ನನ್ನ ಕಾಲೇಜಿನ ಕುರಿತು…


Team Udayavani, May 18, 2018, 6:00 AM IST

k-11.jpg

ಅದು ಸರಿಸುಮಾರು ವರ್ಷಗಳ ಹಿಂದಿನ ಸವಿನೆನಪುಗಳ ಕಹಾನಿ. ಆಗತಾನೆ ದ್ವಿತೀಯ ಪಿಯುಸಿಯ ಅಂತಿಮ ವರ್ಷದ ಫ‌ಲಿತಾಂಶ ಹೊರಬಿದ್ದ ಸಮಯ. ಮುಂದಿನ ಶಿಕ್ಷಣಕ್ಕಾಗಿ ಬಂದು ಸೇರಿದ್ದು ಕಡಲ ತೀರದ ಭಾರ್ಗವನ ಜನ್ಮಭೂಮಿಯಾದ ಕೋಟದ ಕಡಲ ತೀರದ ಆ ವಿದ್ಯಾ ದೇಗುಲಕ್ಕೆ. ಅಲ್ಲಿಂದ ಸರಿಸುಮಾರು ಮೂರು ವರ್ಷಗಳ ಕಾಲ ನನ್ನ ಮತ್ತು ನನ್ನ ಪ್ರೀತಿಯ ಸ್ನೇಹಿತರ ತರೆಲ, ತಮಾಷೆ, ಶೈಕ್ಷಣಿಕ ಚಟುವಟಿಕೆಗಳಿಗೆ ಆಸರೆಯಾಗಿದ್ದು ಅದೇ ಕಡಲ ತೀರದ ಲಕ್ಷ್ಮೀ ಸೋಮ ಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜು ಕೋಟ, ಪಡುಕೆರೆ.

ಬದಲಾವಣೆ ಪ್ರಕೃತಿ ನಿಯಮ ಎಂಬಂತೆ ನಮ್ಮ ಹೆಮ್ಮೆಯ ವಿದ್ಯಾದೇಗುಲ ಈಗ ಸಾಕಷ್ಟು ಬದಲಾವಣೆ ಮತ್ತು ಪ್ರಗತಿಯನ್ನು ಕಂಡುಕೊಂಡಿದೆ. ಅಷ್ಟೇ ಅಲ್ಲ, ಸರಕಾರಿ ವಿದ್ಯಾ ಸಂಸ್ಥೆಯೊಂದು ಹೀಗೂ ಬೆಳೆಯಬಲ್ಲದು ಎನ್ನುವುದಕ್ಕೆ ಒಂದು ಉತ್ತಮ ಉದಾಹರಣೆ ಈ ಸಂಸ್ಥೆ ಎಂದರೆ ತಪ್ಪಿಲ್ಲ. ಒಂದು ಸಂಸ್ಥೆ  ತಳಮಟ್ಟದಿಂದ ಪ್ರಗತಿಯ ಹಾದಿಯತ್ತ ದಾಪುಗಾಲು ಹಾಕುತ್ತ ಅಭಿವೃದ್ಧಿ ಆಗುತ್ತಿರುವುದು ಅದು ಸುಲಭದ ಮಾತಲ್ಲ ಅಥವಾ ದಿನ ಬೆಳಗಾಗುವುದರೊಳಗೆ ಸಂಭವಿಸುವ ಪವಾಡವಂತೂ ಅಲ್ಲ. ಅದು ಸತತ ಪರಿಶ್ರಮ, ಸಂಸ್ಥೆಯಲ್ಲಿನ ಗುರುವೃಂದ, ಸಿಬಂದಿಗಳು, ಊರ ಮಹನೀಯರ ತುಂಬು ಮನಸಿನ ಸಹಕಾರದ ಫ‌ಲಿತಾಂಶವೇ ಈ ವಿದ್ಯಾಸಂಸ್ಥೆ ಇಂದು ಇತರ ಸಂಸ್ಥೆಗಳಿಗೆ ಮಾದರಿಯಾಗಿ ನಿಂತಿದ್ದು. 

ಶಿಕ್ಷಣ ಎಂದರೆ ವಿದ್ಯಾರ್ಥಿಗಳನ್ನು ನಾಲ್ಕು ಗೋಡೆಗಳ ಮಧ್ಯೆ ಕೂಡಿಹಾಕಿ ಗಂಟೆಗಳ ಕಾಲ ಪುಸ್ತಕದ ವಿಚಾರಗಳನ್ನು ತಲೆಗೆ ತುಂಬಿಸಿ ವಿದ್ಯಾರ್ಥಿಗಳನ್ನು ಅಂಕದ ಹಿಂದೆ ಕುರುಡರಂತೆ ಹಿಂಬಾಲಿಸಲು ಪ್ರೋತ್ಸಾಹಿಸುವ ಪ್ರಕ್ರಿಯೆಯಲ್ಲ. ಪ್ರತಿಯೊಬ್ಬ ವಿದ್ಯಾರ್ಥಿ ಕೂಡ ಕೇವಲ ಪುಸ್ತಕದ ಹುಳುವಾಗಿರದೆ ಅದರ ಹೊರತಾಗಿ ಚಿಂತಿಸುವ ಮತ್ತು ಮಾನವೀಯ ನಡತೆಗಳನ್ನ ಕಟ್ಟಿಕೊಳ್ಳುವ ಕಲೆಯನ್ನು ವಿದ್ಯಾರ್ಥಿಗಳಲ್ಲಿ ತುಂಬ ಬೇಕು. ಈ ಕೆಲಸವನ್ನು ನಮ್ಮ ಕಾಲೇಜು ಮಾಡಿದರೆ ಎನ್ನುವುದು ಹೆಮ್ಮೆಯ ವಿಚಾರ.

ಅಲ್ಲದೆ ನಾವು ಕೇವಲ ಪುಸ್ತಕಕ್ಕೆ ಅಂಟಿಕೊಳ್ಳದೆ ಅದರ ಹೊರತಾಗಿ ಹಲವು ಸಮಾಜಮುಖೀ ಮತ್ತು ಮನರಂಜನಾತ್ಮಕ ಕಾರ್ಯಕ್ರಮಗಳ ಮೂಲಕ ಶಿಕ್ಷಣ ಕೇವಲ ಅಂಕಗಳಿಕೆ ಮಾತ್ರ ಅಲ್ಲ ಅಂತಲೂ ಸಾರಿ ಹೇಳಿದೆ. ಇದಕ್ಕೆ ಉತ್ತಮ ಉದಾಹರಣೆಯೆಂದರೆ, ಕಾಲೇಜಿನಲ್ಲಿ ಆರೋಹದಂಥ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಮನರಂಜನೆಯ ಸವಿಪಾಕ ಉಣಬಡಿಸಿದ್ದು, ಮಹಿಳಾ ಶೋಷಣೆ ವಿರುದ್ಧ ಸಮಾಜಮುಖೀ ಕಾರ್ಯಕ್ರಮವಾದ “ಸ್ಪಂದನ’, ಕಲಿಸಿದ ಗುರುಗಳನ್ನು ಮತ್ತೆ ಹಳೆಯ ಸವಿನೆನಪುಗಳನ್ನ ಮೆಲುಕು ಹಾಕಿದ ಪುನರ್‌ಮಿಲನ ವಿದ್ಯಾರ್ಥಿಗಳ ಸುಪ್ತಪ್ರತಿಭೆಗಳಿಗೆ ಹೊನ್ನಿನ ಕೈಗನ್ನಡಿಯಾದ ವಾರ್ಷಿಕ ಸಂಚಿಕೆ “ಕಡಲು’. 

ನಮ್ಮ ಸಂಸ್ಥೆಗೆ ದೊರೆತ “ನ್ಯಾಕ್‌ ಶ್ರೇಣಿ ಬಿ’ ನನ್ನ ಕಾಲೇಜಿಗೆ ಕಳಶಪ್ರಾಯ. ಹಲವು ಕಷ್ಟಗಳ ಸರಮಾಲೆಗಳನ್ನು ಮೀರಿನಿಂತು ಒಂದು ದಶಕ ಕಳೆದು ಇದೀಗ ಸಂಭ್ರಮದ ಕ್ಷಣಗಳಿಗೆ ಕಾತರಿಸುತ್ತಿದೆ.                 

ಶರತ್‌ ಕುಮಾರ್‌ ಶೆಟ್ಟಿ, ಅಸೋಡು ಮಂಗಳೂರು ವಿ. ವಿ., ಮಂಗಲಗಂಗೋತ್ರಿ

ಟಾಪ್ ನ್ಯೂಸ್

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.