ಟಿಕ್‌ ಟಾಕ್‌ ವಿಷಯ


Team Udayavani, Jul 12, 2019, 5:00 AM IST

u-11

ಅಪರೂಪಕ್ಕೆ ಯಾವುದಾದರೊಂದು ಸಮಾರಂಭ ಅಥವಾ ಹೀಗೆ ಹೊರಗಡೆ ಸಿಕ್ಕಾಗ ನೆಂಟರು ಕೇಳುವುದುಂಟು, “”ಮತ್ತೆ ಹೇಗಿದ್ದೀರಾ? ಮನೆಯವರು ಹೇಗಿದ್ದಾರೆ? ಮಕ್ಕಳು ಏನ್‌ ಮಾಡ್ತಾ ಇದ್ದಾರೆ ಹುಷಾರಾಗಿದ್ದಾರಾ?” ಅಂತ. ಆಗ ಅಮ್ಮನೋ, ಅಪ್ಪನೋ ಹೇಳುವುದುಂಟು- “”ಅದನೇನ್‌ ಕೇಳ್ತಿರಾ ಬಿಡಿ, ಅದೇನೋ ಗೊತ್ತಿಲ್ಲ. ಇತ್ತೀಚೆಗೆ ಮಗಳು ರೂಮ್‌ ಒಳಗೆ ಹೋಗಿ ಬಾಗಿಲು ಹಾಕಿಕೊಳ್ತಾಳೆ. ಕಣ್‌ ತುಂಬಾ ಕಾಡಿಗೆ ಹಚ್ಚಿಕೊಳ್ತಾಳೆ, ಸುಮ್‌ ಸುಮ್ನೆ ಅಳ್ತಾಳೆ ನಗ್ತಾಳೆ, ಕುಣಿತಾಳೆ ನಿಮಿಷಗೊಂದು ಬಟ್ಟೆ ಬದಲಾಯಿಸುತ್ತಾಳೆ. ಹೊತ್ತು ಗೊತ್ತು ಇಲ್ಲದೆ ಮುಖ ತುಂಬಾ ಮೇಕಪ್‌ ಮಾಡ್ತಾಳೆ, ಏನೇನೋ ಬೊಬ್ಬೆ ಹೋಡಿತಾಳೆ, ಹೀಗೆಲ್ಲಾ ಆಡ್ತಾಳೆ ಏನ್‌ ಸಮಸ್ಯೆ ಅನ್ನೋದೆ ಗೊತ್ತಾಗ್ತ ಇಲ್ಲ”. ಪಾಪ ಅವರಿಗೇನು ಗೊತ್ತು. ಅದು ಟಿಕ್‌ಟಾಕ್‌ ಒಂದು ಕಾಯಿಲೆ ಎಂದು!

ತಮ್ಮ ಪ್ರತಿಭೆಯನ್ನು ಆನಾವರಣಗೊಳಿಸಲು ಅದೆಷ್ಟೋ ವೇದಿಕೆಗಳಿವೆ, ಅದೆಷ್ಟೋ ದಾರಿಗಳಿವೆ. ಅದ್ಯಾವುದೂ ವೇದಿಕೆಗಳೇ ಅಲ್ಲ. ಟಿಕ್‌ ಟಾಕ್‌ ಒಂದೇ ಉತ್ತಮ ವೇದಿಕೆಯೆಂದು ವಯಸ್ಸಿನ ಹಂಗಿಲ್ಲದೆ ಮೆರೆಯುತ್ತಿದ್ದಾರೆ ಜನರು. ಬೀದಿ ಬೀದಿಗಳಲ್ಲಿ ಜೋಪಡಿ ಗಳನ್ನು ಹಾಕಿಕೊಂಡು ನಾಟಕ, ನೃತ್ಯ, ಹಾಡುಗಳನ್ನು ಪ್ರದರ್ಶಿಸಿ ಅದೆಷ್ಟೋ ಪ್ರತಿಭೆಗಳು ಸಾವಿರಾರು ಜನ ಗುರುತಿಸುವಂತಹ ಸಾಧನೆ ಮಾಡಿದ್ದಾರೆ. ಅದೆಷ್ಟೋ ಜನ ಅನೇಕ ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ, ಅದೃಷ್ಟದ ಬಾಗಿಲೂ ತೆರೆದಿದೆ. ಆದರೆ, ಇದುವರೆಗೆ ಯಾರೊಬ್ಬರಿಗೂ ಟಿಕ್‌ಟಾಕ್‌ನಲ್ಲಿ ಹೊರ ಹಾಕಿದ ಪ್ರತಿಭೆಗೆ ಪ್ರಶಸ್ತಿ ದೊರತಿಲ್ಲ. ಬದಲಾಗಿ ದಿನದಿಂದ ದಿನಕ್ಕೆ ಸಾವಿನ ಬಾಗಿಲು ತೆರೆಯುತ್ತಲೇ ಇದೆ. ಇನ್ನು, ಇದೊಂದು ಮನರಂಜನೆಯ ತಾಣವಾಗಿ ಪರಿಣಮಿಸಿದ್ದು, ಕೆಲವರು ಪ್ರತಿಭೆಯೆಂದು ತಮ್ಮ ಭಾವನೆಗಳನ್ನು ಹೊರಹಾಕಲು ಇದನ್ನು ಬಳಸುತ್ತಾರೆ. ಅದರಲ್ಲಿಯೂ ದುಃಖ, ವಿರಹ ಗೀತೆಗಳು, ಡ್ಯಾನ್ಸ್‌, ಮೋಜು-ಮಸ್ತಿ, ಕುಸ್ತಿ, ಲವ್‌ ಫೇಲ್ಯೂರ್‌ ಹೀಗೆ ಹಲವಾರು ದೃಶ್ಯಗಳನ್ನು ಭಾವನೆಗಳ ಮೂಲಕ ಇದರಲ್ಲಿ ವ್ಯಕ್ತಪಡಿಸುತ್ತಾರೆ. ಮನೆಯಲ್ಲಿ ಹೆಣ್ಮಕ್ಕಳಾಗಲಿ, ಗಂಡು ಮಕ್ಕಳಾಗಲಿ ಇತ್ತ ಇದ್ದ ಕಡ್ಡಿಯನ್ನು ಅತ್ತ ಇಡಲು ಹೇಳಿದರೆ ಹತ್ತು ಸಲ ಹಿಂದೆಮುಂದೆ ನೋಡ್ತಾರೆ. ಅದೇ ಟಿಕ್‌ಟಾಕ್‌ನಲ್ಲಿ ಕೇವಲ ಕೆಲ ಲೈಕ್‌ಗಳಿಗಾಗಿ ಹತ್ತು ಬಿಂದಿಗೆ ನೀರು ತರಲು ತಯಾರಿರುತ್ತಾರೆ, ಬಹು ಗಾತ್ರದ ಕಲ್ಲು ಎತ್ತಲು ಹಿಂದೆಮುಂದೆ ನೋಡಲ್ಲ, ಎಷ್ಟೇ ಆಳವಿದ್ದರೂ ಪರವಾಗಿಲ್ಲ ನದಿಗೆ ಧುಮುಕಲು ಹೋಗಿ ಅದೆಷ್ಟೋ ಜನ ನೀರು ಪಾಲಾಗಿ¨ªಾರೆ. ಇವರು ಮಾದರಿಯ ಬೈಕ್‌ ಸ್ಟಂಟ್‌ಗೂ ಸಿದ್ಧ. ಯಾರ ಸೇವೆಗೂ ಸಿದ್ಧ. ಇತ್ತ ಕನ್ನಡದ ಬಗೆಗಿನ ಅಭಿಮಾನ ಟಿಕ್‌ ಟಾಕ್‌ನಲ್ಲಿ ಉಕ್ಕುವುದೇನು? ಜತೆಗೆ ದೊಡ್ಡ ದೊಡ್ಡ ಸಿನೆಮಾ ಡೈಲಾಗ್‌ಗಳೇನು? ಹೀಗೆ ಶೋಕಿಗಾಗಿ ತೋರಿಸುವ ಪ್ರತಿಭೆಗೇನೂ ಕಮ್ಮಿಯಿಲ್ಲ. ಇವುಗಳೆಲ್ಲದರ ಹಿಂದೆ ಸಾವುನೋವುಗಳು ಸಂಭವಿಸುವ ಅರಿವಿದ್ದರೂ, ಇಲ್ಲದಂತೆ ಇರುತ್ತಾರೆ.

ಕೇವಲ 30 ಸೆಕೆಂಡಿನ ಟ್ಯಾಲೆಂಟ್‌ಗಾಗಿ ಜೀವವನ್ನೇ ಕಳೆದುಕೊಂಡವರು ಅದೆಷ್ಟೋ ಜನ ಎಂದು ನಮಗೆ ಗೊತ್ತಿದೆ. ಒಮ್ಮೆ ಇದರ ಚಕ್ರವ್ಯೂಹದೊಳಗೆ ಸಿಲುಕಿದರೆ ಮತ್ತೆ ಹೊರ ಬರಲು ಅಷ್ಟು ಸುಲಭವಿಲ್ಲ. ಟಿಕ್‌ಟಾಕ್‌ಪ್ರಿಯರು ದಿನದಿಂದ ದಿನಕ್ಕೆ ಫಾಲೋವರ್ಸ್‌ಗಳ ಸಂಖ್ಯೆಯನ್ನು ಹೆಚ್ಚಿಸಲು ನಾನಾ ಕಸರತ್ತುಗಳನ್ನು ಮಾಡುತ್ತಾರೆ. ಇದರಿಂದಾಗಿ ಇತ್ತೀಚಿನ ದಿನಗಳಲ್ಲಿ ಸಾ ವುನೋವುಗಳ ಸಂಖ್ಯೆಯು ಹೆಚ್ಚುತ್ತಲೇ ಇದೆ.

2018ರ ಒಂದು ವರದಿಯ ಪ್ರಕಾರ ಜಗತ್ತಿನಾದ್ಯಂತ 500 ಮಿಲಿಯನ್‌ಗಿಂತಲೂ ಅಧಿಕ ಮಂದಿ ತಮ್ಮ ಮೊಬೈಲ್‌ನಲ್ಲಿ ಟಿಕ್‌-ಟಾಕ್‌ ಆ್ಯಪ್‌ ಅನ್ನು ಇನ್‌ಸ್ಟಾಲ್‌ ಮಾಡಿಕೊಂಡಿದ್ದಾರೆ. ಸೆನ್ಸಾರ್‌ ಟವರ್‌ ವರದಿ ಪ್ರಕಾರ ಭಾರತವೇನೂ ಕಮ್ಮಿ ಇಲ್ಲವೆಂಬಂತೆ, ಸರಿ ಸುಮಾರು 88.6 ಮಿಲಿಯನ್‌ನಷ್ಟು ಜನರು ಟಿಕ್‌ಟಾ ಕ್‌ ಬಳಸುತ್ತಿ¨ªಾರೆ. ಟಿಕ್‌ಟಾ ಕ್‌ ಆ್ಯಪ್‌ ಆನ್ನು ಮೊದಲ ಬಾರಿಗೆ ಚೀನಾ 2017ರಲ್ಲಿ ಆರಂಭಿಸಿತು. ಮದ್ರಾಸ್‌ ಸರ್ಕಾರವು ಇತ್ತೀಚೆಗೆ ಟಿಕ್‌ಟಾ ಕನ್ನು ಬ್ಯಾನ್‌ ಮಾಡಿ, ಪ್ಲೇ ಸ್ಟೋರ್‌ನಿಂದ ಟಿಕ್‌ಟಾ ಕ್‌ ಆ್ಯಪ್‌ ಅನ್ನು ತೆಗೆದು ಹಾಕಲಾಗಿತ್ತು. ಆದರೆ, ನಂತರದ ದಿನಗಳಲ್ಲಿ ಆದೇಶವನ್ನು ಹಿಂಪಡೆದುಕೊಂಡಿದೆ. ಟಿಕ್‌ಟಾಕ್‌ ವಿರುದ್ಧ ಸಮರ ಸಾರಲು ಮಹಿಳಾ ಆಯೋಗವೂ ಸಿದ್ಧವಾಗಿದೆ.

ಇನ್ನಾದರೂ ಪೋಷಕರು ಮಕ್ಕಳ ಮೊಬೈಲ್‌ಗ‌ಳನ್ನು ಆಗಾಗ ಪರಿಶೀಲಿಸಿಕೊಂಡು ಟಿಕ್‌ ಟಾಕ್‌ ಖಾತೆಯನ್ನು ತೆರೆಯದಂತೆ ಗಮನ ವಹಿಸುವುದು ಉತ್ತಮ.

ಆಶಿತಾ ಎಸ್‌. ಗೌಡ
ಪತ್ರಿಕೋದ್ಯಮ ವಿಭಾಗ
ಮಂಗಳೂರು ವಿಶ್ವವಿದ್ಯಾನಿಲಯ, ಕೊಣಾಜೆ

ಟಾಪ್ ನ್ಯೂಸ್

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.