಹೋಳು – 5, ತೆಂಗಿನ ತುರಿ- 2 ಕಪ್‌, ತುಪ್ಪ- 2 ಚಮಚ, ಸಕ್ಕರೆ- 1 ಕಪ್‌, ಏಲಕ್ಕಿ ಪುಡಿ- ಅರ್ಧ ಚಮಚ, 

ಮಾಡುವ ವಿಧಾನ: ದಪ್ಪ ತಳದ ಪಾತ್ರೆಗೆ ತುಪ್ಪ ಹಾಗೂ ತೆಂಗಿನತುರಿ ಹಾಕಿ ಸಣ್ಣ ಉರಿಯಲ್ಲಿ ಹುರಿಯಿರಿ. ಅನಾನಸ್‌ ಹೋಳುಗಳನ್ನು ಮಿಕ್ಸಿಯಲ್ಲಿ ರುಬ್ಬಿಕೊಂಡು, ಹುರಿದ ತೆಂಗಿನತುರಿಗೆ ಹಾಕಿ. ಇದಕ್ಕೆ ಸಕ್ಕರೆ, ಏಲಕ್ಕಿ ಪುಡಿ ಬೆರೆಸಿ, ಈ ಮಿಶ್ರಣವನ್ನು ಕರಗುವವರೆಗೆ ಕುದಿಸಿ. ಗಟ್ಟಿಯಾಗುವವರೆಗೆ ಕುದಿಸಿದ ನಂತರ ತುಪ್ಪ ಹಾಕಿ ತಳ ಹತ್ತದಂತೆ ಕೈಯಾಡಿಸಿ. ಅದನ್ನು ತುಪ್ಪ ಸವರಿದ ತಟ್ಟೆಗೆ ಹಾಕಿ, ತಣ್ಣಗಾದ ನಂತರ ಬೇಕಾದ ಆಕಾರಕ್ಕೆ ಕತ್ತರಿಸಿ.

ಶ್ರುತಿ ಕೆ.ಎಸ್‌.,ತುರುವೇಕೆರೆ

ಟಾಪ್ ನ್ಯೂಸ್

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

1-weewqewqe

Madrid: 16 ವರ್ಷದ ಎದುರಾಳಿ ವಿರುದ್ಧ ನಡಾಲ್‌ಗೆ ಸುಲಭ ಜಯ

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

badminton

Badminton; ಇಂದಿನಿಂದ ಥಾಮಸ್‌ ಕಪ್‌ ಟೂರ್ನಿ ಆರಂಭ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.