ಜರೀನ್ ಖಾನ್ಗೂ ಕಾಡಿತ್ತಂತೆ ಕಾಸ್ಟಿಂಗ್ ಕೌಚ್ ಭೂತ!
Team Udayavani, Sep 27, 2019, 5:00 AM IST
ಬಾಲಿವುಡ್ನಲ್ಲಿ ಆಗಾಗ್ಗೆ ಕಾಸ್ಟಿಂಗ್ ಕೌಚ್, ಮಿಟೂ ವಿಷಯಗಳು ಸದ್ದು ಮಾಡುವುದು ಹೊಸದೇನಲ್ಲ. ಪ್ರತಿವರ್ಷ ಹತ್ತಾರು ನಟಿಯರು ಚಿತ್ರರಂಗದಲ್ಲಿ ತಮಗಾದ ಕಹಿ ಅನುಭವವನ್ನು ಹೇಳಿಕೊಳ್ಳುತ್ತಾರೆ. ಇನ್ನು ಅದೆಷ್ಟೋ ನಟಿಯರು ತಮಗಾದ ಕಹಿ ಅನುಭವವನ್ನು ಹಂಚಿಕೊಳ್ಳಲು ಹಿಂದೇಟು ಹಾಕುವುದರಿಂದ ಎಷ್ಟೋ ಪ್ರಕರಣಗಳು ಬೆಳಕಿಗೆ ಬಾರದೇ ಹೋಗುತ್ತವೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಬಾಲಿವುಡ್ನಲ್ಲಿ ಕಾಸ್ಟಿಂಗ್ ಕೌಚ್ ಮತ್ತು ಮಿಟೂನಂತಹ ವಿಷಯಗಳ ಬಗ್ಗೆ ನಟಿಯರು ತಮಗಾದ ಅನುಭವವನ್ನು ಮುಕ್ತವಾಗಿ ಹಂಚಿಕೊಳ್ಳುತ್ತಿದ್ದಾರೆ. ಈ ಮೂಲಕ ಚಿತ್ರರಂಗಕ್ಕೆ ಕೆಟ್ಟ ಹೆಸರು ತರುವ ವ್ಯಕ್ತಿಗಳನ್ನು ಮುಲಾಜಿಲ್ಲದೆ ಸಾರ್ವಜನಿಕವಾಗಿ ಎಳೆದುತರುತ್ತಿದ್ದಾರೆ. ಅಲ್ಲದೆ ಮುಂದೆ ಬರಲಿರುವ ನಟಿಯರಿಗೂ ಇಂತಹ ವಿಷಯಗಳ ವಿರುದ್ಧ ಹೇಗೆ ವರ್ತಿಸಬೇಕು, ಪ್ರತಿಕ್ರಿಯಿಸಬೇಕು ಎನ್ನುವುದನ್ನು ತೋರಿಸಿಕೊಡುತ್ತಿದ್ದಾರೆ. ಇತ್ತೀಚೆಗೆ ಬಾಲಿವುಡ್ನಲ್ಲಿ ಮತ್ತೂಬ್ಬ ನಟಿ ಜರೀನ್ ಖಾನ್ ಕೂಡ ತಾನು ಎದುರಿಸಿದ ಕಾಸ್ಟಿಂಗ್ ಕೌಚ್ ಪರಿಸ್ಥಿತಿಯನ್ನು ಎಲ್ಲರೆದುರು ಮುಕ್ತವಾಗಿ ತೆರೆದಿಟ್ಟಿದ್ದಾರೆ.
ಸಲ್ಮಾನ್ ಖಾನ್ ಅಭಿನಯದ ವೀರ್ ಚಿತ್ರದ ಮೂಲಕ ಬಾಲಿವುಡ್ಗೆ ಕಾಲಿಟ್ಟ ಜರೀನ್ ಖಾನ್ ನಂತರ ರೆಡಿ, ಹೌಸ್ ಫುಲ…-2 ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದ ಚೆಲುವೆ. ಸದ್ಯ ಬಾಲಿವುಡ್ ಬೇಡಿಕೆಯ ನಟಿಯರ ಪಟ್ಟಿಯಲ್ಲಿರುವ ಜರೀನ್ ಖಾನ್ ಚಿತ್ರರಂಗಕ್ಕೆ ಬರುವ ಮುನ್ನ ತನಗಾದ ಕಾಸ್ಟಿಂಗ್ ಕೌಚ್ ಅನುಭವವನ್ನು ಇತ್ತೀಚೆಗೆ ಸಂದರ್ಶನವೊಂದರಲ್ಲಿ ತೆರೆದಿಟ್ಟಿದ್ದಾರೆ.
ಜರೀನ್ ಚಿತ್ರರಂಗಕ್ಕೆ ಕಾಲಿಡುವ ಹೊಸದರಲ್ಲಿ ಬಾಲಿವುಡ್ ನಿರ್ದೇಶಕರೊಬ್ಬರು “ಕಿಸ್ಸಿಂಗ್ ದೃಶ್ಯಗಳನ್ನು ರಿಹರ್ಸಲ್ ಮಾಡೋಣ ಬಾ’ ಎಂದು ಜರೀನ್ ಖಾನ್ಗೆ ಕರೆದಿದ್ದರಂತೆ. ನಿರ್ದೇಶಕರು ಹೇಳಿದ ತಕ್ಷಣ ಒಮ್ಮೆ ಶಾಕ್ ಆದ ಜರೀನ್ ಖಾನ್ ನಂತರ “ನಾನು ಯಾವುದೇ ಕಿಸ್ಸಿಂಗ್ ದೃಶ್ಯವನ್ನು ರಿಹರ್ಸಲ್ ಮಾಡುವುದಿಲ್ಲ’ ಎಂದು ಖಡಕ್ ಆಗಿ ಹೇಳಿದ್ದರಂತೆ. ಅಲ್ಲದೆ ಮತ್ತೂಂದು ಘಟನೆಯಲ್ಲಿ ನಿರ್ದೇಶಕರೊಬ್ಬರು, “ಸ್ನೇಹಿತೆಗಿಂತ ಹೆಚ್ಚಿನ ಸಂಬಂಧ ನನ್ನ ಜೊತೆ ಹೊಂದಿರಬೇಕು’ ಎಂದು ಕೇಳಿದ್ದರಂತೆ. ಆದರೆ, ಜರೀನ್ ಖಾನ್ ಯಾವುದಕ್ಕೂ ಒಪ್ಪಿಗೆ ನೀಡಿಲ್ಲವಂತೆ. “ಅದಾದ ಬಳಿಕ ಬಾಲಿವುಡ್ನಲ್ಲಿ ತನಗೆ ಬರಬೇಕಾದ ಹಲವು ಅವಕಾಶಗಳು ಕೈತಪ್ಪಿ ಹೋಯಿತು. ಆದರೆ ಪ್ರತಿಭೆ ಮತ್ತು ಪರಿಶ್ರಮವಿದ್ದರೆ ನಮಗೆ ಸಿಗಬೇಕಾಗಿರುವುದು ಸಿಗುತ್ತದೆ ಎಂಬ ನಂಬಿಕೆ ನನಗಿತ್ತು. ಆ ನಂತರ ವೀರ್ ಚಿತ್ರದಲ್ಲಿ ಅವಕಾಶ ಸಿಕ್ಕಿತು. ಆ ಚಿತ್ರ ಇಡೀ ಚಿತ್ರರಂಗವೇ ನನ್ನನ್ನು ಗುರುತಿಸುವಂತೆ ಮಾಡಿತು’ ಎಂದಿದ್ದಾರೆ ಜರೀನ್. ಸದ್ಯ ಜರೀನ್ ಖಾನ್ ತನಗಾದ ಅನುಭವವನ್ನು ನೇರವಾಗಿ ಹೇಳಿ ಕೊಂಡಿರುವುದಕ್ಕೆ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಜರೀನ್ ಖಾನ್ ನೇರ ಮಾತಿಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್