ಇವನು ಗಂಡನಲ್ಲ, ಗೆಳೆಯ!


Team Udayavani, Aug 22, 2018, 6:00 AM IST

2.jpg

ಮದುವೆ ಎನ್ನುವುದು ಹೆಣ್ಣಿಗೆ ಒಂದು ಹೊಸ ಪ್ರಪಂಚ. ಆ ಪ್ರಪಂಚದಲ್ಲಿ ಎಲ್ಲವೂ ಆಕೆಗೆ ಅಪರಿಚಿತ. ಅತ್ತೆ- ಮಾವ, ಗಂಡ, ಎಲ್ಲರನ್ನೂ ಅವಳು ಆಗಷ್ಟೇ ನೋಡಿರುತ್ತಾಳೆ. ಈ ಹೊತ್ತಿನಲ್ಲಿ ಬಹುದಿನಗಳ ಗೆಳತಿಯೇನಾದರೂ ಕರೆಮಾಡಿಬಿಟ್ಟರಂತೂ, “ಮದುವೆಗೆ ಮುಂಚೆಯೇ ಲೈಫ್ ಚೆನ್ನಾಗಿತ್ತು’ ಎಂದು ಹೇಳಿ, ತನ್ನ ನೋವನ್ನು ಹೊರಹಾಕುತ್ತಾಳೆ. ಅವಳ ಈ ನೋವಿನಲ್ಲಿ ನಾನಾ ಗೂಢಾರ್ಥಗಳಿವೆ. ಅತ್ತೆ ಅವಳಿಗೆ ಅಮ್ಮನಂತೆ ಕಾಣುತ್ತಿಲ್ಲ, ಮಾವನಲ್ಲಿ ಅಪ್ಪನ ಛಾಯೆಯಿಲ್ಲ. ಮಿಗಿಲಾಗಿ, ಕೈಹಿಡಿದ ಗಂಡ ತನಗೆ ಬೆಸ್ಟ್‌ ಫ್ರೆಂಡ್‌ ಆಗಿಲ್ಲ ಎನ್ನುವುದು ಆಕೆಗೆ ಹೇಳಿಕೊಳ್ಳಲಾಗದ ಬೇಸರ. ಒಂದು ವೇಳೆ, ಗಂಡ ಒಳ್ಳೆಯ ಗೆಳೆಯನಾಗಿಬಿಟ್ಟರೆ, ಆಕೆಗಾಗುವ ಖುಷಿಗೆ ಪಾರವೇ ಇರುವುದಿಲ್ಲ. ಅವಳ ಎಲ್ಲ ದುಃಖ ನಿವಾರಣೆಗೂ ಇದೇ ದಾರಿ. ಹಾಗಾದರೆ, ಇಂಥ ಸಂದರ್ಭಗಳಲ್ಲಿ ಗಂಡನ ಜವಾಬ್ದಾರಿ ಏನಾಗಿರುತ್ತೆ?

1. ಮುಕ್ತ ವಾತಾವರಣ ಸೃಷ್ಟಿಸಿ
ಒಬ್ಬ ಪತಿಯಾಗುವ ಮುನ್ನ ನೀವು ಆಕೆಗೆ ಒಳ್ಳೆಯ ಗೆಳೆಯನಾಗಿ. ಆಗ ನಿಮ್ಮ ಪತ್ನಿಗೆ ನಿಮ್ಮ ಮನೆ ಅಪರಿಚಿತವಾಗುವುದಿಲ್ಲ. ಆಕೆಗೆ ಮುಕ್ತ ವಾತಾವರಣ ಸಿಕ್ಕಂತಾಗುತ್ತದೆ. ಹೊಸ ಜೀವನಕ್ಕೆ ಅವಳೂ ತನ್ನನ್ನು ತೆರೆದುಕೊಳ್ಳುವಳು. ಗೆಳೆಯನಂತೆ ಅವಳ ಪಕ್ಕ ಕುಳಿತು, ಆಕೆಯ ಇಷ್ಟ ಕಷ್ಟಗಳನ್ನು ಕೇಳಿ ತಿಳಿಯಿರಿ. ಕೆಲಸದ ಒತ್ತಡ ಎಷ್ಟಿದ್ದರೂ ನಿಮ್ಮ ಪತ್ನಿಗಾಗಿ ಒಂದು ಗಂಟೆಯಾದರೂ ಮೀಸಲಿಡಿ.

2. ಹರಟೆ- ನಗುವಿರಲಿ
ಮದುವೆಯ ಹೊಸತರಲ್ಲಿ ಮನೆ ತುಂಬಾ ಜನ ಇರುತ್ತಾರೆ. ನಿಮ್ಮ ಪತ್ನಿಯಂತೂ ಬಲವಂತದ ನಗು ಬೀರುತ್ತಿರುತ್ತಾಳೆ. ಕಾರಣ, ಎಲ್ಲರೂ ಆಕೆಗೆ ಅಪರಿಚಿತರೇ. ಹಾಗಾಗಿ, ಈ ಹೊತ್ತಿನಲ್ಲಿ ಸಂತೋಷ ಕೂಟಗಳನ್ನು ಏರ್ಪಡಿಸಿ. ಹರಟೆ ಹೊಡೆಯುತ್ತಾ, ಮನರಂಜನೆ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾ, ಈ ಮನೆಗೆ ನಾನೂ ಸದಸ್ಯೆ ಎನ್ನುವ ಭಾವವನ್ನು ಆಕೆಯಲ್ಲಿ ಹುಟ್ಟುವಂತೆ ಮಾಡಿ. ಆಗ ಗಂಡ- ಹೆಂಡತಿ ನಡುವಿನ ಅಂತರ ಕಡಿಮೆ ಆಗುತ್ತೆ.

3. ಹನಿಮೂನ್‌ಗೆ ಹೊರಡಿ…
ಮಧುಚಂದ್ರ ಪ್ರವಾಸದಿಂದ ದಾಂಪತ್ಯ ಇನ್ನಷ್ಟು ಸಿಹಿಯಾಗುತ್ತದೆ, ಗಟ್ಟಿಯಾಗುತ್ತದೆ. ಆಕೆಗೆ ಮುಕ್ತವಾಗಿ ಮಾತಾಡಲು ಅದೊಂದು ಪ್ರಶಸ್ತ ಕಾಲ. ಈ ಹೊತ್ತಿನಲ್ಲಿ ಆಕೆಗೆ ಹೊರಜಗತ್ತು ಅಪರಿಚಿತವಾಗಿ, ಗಂಡನು ಪರಿಚಿತ ಸ್ನೇಹಿತನಾಗಿ ಕಾಣುವುದರಿಂದ, ನೀವು ಇನ್ನೂ ಹತ್ತಿರವಾಗುತ್ತೀರಿ. ಅವಳಲ್ಲಿ ಗೆಲುವು ತುಂಬಲು ಈ ಕಿರುಪ್ರವಾಸ ಹಲವು ರೀತಿಯಲ್ಲಿ ನೆರವಾಗುತ್ತದೆ.

4. ಪ್ರಿಯವಾದ ಉಡುಗೊರೆ
ಮದುವೆಗೆ ಮುಂಚೆಯೇ ಪತ್ನಿಯ ಇಷ್ಟಗಳು ನಿಮಗೆ ತಿಳಿದಿರುತ್ತವೆ. ಆ ಇಷ್ಟಕ್ಕೆ ಪೂರಕವಾಗಿಯೇ ನಡೆದುಕೊಳ್ಳಿ. ಇಷ್ಟದ ವಸ್ತು ಕೊಡಿಸುವುದು, ಆಕೆಯ ಕನಸಿನ ಸ್ಥಳಗಳಿಗೆ ಕರೆದೊಯ್ಯುವುದು, ಒಂದೊಳ್ಳೆಯ ಸಿನಿಮಾವನ್ನು ನೋಡುವುದು… ಹೀಗೆ ಮನಸ್ಸು ಅರಳಿಸುವಂಥ ಕೆಲಸ ಮಾಡಿ. ಆಕೆಯ ಇಷ್ಟಕ್ಕೆ ವಿರುದ್ಧವಾಗಿ ಚಲಿಸದಿರಿ. ಬದುಕೆಂದರೆ ಹೀಗೆಯೇ ಇರುತ್ತೆ ಎನ್ನುವ ಭಾವ ಅವಳೊಳಗೆ ಬಂದುಬಿಟ್ಟರೆ, ನೀವು ಆಕೆಯ ಮನವನ್ನು ಗೆದ್ದಿರಿ ಅಂತಲೇ ಲೆಕ್ಕ.

ಕಾವ್ಯ ಎಚ್‌.ಎನ್‌. ದಾವಣಗೆರೆ

ಟಾಪ್ ನ್ಯೂಸ್

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.