ಕಾರ್ಮಿಕರಿಗೆ ಪರಿಹಾರಧನ ವಿತರಿಸಿ
Team Udayavani, Apr 21, 2021, 5:06 PM IST
ಚಿತ್ರದುರ್ಗ: ಕೋವಿಡ್ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿ ಬಾಕಿ ಇರುವ ಒಂದು ಲಕ್ಷ ಕಾರ್ಮಿಕರಿಗೆ ಕೂಡಲೇ 5 ಸಾವಿರ ರೂ.ಗಳನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು ಎಂದು ಒತ್ತಾಯಿಸಿ ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಈ ಹಿಂದೆ ಕಾರ್ಮಿಕರ ಮಕ್ಕಳ ಮದುವೆಗೆ ಧನಸಹಾಯ ನೀಡಿದ 25 ಸಾವಿರ ರೂ.ಗಳ ಬಾಂಡ್ ಎರಡು ವರ್ಷ ಕಳೆದರೂ ಇನ್ನು ನೀಡಿಲ್ಲ. ಈಗ ಮದುವೆ ಬಾಂಡ್ ರದ್ದಾಗಿರುವುದರಿಂದ ಬಾಕಿ ಉಳಿದಿರುವ ಎಲ್ಲಾ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಪೂರ್ತಿ ಹಣ ಜಮಾ ಮಾಡಬೇಕು. ಈಗ ನೀಡಲಾಗುತ್ತಿರುವ ಮದುವೆ ಧನ ಸಹಾಯ ಐವತ್ತು ಸಾವಿರ ರೂ. ಗಳು ಖಾತೆಗೆ ಜಮಾ ಆಗಬೇಕೆಂದು ಒತ್ತಾಯಿಸಿದರು.
ಕಾರ್ಮಿಕರ ಮರಣ ಪರಿಹಾರಕ್ಕೆ ಅರ್ಜಿ ಸಲ್ಲಿಸಲು ಇರುವ ಆರು ತಿಂಗಳ ಕಾಲಮಿತಿಯನ್ನು ಕನಿಷ್ಟ ಒಂದು ತಿಂಗಳಿಗೆ ಏರಿಸಬೇಕು. ನೋಂದಣಿ ಮತ್ತು ನವೀಕರಣ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಬೇಕು. ರಾಜ್ಯದ ವಿವಿಧ ಜಿಲ್ಲೆಗಳಿಂದ ಸಲ್ಲಿಸಲಾದ ಮದುವೆ, ಮರಣ, ವೈದ್ಯಕೀಯ ಮತ್ತು ವಿದ್ಯಾರ್ಥಿ ವೇತನ ಅರ್ಜಿಗಳಲ್ಲಿ 2017 ರಿಂದ ಬಾಕಿಯಿರುವ ಸಂಬಂಧ ಸಾಕಷ್ಟು ಮನವಿಗಳನ್ನು ಸಲ್ಲಿಸಿದ್ದರೂ ಇತ್ಯರ್ಥವಾಗಿಲ್ಲ. ಈ ಸಂಬಂಧ ವಿಶೇಷ ಅಭಿಯಾನ ನಡೆಸಿ ಇತ್ಯರ್ಥಪಡಿಸಿರುವುದು ಸ್ವಾಗತಾರ್ಹ.
ಆದರೆ ವಿಲೇವಾರಿ ಆಗಿದ್ದಾವೆಂದು ಹೇಳಲಾದ ಅರ್ಜಿಗಳಿಗೆ ಬ್ಯಾಂಕ್ನಿಂದ ಹಣ ವರ್ಗಾವಣೆ ಆಗುತ್ತಿಲ್ಲ ಎಂದು ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದರು. ಸೌಲಭ್ಯಗಳಿಗೆ ಸಲ್ಲಿಸಲಾದ ಅರ್ಜಿಗಳು ತಿರಸ್ಕೃತಗೊಂಡಾಗ ಅವುಗಳನ್ನು ಪುನರ್ ಸಲ್ಲಿಸಲು ಮೇಲ್ಮನವಿ ಸಮಿತಿಗಳನ್ನು ರಚಿಸುವ ಕುರಿತು ಮಂಡಳಿ ಸಭೆಯಲ್ಲಿ ತೀರ್ಮಾನವಾಗಿದೆ. ಇದು ತುರ್ತಾಗಿ ಜಾರಿಯಾಗಬೇಕು ಎಂದರು.
ಸಿಐಟಿಯು ಜಿಲ್ಲಾ ಸಹ ಸಂಚಾಲಕ ಸಿ.ಕೆ. ಗೌಸ್ಪೀರ್, ಬಿ.ಸಿ.ನಾಗರಾಜಚಾರಿ, ಸಣ್ಣಮ್ಮ ಮತ್ತಿತರರು ಇದ್ದರು.¬
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನನ್ನ ಹೇರ್ ಕಟಿಂಗ್ ಮಾಡುವವರಿಗೆ ಬಿಡುವಿಲ್ಲ.. ವಿಜಯೇಂದ್ರ ವಿರುದ್ಧ ಗುಡುಗಿದ ಶಿಕ್ಷಣ ಸಚಿವರು
Holalkere: ರೈಲಿನಿಂದ ಕೆಳಗೆ ಬಿದ್ದು ಮಹಿಳೆ ಸಾವು
Chitradurga; ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲ: ವಿಜಯೇಂದ್ರ
Molakalmuru ಆಸ್ಪತ್ರೆಯಲ್ಲಿ ಮೊಂಬತ್ತಿಯಲ್ಲಿ ಚಿಕಿತ್ಸೆ!
Chitradurga: ಮಳೆಯಿಂದ ವಿದ್ಯುತ್ ಕಡಿತ; ಮೊಬೈಲ್ ಬ್ಯಾಟರಿಯ ಬೆಳಕಿನಲ್ಲೇ ರೋಗಿಗೆ ಚಿಕಿತ್ಸೆ
MUST WATCH
ಹೊಸ ಸೇರ್ಪಡೆ
Udupi: ಪಕ್ಷ ವಿರೋಧಿ ಚಟುವಟಿಕೆ… 4 ಮಂದಿ ಬಿಜೆಪಿ ಪದಾಧಿಕಾರಿಗಳಿಗೆ ಶಿಸ್ತು ಕ್ರಮದ ನೋಟಿಸ್
Uppunda: ಆಕಸ್ಮಿಕವಾಗಿ ನದಿಗೆ ಕಾಲು ಜಾರಿ ಬಿದ್ದು ವ್ಯಕ್ತಿ ಮೃತ್ಯು
ಅಪರಾಧ ಪ್ರಕರಣ ಬೇಧಿಸುವಲ್ಲಿ ಫಾರೆನ್ಸಿಕ್ ಸೈನ್ಸ್ ಪಾತ್ರ ಪ್ರಮುಖ: ಡಾ.ವಿನೋದ್ ನಾಯಕ
Shivamogga: ಸಮಾಜ ಕಲ್ಯಾಣ ಇಲಾಖೆ ಸಚಿವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ ಆರಗ
Road Mishap: ಅಮೆರಿಕದಲ್ಲಿ ರಸ್ತೆ ಅಪಘಾತ; ತೆಲಂಗಾಣ ಮೂಲದ ಯುವತಿ ಸ್ಥಳದಲ್ಲೇ ಸಾವು