ಹೈದರಾಬಾದ್ ನಲ್ಲಿ ‘ತ್ರಿಶೂಲಂ’ಗೆ ಸಾಹಸ
Team Udayavani, Oct 25, 2021, 4:49 PM IST
ರಿಯಲ್ ಸ್ಟಾರ್ ಉಪೇಂದ್ರ, ರವಿಚಂದ್ರನ್, ಶಾನ್ವಿ ಶ್ರೀವತ್ಸ, ನಿಮಿಕಾ ರತ್ನಾಕರ್, ಸಾಧುಕೋಕಿಲ, ಪ್ರದೀಪ್ ರಾವತ್, ನಾಗಶೇಖರ್, ರಂಗಾಯಣ ರಘು, ಅಚ್ಯುತ ಕುಮಾರ್, ಸುಧಾ ಬೆಳವಾಡಿ, ಉಗ್ರಂ ಮಂಜು, ಮುಂಬೈ ಬೆಡಗಿ ಅದಿತಿ ಆರ್ಯ ಮುಂತಾದ ಕಲಾವಿದರ ಬೃಹತ್ ತಾರಾಗಣವಿರುವ “ತ್ರಿಶೂಲಂ’ ಚಿತ್ರದ ಚಿತ್ರೀಕರಣ ಅಂತಿಮ ಹಂತಕ್ಕೆ ತಲುಪಿದೆ.
ಇದೇ ಅ. 26 ರಿಂದ ಹೈದರಾಬಾದ್ನಲ್ಲಿ ಗಣೇಶ್ ಸಾಹಸ ಸಂಯೋಜನೆಯಲ್ಲಿ ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣ ನಡೆಯಲಿದ್ದು, ಉಪೇಂದ್ರ, ರವಿಚಂದ್ರನ್ ಸೇರಿದಂತೆ ಚಿತ್ರದ ಅನೇಕ ಕಲಾವಿದರು ಈ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ. ಎಲ್ಲ ಅಂದುಕೊಂಡಂತೆ ನಡೆದರೆ, ಮುಂಬರುವ ಜನವರಿ ವೇಳೆಗೆ “ತ್ರಿಶೂಲಂ’ ಚಿತ್ರವನ್ನು ತೆರೆಗೆ ತರುವ ಯೋಚನೆಯಲ್ಲಿದೆ ಚಿತ್ರತಂಡ.
ಇದನ್ನೂ ಓದಿ:ಲವ್ ಮಾಕ್ಟೇಲ್-2ಗೆ “ಯು’ ಪ್ರಮಾಣ ಪತ್ರ
“ಆರ್. ಎಸ್.ಪ್ರೊಡಕ್ಷನ್ಸ್’ ಬ್ಯಾನರ್ನಲ್ಲಿ “ತ್ರಿಶೂಲಂ’ ಚಿತ್ರ ದುಬಾರಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು, “ತ್ರಿಶೂಲಂ’ ಚಿತ್ರದ ಚಿತ್ರೀಕರಣ ಪೂರ್ಣವಾಗುವ ಮೊದಲೇ ವಿದೇಶಿಯರಿಂದಲೂ ಚಿತ್ರಕ್ಕೆ ಬೇಡಿಕೆ ಬರುತ್ತಿದೆಯಂತೆ. “ನಮ್ಮ ಸಿನಿಮಾದ ಬಗ್ಗೆ ತಿಳಿದುಕೊಂಡಿರುವ ವಿದೇಶಿಗರು (ಇಂಗ್ಲೆಂಡ್) ಸಿನಿಮಾದ ರೈಟ್ಸ್ ಕೊಂಡುಕೊಳ್ಳಲು ಮುಂದೆ ಬಂದಿದ್ದಾರೆ. ಸದ್ಯ ವ್ಯಾಪಾರದ ಮಾತುಕತೆ ಅಂತಿಮ ಹಂತದಲ್ಲಿದೆ’ ಎಂದಿದ್ದಾರೆ ನಿರ್ಮಾಪಕ ಆರ್. ಶ್ರೀನಿವಾಸ್