ಗರ್ಭಿಣಿ ಸ್ತ್ರೀಯರಿಗೆ ನೀಡುವ ಸಹಾಯಧನದ ಕುರಿತು…
Team Udayavani, Feb 3, 2017, 3:45 AM IST
ಈ ಸಹಾಯಧನವನ್ನು ಏಕೆ ಕೊಡಬೇಕು? ಇದರ ಉಪಯೋಗವೇನು? ಸರ್ಕಾರಿ ಆಸ್ಪತ್ರೆಗಳಲ್ಲಿ ಗರ್ಭಿಣಿ, ಬಾಣಂತಿಯರ, ಶಿಶುಗಳ ತಪಾಸಣೆ ಮತ್ತು ಹೆರಿಗೆ ಉಚಿತವಲ್ಲವೆ?
ಹೌದು. ಸರ್ಕಾರಿ ಕೇಂದ್ರಗಳಲ್ಲಿ ಸೌಲಭ್ಯಗಳು ಉಚಿತವೇ. ಗರ್ಭಿಣಿಯರಿಗೆ ಬೇಕಾದ ಉತ್ತಮ ಪೌಷ್ಟಿಕಾಂಶಗಳುಳ್ಳ ಆಹಾರವನ್ನು ಸರ್ಕಾರ ಪೂರೈಸುವುದಿಲ್ಲ. ಈ ಹಣ ಅದಕ್ಕೆ ವಿನಿಯೋಗವಾಗಬಹುದಲ್ಲ !
ಡಿಸೆಂಬರ್ 31, 2016ರಂದು ಪ್ರಧಾನಮಂತ್ರಿ ಮೋದಿಯವರು ತಮ್ಮ ಭಾಷಣದಲ್ಲಿ ಜನತೆಗೆ ಕೊಡುವ ಕೆಲವು ಹೊಸ ಸೌಲಭ್ಯಗಳ ಬಗ್ಗೆ ಮಾತನಾಡಿದರು. ಅವುಗಳಲ್ಲಿ ಒಂದು ವಿಷಯ ಗರ್ಭಿಣಿ ಸ್ತ್ರೀಯರಿಗೆ ನೋಂದಾವಣೆಯಿಂದ ಹೆರಿಗೆಯವರೆಗಿನ ಖರ್ಚುಗಳಿಗಾಗಿ ಸರಕಾರದಿಂದ ದೊರೆಯುವ ಆರು ಸಾವಿರ ರೂಪಾಯಿಗಳ ಸಹಾಯಧನ. ಇದು ನೇರವಾಗಿ ಮಹಿಳೆಯ ಬ್ಯಾಂಕಿನ ಖಾತೆಗೆ ಜಮೆಯಾಗುತ್ತದೆ. ಈ ವಿಷಯದ ಬಗ್ಗೆ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವಾದವಿವಾದಗಳು (ಕೆಲವು ಪರವಾಗಿ, ಕೆಲವು ವಿರೋಧವಾಗಿ) ಎದ್ದಿವೆ. ಕೆಲವು ಅಭಿಪ್ರಾಯಗಳಂತೂ ಅತ್ಯಂತ ಕೆಳಮಟ್ಟದಲ್ಲಿ ಇರುವುದು ವಿಷಾದನೀಯ. ಹೆಚ್ಚಿನವರಿಗೆ ಈ ಯೋಜನೆಯ ಆವಶ್ಯಕತೆ ಅರ್ಥವಾದಂತಿಲ್ಲ. ಇದರ ಸಾಧಕ-ಬಾಧಕಗಳ ಬಗ್ಗೆ ಸಂಕ್ಷಿಪ್ತವಾಗಿ ವಿಶ್ಲೇಷಿಸೋಣ.
.ಇದು ಜನಸಂಖ್ಯೆ ವೃದ್ಧಿಸಲು ಕೊಡುತ್ತಿರುವ ಆಮಿಷವೆ? ಖಂಡಿತವಾಗಿಯೂ ಅಲ್ಲ. ಗ್ರಾಮೀಣ ಪ್ರದೇಶಗಳಲ್ಲಿರುವ ಗರ್ಭಿಣಿ ಮಹಿಳೆಯರಿಗೆ ಆವಶ್ಯವಾಗಿ ದೊರೆಯಬೇಕಾದ ಆರೋಗ್ಯ ತಪಾಸಣೆಗಳು ಅಜಾnನದಿಂದಲೋ, ಸೌಕರ್ಯಗಳ ಕೊರತೆಯಿಂದಾಗಿಯೋ ದೊರೆಯದೆ ಇರಬಹುದು. ಹೆಚ್ಚಿನ ಸಂದರ್ಭಗಳಲ್ಲಿ ಮನೆಯಲ್ಲಿಯೇ ಸುರಕ್ಷಿತವಲ್ಲದ ಹೆರಿಗೆ ಆಗಬಹುದು. ಇದರಿಂದ ತಾಯಂದಿರ ಹಾಗೂ ನವಜಾತ ಶಿಶುಗಳ ಆರೋಗ್ಯಕ್ಕೆ ಧಕ್ಕೆ ಉಂಟಾಗುತ್ತದೆ. ಆರೋಗ್ಯ ಕೇಂದ್ರಗಳಲ್ಲಿ ನೋಂದಾಯಿಸಿಕೊಂಡರೆ ನುರಿತ ದಾದಿಯರಿಂದ, ವೈದ್ಯರಿಂದ ತಪಾಸಣೆಯ ಸೌಲಭ್ಯ ದೊರೆಯುತ್ತದೆ. ಆರೋಗ್ಯ ಕೇಂದ್ರಗಳಲ್ಲಿ ಸುರಕ್ಷಿತವಾದ ಹೆರಿಗೆ ತಜ್ಞರ ಮಾರ್ಗದರ್ಶನದಲ್ಲಿ ನಡೆಯುತ್ತದೆ. ಈ ಕೊಡುಗೆಯು ಮನೆಯಲ್ಲಿನ ಹೆರಿಗೆಗಳನ್ನು ತಪ್ಪಿಸಿ, ಸರಿಯಾದ ವೈದ್ಯಕೀಯ ಸೌಲಭ್ಯಗಳನ್ನು ಗರ್ಭಿಣಿ ಮಹಿಳೆಯರಿಗೆ ದೊರಕಿಸಿಕೊಡಲು ಸ್ವಲ್ಪ$ಮಟ್ಟಿಗೆ ಸಹಕರಿಸುತ್ತದೆ. (ಅರ್ಥಾತ್ ಈ ಕೊಡುಗೆಯು ಆರೋಗ್ಯ ಕೇಂದ್ರಗಳಲ್ಲಿ ಹೆರುವುದಕ್ಕೆ ಕೊಡುವ ಸೌಲಭ್ಯ).
.ಈ ಹಣವನ್ನು ಏಕೆ ಕೊಡಬೇಕು? ಇದರ ಉಪಯೋಗವೇನು? ಸರ್ಕಾರಿ ಆಸ್ಪತ್ರೆಗಳಲ್ಲಿ ಗರ್ಭಿಣಿ, ಬಾಣಂತಿಯರ ಶಿಶುಗಳ ತಪಾಸಣೆ ಮತ್ತು ಹೆರಿಗೆ ಉಚಿತವಲ್ಲವೆ?
ಹೌದು. ಸರ್ಕಾರಿ ಕೇಂದ್ರಗಳಲ್ಲಿ ಸೌಲಭ್ಯಗಳು ಉಚಿತವೇ.ಗರ್ಭಿಣಿಯರಿಗೆ ಬೇಕಾದ ಉತ್ತಮ ಪೌಷ್ಟಿಕಾಂಶಗಳುಳ್ಳ ಆಹಾರವನ್ನು ಸರ್ಕಾರ ಪೂರೈಸುವುದಿಲ್ಲ. ಈ ಹಣ ಅದಕ್ಕೆ ವಿನಿಯೋಗವಾಗಬಹುದು.
.ಬಹಳಷ್ಟು ಗ್ರಾಮೀಣ ಬಡಮಹಿಳೆಯರು ದಿನಗೂಲಿ ನೌಕರಿಯಲ್ಲಿರುತ್ತಾರೆ. ಗರ್ಭಿಣಿಯರು ಆರೋಗ್ಯ ತಪಾಸಣೆಗೆಂದು ಆರೋಗ್ಯ ಕೇಂದ್ರಕ್ಕೆ ತೆರಳುವಾಗ ಆ ದಿನದ ಕೂಲಿಯನ್ನು ಕಳೆದುಕೊಳ್ಳಬೇಕಾಗುತ್ತದೆ. ಅದಲ್ಲದೆ ಆರೋಗ್ಯ ಕೇಂದ್ರ ದೂರದಲ್ಲಿದ್ದರೆ ಅಲ್ಲಿಯವರೆಗಿನ ಪ್ರಯಾಣದ ವೆಚ್ಚವನ್ನೂ ಭರಿಸಬೇಕಾಗುತ್ತದೆ. ಬಹಳಷ್ಟು ಮಹಿಳೆಯರು ಒಬ್ಬೊಬ್ಬರಾಗಿಯೇ ಆಸ್ಪತ್ರೆಗೆ ತೆರಳುವ ಮನಸ್ಥೈರ್ಯ ಹೊಂದಿರುವುದಿಲ್ಲ. ಅವರ ಜೊತೆ ಇನ್ನೊಬ್ಬ ಕುಟುಂಬ ಸದಸ್ಯನೂ ತನ್ನ ಕೂಲಿಯನ್ನುಬಿಟ್ಟು, ಪ್ರಯಾಣದ ಖರ್ಚನ್ನು ಭರಿಸಿಕೊಂಡು ಹೋಗಬೇಕಾಗುತ್ತದೆ. ಆರೋಗ್ಯವಾಗಿರುವ ಗರ್ಭಿಣಿಯರು ನೋಂದಣಿಯ ದಿನದಿಂದ ಏಳನೇ ತಿಂಗಳವರೆಗೆ ತಿಂಗಳಿಗೆ ಒಂದು ಬಾರಿ, ಎಂಟನೇ ತಿಂಗಳಿನಲ್ಲಿ ಎರಡು ವಾರಕ್ಕೆ ಒಂದು ಬಾರಿ, ಒಂಬತ್ತನೇ ತಿಂಗಳು ಶುರುವಾಗಿನಿಂದ ಹೆರಿಗೆಯವರೆಗೆ ವಾರಕ್ಕೆ ಒಂದು ಬಾರಿ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಬೇಕಾಗುತ್ತದೆ. ಏನಾದರೂ ತೊಂದರೆಗಳು ಕಂಡುಬಂದಲ್ಲಿ ತಾಲೂಕು ಅಥವಾ ಜಿಲ್ಲಾಸ್ಪತ್ರೆಗಳಿಗೆ ತೆರಳಲು ಅಧಿಕ ವೆಚ್ಚವಾಗುತ್ತದೆ. ಈ ವೆಚ್ಚಗಳನ್ನು ಕುಟುಂಬ ಭರಿಸಲು ಅನುಕೂಲಮಾಡಿಕೊಡುವುದೇ ಈ ಸೌಲಭ್ಯದ ಉದ್ದೇಶವೆನಿಸುತ್ತದೆ. ಈ ಅನುಕೂಲಗಳನ್ನು ಕಲ್ಪಿಸಿಕೊಟ್ಟ ಮೇಲೆ ಹೆರಿಗೆ ಆರೋಗ್ಯಕೇಂದ್ರಗಳಲ್ಲೇ ನೆರವೇರಬೇಕು ಎಂದು ಆಶಯ.
.ಇದನ್ನು ಎಷ್ಟನೇ ಹೆರಿಗೆಯವರೆಗೆ ಕೊಡಬೇಕು? ಎಲ್ಲಾ ಗರ್ಭಿಣಿ ಸ್ತ್ರೀಯರಿಗೂ ಇದು ದೊರೆಯಬೇಕು (ಮೊದಲನೆಯದಾಗಲಿ, ನಾಲ್ಕನೆಯದಾಗಲಿ).
.ಎಲ್ಲಾ ಹೆರಿಗೆಗಳು ಆಸ್ಪತ್ರೆಗಳಲ್ಲಿ ನಡೆದು, ತಾಯಿಮಗು ಆರೋಗ್ಯವಿದ್ದಾಗ ಸಂತಾನಹರಣ ಶಸ್ತ್ರಚಿಕಿತ್ಸೆ ಹಾಗೂ ಗರ್ಭನಿರೋಧಕಗಳ ಬಗ್ಗೆ ತಿಳುವಳಿಕೆ ನೀಡುವ ಕೆಲಸ ಸುಲಭವಾಗುತ್ತದೆ. ಇದನ್ನು ಎರಡು ಮಕ್ಕಳ ನಂತರ ನಿರಾಕರಿಸಿದರೆ ಕುಟುಂಬ ಕಲ್ಯಾಣ ಇಲಾಖೆಯ ಜನಸಂಖ್ಯಾ ನಿಯಂತ್ರಣಕಾರ್ಯ ಪೂರ್ತಿಯಾಗದೇ ಇರಬಹುದು (ಇದು ನನ್ನ ಸ್ವಂತ ಅಭಿಪ್ರಾಯ. ಈ ಬಗ್ಗೆ ಸರ್ಕಾರದ ನಿಲುವು ತಿಳಿದಿಲ್ಲ)
.ಇದರ ಬಾಧಕಗಳೇನು?
ಭ್ರಷ್ಟಾಚಾರದಿಂದಾಗಿ ಖಾತೆಯಲ್ಲಿ ಜಮೆ ಮಾಡಿದ ಹಣದ ಅಂಶವನ್ನು ಮಹಿಳೆಯರು ಕಳೆದುಕೊಳ್ಳಬಹುದು. ಜಮೆಯಾದ ಮೊತ್ತವನ್ನು ಕುಟುಂಬದ ಬೇರೆ ಸದಸ್ಯರು ಇತರ ವೆಚ್ಚಗಳಿಗಾಗಿ ಉಪಯೋಗಿಸಬಹುದು. ಈ ಭಾದಕಗಳನ್ನು ನಿರ್ಮೂಲನೆ ಮಾಡಿ ಸೌಲಭ್ಯವು ಆ ಮಹಿಳೆಯ ಕಲ್ಯಾಣಕ್ಕೆ ಮಾತ್ರ ದೊರೆಯುವಂತೆ ಮಾಡಿದರೆ ಈ ಯೋಜನೆ ಅದ್ಭುತವಾದದ್ದು.
ದೇಶದ ಆರೋಗ್ಯಸೂಚಿಗಳಾದ ತಾಯಂದಿರ ಮರಣ ಪ್ರಮಾಣ ಮತ್ತು ಶಿಶುಗಳ ಮರಣ ಪ್ರಮಾಣವನ್ನು ತಗ್ಗಿಸಿ, ಆರೋಗ್ಯ ಸೂಚ್ಯಂಕವನ್ನು ವೃದ್ಧಿಸಲು ಈ ಯೋಜನೆ ಸಹಾಯವಾಗಲೆಂದು ಹಾರೈಸೋಣ.
– ಡಾ. ಉಮಾಮಹೇಶ್ವರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ