ರೋಹಿತ್‌ ಶರ್ಮ, ಕೊಹ್ಲಿಯನ್ನೇ ನಂಬಿ ಕೂರಬಾರದು: ಸಚಿನ್‌


Team Udayavani, Jul 12, 2019, 5:48 AM IST

india

ಮ್ಯಾಂಚೆಸ್ಟರ್‌: ಜಡೇಜ-ಧೋನಿಯ “ಫೈಟಿಂಗ್‌ ಸ್ಪಿರಿಟ್‌’ ಮೆಚ್ಚಿಕೊಂಡ ಸಚಿನ್‌ ತೆಂಡುಲ್ಕರ್‌, ಯಾವತ್ತೂ ರೋಹಿತ್‌-ಕೊಹ್ಲಿಯನ್ನು ನಂಬಿ ಕುಳಿತುಕೊಳ್ಳಬಾರದು ಎಂದು ಹೇಳಿದರು.

“ಸೋಲಿನಿಂದ ಬಹಳ ಬೇಸರವಾಗಿದೆ. ಅನುಮಾನವೇ ಇರಲಿಲ್ಲ, 240 ರನ್‌ ಬೆನ್ನಟ್ಟಬಹುದಾದ ಮೊತ್ತವಾಗಿತ್ತು. ಇದೇನೂ ದೊಡ್ಡ ಸ್ಕೋರ್‌ ಆಗಿರಲಿಲ್ಲ. ಆದರೆ ಪಟಪಟನೆ 3 ವಿಕೆಟ್‌ ಹಾರಿಸಿದ ನ್ಯೂಜಿಲ್ಯಾಂಡ್‌ ಕನಸಿನ ಆರಂಭ ಪಡೆಯಿತು’ ಎಂಬುದಾಗಿ ತೆಂಡುಲ್ಕರ್‌ ಹೇಳಿದರು.

“ಇಲ್ಲಿ ಒಂದು ವಿಷಯ ಹೇಳಬಯಸುತ್ತೇನೆ. ಪ್ರತೀ ಸಲವೂ ರೋಹಿತ್‌ ಗಟ್ಟಿಮುಟ್ಟಾದ ಅಡಿಪಾಯ ನಿರ್ಮಿಸುತ್ತಾರೆ, ಕೊಹ್ಲಿ ಈ ಬುನಾದಿಯ ಮೇಲೆ ಬ್ಯಾಟಿಂಗ್‌ ನಡೆಸುತ್ತಾರೆ ಎಂದು ನಂಬಿ ಕುಳಿತುಕೊಳ್ಳುವುದು ತಪ್ಪು. ಹಾಗೆಯೇ ಧೋನಿಯೇ ಫಿನಿಶ್‌ ಮಾಡುತ್ತಾರೆ ಎಂದು ನಿರೀಕ್ಷಿಸುವುದು ಕೂಡ ತಪ್ಪೆ. ಉಳಿದ ಆಟಗಾರರೂ ಹೆಚ್ಚಿನ ಜವಾಬ್ದಾರಿ ತೆಗೆದುಕೊಂಡು ಆಡಬೇಕಿದೆ’ ಎಂದರು.

“ನ್ಯೂಜಿಲ್ಯಾಂಡ್‌ ಬೌಲರ್‌ಗಳು ಅಬ್ಬಬ್ಬ ಎಂಬಂಥ ದಾಳಿಯನ್ನೇನೂ ಸಂಘಟಿಸಲಿಲ್ಲ. ಅವರ ಲೈನ್‌-ಲೆಂತ್‌ ಅಮೋಘವಾಗಿತ್ತು. ವಿಲಿಯಮ್ಸನ್‌ ನಾಯಕತ್ವ ಅಸಾ ಮಾನ್ಯ ಮಟ್ಟದಲ್ಲಿತ್ತು’ ಎಂಬುದಾಗಿ ಸಚಿನ್‌ ಹೇಳಿದರು.

ಭಾರತದ ವಿಶ್ವಕಪ್‌ ಪ್ರದರ್ಶನ ಪ್ರಶಂಸನೀಯ: ಬಿಸಿಸಿಐ
ಭಾರತದ ಸೆಮಿಫೈನಲ್‌ ಸೋಲು ಆಘಾತಕಾರಿಯಾದರೂ ತಂಡದ ಒಟ್ಟಾರೆ ಪ್ರದರ್ಶನ ಪ್ರಶಂಸನೀಯ ಎಂದು ಬಿಸಿಸಿಐ ಪ್ರತಿಕ್ರಿಯಿಸಿದೆ. ಮಂಡಳಿಯ ಹಂಗಾಮಿ ಅಧ್ಯಕ್ಷ ಸಿ.ಕೆ. ಖನ್ನಾ, ಸಿಒಎ ಸದಸ್ಯೆ ಡಯಾನಾ ಎಡುಲ್ಜಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

“ಭಾರತ ಉತ್ತಮ ಪ್ರದರ್ಶನ ನೀಡಿದೆ. ಆದರೆ ಸೆಮಿಫೈನಲ್‌ ಪಂದ್ಯ ಎರಡನೇ ದಿನಕ್ಕೆ ಹೋದದ್ದು ದುರದೃಷ್ಟಕರ. ಮೊದಲ 3 ವಿಕೆಟ್‌ ಬೇಗನೇ ಉರುಳಿದ್ದು ದೊಡ್ಡ ಹಿನ್ನಡೆಯಾಗಿ ಪರಿಣಮಿಸಿತು. ಜಡೇಜ-ಧೋನಿ ಹೋರಾಟದಿಂದ ಭಾರತ ಚೇತರಿಸಿಕೊಂಡಿತು. ಕೊನೆಯಲ್ಲಿ ಸಣ್ಣ ಅಂತರದಿಂದ ಸೋಲಬೇಕಾಯಿತು’ ಎಂಬುದಾಗಿ ಎಡುಲ್ಜಿ ಹೇಳಿದರು.

ಧೋನಿ ಕುರಿತು ಪ್ರತಿಕ್ರಿಯಿಸಿದ ಡಯಾನಾ ಎಡುಲ್ಜಿ, “ಇಡೀ ಕೂಟದಲ್ಲಿ ಧೋನಿ ಆಡಿದ ಆಟವನ್ನು ನಾನು ಪ್ರಶಂಸಿಸುತ್ತೇನೆ. ನಿವೃತ್ತಿ ಎಂಬುದು ಅವರ ವೈಯಕ್ತಿಕ ವಿಷಯ. ಆದರೆ ನನ್ನ ಪ್ರಕಾರ ಧೋನಿಯಲ್ಲಿ ಇನ್ನೂ ಸಾಕಷ್ಟು ಕ್ರಿಕೆಟ್‌ ಉಳಿದಿದೆ. ತಂಡದ ಯುವ ಆಟಗಾರರಿಗೆ ಇನ್ನೂ ಧೋನಿಯ ಮಾರ್ಗದರ್ಶನದ ಅಗತ್ಯವಿದೆ’ ಎಂದರು. “ಇದೊಂದು ಕಠಿನ ಪಂದ್ಯವಾಗಿತ್ತು. ಹುಡುಗರು ಚೆನ್ನಾಗಿಯೇ ಆಡಿದರು. ಯಾರೂ ಸೋಲಬೇಕೆಂದು ಬಯಸುವುದಿಲ್ಲ. ಆದರೆ ಇದು ನಮ್ಮ ದಿನವಾಗಿರಲಿಲ್ಲ’ ಎಂಬುದು ಸಿ.ಕೆ. ಖನ್ನಾ ಪ್ರತಿಕ್ರಿಯೆ.

ಭಾರತೀಯ ಅಭಿಮಾನಿಗಳ ಬೆಂಬಲ: ವಿಲಿಯಮ್ಸನ್‌ ವಿಶ್ವಾಸ
ಫೈನಲ್‌ ಪಂದ್ಯದಲ್ಲಿ ಕೋಟ್ಯಂತರ ಭಾರತೀಯ ಕ್ರಿಕೆಟ್‌ ಅಭಿಮಾನಿಗಳ ಬೆಂಬಲ ತನ್ನ ತಂಡಕ್ಕೆ ಸಿಗಲಿದೆ ಎಂಬ ವಿಶ್ವಾಸದಲ್ಲಿದ್ದಾರೆ ನ್ಯೂಜಿಲ್ಯಾಂಡ್‌ ನಾಯಕ ಕೇನ್‌ ವಿಲಿಯಮ್ಸನ್‌.

ಸೆಮಿಫೈನಲ್‌ನಲ್ಲಿ ಭಾರತವನ್ನು ಕೆಡವಿದ ಬಳಿಕ ಪತ್ರಕರ್ತರೊಬ್ಬರು ಭಾರತೀಯ ಅಭಿಮಾನಿಗಳ ಕುರಿತಾಗಿ ಕೇಳಿದ ಪ್ರಶ್ನೆಗೆ ವಿಲಿಯಮ್ಸನ್‌ ನೀಡಿದ ಉತ್ತರ ಬಹಳ ಮಾರ್ಮಿಕವಾಗಿತ್ತು.

ಸ್ಟೇಡಿಯಂನ ಹೊರಗೆ ಆಕ್ರೋಶದಿಂದಿರುವ ಭಾರತೀಯ ಅಭಿಮಾನಿಗಳನ್ನು ಕಂಡೆ ಎಂದು ಈ ಪತ್ರಕರ್ತ ಹೇಳಿದಾಗ, “ಅವರು ಅಷ್ಟು ಆಕ್ರೋಶಗೊಂಡಿಲ್ಲ ಎಂದು ಭಾವಿಸುತ್ತೇನೆ. ಭಾರತೀಯರ ಕ್ರಿಕೆಟ್‌ ವ್ಯಾಮೋಹಕ್ಕೆ ಸರಿಸಾಟಿಯಿಲ್ಲ ಮತ್ತು ಭಾರತ ತಂಡದ ಜತೆಗೆ ಆಡುವ ಅವಕಾಶ ಸಿಕ್ಕಿರುವುದು ನಮ್ಮ ಅದೃಷ್ಟ. ಜು. 14ರ ಫೈನಲ್‌ ಪಂದ್ಯದಲ್ಲಿ ಭಾರತದ ಕ್ರಿಕೆಟ್‌ ಅಭಿಮಾನಿಗಳು ನಮ್ಮನ್ನು ಬೆಂಬಲಿಸುವ ವಿಶ್ವಾಸವಿದೆ’ ಎಂದು ವಿಲಿಯಮ್ಸನ್‌ ಉತ್ತರವಿತ್ತರು. ಇದು “ಚಾಣಾಕ್ಷತನ’ದ ಮತ್ತು “ಸ್ವರಕ್ಷಣೆ’ಯ ಹೇಳಿಕೆಯೇ ಆಗಿರಬಹುದು. ಆದರೆ ಎದುರಾಳಿ ತಂಡದ ನಾಯಕನಾಗಿಯೂ ವಿಲಿಯಮ್ಸನ್‌ ಮಾತಿನಲ್ಲಿದ್ದ ವಿನಮ್ರತೆ ಎಲ್ಲರ ಹೃದಯ ಗೆದ್ದಿದೆ.

ಕಂಗ್ರಾಟ್ಸ್‌ ವಿಲಿಯಮ್ಸನ್‌. ಸತತ 2ನೇ ಫೈನಲ್‌ ತಲುಪಿದ ನ್ಯೂಜಿಲ್ಯಾಂಡಿಗೆ ಅಭಿನಂದನೆಗಳು. ಜಡೇಜ-ಧೋನಿ ಹೋರಾಟ ಅಮೋಘ ಮಟ್ಟದಲ್ಲಿತ್ತು.
-ವಿವಿಎಸ್‌ ಲಕ್ಷ್ಮಣ್‌

ಸೋಲಿನಿಂದ ನಿರಾಸೆಯಾಗಿದೆ. ಆದರೆ ಭಾರತ ಆಡಿದ ರೀತಿ ಹೆಮ್ಮೆಪಡುವಂತಿತ್ತು. ಫೆಂಟಾಸ್ಟಿಕ್‌ ಗೇಮ್‌. ಆಲ್‌ ದಿ ಬೆಸ್ಟ್‌ ಫಾರ್‌ ಫೈನಲ್‌.
-ಗೌತಮ್‌ ಗಂಭೀರ್‌

ಹೃದಯಾಘಾತವೇ ಆಗಿದೆ. ಬ್ಲ್ಯಾಕ್‌ ಕ್ಯಾಪ್ಸ್‌ ಗೆ ಕಂಗ್ರಾಟ್ಸ್‌. ವೆಲ್‌ ಡನ್‌ ಜಡೇಜ.
– ಹರ್ಭಜನ್‌ ಸಿಂಗ್‌

ಅಮೋಘ ಗೆಲುವಿಗೆ, ಅಮೋಘ ನಾಯಕತ್ವಕ್ಕೆ ಅಭಿನಂದನೆಗಳು. ಭಾರತದ ದುರದೃಷ್ಟ‌.
– ಮೈಕಲ್‌ ಕ್ಲಾರ್ಕ್‌

ನನ್ನ ದೃಷ್ಟಿಯಲ್ಲಿ ಭಾರತ ಚಾಂಪಿ ಯನ್ನರಿಗಿಂತ ಯಾವ ರೀತಿಯಲ್ಲೂ ಕಡಿಮೆ ಇಲ್ಲ. ಏಳನ್ನು ಗೆದ್ದಿದ್ದೇವೆ, ಎರಡರಲ್ಲಷ್ಟೇ ಸೋತಿದ್ದೇವೆ. ವೆಲ್‌ ಡನ್‌ ಇಂಡಿಯಾ.
– ಸಂಜಯ್‌ ಮಾಂಜ್ರೆàಕರ್‌

ಆಘಾತಕಾರಿ ಫ‌ಲಿತಾಂಶ. ನಾನು ಇಂಗ್ಲೆಂಡ್‌-ಭಾರತ ಫೈನಲ್‌ ನಿರೀಕ್ಷಿಸಿದ್ದೆ. ಭಾರತದ ಬ್ಯಾಟಿಂಗ್‌ ಸರದಿ ಯನ್ನು ಸಣ್ಣ ಮೊತ್ತಕ್ಕೆ ನಿಯಂತ್ರಿಸಿದ ನ್ಯೂಜಿಲ್ಯಾಂಡ್‌ ಪ್ರದರ್ಶನ ಅದ್ಭುತವಾಗಿತ್ತು. ಜಡೇಜ ಅವರದು ಗ್ರೇಟ್‌ ಗೇಮ್‌, ಭಾರತದ ದುರದೃಷ್ಟ.
– ಶಾಹಿದ್‌ ಅಫ್ರಿದಿ

ಟಾಪ್ ನ್ಯೂಸ್

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vivada

ವಿಶ್ವಕಪ್‌ ಮುಗಿದರೂ ವಿವಾದ ಮುಗಿದಿಲ್ಲ !

williams

ಐಸಿಸಿ ನಿಯಮ ಪ್ರಶ್ನಿಸುವ ಉದ್ದೇಶವಿಲ್ಲ: ವಿಲಿಯಮ್ಸನ್‌

stoks

4 ವರ್ಷಗಳ ಶ್ರಮಕ್ಕೆ ಇಂದು ಪ್ರತಿಫ‌ಲ: ಸ್ಟೋಕ್ಸ್‌

Neesham

ಕ್ರೀಡೆಗಿಂತ ಬೇಕರಿಯೇ ಬೆಸ್ಟ್ : ಜೇಮ್ಸ್ ನೀಶಮ್ ಹತಾಶೆಯ ನುಡಿ

stokes

ಓವರ್‌ ಥ್ರೋ ಎಸೆತದಲ್ಲಿ 6 ಅಲ್ಲ, ಐದು ರನ್ ಆಗಬೇಕಿತ್ತು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.