ಜನರೇಶನ್‌ ಗ್ಯಾಪ್‌


Team Udayavani, Dec 29, 2017, 6:00 AM IST

Generation-Gap.jpg

ಸುಮಾರು 1990-2000ದ ಪುಟಾಣಿಗಳಾದ ನಾವು ಈಗ ಈ ಸಮಾಜದ ಯುವಪೀಳಿಗೆ ಎಂದು ಕರೆಯಿಸಿಕೊಳ್ಳುತ್ತೇವೆ. ನಮ್ಮ ಬಾಲ್ಯಕ್ಕೂ ಇಂದಿನ ಪುಟಾಣಿಗಳ ಬಾಲ್ಯಕ್ಕೂ ತುಂಬ ಅಂತರಗಳ ವ್ಯತ್ಯಾಸಗಳನ್ನು ಕಾಣಬಹುದಾಗಿದೆ. ಈಗ ಸ್ಮಾರ್ಟ್‌ಫೋನುಗಳ ಕಾಲ. ಎಲ್ಲರದ್ದೂ ಸ್ಟಾರ್ಟ್‌ ಲೈಫ್, ಎಲ್ಲವೂ ಕೂಡ ತಂತ್ರಜ್ಞಾನದಿಂದ ಕೂಡಿದೆ.

ನಮ್ಮ ಹಿಂದಿನ ಜನರೇಶನ್‌ ಬಗ್ಗೆ ಹೇಳುವುದಾದರೆ, ಅಂದು ಯಾರೊಬ್ಬರು ತಮ್ಮ ಮಕ್ಕಳಿಗೆ ಶಾಲೆಗೆ ಹೋಗು ಎಂದು ಒತ್ತಾಯ ಮಾಡಿದವರಲ್ಲ. ಅಂದು ಶಿಕ್ಷಣದ ಮೌಲ್ಯವನ್ನು ಅರಿತವರು ಅಷ್ಟಕ್ಕಷ್ಟೆ . ನಮ್ಮ ಬಾಲ್ಯದಲ್ಲಿ ಇದು ಕಂಡುಬಂದಿಲ್ಲ. ನಮ್ಮ ತಂದೆ-ತಾಯಿಗೆ ತಾವು ಶಿಕ್ಷಣ ಪಡೆಯದಿದ್ದರೂ ತಮ್ಮ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಆಸೆಯಿತ್ತು. ಹೀಗಾಗಿ ಕಷ್ಟಪಟ್ಟು ನಮಗೆ ಉನ್ನತ ಶಿಕ್ಷಣವನ್ನು ದೊರಕಿಸಿಕೊಟ್ಟರು.

ನಮ್ಮ ಹಿಂದಿನ ಪೀಳಿಗೆಯವರ ತಂದೆ-ತಾಯಿಗಳಂತೆ ನಮ್ಮ ತಂದೆ-ತಾಯಿಗಳಿಗೆ ಶಿಕ್ಷಣದ ಮಹತ್ವದ ಬಗ್ಗೆ ಅರಿವು ಇಲ್ಲದಿದ್ದಲ್ಲಿ ನಮಗೆ ಆ ಶಾಲೆಯ ದೊಡ್ಡ ಚೀಲವನ್ನು ಹೊತ್ತುಕೊಂಡು ಹೋಗುವ ಆವಶ್ಯಕತೆ ಇರುತ್ತಿರಲಿಲ್ಲ. ಹಾಗಾಗಿದ್ದರೆ, ಜೀವನ ತುಂಬಾ ಸುಲಭವಾಗಿರುತ್ತಿತ್ತು ಅನಿಸುತ್ತದೆ. ಎಕ್ಸಾಮ್ಸ್‌ , ರ್‍ಯಾಂಕ್ಸ್‌ , ಕ್ಲಾಸಸ್‌ ಬಗ್ಗೆ ಯಾವುದೇ ಟೆನ್‌ಷನ್‌ ಇರುತ್ತಿರಲಿಲ್ಲ. ಆದರೆ ಇಂದಿನ ಕಾಲದಲ್ಲಿ ಶಿಕ್ಷಣವಿಲ್ಲದೆ ಜೀವನ ನಡೆಸುವುದು ತುಂಬಾ ಕಷ್ಟದ ಕೆಲಸವೇ ಸರಿ. ಎಷ್ಟೇ ಡಿಗ್ರಿಗಳು ಇದ್ದರೂ ಅದು ಕಡಿಮೆಯೆ. ಇನ್ನು ನಮ್ಮ ಬಾಲ್ಯಕ್ಕೂ ಈಗಿನ ಮಕ್ಕಳ ಬಾಲ್ಯಕ್ಕೂ ಇರುವ ವ್ಯತ್ಯಾಸವನ್ನು ಗಮನಿಸಿದರೆ ಹಲವಾರು ಬದಲಾವಣೆಗಳನ್ನು ಕಾಣಬಹುದಾಗಿದೆ. ನಾವು ಹುಟ್ಟಿದಾಗ ಮೊಬೈಲ್‌ ಅಷ್ಟೊಂದು ಪ್ರಚಲಿತದಲ್ಲಿರಲಿಲ್ಲ. ಆದರೆ ಇಂದು ಕೈಯಲ್ಲಿ ಮೊಬೈಲ್‌ ಇದ್ದರೆ ಮಾತ್ರ ಮಗು ಊಟ ಮಾಡಲು, ತಿಂಡಿ ತಿನ್ನಲು ಕೇಳುತ್ತದೆ. 

ಇಂದಿನ ಮಕ್ಕಳನ್ನು ಪಾಪ ಹುಟ್ಟಿದ ಕೆಲವೇ ಸಮಯದಲ್ಲಿ ಪ್ರೀಸ್ಕೂಲ್‌ಗೆ ಕಳುಹಿಸುತ್ತಾರೆ. ನಾವಂತೂ ಇದರಿಂದ ತಪ್ಪಿಸಿಕೊಂಡಿದ್ದೇವೆ. ಇನ್ನು ಮುಂದೆ ಮಗು ಹುಟ್ಟುವ ಮುಂಚೆಯೇ ತಂದೆ-ತಾಯಿ ಮಗುವಿನ ಅಡ್ಮಿಷನ್‌ ಮಾಡುವ ಸಿಸ್ಟಮ್‌ ಬಂದರೂ ಆಶ್ಚರ್ಯಪಡಬೇಕಾಗಿಲ್ಲ.ನಮ್ಮ ಹಿರಿಯರು ಮರಕೋತಿ, ಚೆನ್ನೆಮಣೆ ಆಟವಾಡಿ ಸಮಯ ಕಳೆದರು. ನಾವು ಹಾವು-ಏಣಿ ಆಟ, ಕಣ್ಣಾಮುಚ್ಚಾಲೆ ಆಟ ಆಡಿದರೆ ಇಂದಿನ ಮಕ್ಕಳು ಕೇವಲ ಮೊಬೈಲ್‌ ಗೇಮ್‌ನಲ್ಲಿ ತೊಡಗಿರುತ್ತಾರೆ.

ಪರಿಸರದ ಬಗ್ಗೆ ಹೇಳುವುದಾದರೆ, ನಮ್ಮ ಪೂರ್ವಜರ ಕಾಲದಲ್ಲಿ ಎಲ್ಲವೂ ಹಸಿರಾಗಿತ್ತು. ಆದರೆ ಇಂದು ಬೆಳೆಯುತ್ತಿರುವ ತಂತ್ರಜ್ಞಾನದ ಪರಿಣಾಮದಿಂದಾಗಿ ಪರಿಸರ ಏನಿದ್ದರೂ ಅಷ್ಟಕ್ಕಷ್ಟೇ. ಮುಂದೆ ಯಾವ ಪರಿಸ್ಥಿತಿ ಎದುರಾಗುತ್ತದೆಯೋ ಎಂದು ಹೇಳಲಾಗದು. ಮುಂದಿನ ಪೀಳಿಗೆಗೆ ಮರ, ಗಿಡ, ಪಕ್ಷಿ, ಪ್ರಾಣಿಗಳನ್ನು ಭಾವಚಿತ್ರಗಳಲ್ಲಿ ನೋಡುವಂತಾಗಬಹುದೇನೋ?

– ಸುಶ್ಮಿತಾ ಶಿವ
ದ್ವಿತಿಯ ಎಂ.ಕಾಂ.
ಡಾ| ಜಿ. ಶಂಕರ್‌ ಮಹಿಳಾ ಕಾಲೇಜು, ಅಜ್ಜರಕಾಡು

ಟಾಪ್ ನ್ಯೂಸ್

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.