ಮಳೆ ಪಂದ್ಯದಲ್ಲಿ ಗೆದ್ದು ಸಂಭ್ರಮಿಸಿದ ಶ್ರೀಲಂಕಾ


Team Udayavani, Jun 5, 2019, 6:10 AM IST

srilanka

ಕಾರ್ಡಿಫ್: ಮಳೆಯಿಂದ ತೊಂದರೆ ಗೊಳಗಾದ ಮಂಗಳವಾರದ ವಿಶ್ವಕಪ್‌ ಪಂದ್ಯ ದಲ್ಲಿ ಶ್ರೀಲಂಕಾವು 34 ರನ್ನುಗಳಿಂದ ಅಫ್ಘಾನಿಸ್ಥಾನ ತಂಡವನ್ನು ಸೋಲಿಸಲು ಯಶಸ್ವಿಯಾಗಿದೆ.

ಮೊದಲು ಬ್ಯಾಟಿಂಗ್‌ ಮಾಡಿದ ಶ್ರೀಲಂಕಾ ತಂಡವು 33 ಓವರ್‌ ಮುಗಿದಾಗ ಮಳೆ ಸುರಿ ಯಿತು. ಆಗ ಶ್ರೀಲಂಕಾ 8 ವಿಕೆಟಿಗೆ 180 ರನ್‌ ಗಳಿಸಿತ್ತು. ಮಳೆಯಿಂದ ಒಂದೂವರೆ ತಾಸು ಆಟ ನಷ್ಟವಾಯಿತು. ಹೀಗಾಗಿ ಓವರ್‌ ಸಂಖ್ಯೆಯನ್ನು 41ಕ್ಕೆ ಇಳಿಸಲಾಗಿತ್ತು. ಮೊಹಮ್ಮದ್‌ ನಬಿ ಮತ್ತು ರಶೀದ್‌ ಖಾನ್‌ ಅವರ ನಿಖರ ದಾಳಿಗೆ ಕುಸಿದ ಶ್ರೀಲಂಕಾ ತಂಡವು 36.5 ಓವರ್‌ಗಳಲ್ಲಿ 201 ರನ್ನಿಗೆ ಆಲೌಟಾಯಿತು.

ಮಳೆ ಮತ್ತು ಡಕ್‌ವರ್ತ್‌ ಲೂಯಿಸ್‌ ನಿಯಮದಡಿ ಅಫ್ಘಾನಿಸ್ಥಾನ ತಂಡವು 41 ಓವರ್‌ಗಳಲ್ಲಿ 187 ರನ್‌ ಗಳಿಸುವ ಗುರಿ ಪಡೆಯಿತು. ಆದರೆ ನುವಾನ್‌ ಪ್ರದೀಪ್‌ ಮತ್ತು ಲಸಿತ ಮಾಲಿಂಗ ದಾಳಿಗೆ ಕುಸಿದ ಅಘ್ಗಾನಿಸ್ಥಾನವು 32.4 ಓವರ್‌ಗಳಲ್ಲಿ 152 ರನ್ನಿಗೆ ಆಲೌಟಾಗಿ ಶರಣಾಯಿತು.

ಕುಸಲ್ ಪೆರೆರ ಅರ್ಧಶತಕ

ಅಫ್ಘಾನಿಸ್ಥಾನ ವಿರುದ್ಧ ಬೃಹತ್‌ ಮೊತ್ತ ಪೇರಿಸುವ ಉದ್ದೇಶದಿಂದ ಶ್ರೀಲಂಕಾ ಉತ್ತಮ ವಾಗಿ ಆಟ ಆರಂಭಿಸಿತು. ಆರಂಭಿಕರಾದ ದಿಮುತ್‌ ಕರುಣರತ್ನೆ ಮಕೊಹ್ಲಿ ಪಡೆ ಬೆಂಬಲಿಸಿದ ಜರ್ಮನ್‌ ಫ‌ುಟ್ಬಾಲ್ ತಾರೆತ್ತು ಕುಸಲ್ ಪೆರೆರ ಅಮೋಘವಾಗಿ ಆಡಿ ಅಘ್ಗಾನ್‌ ದಾಳಿಯನ್ನು ಪುಡಿಗಟ್ಟಿದರು. ಬಿರುಸಿನ ಆಟವಾಡಿದ ಅವರಿಬ್ಬರು 13.1 ಓವರ್‌ಗಳಲ್ಲಿ 92 ರನ್‌ ಪೇರಿಸಿ ಬೇರ್ಪಟ್ಟರು.

ಕರುಣರತ್ನೆ ಔಟಾದ ಬಳಿಕ ಪೆರೆರ ಅವ ರನ್ನು ಸೇರಿಕೊಂಡ ಲಹಿರು ತಿರಿಮನ್ನೆ ಕೂಡ ವೇಗವಾಗಿ ರನ್‌ ಪೇರಿಸತೊಡಗಿದರು. ಇವರಿಬ್ಬರ ರನ್‌ವೇಗವನ್ನು ಗಮನಿಸಿದಾಗ ಶ್ರೀಲಂಕಾದ ಮೊತ್ತ 300ರ ಗಡಿ ದಾಟಬಹು ದೆಂದು ಭಾವಿಸಲಾಗಿತ್ತು.

ನಾಟಕೀಯ ಕುಸಿತ

ತಿರುಮನ್ನೆ ಔಟಾಗುತ್ತಲೇ ಲಂಕಾದ ಕುಸಿತ ಮೊದಲ್ಗೊಂಡಿತು. 144ರ ಮೊತ್ತಕ್ಕೆ ಎರಡನೇ ವಿಕೆಟ್ ಉರುಳಿತ್ತು. ಮೊತ್ತ 180 ತಲುಪಿದಾಗ ಶ್ರೀಲಂಕಾ 8 ವಿಕೆಟ್ ಕಳೆದುಕೊಂಡು ಒದ್ದಾಡುತ್ತಿತ್ತು. ವಿಕೆಟ್‌ನ ಒಂದು ಕಡೆ ಆಸರೆಯಾಗಿ ನಿಂತಿದ್ದ ಪೆರೆರ 78 ರನ್‌ ಗಳಿಸಿ ಎಂಟನೆಯವರಾಗಿ ಔಟಾಗಿದ್ದರು. 81 ಎಸೆತ ಎದುರಿಸಿದ್ದ ಅವರು 8 ಬೌಂಡರಿ ಬಾರಿಸಿದ್ದರು.

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vivada

ವಿಶ್ವಕಪ್‌ ಮುಗಿದರೂ ವಿವಾದ ಮುಗಿದಿಲ್ಲ !

williams

ಐಸಿಸಿ ನಿಯಮ ಪ್ರಶ್ನಿಸುವ ಉದ್ದೇಶವಿಲ್ಲ: ವಿಲಿಯಮ್ಸನ್‌

stoks

4 ವರ್ಷಗಳ ಶ್ರಮಕ್ಕೆ ಇಂದು ಪ್ರತಿಫ‌ಲ: ಸ್ಟೋಕ್ಸ್‌

Neesham

ಕ್ರೀಡೆಗಿಂತ ಬೇಕರಿಯೇ ಬೆಸ್ಟ್ : ಜೇಮ್ಸ್ ನೀಶಮ್ ಹತಾಶೆಯ ನುಡಿ

stokes

ಓವರ್‌ ಥ್ರೋ ಎಸೆತದಲ್ಲಿ 6 ಅಲ್ಲ, ಐದು ರನ್ ಆಗಬೇಕಿತ್ತು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.