ಅಭಿವೃದ್ದಿಯಿಂದಲೇ “ಕೈ’ ಮುಖಂಡರಿಗೆ ಉತ್ತರ
Team Udayavani, Dec 14, 2021, 3:15 PM IST
ಕವಿತಾಳ: ಮಾನ್ವಿ ತಾಲೂಕಿನಲ್ಲಿ ಸತತ ಆಡಳಿತ ನಡೆಸಿದ ಕಾಂಗ್ರೆಸ್ ಇಬ್ಬರು ಮಾಜಿ ಶಾಸಕರು ಕ್ಷೇತ್ರದ ಅಭಿವೃದ್ಧಿ ಬಗ್ಗೆ ತಮ್ಮನ್ನು ಪ್ರಶ್ನಿಸುತ್ತಿದ್ದಾರೆ. ಶಾಸಕನಾಗಿ ಮೂರೂವರೆ ವರ್ಷ ಕಳೆದಿದ್ದು, ಕೋವಿಡ್ ಹಿನ್ನೆಲೆ ಕೆಲವು ಅಭಿವೃದ್ಧಿ ಕೆಲಸಗಳಿಗೆ ಹಿನ್ನಡೆಯಾಗಿರಬಹುದು. ಮುಂದಿನ ಒಂದೂವರೆ ವರ್ಷದಲ್ಲಿ ಅಭಿವೃದ್ಧಿ ಕೆಲಸ ಕೈಗೊಂಡು ಕಾಂಗ್ರೆಸ್ ಮುಖಂಡರಿಗೆ ಸೂಕ್ತ ಉತ್ತರ ನೀಡುತ್ತೇನೆ ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿದರು.
ಮುಂಡರಗಿಮಠ ಕಲ್ಯಾಣ ಮಂಟಪದಲ್ಲಿ ರವಿವಾರ ಏರ್ಪಡಿಸಿದ್ದ ಜೆಡಿಎಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಲ್ಲಿನ ವಾರ್ಡ್ಗಳಲ್ಲಿ ಕಾಂಕ್ರೀಟ್ ರಸ್ತೆ, ಹೈ ಮಾಸ್ಟ್ ದೀಪ ಅಳವಡಿಕೆ ಮಾಡಲಾಗಿದೆ. ಅದೇ ರೀತಿ ಮುಖ್ಯರಸ್ತೆ ದುರಸ್ತಿ ಜೊತೆಗೆ ವಿಭಜಕ ಅಳವಡಿಕೆಗೆ ಮತ್ತು ಬಜಾರ್ ರಸ್ತೆ ದುರಸ್ತಿಗೆ ಮತ್ತು ತ್ರಯಂಭಕೇಶ್ವರ ದೇವಸ್ಥಾನಕ್ಕೆ 50 ಲಕ್ಷ ರೂ. ವೆಚ್ಚದಲ್ಲಿ ಯಾತ್ರಿ ನಿವಾಸ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಲಾಗಿದೆ ಎಂದರು.
ಕಳೆದ ಬಾರಿ ತಾವು ಶಾಸಕರಾಗಿರದ ಸಂದರ್ಭದಲ್ಲಿ ನಡೆದ ಪಪಂ ಚುನಾವಣೆಯಲ್ಲಿ ತನು-ಮನದೊಂದಿಗೆ ಕಾರ್ಯರ್ತರ ಬೆಂಬಲಕ್ಕೆ ನಿಂತಿದ್ದೆ. ಈಗ ತನು-ಮನ-ಧನದೊಂದಿಗೆ ಕಾರ್ಯಕರ್ತರ ಗೆಲುವಿಗೆ ಶ್ರಮಿಸುತ್ತೇನೆ. ಹೀಗಾಗಿ 8 ರಿಂದ 10 ಸ್ಥಾನ ಗಳಿಸಿ ಪಕ್ಷ ಅಧಿಕಾರಕ್ಕೆ ಬರಬೇಕು. ಈ ನಿಟ್ಟಿನಲ್ಲಿ ಕಾರ್ಯಕರ್ತರು ಧೈರ್ಯವಾಗಿ ಚುನಾವಣೆ ಎದುರಿಸಿ ಎಂದರು.
ಪಕ್ಷದ ರಾಜ್ಯ ಉಪಾಧ್ಯಕ್ಷ ಮಹಾಂತೇಶ ಪಾಟೀಲ್ ಅತ್ನೂರು ಮಾತನಾಡಿ, ಜೆಡಿಎಸ್ ಎಂದರೆ ಲೀಡರ್ಗಳನ್ನು ತಯಾರಿಸುವ ಕಾರ್ಖಾನೆ ಇದ್ದಂತೆ. ಮಾಜಿ ಸಿಎಂ ಸಿದ್ದರಾಮಯ್ಯ, ಜೆ.ಎಚ್. ಪಟೇಲ್ ಮತ್ತು ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಜೆಡಿಎಸ್ ಪಕ್ಷದವರೇ. ಹೀಗಾಗಿ ಸ್ಥಳೀಯ ಮಟ್ಟದಲ್ಲಿ ಪಕ್ಷ ಬಿಟ್ಟವರ ಬಗ್ಗೆ ಯೋಚಿಸದೇ ನೀವುಗಳೇ ಲೀಡರ್ ಆಗಬೇಕು. ಪಕ್ಷ ಬಲಪಡಿಸುವ ಕಾರ್ಯಕರ್ತರೇ ಲೀಡರ್ಗಳು ಎಂದರು.
ಮುಖಂಡ ಎನ್. ಶಿವಶಂಕರ್ ವಕೀಲ ಮತ್ತು ಪಕ್ಷದ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಮಾತನಾಡಿದರು. ಈ ವೇಳೆ ಮುಖಂಡರಾದ ರಾಜಾ ರಾಮಚಂದ್ರ ನಾಯಕ, ಜಂಬುನಾಥ ಯಾದವ, ಮಾನಪ್ಪ ವಿಶ್ವಕರ್ಮ, ಮಹ್ಮದ್ ಇಸ್ಮಾಯಿಲ್, ಸಿಲಾರ್ಸಾಬ್, ಹನುಮಂತಪ್ಪ, ರವಿ, ಖಾಜಾಪಾಶಾ, ರುಕ್ಮುದ್ದೀನ್ ಇದ್ದರು. ಪಕ್ಷಕ್ಕೆ ಸೇರ್ಪಡೆಯಾದ ಯುವಕರನ್ನು ಪಕ್ಷದ ಧ್ವಜ ನೀಡಿ ಶಾಸಕರು ಮತ್ತು ಮುಖಂಡರು ಬರಮಾಡಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur : ರಾಷ್ಟ್ರಗೀತೆಗೆ ಗೌರವ ಸಲ್ಲಿಸಿ ನಿಂತ ಚಿಂದಿ ಆಯುವ ಬಾಲಕ; ವಿಡಿಯೋ ವೈರಲ್
ಪ್ರೇರಣೆ ನೀಡಿದ ಪ್ರವಚನ-ಆನ್ಲೈನ್ನಿಂದ ಗಡಿ ದಾಟಿದ ರಾಯಚೂರು ಮಾವು!
C.T. Ravi; ಪರಿಶಿಷ್ಟರ ಹಣ ಲೂಟಿ ಹೊಡೆದು ಚುನಾವಣೆಗೆ ಬಳಸಿದ ಕಾಂಗ್ರೆಸ್
Raichur: ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಉರಿದ ಅಂಗಡಿ… ಲಕ್ಷಾಂತರ ರೂ. ನಷ್ಟ
K Annamalai; ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದ ಅಣ್ಣಾಮಲೈ
MUST WATCH
ಹೊಸ ಸೇರ್ಪಡೆ
Prajwal Revanna ವಿಮಾನದಿಂದ ಇಳಿಯುತ್ತಿದ್ದಂತೆಯೇ ಎಸ್ ಐಟಿ ಅಧಿಕಾರಿಗಳ ವಶಕ್ಕೆ
Ballari ಒನ್ ಕೇಂದ್ರದಲ್ಲಿ ಕಳವು ಮಾಡಿದ್ದ ಆರೋಪಿ ಬಂಧನ; ಮತ್ತೊಬ್ಬ ಪರಾರಿ
Subrahmanya ಪರಿಸರದಲ್ಲಿ ಧಾರಾಕಾರ ಮಳೆ: ಕೆಲವೆಡೆ ಹಾನಿ
Mangaluru ನಮಾಜ್ ಪ್ರಕರಣ: ಬಿ ರಿಪೋರ್ಟ್ ಸಲ್ಲಿಕೆ; ಶರಣ್ ಪಂಪ್ವೆಲ್ ವಿರುದ್ಧ ಪ್ರಕರಣ
TIME ನಿಯತಕಾಲಿಕ: ಜಾಗತಿಕ ಪ್ರಭಾವಿ 100 ಕಂಪನಿಗಳ ಪಟ್ಟಿಯಲ್ಲಿ ರಿಲಯನ್ಸ್