ಅಪೂರ್ವ ಪ್ರಯೋಗ  ಗುರು ನಮೋಸ್ತುತೇ


Team Udayavani, Mar 17, 2017, 3:50 AM IST

17-KALA-4.jpg

ಮಂಗಳೂರಿನ ಪುರಭವನದಲ್ಲಿ ವಿ| ಅಯನಾ ಪೆರ್ಲ ಅವರ ಗುರು ನಮೋಸ್ತುತೇ ಎಂಬ ಅಪೂರ್ವ ನೃತ್ಯಪ್ರದರ್ಶನವೊಂದು ಫೆ.26ರಂದು ಪ್ರದರ್ಶನಗೊಂಡು ಬಹುಜನರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಯಿತು. ಬಹುತೇಕ ಯುವ ಕಲಾವಿದರು ರಂಗಪ್ರವೇಶಕ್ಕಷ್ಟೇ ತಮ್ಮನ್ನು ಸೀಮಿತಗೊಳಿಸಿಕೊಳ್ಳುತ್ತಿರುವ ಈ ದಿನಗಳಲ್ಲಿ ವಿ| ಅಯನಾ ಉನ್ನತ ಶ್ರೇಣಿಯ ವಿದ್ವತ್‌ ಬಳಿಕವೂ ರಾಷ್ಟ್ರೀಯ ಮಟ್ಟದ ಹಲವು ಕಮ್ಮಟಗಳಲ್ಲಿ – ಶಿಬಿರಗಳಲ್ಲಿ ಭಾಗವಹಿಸಿ ಹೆಚ್ಚಿನ ಕಲಿಕೆಗೆ ತನ್ನನ್ನು ತೆರೆದುಕೊಂಡು, ಪೂರ್ಣಪ್ರಮಾಣದ ಪ್ರದರ್ಶನ ನೀಡಲು ಮನಸ್ಸು ಮಾಡಿದ್ದು ಸಂತೋಷ ಪಡುವ ಸಂಗತಿ. ಪ್ರದರ್ಶನ ಕಲಾವಿದೆಯಾಗಿ ತಾನು ಬೆಳೆಯುವ ಎಲ್ಲ ಸಾಧ್ಯತೆಗಳನ್ನೂ ಈಕೆ ತೋರಿಸಿಕೊಟ್ಟಿದ್ದಾರೆ.

ಈಗಾಗಲೇ ರಾಜ್ಯಮಟ್ಟದ ಹಲವು ಪ್ರತಿಷ್ಠಿತ ವೇದಿಕೆ ಗಳಲ್ಲಿ ಅಭಿನಯಿಸಿರುವ ವಿ| ಅಯನಾ ಪೆರ್ಲ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರತಿಭಾ ಪುರಸ್ಕಾರ ಪಡೆದುಕೊಂಡವರು. ದೂರದರ್ಶನದ ಗ್ರೇಡೆಡ್‌ ಕಲಾವಿದೆಯೂ ಹೌದು.  ವೃತ್ತಿ ಯಲ್ಲಿ ಸಾಫr…ವೇರ್‌ ಎಂಜಿನಿಯರ್‌ ಆಗಿರುವ ಇವರು ನೃತ್ಯದೊಂದಿಗೆ ಶಾಸ್ತ್ರೀಯ ಸಂಗೀತ ಮತ್ತು ಮೃದಂಗವನ್ನೂ ಕಲಿಯುತ್ತಿ ¨ªಾರೆ. ಭರತನಾಟ್ಯದಲ್ಲಿ ಇನ್ನಷ್ಟು ಪ್ರಯೋಗನಿರತರಾಗಿ ಮುಂದುವರಿಯುವ ಬಯಕೆ ಇಟ್ಟುಕೊಂಡಿದ್ದಾರೆ.

ನಾಟ್ಯಕ್ಕೆ ಪೂರಕವಾಗಿ ಯೋಗವನ್ನೂ ಕಲಿತಿರುವ ಅಯನಾ ಪೆರ್ಲ ಅವರ ಮುದ್ರೆಗಳಲ್ಲಿನ ಸ್ವತ್ಛತೆ, ಅಂಗಶುದ್ಧಿ, ಭಾವ ಪರಿ ಪೂರ್ಣತೆ, ಅಡವುಗಳಲ್ಲಿನ ಖಚಿತತೆ ಮತ್ತು ನಿಲುವು ಹಾಗೂ ಭಂಗಿಗಳಲ್ಲಿನ ಆಕರ್ಷಕತೆ – ಇವುಗಳೆಲ್ಲ ಈ ಪ್ರದರ್ಶನದ ಮೂಲಕ ಅನಾವರಣಗೊಂಡವು. ಅಯನಾ ಅವರಲ್ಲಿರುವ ಸ್ಪಷ್ಟವಾದ ತಾಳಜ್ಞಾನವು ಪ್ರದರ್ಶನದುದ್ದಕ್ಕೂ ಎದ್ದು ಕಾಣುತ್ತಿತ್ತು.

ಆರಂಭದ “ಪುಷ್ಪಾಂಜಲಿ’ ಭಿನ್ನ ರಂಗಾಕ್ರಮಣ ದೊಂದಿಗೆ ಆರಂಭಗೊಂಡುದಲ್ಲದೆ, ಅನಂತರ ಅಭಿನಯಿ ಸಲ್ಪಟ್ಟ ಕಾಳಿದಾಸ ಕವಿಯ “ಶ್ಯಾಮಲಾ ದಂಡಕ ಸ್ತೋತ್ರ’ದ ಬಗೆಗಿನ ಅಭಿನಯ ಭಾವಪ್ರಧಾನವಾಗಿ ಮೂಡಿಬಂತು. ಬಳಿಕ ಅಭಿನೀತವಾದ ತಾಳಮಾಲಿಕೆಯಲ್ಲಿದ್ದ “ಪಂಚಭೂತ ಶಂಭೋ’ ಎಲ್ಲ ರೀತಿಯಿಂದಲೂ ಇಡೀ ಪ್ರದರ್ಶನದಲ್ಲಿ ಸುಂದರವಾಗಿ ಮೂಡಿಬಂದ ಭಾಗ. ಬಳಿಕ ವಿಶಿಷ್ಟವಾಗಿ ಅಭಿನಯಿಸಲ್ಪಟ್ಟ “ಪದವರ್ಣ’ ಸ್ಮರಣಾರ್ಹವಾಗಿತ್ತು. ಇದರಲ್ಲಿನ ನೃತ್ತಭಾಗಗಳು ಸ್ಪಷ್ಟವಾಗಿ ಅಭಿನಯಿಸಲ್ಪಟ್ಟವು.

“ಕಾಳೀಕೌತ್ವಂ’ನಲ್ಲಿ ಲಯಕರ್ತ ಶಿವ ಮತ್ತು ನಾಶದ ಸಂಕೇತವಾದ ಕಾಳಿಯ ಅಭಿನ್ನ ಕಲ್ಪನೆಯಲ್ಲಿ ನಟಿಸಿದ ನಾಟ್ಯಭಾಗ ಅತ್ಯಂತ ವಿಶೇಷವಾಗಿತ್ತು. ಯಮನ್‌ ಕಲ್ಯಾಣಿ ರಾಗದಲ್ಲಿದ್ದ “ರುಸಲೀ ರಾಧೆ’ ಎಂಬ ಮರಾಠೀ ಅಭಂಗಕ್ಕೆ ನೀಡಿದ ಅಭಿನಯದಲ್ಲಿ ಭಕ್ತಿ ಭಾವವು ಸುಂದರವಾಗಿ ಮೂಡಿ ಬಂದಿತು. ಈ  ಪ್ರದರ್ಶನದಲ್ಲಿ ಅಭಿನಯಿಸಲ್ಪಟ್ಟ ತಿಲ್ಲಾನವು ನಮ್ಮ ಕರಾವಳಿ ಭಾಗದಲ್ಲಿ ಅಪೂರ್ವವಾದು ದಾಗಿದ್ದು, ಪ್ರಶಂಸೆಗೆ ಪಾತ್ರವಾಯಿತು.

ಅಯನಾ ಅವರ ನೃತ್ಯಗುರು ವಿ| ಶಾರದಾಮಣಿ ಶೇಖರ್‌ ನಟುವಾಂಗದಲ್ಲಿ, ಸ್ವರಾಗ್‌ ಮಾಹೆ ಹಾಡುಗಾರಿಕೆಯಲ್ಲಿ, 
ವಿ| ರಾಜನ್‌ ಪಯ್ಯನ್ನೂರು ಮೃದಂಗದಲ್ಲಿ ಮತ್ತು ದೀಪಕ್‌ ಹೆಬ್ಟಾರ್‌ ಕೊಳಲಿನಲ್ಲಿ ಒಳ್ಳೆಯ ಪಕ್ಕವಾದ್ಯ ಸಹಕಾರ ನೀಡಿದರು. ನೆಳಲು ಬೆಳಕಿನ ಸುಂದರ ಸಂಯೋಜನೆಯು ಪ್ರದರ್ಶನವನ್ನು ಇನ್ನಷ್ಟು ಅರ್ಥಪೂರ್ಣಗೊಳಿಸಿತು.

ಸಭಾ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ ಡಾ| ಎಂ. ಮೋಹನ ಆಳ್ವ ಮತ್ತು ಎಂಎಲ್‌ಸಿ ಕ್ಯಾ| ಗಣೇಶ ಕಾರ್ಣಿಕ್‌ ಅವರು ಕಲಾವಿದೆಯ ಅಭಿನಯ ಕೌಶಲವನ್ನು ಶ್ಲಾ ಸಿದರಲ್ಲದೆ, ಪ್ರತಿಭಾವಂತ ಪ್ರದರ್ಶನ ಕಲಾವಿದೆಯಾಗಿ ಮೂಡಿಬರುತ್ತಿರುವ ಈಕೆಯ ಸಾಧನೆ ಹಾಗೂ ಪರಿಶ್ರಮವನ್ನು ಕೊಂಡಾಡಿದರು. ತುಂಬಿದ ಸಭಾಂಗಣವು ಇದೊಂದು ಯಶಸ್ವೀ ಪ್ರಯೋಗ ಎಂಬುದನ್ನು ತೋರಿಸಿಕೊಟ್ಟಿತು.                            

ಕೆ. ಶೈಲಾಕುಮಾರಿ
ಚಿತ್ರಗಳು : ಯಜ್ಞ ಮಂಗಳೂರು

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.