ಅನುಭವವು ಸಿಹಿಯಲ್ಲ , ಅದರ ನೆನಪೇ ಸಿಹಿಯು!


Team Udayavani, Sep 8, 2017, 6:40 AM IST

banner-1.jpg

ಎಷ್ಟು ಸಹಜವಾದ, ಸತ್ಯದ ಮಾತು ಅಲ್ವಾ. ಕಾಲೇಜು ದಿನಗಳಲ್ಲಿ ಮೊಬೈಲ್‌ ಉಪಯೋಗಿಸಲು ಅನುಮತಿಯಿಲ್ಲದ ಹಾಸ್ಟೆಲ್‌ನಲ್ಲಿ ಕಾಯಿನ್‌ಫೋನ್‌ನ ಎದುರು ಉದ್ದ ಸಾಲು ನಿಂತು ಐದು ನಿಮಿಷ ಅಪ್ಪ- ಅಮ್ಮಂದಿರೊಡನೆ ಮಾತನಾಡಲು ಗಂಟೆಗಟ್ಟಲೆ ಕಾದ ಹುಡುಗಿಗೆ, ಕೆಲಸಕ್ಕೆ ಸೇರಿದ ನಂತರವೋ ಅಥವಾ ಮೊಬೈಲ್‌ ಉಪಯೋಗಿಸಲು ಪ್ರಾರಂಭಿಸಿದ ನಂತರವೋ ಈ ವಾಟ್ಸಾಪ್‌, ಫೇಸ್‌ಬುಕ್‌, ಕಾಲ್‌, ಮೆಸೇಜ್‌ಗಳ ಕಿರಿಕಿರಿಗಿಂತ ಆ ಹಾಸ್ಟೆಲ್‌ ದಿನಗಳ ನೆನಪೇ ಚಂದ ಎನ್ನಿಸಬಹುದು. ಹಾಸ್ಟೆಲ್‌ನ ಶಿಸ್ತು ಮತ್ತು ನಿಯಮಗಳನ್ನು ವಿರೋಧಿಸುತ್ತಿದ್ದವರಿಗೆ ಈಗಿರುವ ವ್ಯಾವಹಾರಿಕ ಪ್ರಪಂಚಕ್ಕಿಂತ ಅಲ್ಲಿನ ಗೆಳತಿಯರ ಪ್ರೀತಿ, ಕಾಳಜಿಗಳೇ ಖುಷಿ ಎನ್ನಿಸಬಹುದು.

ಹೌದು, ನಾವು ಪ್ರತಿಯೊಬ್ಬರೂ ಸಾಮಾನ್ಯವಾಗಿ ಅನೇಕ ಘಟನೆಗಳನ್ನು, ಕ್ಷಣಗಳನ್ನು ಅನುಭವಿಸಿರುತ್ತೇವೆ. ಆದರೆ ಎಷ್ಟೋ ದಿನಗಳ ನಂತರ ಮತ್ತೆ ಆ ಘಳಿಗೆಗಳನ್ನು ನೆನಪಿಸಿಕೊಂಡಾಗ ಅದು ತರಿಸುವ ನಗು ಮತ್ತೆಲ್ಲೂ ಸಿಗ್ಲಿಕ್ಕಿಲ್ಲ. ಸಣ್ಣ ಸಣ್ಣ, ಸಿಲ್ಲಿ ವಿಷಯಗಳೇ ಎಷ್ಟೊಂದು ಯೋಚನೆಗೆ ಕಾರಣ ಆಗಿತ್ತಲ್ವಾ ಅನ್ನಿಸೋದಂತೂ ಹೌದು. ಅವು ಕಹಿಘಟನೆಗಳೇ ಆಗಿದ್ದಲ್ಲಿ, ಅಬ್ಟಾ! ಇನ್ನು ಅದು ಕೇವಲ ನೆನಪಲ್ವಾ ಅನ್ನೋ ನಿರಾಳತೆಯ ಭಾವ. ಆ ಕ್ಷಣಕ್ಕೆ ಅನುಭವವು ಎಷ್ಟೇ ಕಹಿಯಾಗಿ ಕಂಡರೂ ಅನಂತರದಲ್ಲಿ ಅದು ಕೇವಲ ನೆನಪು ಅಷ್ಟೇ. ಇನ್ನು ನಮ್ಮ ಯಾವುದೋ ದುಃಖದ ಸಂದರ್ಭದಲ್ಲೂ ನಮ್ಮ ಮನಸ್ಸಿಗೆ ಖುಷಿ ಕೊಡೋದೂ, ಸಮಾಧಾನಪಡಿಸೋದೂ ಕೂಡಾ ಹಿಂದಿನ ಕಾಲದ ಅನುಭವದ ನೆನಪು. 

ಮಹಾನಗರಿಗಳಲ್ಲಿ ಇಷ್ಟಪಟ್ಟೋ, ಕಷ್ಟಪಟ್ಟೋ ಅಥವಾ ಯಾವುದೋ ಅನಿವಾರ್ಯತೆಗಳಿಗೆ ಒಳಗಾಗಿಯೋ ಬದುಕು ಸವೆಸುವ ಜನರಿಗೆ ಅವರ ಸುಂದರ ಬಾಲ್ಯದ ನೆನಪೇ ಹಿತವೆನಿಸಬಹುದು. ಪೇಟೆಯ ಆಧುನಿಕ ಯುಗದ ಮಕ್ಕಳ ಯಾಂತ್ರಿಕ ಬಾಲ್ಯವನ್ನು ನೋಡಿದಾಗ ಪರಿಸರ, ಸಾಹಿತ್ಯ ಅಂತೆಲ್ಲ ತನ್ನ ಬದುಕನ್ನೇ ಗಾಢವಾಗಿ ಪ್ರೀತಿಸುವ ಯುವಕನಿಗೆ ತನ್ನ ಬಾಲ್ಯದ ತುಂಟಾಟ, ಸವಿ, ಅನುಭವಗಳೆಲ್ಲ ನೆನಪಾಗಬಹುದು. ಕೇವಲ ಕ್ಲಾಸ್‌, ಹೋಂವರ್ಕ್‌, ಟ್ಯೂಷನ್‌ಗಳ ಹಂಗಿಲ್ಲದೆ, ತನ್ನ ಪ್ರೀತಿಯ ಊರಿನಲ್ಲಿ, ಗೆಳೆಯರೊಂದಿಗೆ ಮಣ್ಣಾಟವಾಡುತ್ತ, ಅಪ್ಪ-ಅಮ್ಮಂದಿರ ಪ್ರೀತಿಯ ಗದರುವಿಕೆಯಲ್ಲಿ ಮಿಂದೇಳುತ್ತಾ, ಅಜ್ಜ-ಅಜ್ಜಿಯರ ಕತೆಗಳಲ್ಲಿ ಖುಷಿ ಕಾಣುತ್ತಾ, ಅಕ್ಕ-ತಮ್ಮಂದಿರ ಸಂಗದಲ್ಲಿ ಕಳೆದ ಬಾಲ್ಯದ ಅಪೂರ್ವ, ಅಭೂತಪೂರ್ವ ಕ್ಷಣಗಳು ಮನದಾಳದಲ್ಲೆಲ್ಲೋ ಕಾಡಬಹುದು. ಆ ಒಂದು ನೆನಪಿನಲ್ಲೇ ಆತ ತನ್ನ ಬಾಲ್ಯಕ್ಕೆ ಹೋಗಿಬಂದಿರುತ್ತಾನೆ.

ಆ ಕ್ಷಣದ ಹುರುಪಿನಲ್ಲಿ ಅಮ್ಮನ ಕರೆಗೂ ಓಗೊಡದೆ ಭೋರ್ಗರೆಯುತ್ತಿರುವ ಮಳೆಯಲ್ಲಿ ನೆನೆದ ಪುಟ್ಟ ಹುಡುಗ ಒಂದು ವಾರ ಶೀತ, ಜ್ವರಗಳಿಂದ ಬಳಲಿದರೂ ಮುಂದೆಂದೋ ದೊಡ್ಡವನಾಗಿ ಅವನ ಮಗನಿಗೆ ಬುದ್ಧಿ ಮಾತನ್ನು ಹೇಳುವ ಸಂದರ್ಭದಲ್ಲಿ ತನ್ನ ಬಾಲ್ಯ ನೆನಪಾಗಿ ನಗು ತರಿಸಬಹುದು. ವಿಶಾಲ ಹೃದಯದ, ಸದ್ಭಾವನೆಯ ಪ್ರೇಮಿಯೊಬ್ಬನಿಗೆ ತನ್ನ ಹಳೆ ಗೆಳತಿಯು ಈಗ ಕೇವಲ ನೆನಪು ಎಂಬ ಯೋಚನೆಯೇ ಸಮಾಧಾನ ಕೊಡಬಹುದು.

ಅನುಭವ, ನೆನಪುಗಳೇ ಹಾಗೆ. ಒಂದಕ್ಕೊಂದು ಸದಾ ಬೆಸೆದುಕೊಂಡಿರುತ್ತವೆ. ಅನುಭವಗಳ ಅಲೆಯನ್ನು ನೆನಪೆಂಬ ದೋಣಿಯ ಮೂಲಕ ದಾಟುತ್ತಾ ಹೋದರೆ ಎಲ್ಲಾ ಪ್ರವಾಹಗಳಿಗೂ ಸೆಡ್ಡು ಹೊಡೆದು ಎದ್ದು ನಿಲ್ಲಲು ಸಾಧ್ಯ. 

– ಸುವರ್ಚಲಾ ಅಂಬೇಕರ್‌ ಬಿ. ಎಸ್‌.
ಪ್ರಥಮ ಎಮ್‌.ಎಸ್‌.ಡಬ್ಲ್ಯು.
ರೋಶನಿ ನಿಲಯ, ಮಂಗಳೂರು

ಟಾಪ್ ನ್ಯೂಸ್

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.