ಬೆಳಗಿನ ಜಾವದ ಒಂದು ಕನಸು
Team Udayavani, May 29, 2018, 1:36 PM IST
ಕನಸಿಗೆ ಬಣ್ಣವಿಲ್ಲ. ಅಲ್ಲಿ ಇಂಥದ್ದೇ ಪಾತ್ರಗಳು ಬರುತ್ತವೆ ಎನ್ನುವ ಮುನ್ಸೂಚನೆಯೂ ಇರುವುದಿಲ್ಲ. ಒಮ್ಮೊಮ್ಮೆ ಕನಸು ಬಿದ್ದಾಗ, ನಾವೇ ಅಲ್ಲಿ ಪಾತ್ರಗಳಾಗಿರುತ್ತೇವೆ. ಇಂದೋ ನಿನ್ನೆಯೋ ನಡೆದ ಘಟನೆಗಳಿಗೆ ಸಮೀಪದಲ್ಲೇ ಕನಸುಗಳೂ ಬಿದ್ದು, ವಾಸ್ತವವನ್ನೇ ಬುಡಮೇಲು ಮಾಡುವುದುಂಟು. ಇಲ್ಲೊಬ್ಬ ಅಕೌಂಟೆನ್ಸಿ ಹುಡುಗನ ಕನಸೂ ಅಂಥದ್ದೇ…
ಕನಸು ಎಂಬುದು ಒಂದು ವಿಶೇಷ ಅನುಭವ. ನಿ¨ªೆಯಲ್ಲಿ ಹೆಚ್ಚಿನವರಿಗೆ ಕನಸು ಬೀಳುತ್ತದೆ. ಕನಸಿನಲ್ಲಿ ನಾವು ಕೇಳಿರದ, ನೋಡಿರದ ಪ್ರದೇಶಕ್ಕೆ ಹೋಗುತ್ತೇವೆ. ಕೆಲವರು ಕನಸಿನಲ್ಲಿ ಖುಷಿಯಿಂದ ತೇಲಾಡುತ್ತಿರುತ್ತಾರೆ. ಇನ್ನು ಕೆಲವರು ದುಃಖದಿಂದ ಗೋಳಾಡುತ್ತಾರೆ. ಕನಸಿನಲ್ಲಿ ಮಾತಾಡುವವರೂ ಇ¨ªಾರೆ. ಕೆಲವೊಮ್ಮೆ ತಾವು ಹಗಲು ಮಾತಾಡಿದ್ದನ್ನೇ ಕನಸಿನಲ್ಲಿ ಬಡಬಡಿಸುತ್ತಿರುತ್ತಾರೆ. ಯಾವುದೋ ಸಭೆ- ಸಮಾರಂಭಕ್ಕೆ ಹೋದಂತೆ, ಎತ್ತರದ ಪ್ರದೇಶದಿಂದ ಯಾರೋ ನಮ್ಮನ್ನು ಕೆಳಕ್ಕೆ ತಳ್ಳಿದಂತೆ. ಇನ್ನು ಅನೇಕ ರೀತಿಯ ವಿಚಿತ್ರವಾದ ಕನಸು ಬೀಳುವುದು ಸಹಜ. ನಾವು ಕಂಡ ಕನಸನ್ನು ಬೆಳಗ್ಗೆ ಎದ್ದು ಇನ್ನೊಬ್ಬರಲ್ಲಿ ಹೇಳಬೇಕೆನ್ನುವಷ್ಟರಲ್ಲಿ ಮರೆತು ಹೋಗಿರುತ್ತದೆ.
ನಾನು ದ್ವಿತೀಯ ಪಿಯುಸಿಯ ಪರೀಕ್ಷೆ ಮುಗಿಸಿ ರಜೆಯಲ್ಲಿ¨ªೆ. ಒಂದು ದಿನ ರಿಸಲ್ಟ… ದಿನದಂದು ಎಲ್ಲ ವಿದ್ಯಾರ್ಥಿಗಳು ಕಾಲೇಜಿಗೆ ಹಾಜರಾಗುವಂತೆ, ಕಾಲೇಜಿನಿಂದ ಕರೆ ಬಂತು. ಅದರಂತೆಯೇ ನಾವು ರಿಸಲ್ಟ್ನಂದು ಕಾಲೇಜಿಗೆ ಹೋದೆವು. ನಾನು ಎಲ್ಲರೊಂದಿಗೆ ನಮ್ಮ ಕ್ಲಾಸಿನಲ್ಲಿ ರಿಸಲ್ಟ್ ಏನಾಗಿರಬಹುದೋ ಎಂದು ಕುತೂಹಲ ಮತ್ತು ಭಯದಿಂದ ಕುಳಿತಿ¨ªೆ. ಅಷ್ಟರಲ್ಲಿ ನಮ್ಮ ಕ್ಲಾಸಿಗೆ ಬಂದ ಅಕೌಂಟೆನ್ಸಿ ಸರ್ ನಮ್ಮೆಲ್ಲರ ಅಂಕಗಳನ್ನು ಓದಿ ಹೇಳಿದರು. ರಿಸಲ್ಟ… ಕೇಳಿ ನಾನಂತೂ ಬೆಚ್ಚಿಬಿ¨ªೆ. ಏಕೆಂದರೆ, ನಮ್ಮ ಕ್ಲಾಸಿನಲ್ಲಿ ನನ್ನನ್ನೂ ಸೇರಿದಂತೆ ಇಪ್ಪತ್ತು ವಿದ್ಯಾರ್ಥಿಗಳು ಫೇಲಾಗಿ¨ªೆವು. ನಾನು ಅಳ್ಳೋದಕ್ಕೆ ಶುರುಮಾಡಿದೆ. ಅಷ್ಟರಲ್ಲಿ ಪೊಲೀಸ್ ವ್ಯಾನ್ ನಮ್ಮ ಕಾಲೇಜಿಗೆ ಬಂತು. ಪೊಲೀಸ್ ಇನ್ಸ್ಪೆಕ್ಟರ್ ನೇರವಾಗಿ ನಮ್ಮ ಕ್ಲಾಸಿಗೇ ಬಂದು ನಾವೆಲ್ಲರೂ ಬೆರಗಾಗುವಂಥ ವಿಚಾರವನ್ನು ಹೇಳಿದರು.
ಅದೇನೆಂದರೆ, ಸರ್ಕಾರವು ಪಬ್ಲಿಕ್ ಪರೀಕ್ಷೆಯಲ್ಲಿ ಫೇಲಾದವರನ್ನು ಜೈಲಿಗೆ ಹಾಕುವಂತೆ ಹೊಸ ಕಾನೂನನ್ನು ಜಾರಿಗೆ ತಂದಿದೆ ಎಂದು. ನಮ್ಮೆಲ್ಲರ ಅಳುವನ್ನೂ ಲೆಕ್ಕಿಸದೇ, ಇನ್ಸ್ಪೆಕ್ಟರ್ ತಮ್ಮ ಪೊಲೀಸ್ ವ್ಯಾನ್ನಲ್ಲಿ ಕರಕೊಂಡು ಹೋದರು. ಯಾವುದೇ ವಿಚಾರಣೆಯೂ ಇಲ್ಲದೇ ನಮ್ಮನ್ನು ನೇರವಾಗಿ ಸೆಂಟ್ರಲ್ ಜೈಲಿಗೆ ಹಾಕಲಾಯಿತು. ಅಲ್ಲಿ ಹೋಗಿ ನೋಡಿದರೆ, ನಮ್ಮಂತೆಯೇ ಫೇಲಾದ ರಾಜ್ಯದ ಸಾವಿರಾರು ವಿದ್ಯಾರ್ಥಿಗಳು ಜೈಲಿನಲ್ಲಿದ್ದರು. ನಾನು ಮತ್ತು ನನ್ನ ಸಹಪಾಠಿಗಳನ್ನು ಒಂದೇ ಕೋಣೆಗೆ ಹಾಕಿದರು. ಸ್ವಲ್ಪ ಹೊತ್ತು ಅತ್ತೆ. ಮತ್ತೆ ಎಲ್ಲರಂತೆ ನಾನೂ ಸುಮ್ಮನಾದೆ.
ಸ್ವಲ್ಪ ಹೊತ್ತಿನ ನಂತರ ನಮಗೆ ಅಧಿಕಾರಿಯೊಬ್ಬರು ಬಿಳಿವಸ್ತ್ರ, ಊಟದ ತಟ್ಟೆ ಮತ್ತು ಲೋಟವನ್ನು ನೀಡಿದರು. ಜೈಲಿನ ರಾಗಿಮು¨ªೆಯಂತೂ ಬಹಳ ಚೆನ್ನಾಗಿತ್ತು. ರಾತ್ರಿಯಿಡೀ ಸೊಳ್ಳೆಯ ಕಾಟ. ಅಂತೂ ಇಂತೂ ಬೆಳಗಾಯಿತು. ಬೆಳಗ್ಗೆ ಏಳುವಷ್ಟರಲ್ಲಿ ಒಬ್ಬರು ಪೊಲೀಸ್ ಅಧಿಕಾರಿ ಬಂದು ಒಂದು ಸಿಹಿಸುದ್ದಿಯನ್ನು ಹೇಳಿದರು. ಅದೇನೆಂದರೆ, ಸರ್ಕಾರವು ಮೂವತ್ತಕ್ಕಿಂತ ಅಧಿಕ ಅಂಕ ಪಡೆದವರಿಗೆ ಜಾಮೀನಿನ ಮೂಲಕ ಬಿಡುಗಡೆ ಹೊಂದುವ ಅವಕಾಶವನ್ನು ನೀಡಿದೆ ಎಂದು. ಹೆಚ್ಚಿನವರಿಗೆ ಇದು ಖುಷಿಯಾಗದಿದ್ದರೂ ನನಗಂತೂ ಸಂತೋಷಕ್ಕೆ ಪಾರವೇ ಇಲ್ಲದಂತಾಯಿತು. ಏಕೆಂದರೆ, ನಾನು ಮೂವತ್ತೂಂದು ಅಂಕ ಪಡೆದಿ¨ªೆ. ಹೀಗಾಗಿ, ಜಾಮೀನು ಪಡೆದು ಬಿಡುಗಡೆಯಾದೆ. ನಾನು ಜೈಲಿನಿಂದ ಹೊರಗೆ ಬರುತ್ತಿದ್ದಂತೆ ಅಮ್ಮನ ಜೋರಾದ ಧ್ವನಿ ಕಿವಿಗೆ ಅಪ್ಪಳಿಸಿತು.
“ಲಕ್R, ಏತ್ ಪೊರ್ತು ಜೆಪ್ಪುನು? ಲಕ್ಕರೆ ನನಲಾ ಪುಲ್ಯಾತಾj?’
(ಏಳು ಎಷ್ಟು ಹೊತ್ತು ಮಲಗ್ತಿà? ಏಳಲು ಇನ್ನೂ ಬೆಳಗಾಗಿಲ್ವಾ?) ಎಂದು. ಆಗ ತಿಳಿಯಿತು: ನಾನು ಕಂಡದ್ದು ಕನಸು ಎಂದು.
ಬೆಳಗ್ಗೆ ಕಂಡ ಕನಸು ನಿಜವಾಗುವುದು ಎಂಬ ಹಿರಿಯರ ಮಾತು ನನ್ನ ಪಾಲಿಗೆ ಸುಳ್ಳಾಯಿತು. ನಾನು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅಕೌಂಟೆನ್ಸಿಯಲ್ಲಿ ನೂರಕ್ಕೆ ತೊಂಬತ್ತೈದು ಅಂಕ ಪಡೆದು ಪಾಸಾಗಿ¨ªೆ.
ಹೀಗೆ ನನ್ನ ಕನಸು ವಿಚಿತ್ರವಾಗಿದ್ದರೂ ಅದನ್ನು ನೆನೆದಾಗಲೆಲ್ಲ ನಗು ಬರುವುದು.
– ಕೌಸ್ತುಭಾ ಶೆಟ್ಟಿ, ಮುಂಡ್ಕೂರು ಪ್ರಥಮದರ್ಜೆ ಕಾಲೇಜು, ಕಟೀಲು