ದಕ್ಷಿಣ ಆಫ್ರಿಕಾ ಪಂದ್ಯಕ್ಕೆ ಕೇದಾರ್ ಜಾಧವ್ ಅನುಮಾನ
Team Udayavani, Jun 4, 2019, 6:00 AM IST
ಲಂಡನ್: ಭಾರತದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಹಾಗೂ ಪಾರ್ಟ್ಟೈಮ್ ಸ್ಪಿನ್ನರ್ ಆಗಿರುವ ಕೇದಾರ್ ಜಾಧವ್ ಭುಜದ ನೋವಿನಿಂದ ಇನ್ನೂ ಪೂರ್ತಿ ಗುಣ ಮುಖರಾಗಿಲ್ಲವೇ? ಇಂಥದೊಂದು ಪ್ರಶ್ನೆ ಮತ್ತೆ ಕಾಡಲಾರಂಭಿದೆ. ಇದಕ್ಕೆ ಕಾರಣ, ಅವರು ನೆಟ್ ಪ್ರ್ಯಾಕ್ಟೀಸ್ಗೆ ಇಳಿದರೂ ಪೂರ್ಣ ಪ್ರಮಾಣದಲ್ಲಿ ಅಭ್ಯಾಸ ನಡೆಸದಿದ್ದುದು.
ಭಾರತ ತನ್ನ ಮೊದಲ ಲೀಗ್ ಪಂದ್ಯವನ್ನು ಬುಧವಾರ ಸೌತಾಂಪ್ಟನ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿದ್ದು, ಇದಕ್ಕಾಗಿ ಕಠಿನ ತಾಲೀಮು ನಡೆಸುತ್ತಿದೆ. ಇದೇ ವೇಳೆ ಜಾಧವ್ ಕೂಡ ಬ್ಯಾಟಿಂಗ್ ಅಭ್ಯಾಸ ನಡೆಸಿದ್ದಾರೆ. ಆದರೆ ಸ್ವಲ್ಪ ಹೊತ್ತು ಮಾತ್ರ. “ಫಸ್ಟ್ ಪೋಸ್ಟ್’ ವರದಿ ಪ್ರಕಾರ ಇನ್ನೂ ಚೇತರಿಸಿಕೊಳ್ಳದ ಜಾಧವ್ ಮೊದಲ ಪಂದ್ಯದಲ್ಲಿ ಆಡುವುದು ಅನುಮಾನವಾಗಿದೆ.
ಅಕಸ್ಮಾತ್ ಜಾಧವ್ ಆಡದೇ ಹೋದರೆ ಈ ಸ್ಥಾನ ವಿಜಯ್ ಶಂಕರ್ ಪಾಲಾಗುವ ಸಾಧ್ಯತೆ ಇದೆ.ಮೇ 5ರ ಪಂಜಾಬ್ ಎದುರಿನ ಐಪಿಎಲ್ ಪಂದ್ಯದಲ್ಲಿ ಫೀಲ್ಡಿಂಗ್ ನಡೆಸುತ್ತಿ ದ್ದಾಗ ಕೇದಾರ್ ಜಾಧವ್ ಭುಜದ ನೋವಿಗೆ ಸಿಲುಕಿದ್ದರು. ಅನಂತರ ಯಾವುದೇ ಪಂದ್ಯದಲ್ಲಿ ಆಡಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ