ಅಫ್ಘಾ ನ್‌-ಲಂಕಾ: ಕಾರ್ಡಿಫ್ ನಲ್ಲಿ ಕಾಡುವವರು ಯಾರು?

ಸೋತ ಏಶ್ಯನ್‌ ತಂಡಗಳ ನಡುವೆ ಸೆಣಸಾಟ; ಯಾರಿಗೆ ಒಲಿದೀತು ಮೊದಲ ಜಯ?

Team Udayavani, Jun 4, 2019, 6:00 AM IST

SL-AF

ಕಾರ್ಡಿಫ್: ವಿಶ್ವಕಪ್‌ ಕೂಟದ ಅಪಾಯಕಾರಿ ಹಾಗೂ “ಅಂಡರ್‌ ಡಾಗ್ಸ್‌’ ತಂಡವೆಂದು ಗುರುತಿಸಿಕೊಂಡಿರುವ ಅಫ್ಘಾನಿಸ್ಥಾನ ಮತ್ತು ತನ್ನ ದೌರ್ಬಲ್ಯವನ್ನು ತೆರೆದಿರಿಸಿದ ಶ್ರೀಲಂಕಾ ತಂಡಗಳು ಮಂಗಳವಾರ ಮಹತ್ವದ ಲೀಗ್‌ ಪಂದ್ಯದಲ್ಲಿ ಮುಖಾಮುಖೀಯಾಗಲಿವೆ. ಕಾರ್ಡಿಫ್ ನಲ್ಲಿ ಯಾರು ಯಾರನ್ನು ಕಾಡಲಿದ್ದಾರೆ ಎಂಬುದೊಂದು ಕುತೂಹಲ.

ಅಫ್ಘಾನ್‌ ಮತ್ತು ಲಂಕಾ ತಂಡಗಳೆರಡೂ ತಮ್ಮ ಮೊದಲ ಲೀಗ್‌ ಪಂದ್ಯದಲ್ಲಿ ಸೋತಿವೆ. ಹೀಗಾಗಿ ಇಲ್ಲಿ ಒಂದು ತಂಡ ಗೆಲುವಿನ ಖಾತೆ ತೆರೆಯುವುದು ನಿಶ್ಚಿತ. ಏಶ್ಯದ ಈ ತಂಡಗಳಲ್ಲಿ ಅದೃಷ್ಟ ಯಾರ ಕೈ ಹಿಡಿದೀತು ಎಂಬುದು ಎಲ್ಲರ ನಿರೀಕ್ಷೆ.

ಆಸೀಸ್‌ ಎದುರು ನಿರೀಕ್ಷಿತ ಫ‌ಲಿತಾಂಶ
ಗುಲ್ಬದಿನ್‌ ನೈಬ್‌ ಸಾರಥ್ಯದ ಅಫ್ಘಾನಿಸ್ಥಾನ ತಂಡಕ್ಕೆ ಮೊದಲ ಪಂದ್ಯದಲ್ಲೇ ಹಾಲಿ ಚಾಂಪಿಯನ್‌ ಆಸ್ಟ್ರೇಲಿಯ ಎದುರಾಗಿತ್ತು. ಹೀಗಾಗಿ ಫ‌ಲಿತಾಂಶವನ್ನು ಮೊದಲೇ ಊಹಿಸಲಾಗಿತ್ತು. ಇಲ್ಲಿ ಯಾವುದೇ ಅಚ್ಚರಿ, ಅನಿರೀಕ್ಷಿತ ಅಥವಾ ಪವಾಡವಾಗಲೀ ಸಂಭವಿಸಲಿಲ್ಲ. ಆಸ್ಟ್ರೇಲಿಯ ಹೇಗೆ ಗೆಲ್ಲಬೇಕಿತ್ತೋ ಹಾಗೇ ಗೆದ್ದು ಬಂತು. ಅಫ್ಘಾನ್‌ ಸೋಲಬೇಕಾದ ರೀತಿಯಲ್ಲೇ ಸೋತಿತು.

ಆದರೆ ಈ ಕೂಟದಲ್ಲಿ 200 ರನ್‌ ಗಡಿ ದಾಟಿದ ಏಶ್ಯದ ಮೊದಲ ತಂಡವೆಂಬ ಹೆಗ್ಗಳಿಕೆ ಅಫ್ಘಾನ್‌ ಪಾಲಾದುದನ್ನು ಮರೆಯುವಂತಿಲ್ಲ. ಪಾಕಿಸ್ಥಾನ ಮತ್ತು ಶ್ರೀಲಂಕಾ ತಂಡಗಳು ಕ್ರಮವಾಗಿ 105 ಮತ್ತು 136 ರನ್‌ ಗಳಿಸಿ ಬ್ಯಾಟಿಂಗ್‌ ಬರಗಾಲ ಅನುಭವಿಸಿದ್ದವು. ಲಂಕೆಗಂತೂ ಎದುರಾಳಿ ನ್ಯೂಜಿಲ್ಯಾಂಡಿನ ಒಂದೂ ವಿಕೆಟ್‌ ಕೀಳಲು ಸಾಧ್ಯವಾಗಿರಲಿಲ್ಲ. ಆದರೆ ಅಫ್ಘಾನ್‌ ಕಾಂಗರೂ ಪಡೆಯ 3 ವಿಕೆಟ್‌ ಹಾರಿಸುವಲ್ಲಿ ಯಶಸ್ವಿಯಾಗಿತ್ತು.

50 ಓವರ್‌
ನಿಲ್ಲುವುದೇ ಕಷ್ಟ !
ಶ್ರೀಲಂಕಾ ಸರದಿಯಲ್ಲಿ ಅಲ್ಲಲ್ಲಿ ಅನುಭವಿ ಆಟಗಾರರು ಕಾಣಸಿಗುತ್ತಾರಾದರೂ ಯಾರ ಮೇಲೂ ನಂಬಿಕೆ ಇಡುವಂತಿಲ್ಲ. ಮ್ಯಾಚ್‌ ವಿನ್ನರ್‌ ಆಟಗಾರ ನಂತೂ ಇಲ್ಲವೇ ಇಲ್ಲ. ಯಾವ ಬ್ಯಾಟ್ಸ್‌ಮನ್‌ ಕೂಡ ಫಾರ್ಮ್ನಲ್ಲಿಲ್ಲ. ಒಂದು ಅಭ್ಯಾಸ ಪಂದ್ಯ ಹಾಗೂ ಕಿವೀಸ್‌ ಎದುರಿನ ಮೊದಲ ಪಂದ್ಯದಲ್ಲಿ ಪೂರ್ತಿ 50 ಓವರ್‌ ನಿಭಾಯಿಸುವಲ್ಲಿ ಲಂಕಾ ವಿಫ‌ಲವಾಗಿದೆ. ಬೌಲಿಂಗ್‌ ವಿಭಾಗ ಲೆಕ್ಕದ ಭರ್ತಿಗೆಂಬಂತಿದೆ. ಲಸಿತ ಮಾಲಿಂಗ ಕೂಡ ಮೋಡಿ ಮಾಡುವುದನ್ನು ಮರೆತಿದ್ದಾರೆ. ಲಂಕಾ ಮೇಲೆ ನಿರೀಕ್ಷೆ ಇಡುವುದಾದರೂ ಹೇಗೆ?!

ಅಫ್ಘಾನ್‌ ಮೇಲುಗೈ ಸಾಧ್ಯತೆ
ಮಂಗಳವಾರದ ಪಂದ್ಯ ಎರಡೂ ತಂಡಗಳಿಗೆ ಮಹತ್ವದ್ದಾಗಿದೆ. ಕೂಟದಲ್ಲಿ ಮುಂದುವರಿಯಬೇಕಾದರೆ ಇಲ್ಲಿ ಗೆಲುವಿನ ಖಾತೆ ತೆರೆಯಬೇಕಾದುದು ಅನಿವಾರ್ಯ.

ಮೇಲ್ನೋಟಕ್ಕೆ ಅಫ್ಘಾನ್‌ ತಂಡದ ಸಾಮರ್ಥ್ಯ ತುಸು ಹೆಚ್ಚು ಎಂದು ಊಹಿಸಲಾಗಿದೆ. ತಂಡದ ಬ್ಯಾಟಿಂಗ್‌ ಲೈನ್‌ಅಪ್‌ ಉತ್ತಮವಾಗಿದೆ. ಬೌಲಿಂಗ್‌ನಲ್ಲಿ ಸ್ಪಿನ್‌ ವಿಭಾಗ ಹೆಚ್ಚು ಘಾತಕ. ರಶೀದ್‌-ನಬಿ ಜೋಡಿಯನ್ನು ನಿಭಾಯಿಸುವುದು ಸುಲಭವಲ್ಲ. ಆದರೆ ವೇಗದ ಬೌಲಿಂಗ್‌ ಹೇಳಿಕೊಳ್ಳುವಂತಿಲ್ಲ. ಆಸೀಸ್‌ ವಿರುದ್ಧ ಆರಂಭಿಕರಿಬ್ಬರೂ ಶೂನ್ಯಕ್ಕೆ ಔಟಾಗಿದ್ದರು. ಆದರೆ ಹಿಂದೆ ಎಷ್ಟೋ ಸಲ ಇವರು ಪಂದ್ಯವನ್ನು ಗೆಲ್ಲಿಸಿಕೊಟ್ಟ ನಿದರ್ಶನಗಳಿವೆ. ಲಂಕಾ ವಿರುದ್ಧ ಉತ್ತಮ ಆರಂಭ ಒದಗಿಸುವ ನಿರೀಕ್ಷೆ
ಹೊಂದಿದ್ದಾರೆ.

ಸಂಭಾವ್ಯ ತಂಡಗಳು
ಶ್ರೀಲಂಕಾ
ದಿಮುತ್‌ ಕರುಣರತ್ನೆ (ನಾಯಕ), ಲಹಿರು ತಿರಿಮನ್ನೆ, ಕುಸಲ್‌ ಪೆರೆರ, ಕುಸಲ್‌ ಮೆಂಡಿಸ್‌, ಧನಂಜಯ ಡಿ ಸಿಲ್ವ, ಏಂಜೆಲೊ ಮ್ಯಾಥ್ಯೂಸ್‌, ಜೀವನ್‌ ಮೆಂಡಿಸ್‌/ಜೆಫ್ರಿ ವಾಂಡರ್ಸೆ, ತಿಸರ ಪೆರೆರ, ಇಸುರು ಉದಾನ, ಸುರಂಗ ಲಕ್ಮಲ್‌, ಲಸಿತ ಮಾಲಿಂಗ.

ಅಫ್ಘಾನಿಸ್ಥಾನ
ಮೊಹಮ್ಮದ್‌ ಶಾಜಾದ್‌, ಹಜ್ರತುಲ್ಲ ಜಜಾರಿ, ರಹಮತ್‌ ಶಾ, ಹಶ್ಮತುಲ್ಲ ಶಾಹಿದಿ, ಮೊಹಮ್ಮದ್‌ ನಬಿ, ಗುಲ್ಬದಿನ್‌ ನೈಬ್‌ (ನಾಯಕ), ನಜೀಬುಲ್ಲ ಜದ್ರಾನ್‌, ರಶೀದ್‌ ಖಾನ್‌, ದೌಲತ್‌ ಜದ್ರಾನ್‌, ಮುಜೀಬ್‌ ಉರ್‌ ರಹಮಾನ್‌, ಹಮೀದ್‌ ಹಸನ್‌.

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vivada

ವಿಶ್ವಕಪ್‌ ಮುಗಿದರೂ ವಿವಾದ ಮುಗಿದಿಲ್ಲ !

williams

ಐಸಿಸಿ ನಿಯಮ ಪ್ರಶ್ನಿಸುವ ಉದ್ದೇಶವಿಲ್ಲ: ವಿಲಿಯಮ್ಸನ್‌

stoks

4 ವರ್ಷಗಳ ಶ್ರಮಕ್ಕೆ ಇಂದು ಪ್ರತಿಫ‌ಲ: ಸ್ಟೋಕ್ಸ್‌

Neesham

ಕ್ರೀಡೆಗಿಂತ ಬೇಕರಿಯೇ ಬೆಸ್ಟ್ : ಜೇಮ್ಸ್ ನೀಶಮ್ ಹತಾಶೆಯ ನುಡಿ

stokes

ಓವರ್‌ ಥ್ರೋ ಎಸೆತದಲ್ಲಿ 6 ಅಲ್ಲ, ಐದು ರನ್ ಆಗಬೇಕಿತ್ತು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.