ಹಳೆದಾಂಡೇಲಿಯ ಮುಖ್ಯ ರಸ್ತೆ ದುರಸ್ತಿಗೆ ಆಗ್ರಹ
Team Udayavani, Dec 8, 2021, 12:18 PM IST
ದಾಂಡೇಲಿ : ಒಂದು ಕಾಲದ ಪ್ರಮುಖ ಜನಸಂದಣಿ ಪ್ರದೇಶ ಮಾತ್ರವಲ್ಲದೇ ದೊಡ್ಡ ವ್ಯಾಪಾರ ಚಟುವಟಿಕೆಯನ್ನು ಹೊಂದಿದ ಪ್ರದೇಶ. ಅಂದ ಹಾಗೆ ಮೂಲ ದಾಂಡೇಲಿ ಹಾಗಾಗಿ ಈಗ ಅದರ ಹೆಸರು ಹಳೆದಾಂಡೇಲಿ.
ಈ ಪ್ರದೇಶ ಹಳೆದಾಂಡೇಲಿಯಾಗುತ್ತಿದ್ದಂತೆಯೆ ಹಳೆಯದ್ದನ್ನು ಮರೆತಂತೆ ಭಾಸವಾಗತೊಡಗಿದೆ. ಹಾಗೆ ನೋಡಿದರೇ ಮೂಲಭೂತ ಸೌಕರ್ಯಗಳ ಕೊರತೆ ಸಾಕಷ್ಟಿದೆ. ಮನವಿ ಕೊಟ್ಟು ಕೊಟ್ಟು ಕೊನೆಗೆ ಅಂಗಲಾಚಿದ ಪರಿಣಾಮವಾಗಿ ಬಹಳ ವರ್ಷಗಳ ನಂತರ ಬಾಡಿಗೆ ಕಟ್ಟಡದಲ್ಲಿ ಸರಕಾರಿ ಆರೋಗ್ಯ ಕೇಂದ್ರವೊಂದು ಇತ್ತೀಚೆಗಷ್ಟೆ ತೆರೆಯಲ್ಪಿಟ್ಟಿದೆ. ಒಂದರ್ಥದಲ್ಲಿ ಹೇಳುವುದಾದರೇ ಶಾಸಕ ದೇಶಪಾಂಡೆಯವರಿಗೆ ಅತೀ ಹೆಚ್ಚಿನ ಮತಗಳನ್ನು ಕೊಡುತ್ತ ಬಂದಿರುವ ಪ್ರದೇಶವೆ ಹಳೆದಾಂಡೇಲಿ.
ಇಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಆಗಬೇಕಾಗಿದೆ. ಅದರಲ್ಲಿಯೂ ಬಹಳ ಮುಖ್ಯವಾಗಿ ಇಲ್ಲಿಯ ಮುಖ್ಯ ರಸ್ತೆ ಹದಗೆಟ್ಟಿರುವುದು. ಇದು ಸ್ಥಳೀಯ ಜನರಿಗೆ ತೀವ್ರ ಬೇಸರವನ್ನು ತಂದೊಡ್ಡಿದೆ. ಈ ಭಾಗದ ಜನರು ಗುಣಮಟ್ಟದ ರಸ್ತೆಗಾಗಿ ಮನವಿ ಮಾಡುತ್ತಿದ್ದಾರೆ. ಹೊಂಡ ಗುಂಡಿಗಳನ್ನು ಹೊಂದಿರುವ ಈ ರಸ್ತೆಯ ದುರಸ್ತಿಗೆ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಬೇಕಾಗಿದೆ. ಅತೀ ಹೆಚ್ಚು ಮತಗಳನ್ನು ಕೊಟ್ಟ ಈ ಪ್ರದೇಶದ ರಸ್ತೆ ಅತೀ ಶೀಘ್ರದಲ್ಲಿ ಆಗುವಂತಾಗಲೆನ್ನುವುದು ಇಲ್ಲಿಯ ಜನತೆಯ ಬೇಡಿಕೆಯ ಬಯಕೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dudhsagar: ದೂದ್ ಸಾಗರ ಜಲಪಾತದಲ್ಲಿ ಮುಳುಗುತ್ತಿದ್ದ 3 ವರ್ಷದ ಬಾಲಕಿಯ ರಕ್ಷಣೆ
Yellapura: ಅಪರಿಚಿತ ವಾಹನ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ… ಗೃಹ ಸಚಿವರು ಅಸಹಾಯಕರಾಗಿದ್ದಾರೆ; ಕಾಗೇರಿ
Kumta: ಯುವತಿಯ ಪ್ರಿಯಕರನಿಗೆ ಚಾಕು ಇರಿದು ಹಲ್ಲೆ ಮಾಡಿದ ಮಾಜಿ ಪ್ರಿಯಕರ
Sirsi: ತಂಜಾವೂರಿನಲ್ಲಿ ನಡೆಯುವ ಭಾರತದ ರಾಜವಂಶಸ್ಥರ ಬೈಟಕ್ ಗೆ ಸೋಂದಾ
MUST WATCH
ಹೊಸ ಸೇರ್ಪಡೆ
IPL 2024 Qualifier 2: ಫೈನಲ್ಗೇರಲು ಹೈದ್ರಾಬಾದ್-ರಾಜಸ್ಥಾನ್ ಸೆಣಸು
Pen drive case: ತಾರಕಕ್ಕೇರಿದ ಕಾಂಗ್ರೆಸ್-ಜೆಡಿಎಸ್ ಗುದ್ದಾಟ
T20 World Cup: ಭಾರತ-ಪಾಕ್ ಪಂದ್ಯದ ಟಿಕೆಟ್ ಬೆಲೆ 16 ಲಕ್ಷ ರೂ.!
Prajwal Revanna: ಪ್ರಜ್ವಲ್ ಪಾಸ್ಪೋರ್ಟ್ ರದ್ದತಿಗೆ ಕೇಂದ್ರ ಪ್ರಕ್ರಿಯೆ ಆರಂಭ; ಜೋಷಿ
Horoscope: ಈ ರಾಶಿಯವರ ಉದ್ಯೋಗ ಸ್ಥಾನದಲ್ಲಿ ಸ್ವಲ್ಪ ಸುಧಾರಣೆ ಕಾಣಲಿದೆ