ಆ ನೆನಪಿನ ದಿನಗಳು
Team Udayavani, Dec 14, 2018, 6:00 AM IST
ಜೂನ್ ತಿಂಗಳು ಬಂತೆಂದರೆ ಮಕ್ಕಳಿಗೆ ಬೇಜಾರು. ರಜೆಯ ಸೊಬಗನ್ನು ಆನಂದಿಸಿ ಮರಳಿ ಶಾಲೆಯ ಕಡೆಗೆ ಪಯಣ ಮಾಡಬೇಕೆಂಬ ಬೇಜಾರು ಒಂದೆಡೆಯಾದರೆ, ಮನಸ್ಸಿನ ಇನ್ನೊಂದು ಮೂಲೆಯಲ್ಲಿ ಖುಷಿ. ಗೆಳೆಯ-ಗೆಳತಿಯರು ಸಿಗುತ್ತಾರೆ. ಅವರಲ್ಲಿ ರಜೆಯ ಸಂತೋಷದ ಕ್ಷಣ ಹಂಚಿಕೊಳ್ಳಲು ಕಾತರ. ಹೊಸ ಕ್ಲಾಸ್ರೂಮ್, ಹೊಸ ವಿಷಯ, ಬ್ಯಾಗ್, ಬುಕ್ಸ್ , ಛತ್ರಿ ಎಲ್ಲವೂ ಹೊಸದೆಂಬ ಸಂತೋಷದಿಂದ ಶಾಲೆಗೆ ತಯಾರಾಗುತ್ತೇವೆ.
ನಾನು ಬೆಳ್ತಂಗಡಿ ತಾಲೂಕಿನ “ಎಳನೀರು’ ಎಂಬ ಗ್ರಾಮದಿಂದ ಕಳಸ ಎಂಬ ಸಣ್ಣ ಪಟ್ಟಣಕ್ಕೆ ಶಾಲೆಗೆ ಹೋಗಬೇಕಿತ್ತು. ಸುಮಾರು 18 ಕಿ.ಮೀ. ದೂರ. ವರುಣನ ಆರ್ಭಟದ ಮಧ್ಯೆ ಶಾಲೆಗೆ ಹೋಗುವುದೆಂದರೆ ಅರ್ಧ ಸ್ನಾನ ಮಾಡಿದ ಹಾಗೆಯೇ ಸರಿ. ಹೆಸರೇ ಹೇಳಿದ ಹಾಗೆ “ಎಳನೀರು’ ಜಲಧಾರೆಯ ಊರು. ನೇತ್ರಾವತಿ ನದಿ ಉಮಗಸ್ಥಾನ. ಅನೇಕ ಫಾಲ್ಸ್ ಹೊಂದಿರುವ ಪುಟ್ಟ ಗ್ರಾಮ. ನೇತ್ರಾವತಿ ನದಿ ದಾಟಲು ಮರದ ಸೇತುವೆಯಿತ್ತು. ಅದು ಅಡಿಕೆ ಮರದಿಂದ ಮಾಡಲಾಗಿತ್ತು. ಈ ಸೇತುವೆ ದಾಟುವುದೇ ಒಂದು ಸಾಹಸದ ವಿಷಯ. ಈ ಸೇತುವೆ ದಾಟಿ ಶಾಲೆಗೆ ಹೋಗಬೇಕಿತ್ತು. ಶಾಲೆಗೆ ಹೋಗಲು ಸೋಮಾರಿತನವಾದಾಗ ಶಾಲೆಯಲ್ಲಿ ಮಾರನೇ ದಿನ ಹೇಳುವ ಕಾರಣ ಎಂದರೆ, ಮಳೆಯಿಂದ ನದಿತುಂಬಿ ಸೇತುವೆ ಮೇಲೆ ನೀರು ಬಂದಿತ್ತು, ನದಿ ದಾಟಲು ಆಗಲಿಲ್ಲ ಎಂದು. ಈ ಕಾರಣ ಹೇಳಿ ಮಳೆಗಾಲದಲ್ಲಿ ಶಾಲೆಗೆ ರಜಾ ಹಾಕಿ ಮನೆಯಲ್ಲಿ ಇರುತ್ತಿದ್ದೆವು.
ರಜೆ ಮಾಡಿ ಮನೆಯಲ್ಲಿದ್ದರೂ ಒಂದೆಡೆ ಭಯ. ಹೋಮ್ವರ್ಕ್ನ ಚಿಂತೆ, ನೋಟ್ಸ್ ಇನ್ಕಂಪ್ಲೀಟ್ ಆಗುತ್ತದೆ ಎಂಬ ಯೋಚನೆ. ಆದರೆ, ಶಾಲೆಗೆ ರಜೆ ಘೋಷಿಸಿದ ದಿನ ನಮ್ಮ ಸಂತೋಷಕ್ಕೆ ಪಾರವೇ ಇರುತ್ತಿರಲಿಲ್ಲ. ಇನ್ನೊಂದೆಡೆ ಶಾಲೆ ತಲುಪಿದ ನಂತರ ಮಳೆಯ ಕಾರಣದಿಂದ ಶಾಲೆಗೆ ರಜೆ ಎಂಬ ವಿಷಯ ಗೊತ್ತಾಗುತ್ತಿತ್ತು. ಪುನಃ ನದಿ ದಾಟಿ ಮನೆಗೆ ಹೋಗುವ ಆತುರ.
ಆ ದಿನಗಳ ನೆನಪನ್ನು ಮೆಲುಕು ಹಾಕುತ್ತಿದ್ದರೆ ಬರೆಯಲಾರದಷ್ಟು ನೆನಪುಗಳಿವೆ, Childhood days are golden days ಅನ್ನೋ ಹಾಗೆ. ನೆನಪುಗಳು ಮಾತ್ರ ಮರುಕಳಿಸುತ್ತಿರುತ್ತವೆ.
ಪಾವನಾ ಜೈನ್
ಮಿಲಾಗ್ರಿಸ್ ಕಾಲೇಜು,ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು