ಇಸಿಯು ಅಪ್ಡೇಟ್ ಯಾಕೆ ಮಾಡಬೇಕು?


Team Udayavani, May 31, 2019, 6:00 AM IST

v-35

ಆಧುನಿಕ ಕಾರುಗಳಲ್ಲಿ ಎಲೆಕ್ಟ್ರಾನಿಕ್‌ ಕಂಟ್ರೋಲ್ ಯುನಿಟ್ (ಇಸಿಯು) ಎಂಬ ವ್ಯವಸ್ಥೆಯೊಂದಿದೆ. ಇವುಗಳನ್ನು ಕಾಲಕಾಲಕ್ಕೆ ಅಪ್ಡೇಟ್ ಮಾಡಬೇಕಾದ್ದು ಅಗತ್ಯ. ಸಾಫ್ಟ್ವೇರ್‌ ಮೂಲಕ ಇವುಗಳನ್ನು ಅಪ್ಡೇಟ್ ಮಾಡಲಾಗುತ್ತದೆ. ಎಂಜಿನ್‌ ಟ್ರಾನ್ಸ್‌ಮಿಷನ್‌ನಿಂದ ಹಿಡಿದು ಇಂಧನ ಬಳಕೆಯವರೆಗೆ ಎಲ್ಲವನ್ನೂ ನಿಯಂತ್ರಿಸುವುದು ಇಸಿಯು. ಆದ್ದರಿಂದ ಇದರ ಅಪ್ಡೇಟ್ ಗಮನಾರ್ಹ ಪರಿಣಾಮ ಬೀರುತ್ತದೆ.

ಇಸಿಯು ಸಮಸ್ಯೆ ಪತ್ತೆ ಹೇಗೆ?
ಇಸಿಯು ಕೈಕೊಡುತ್ತಿದ್ದರೆ ಅವುಗಳ ಸಮಸ್ಯೆ ಸುಲಭವಾಗಿ ಗೋಚರಿಸಬಹುದು. ಕೆಲವೊಮ್ಮೆ ಕಾರಿನಲ್ಲಿ ಉಂಟಾಗುವ ಸಮಸ್ಯೆಗೆ ಮೆಕ್ಯಾನಿಕಲ್ ಕಾರಣ ಇರಬಹುದೆಂದು ನೀವು ಭಾವಿಸ ಬಹುದು. ಆದರೆ ಇದು ಇಸಿಯು ನಿಂದಾಗಿಯೂ ಆಗಿರುತ್ತದೆ.

ಎಂಜಿನ್‌ ಆಯಿಲ್ ಲೈಟ್ ಆನ್‌
ಎಂಜಿನ್‌ ಆಯಿಲ್ ಕಡಿಮೆ ಇದೆ ಎಂದು ನಿಮಗೆ ಮೀಟರ್‌ನಲ್ಲಿ ಲೈಟ್ ಗೋಚರಿಸಬಹುದು. ಆದರೆ ಎಂಜಿನ್‌ ಆಯಿಲ್ ಸರಿಯಾಗಿಯೇ ಇರಬಹುದು. ಹೀಗೆ ಇಸಿಯು ಸರ್ಕ್ನೂಟ್‌ನ ಸೆನ್ಸರ್‌ ಸಮಸ್ಯೆಯಿಂದಾಗಿ ಹೀಗೆ ಆಗುವ ಸಾಧ್ಯತೆ ಇದೆ.

ಕಾರು ಸ್ಥಗಿತ ಅಥವಾ ಮಿಸ್‌ ಫೈರಿಂಗ್‌
ಕೆಲವೊಮ್ಮೆ ಕಾರು ಚಾಲನೆಯ ಮಧ್ಯದಲ್ಲಿ ಸ್ಥಗಿತಗೊಳ್ಳುವುದು ಅಥವಾ ಎಂಜಿನ್‌ ಮಿಸ್‌ ಫೈರ್‌ ಆಗುವುದು ಸಮಸ್ಯೆಗಳು ಗೋಚರಿಸಬಹುದು. ಕೆಲವೊಮ್ಮೆ ಎಂಜಿನ್‌ ಪಿಕಪ್‌ ಏಕಾಏಕಿ ಕಡಿಮೆ ಆದಂತೆಯೂ ಗೋಚರಿಸಬಹುದು.

ಸ್ಟಾರ್ಟ್‌ ಆಗದೇ ಇರುವುದು
ಇಸಿಯು ಕೆಟ್ಟರೆ ಎಂಜಿನ್‌ ಸ್ಟಾರ್ಟ್‌ ಆಗಲಾರದು. ಎಂಜಿನ್‌ ಮ್ಯಾನೇಜ್‌ಮೆಂಟ್ ಕಂಟ್ರೋಲ್ ವ್ಯವಸ್ಥೆ ಕೈಕೊಟ್ಟದ್ದರಿಂದ ಕಾರು ಸ್ಟಾರ್ಟ್‌ ಆಗುವುದಿಲ್ಲ. ಆದರೆ ಕಾರು ಕ್ರ್ಯಾಂಕ್‌ ಆಗುತ್ತದೆ. ಇದರ ಸಮಸ್ಯೆ ಗುರುತಿಸಲು ಪರಿಣತ ಮೆಕ್ಯಾನಿಕ್‌ ಬೇಕಾಗುತ್ತದೆ.

ಕಡಿಮೆ ಮೈಲೇಜ್‌
ಇಸಿಯು ಸಮಸ್ಯೆಯಿದ್ದರೆ ಕಾರಿನ ದಹನ ವ್ಯವಸ್ಥೆಗೆ ಬೇಕಾದ್ದಕ್ಕಿಂತಲೂ ಹೆಚ್ಚು ಇಂಧನವನ್ನು ಪೂರೈಸುವಂತೆ ಮಾಡುತ್ತದೆ. ಇದರಿಂದ ಸಹಜವಾಗಿ ಎಂಜಿನ್‌ ಮೈಲೇಜ್‌ ಕಡಿಮೆಯಾಗಬಹುದು. ಅಷ್ಟೇ ಅಲ್ಲದೆ ಕಾರಿನ ಒಟ್ಟಾರೆ ಫ‌ರ್ಫಾಮೆನ್ಸ್‌ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ.

– ಈಶ

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

novel

ಕೃಷಿ ಬದುಕಿನ ಸೂಕ್ಷ್ಮ ನೋಟ ನೀಡುವ ಅಗೆದೆಷ್ಟೂ ನಕ್ಷತ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.