IPL 2024; ಮುಂಬೈ ವಿರುದ್ಧ ಭರ್ಜರಿ ಗೆಲುವು; ಮೂರಕ್ಕೇರಿದ ರಾಹುಲ್‌ ಪಡೆ


Team Udayavani, May 1, 2024, 12:24 AM IST

IPL 2024; ಮುಂಬೈ ವಿರುದ್ಧ ಭರ್ಜರಿ ಗೆಲುವು; ಮೂರಕ್ಕೇರಿದ ರಾಹುಲ್‌ ಪಡೆ

ಲಕ್ನೋ: ಮುಂಬೈಯನ್ನು ಬಿಗಿಯಾದ ಬೌಲಿಂಗ್‌ ದಾಳಿ ಮೂಲಕ ಹಿಡಿದು ನಿಲ್ಲಿಸಿದ ಆತಿಥೇಯ ಲಕ್ನೋ ಸೂಪರ್‌ ಜೈಂಟ್ಸ್‌ 4 ವಿಕೆಟ್‌ಗಳ ಜಯ ಸಾಧಿಸಿ 3ನೇ ಸ್ಥಾನಕ್ಕೆ ಏರಿದೆ.

ಮುಂಬೈ ಇಂಡಿಯನ್ಸ್‌ 7 ವಿಕೆಟಿಗೆ ಕೇವಲ 144 ರನ್‌ ಗಳಿಸಿದರೆ, ಲಕ್ನೋ 19.2 ಓವರ್‌ಗಳಲ್ಲಿ 6 ವಿಕೆಟಿಗೆ 145 ರನ್‌ ಮಾಡಿತು. ಇದು 10 ಪಂದ್ಯಗಳಲ್ಲಿ ರಾಹುಲ್‌ ಪಡೆ ಸಾಧಿಸಿದ 6ನೇ ಗೆಲುವು. ಚೇಸಿಂಗ್‌ ವೇಳೆ ಸ್ಟೋಯಿನಿಸ್‌ 62, ರಾಹುಲ್‌ 28 ರನ್‌ ಹೊಡೆದರು.

ಬರ್ತ್‌ಡೇ ಸಡಗರದಲ್ಲಿದ್ದ ರೋಹಿತ್‌ ಶರ್ಮ ನಾಲ್ಕೇ ರನ್ನಿಗೆ ಆಟ ಮುಗಿಸುವುದರೊಂದಿಗೆ ಮುಂಬೈ ಕುಸಿತ ಮೊದಲ್ಗೊಂಡಿತು. ಇದರೊಂದಿಗೆ ಬರ್ತ್‌ಡೇಯಂದು ಆಡಿದ ಐದೂ ಐಪಿಎಲ್‌ ಪಂದ್ಯಗಳಲ್ಲಿ ರೋಹಿತ್‌ ವೈಫ‌ಲ್ಯ ಮುಂದುವರಿಯಿತು (17, 1, 2, 3, 4 ರನ್‌). ಸೂರ್ಯಕುಮಾರ್‌ ಹತ್ತರ ಗಡಿ ದಾಟಲಿಲ್ಲ; ಹಾರ್ದಿಕ್‌ ಪಾಂಡ್ಯ ಖಾತೆ ತೆರೆಯಲಿಲ್ಲ. ಈ ಮೂವರೂ ಟಿ20 ವಿಶ್ವಕಪ್‌ಗೆ ಆಯ್ಕೆಯಾದ ಆಟಗಾರರೆಂಬುದು ಉಲ್ಲೇಖನೀಯ.

ಮುಂಬೈ ಸರದಿಯಲ್ಲಿ ನಂ.6 ಬ್ಯಾಟರ್‌ ನೇಹಲ್‌ ವಧೇರ ಸರ್ವಾಧಿಕ 46 ರನ್‌ ಮಾಡಿದರು (41 ಎಸೆತ, 4 ಬೌಂಡರಿ, 2 ಸಿಕ್ಸರ್‌). ಇಶಾನ್‌ ಕಿಶನ್‌ ಗಳಿಕೆ 32 ರನ್‌. ಇದಕ್ಕಾಗಿ ಅವರು 36 ಎಸೆತ ಎದುರಿಸಿದರು (3 ಬೌಂಡರಿ). ಡೆತ್‌ ಓವರ್‌ ವೇಳೆ ಕ್ರೀಸ್‌ನಲ್ಲಿದ್ದ ಟಿಮ್‌ ಡೇವಿಡ್‌ 35 ರನ್‌ ಬಾರಿಸಿ ಅಜೇಯರಾಗಿ ಉಳಿದರು (18 ಎಸೆತ, 3 ಬೌಂಡರಿ, 1 ಸಿಕ್ಸರ್‌).

ಲಕ್ನೋ ಸಾಂ ಕ ಬೌಲಿಂಗ್‌ ಮೂಲಕ ಯಶಸ್ಸು ಸಾಧಿಸಿತು. ಮರಳಿ ಆಡಲಿಳಿದ ವೇಗಿ ಮಾಯಾಂಕ್‌ ಯಾದವ್‌ 31 ರನ್‌ ನೀಡಿ ಒಂದು ವಿಕೆಟ್‌ ಉರುಳಿಸಿದರು. 36ಕ್ಕೆ 2 ವಿಕೆಟ್‌ ಕಿತ್ತ ಮೊಹ್ಸಿನ್‌ ಖಾನ್‌ ಲಕ್ನೋದ ಯಶಸ್ವಿ ಬೌಲರ್‌.

ಟಾಪ್ ನ್ಯೂಸ್

Yelimale ಶಾಲೆಯ ತಡೆಗೋಡೆ ಕುಸಿತ; 20ಕ್ಕೂ ಅಧಿಕ ಕೋಳಿಗಳ ಸಾವು

Yelimale ಶಾಲೆಯ ತಡೆಗೋಡೆ ಕುಸಿತ; 20ಕ್ಕೂ ಅಧಿಕ ಕೋಳಿಗಳ ಸಾವು

Vasantha ಬಂಗೇರರಿಲ್ಲದೆ ರಾಜ್ಯ ರಾಜಕಾರಣಕ್ಕೆ ನಷ್ಟ: ಮುಖ್ಯಮಂತ್ರಿ ಸಿದ್ದರಾಮಯ್ಯ

Vasantha ಬಂಗೇರರಿಲ್ಲದೆ ರಾಜ್ಯ ರಾಜಕಾರಣಕ್ಕೆ ನಷ್ಟ: ಮುಖ್ಯಮಂತ್ರಿ ಸಿದ್ದರಾಮಯ್ಯ

3 days fast as penance for Jagannath being a Modi devotee: Patra

Sambit Patra; ಜಗನ್ನಾಥನೇ ಮೋದಿ ಭಕ್ತ ಎಂದಿದ್ದಕ್ಕೆ 3 ದಿನ ಉಪವಾಸ ಪ್ರಾಯಶ್ಚಿತ್ತ: ಪಾತ್ರಾ

Kasaragod ಜಿಲ್ಲೆಯಾದ್ಯಂತ ಮಳೆ; ಹೆದ್ದಾರಿಯಲ್ಲಿ ಸಂಚಾರ ದುಸ್ತರ

Kasaragod ಜಿಲ್ಲೆಯಾದ್ಯಂತ ಮಳೆ; ಹೆದ್ದಾರಿಯಲ್ಲಿ ಸಂಚಾರ ದುಸ್ತರ

Kodagu ಜಿಲ್ಲೆಯಲ್ಲಿ ಮಳೆ; ಮರೆಯಾದ ಬರದ ಛಾಯೆ; ಪ್ರವಾಸಿಗರ ದಾಂಗುಡಿ

Kodagu ಜಿಲ್ಲೆಯಲ್ಲಿ ಮಳೆ; ಮರೆಯಾದ ಬರದ ಛಾಯೆ; ಪ್ರವಾಸಿಗರ ದಾಂಗುಡಿ

Uppinangady: ಹೆದ್ದಾರಿ ತಡೆಗೋಡೆ ಕುಸಿತ

Uppinangady: ಹೆದ್ದಾರಿ ತಡೆಗೋಡೆ ಕುಸಿತ

MAHE

MAHE ಟೈಮ್ಸ್‌ ಉನ್ನತ ಶಿಕ್ಷಣ ಯುವ ವಿ.ವಿ. ಶ್ರೇಯಾಂಕ: ಮಾಹೆಗೆ 175ನೇ ಸ್ಥಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸ್ಟಾರ್ಕ್‌ ಸುಂಟರಗಾಳಿ ; ಕೋಲ್ಕತಾ ಫೈನಲ್‌ ಸವಾರಿ

IPL 2024; ಸ್ಟಾರ್ಕ್‌ ಸುಂಟರಗಾಳಿ ; ಕೋಲ್ಕತಾ ಫೈನಲ್‌ ಸವಾರಿ

T20 World Cup: McGurk is Australia’s reserve player

T20 World Cup: ಮೆಕ್‌ಗರ್ಕ್‌ ಆಸ್ಟ್ರೇಲಿಯದ ಮೀಸಲು ಆಟಗಾರ

T20 World Cup; Dwayne Bravo is the Afghanistan bowling consultant

T20 World Cup; ಡ್ವೇನ್‌ಬ್ರಾವೊ ಅಫ್ಘಾನ್‌ ಬೌಲಿಂಗ್‌ ಸಲಹೆಗಾರ

1-adsadasdas

IPL ಮೊದಲ ಕ್ವಾಲಿಫೈಯರ್‌ ಇಂದು; ಕೆಕೆಆರ್‌-ಹೈದರಾಬಾದ್‌ ಬಿಗ್‌ ಹಿಟ್ಟರ್ ಫೈಟ್‌

pvs

Malaysia Masters ಬ್ಯಾಡ್ಮಿಂಟನ್‌ ; ಬ್ರೇಕ್‌ ಮುಗಿಸಿ ಆಡಲಿಳಿದ ಪಿ.ವಿ.ಸಿಂಧು

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

Yelimale ಶಾಲೆಯ ತಡೆಗೋಡೆ ಕುಸಿತ; 20ಕ್ಕೂ ಅಧಿಕ ಕೋಳಿಗಳ ಸಾವು

Yelimale ಶಾಲೆಯ ತಡೆಗೋಡೆ ಕುಸಿತ; 20ಕ್ಕೂ ಅಧಿಕ ಕೋಳಿಗಳ ಸಾವು

Vasantha ಬಂಗೇರರಿಲ್ಲದೆ ರಾಜ್ಯ ರಾಜಕಾರಣಕ್ಕೆ ನಷ್ಟ: ಮುಖ್ಯಮಂತ್ರಿ ಸಿದ್ದರಾಮಯ್ಯ

Vasantha ಬಂಗೇರರಿಲ್ಲದೆ ರಾಜ್ಯ ರಾಜಕಾರಣಕ್ಕೆ ನಷ್ಟ: ಮುಖ್ಯಮಂತ್ರಿ ಸಿದ್ದರಾಮಯ್ಯ

Modi insults Tamils ​​for votes: CM Stalin sparks

Election; ವೋಟಿಗಾಗಿ ತಮಿಳರಿಗೆ ಮೋದಿ ಅವಹೇಳನ: ಸಿಎಂ ಸ್ಟಾಲಿನ್‌ ಕಿಡಿ

3 days fast as penance for Jagannath being a Modi devotee: Patra

Sambit Patra; ಜಗನ್ನಾಥನೇ ಮೋದಿ ಭಕ್ತ ಎಂದಿದ್ದಕ್ಕೆ 3 ದಿನ ಉಪವಾಸ ಪ್ರಾಯಶ್ಚಿತ್ತ: ಪಾತ್ರಾ

Kasaragod ಜಿಲ್ಲೆಯಾದ್ಯಂತ ಮಳೆ; ಹೆದ್ದಾರಿಯಲ್ಲಿ ಸಂಚಾರ ದುಸ್ತರ

Kasaragod ಜಿಲ್ಲೆಯಾದ್ಯಂತ ಮಳೆ; ಹೆದ್ದಾರಿಯಲ್ಲಿ ಸಂಚಾರ ದುಸ್ತರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.