ಮುತ್ತೇ ಪ್ರಥಮಾ!


Team Udayavani, Mar 18, 2020, 5:39 AM IST

pearl

ಇದು ಮದುವೆಯ ಸೀಸನ್‌. ಆಭರಣಗಳನ್ನು ಕೊಳ್ಳುವ, ಧರಿಸುವ ಸುಗ್ಗಿ ಕಾಲ. ಚಿನ್ನದ ಒಡವೆಗಳನ್ನು ಸುಲಭವಾಗಿ ಧರಿಸಿ, ಬಿಚ್ಚಿ ಇಡಬಹುದು. ಆದರೆ, ನಾಜೂಕಾಗಿ ಮಾಡಲ್ಪಟ್ಟ ಮುತ್ತಿನ ಆಭರಣಗಳನ್ನು ಹೆಚ್ಚಿನ ಮುತುವರ್ಜಿಯಿಂದ ನೋಡಿಕೊಳ್ಳುವುದು ಅಗತ್ಯ. ಮುತ್ತಿನ ಒಡವೆಗಳನ್ನು ಧರಿಸುವ ಮತ್ತು ಜೋಪಾನ ಮಾಡುವ ಕೆಲವು ವಿಧಾನಗಳು ಇಲ್ಲಿವೆ-

-ಮುತ್ತಿನ ಆಭರಣಗಳನ್ನು ಧರಿಸುವಾಗ ಒಂದು ಕ್ರಮವಿದೆ. ಅದೇನೆಂದರೆ, ಅವುಗಳನ್ನು ಕೊನೆಯಲ್ಲಿ ಧರಿಸಬೇಕು ಮತ್ತು ಎಲ್ಲಕ್ಕಿಂತ ಮುಂಚೆ ಬಿಚ್ಚಿ, ಎತ್ತಿಡಬೇಕು. ಮೇಕ್‌ಅಪ್‌, ಹೇರ್‌ಸ್ಟೈಲ್‌, ಪರ್ಫ್ಯೂಮ್‌, ಬಾಡಿ ಲೋಷನ್‌ ಲೇಪನ…ಹೀಗೆ ಎಲ್ಲವೂ ಮುಗಿದ ನಂತರ, ಮುತ್ತಿನ ಒಡವೆ ಹಾಕಿಕೊಳ್ಳಬೇಕು. ನಂತರ, ಎಲ್ಲಕ್ಕಿಂತ ಮೊದಲು ಬಿಚ್ಚಿಡಬೇಕು.

-ಪ್ರತಿ ಬಾರಿ ಧರಿಸಿದ ನಂತರವೂ, ಮೃದುವಾದ ಹತ್ತಿಯ ಬಟ್ಟೆಯಿಂದ ಒರೆಸಬೇಕು. ಹೀಗೆ ಮಾಡುವುದರಿಂದ, ವಾತಾವರಣದ ಕಲ್ಮಶದಿಂದ ಮುತ್ತುಗಳು ಕಪ್ಪಾಗುವುದನ್ನು ತಡೆಯಬಹುದು.

– ಮುತ್ತಿನ ಮೇಲೆ ಎದ್ದು ಕಾಣುವಂತೆ ಕೊಳೆ/ಕಲೆ ಆಗಿದ್ದರೆ ಮಾತ್ರ ಅದನ್ನು ಸ್ವತ್ಛವಾದ ನೀರಿನಲ್ಲಿ, ಒದ್ದೆ ಬಟ್ಟೆ ಅದ್ದಿ, ಮೃದುವಾಗಿ ಒರೆಸಿ. ಯಾವುದೇ ಕಾರಣಕ್ಕೂ, ಒಡವೆಯನ್ನು ನೇರವಾಗಿ ನೀರಿನಲ್ಲಿ ಅದ್ದಿ ಬಿಡಬೇಡಿ.

-ಸ್ವಚ್ಛಗೊಳಿಸಿದ ನಂತರ, ನೀರಿನ ಪಸೆ ಆರಿದ ನಂತರವೇ ಒಡವೆಗಳನ್ನು ಎತ್ತಿಡಬೇಕು.

-ಸ್ಟೀಮ್‌/ ಅಲ್ಟ್ರಾಸೋನಿಕ್‌ ಜ್ಯುವೆಲರಿ ಕ್ಲೀನರ್‌ಗಳಿಂದ ಯಾವತ್ತೂ ಮುತ್ತನ್ನು ಸ್ವತ್ಛಗೊಳಿಸಬೇಡಿ. ಇದರಿಂದ ಮುತ್ತಿನ ಹೊರ ಪದರಕ್ಕೆ ಹಾನಿಯಾಗುತ್ತದೆ.

-ಜ್ಯುವೆಲರಿ ರ್ಯಾಕ್‌ಗಳಲ್ಲಿ ಮುತ್ತಿನ ಹಾರಗಳನ್ನು ನೇತು ಹಾಕುವುದಕ್ಕಿಂತ, ಪೆಟ್ಟಿಗೆಯೊಳಗೆ ಫ್ಲಾಟ್‌ (ಮಲಗಿಸಿದಂತೆ) ಇಡುವುದು ಉತ್ತಮ.

-ಮುತ್ತಿನ ಒಡವೆಗಳನ್ನು ಪ್ರತ್ಯೇಕವಾಗಿ, ರೇಷ್ಮೆ ಅಥವಾ ಹತ್ತಿಯಿಂದ ಮಾಡಲ್ಪಟ್ಟ ಪೌಚ್‌ಗಳಲ್ಲಿ ಹಾಕಿ ಇಡಿ. ಬೇರೆ ಒಡವೆಗಳ ಜೊತೆ ಇಟ್ಟರೆ, ಮುತ್ತುಗಳು ಬಿರುಕು ಬಿಡಬಹುದು. ಪ್ಲಾಸ್ಟಿಕ್‌ ಕವರ್‌ ಅಥವಾ ಜ್ಯುವೆಲರಿ ಬಾಕ್ಸ್‌ಗಳು ಕೂಡಾ ಮುತ್ತನ್ನು ಹಾಳುಗೆಡವಬಹುದು.

-ಆದ್ರ ವಾತಾವರಣದಲ್ಲಿ ಮುತ್ತುಗಳು ಹಾಳಾಗುವುದನ್ನು ತಡೆಯಬಹುದು (ಮುತ್ತುಗಳು ನೀರಿನಿಂದ ಬಂದವು). ಹಾಗಾಗಿ, ಮೂರು-ನಾಲ್ಕು ತಿಂಗಳಿಗೊಮ್ಮೆಯಾದರೂ ಒಡವೆಗಳನ್ನು ಧರಿಸಬೇಕು. ದೇಹದಲ್ಲಿ ಉತ್ಪತ್ತಿಯಾಗುವ ಬೆವರು, ಎಣ್ಣೆಯಿಂದ ಮುತ್ತುಗಳ ಆಯಸ್ಸು ಹೆಚ್ಚುತ್ತದೆ. ವರ್ಷಗಳ ಕಾಲ ಹಾಗೆಯೇ ಪೆಟ್ಟಿಗೆಯಲ್ಲಿ ಇಟ್ಟರೆ ಮುತ್ತುಗಳಲ್ಲಿ ಬಿರಕು ಕಾಣಿಸುತ್ತದೆ.

– ಕ್ಲೋರಿನ್‌, ಹೈಡ್ರೋಜನ್‌ ಪೆರಾಕ್ಸೆ„ಡ್‌, ವಿನೇಗರ್‌, ಅಮೋನಿಯಾ, ಹೇರ್‌ಸ್ಪ್ರೆ, ಪರ್ಫ್ಯೂಮ್‌, ಕಾಸ್ಮೆಟಿಕ್ಸ್‌ ಮುಂತಾದ ರಾಸಾಯನಿಕಗಳಿಂದ ಮುತ್ತುಗಳನ್ನು ದೂರವೇ ಇಡಬೇಕು.

-ಮುತ್ತಿನ ಆಭರಣ ಧರಿಸಿ ನೀರಿಗಿಳಿಯುವುದು, ಸ್ನಾನ ಮಾಡುವುದು, ಸಲ್ಲ. ಮುತ್ತಿನ ಉಂಗುರ, ಬಳೆಗಳನ್ನು ನೀರು ತಾಕದಂತೆ ಜೋಪಾನ ಮಾಡಿ.

-ಅತಿ ಶಾಖ, ಅತೀ ಶೀತ ಸ್ಥಳಗಳಲ್ಲಿ ಮುತ್ತನ್ನು ಇಡಬಾರದು.

ಟಾಪ್ ನ್ಯೂಸ್

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.