ರಾಜಸ್ಥಾನಕ್ಕೆ ರೋಚಕ ಜಯ; ಅಂತಿಮ ಓವರ್‌ನಲ್ಲಿ ಲಕ್ನೋ ತಂಡವನ್ನು ಕಟ್ಟಿಹಾಕಿದ ರಾಜಸ್ಥಾನ


Team Udayavani, Apr 10, 2022, 11:42 PM IST

ರಾಜಸ್ಥಾನಕ್ಕೆ ರೋಚಕ ಜಯ; ಅಂತಿಮ ಓವರ್‌ನಲ್ಲಿ ಲಕ್ನೋ ಕಟ್ಟಿಹಾಕಿದ ರಾಜಸ್ಥಾನ

ಮುಂಬೈ: ಪ್ರಸಕ್ತ ಐಪಿಎಲ್‌ನಲ್ಲಿ ಹೆಚ್ಚು ಸ್ಥಿರ ಪ್ರದರ್ಶನ ನೀಡುತ್ತಿರುವ ರಾಜಸ್ಥಾನ ರಾಯಲ್ಸ್‌ ತಂಡ, ಲಕ್ನೋ ಸೂಪರ್‌ ಜೈಂಟ್ಸ್‌ ತಂಡವನ್ನು 3 ರನ್ನುಗಳಿಂದ ಸೋಲಿಸಿದೆ.

ಮೊದಲು ಬ್ಯಾಟಿಂಗ್‌ ಮಾಡಿದ್ದ ರಾಜಸ್ಥಾನ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 165 ರನ್‌ಗಳ ಭಾರೀ ಮೊತ್ತ ಪೇರಿಸಿತ್ತು. ಇದನ್ನು ಬೆನ್ನಟ್ಟಿದ ಲಕ್ನೋ ತಂಡ ಕೇವಲ 8 ವಿಕೆಟ್‌ಗೆ 162 ರನ್‌ ಗಳಿಸಿ ಸೋತಿತು. ಭಾನುವಾರದ ಎರಡನೇ ಪಂದ್ಯದಲ್ಲಿ ರಾಜಸ್ಥಾನದ್ದು ಆಲ್‌ರೌಂಡ್‌ ಪ್ರದರ್ಶನ. ಬ್ಯಾಟಿಂಗ್‌ನಲ್ಲಿ ಶಿಮ್ರಾನ್‌ ಹೆಟ್‌ಮೈರ್‌ ಮಿಂಚಿದರೆ, ಬೌಲಿಂಗ್‌ನಲ್ಲಿ ಚಹಲ್‌ ಆರ್ಭಟಿಸಿದರು.

ಗೆಲುವಿಗೆ 166 ರನ್‌ಗಳ ಗುರಿ ಬೆನ್ನಟ್ಟಿದ ಲಕ್ನೋಗೆ ಆರಂಭದಲ್ಲೇ ಶಾಕ್‌ ಕಾದಿತ್ತು. ಮೊದಲ ಓವರ್‌ನಲ್ಲೇ ಮೊದಲ ಮತ್ತು ಎರಡನೇ ಎಸೆತದಲ್ಲೇ ಲಕ್ನೋದ ಕೆ.ಎಲ್‌.ರಾಹುಲ್‌ ಮತ್ತು ಕೃಷ್ಣಪ್ಪ ಗೌತಮ್‌ ಟ್ರೆಂಟ್‌ ಬೌಲ್ಟ್ಗೆ ವಿಕೆಟ್‌ ಒಪ್ಪಿಸಿದರು. ಬಳಿಕ ಹೋಲ್ಡರ್‌ ಬಂದರಾದರೂ, ಹೆಚ್ಚು ಹೊತ್ತು ನಿಲ್ಲಲಿಲ್ಲ. ತಂಡದ ಮೊತ್ತ 14 ರನ್‌ಗಳಾಗಿದ್ದಾಗ ಅವರೂ 8 ರನ್‌ ಗಳಿಸಿ ಔಟಾದರು. ಇನ್ನೊಂದು ಬದಿಯಲ್ಲಿದ್ದ ಕ್ವಿಂಟನ್‌ ಡಿಕಾಕ್‌ ವಿಕೆಟ್‌ಗಳು ಉರುಳುತ್ತಿದ್ದರೂ, ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಂತಿದ್ದರು. ಆದರೆ, ಅವರೂ 39 ರನ್‌ ಗಳಿಸಿ ಔಟಾದರು. ದೀಪಕ್‌ ಹೂಡ ಮತ್ತು ಕೃಣಾಲ್‌ ಪಾಂಡ್ಯ ಕೊಂಚ ಪ್ರತಿರೋಧ ತೋರಿದರು. ಕಡೆ ಎಸೆತದ ವರೆಗೂ ಮಾರ್ಕ್‌  ಅವರು ತಂಡವನ್ನು ಗೆಲುವಿನ ದಡ ಹತ್ತಿಸಲು ಯತ್ನಿಸಿದರು. ಆದರೆ, ರಾಜಸ್ಥಾನ ಪರ ಕಡೇ ಓವರ್‌ ಎಸೆದ ಕುಲ್ದೀಪ್‌ ಸೇನ್‌ ಮೊದಲ ನಾಲ್ಕು ಎಸೆತಗಳಲ್ಲಿ ಕೇವಲ 1 ರನ್‌ ಮತ್ತು ಕಡೆ 2 ಎಸೆತಗಳಲ್ಲಿ 10 ರನ್‌ ಕೊಟ್ಟರು. ಅಂದರೆ, ಕಡೇ ಓವರ್‌ನಲ್ಲಿ ಒಟ್ಟು 15 ರನ್‌ ಬೇಕಾಗಿತ್ತು. ಆದರೆ, ಲಕ್ನೋ 11 ರನ್‌ ಗಳಿಸಲಷ್ಟೇ ಯಶಸ್ವಿಯಾಯಿತು.

ರಾಜಸ್ಥಾನ ಉತ್ತಮ ಮೊತ್ತ
ಇನ್ನು ರಾಜಸ್ಥಾನದ ಪರ ಅಗ್ರ ಕ್ರಮಾಂಕದ ಆಟಗಾರರು ಬ್ಯಾಟಿಂಗ್‌ನಲ್ಲಿ ವೈಫ‌ಲ್ಯ ಕಂಡರೂ ಹೆಟ್‌ಮೈರ್‌ ಅಮೋಘವಾಗಿ ಆಡಿ ತಂಡವನ್ನು ಆಧರಿಸುವ ಪ್ರಯತ್ನ ಮಾಡಿದರು. ಅವರು ರವಿಚಂದ್ರನ್‌ ಅಶ್ವಿ‌ನ್‌ ಜತೆಗೂಡಿ ಐದನೇ ವಿಕೆಟಿಗೆ 68 ರನ್ನುಗಳ ಜತೆಯಾಟದಲ್ಲಿ ಭಾಗಿಯಾಗಿ ತಂಡವನ್ನು ಆರಂಭದ ಕುಸಿತದಿಂದ ಪಾರು ಮಾಡಿದರು.

ಲಕ್ನೋ ದಾಳಿಯನ್ನು ದಿಟ್ಟವಾಗಿ ಎದುರಿಸಿದ ಹೆಟ್‌ಮೈರ್‌ ಆರು ಭರ್ಜರಿ ಸಹಿತ 36 ಎಸೆತಗಳಿಂದ 59 ರನ್‌ ಗಳಿಸಿ ಅಜೇಯರಾಗಿ ಉಳಿದರು. ಲಕ್ನೋದ ಬೌಲಿಂಗ್‌ ಉತ್ತಮ ಮಟ್ಟದಲ್ಲಿತ್ತು. ದುಷ್ಮಂತ ಚಮೀರ ಮತ್ತು ರವಿ ಬಿಷ್ಣೋಯಿ ವಿಕೆಟ್‌ ಪಡೆಯದೇ ಇದ್ದರೂ ಎದುರಾಳಿ ಆಟಗಾರರಿಗೆ ಹೆಚ್ಚಿನ ರನ್‌ ನೀಡಲು ಬಿಡಲಿಲ್ಲ. ಕೃಷ್ಣಪ್ಪ ಗೌತಮ್‌ ಅವರ ಬೌಲಿಂಗ್‌ ಉತೃಷ್ಟವಾಗಿತ್ತು. ತನ್ನ 4 ಓವರ್‌ಗಳ ದಾಳಿಯಲ್ಲಿ ಅವರು 30 ರನ್‌ ನೀಡಿ ಎರಡು ಅಮೂಲ್ಯ ವಿಕೆಟ್‌ ಹಾರಿಸಿದ್ದರು. ಇನ್ನೆರಡು ವಿಕೆಟನ್ನು ಹೋಲ್ಡರ್‌ ಕಿತ್ತರು.

ಸದ್ಯ ತಾನಾಡಿದ ನಾಲ್ಕು ಪಂದ್ಯಗಳಿಂದ ಮೂರು ಜಯದೊಂದಿಗೆ ಆರಂಕ ಪಡೆದು ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಲಕ್ನೋ ಒಂದು ವೇಳೆ ಈ ಪಂದ್ಯದಲ್ಲಿ ಗೆದ್ದರೆ ಅಗ್ರಸ್ಥಾನಕ್ಕೇರುವ ಸಾಧ್ಯತೆಯಿದೆ. ಒಂದು ವೇಳೆ ರಾಜಸ್ಥಾನ ಗೆದ್ದರೆ ಉತ್ತಮ ರನ್‌ಧಾರಣೆಯ ಆಧಾರದಲ್ಲಿ ಅದು ಅಗ್ರಸ್ಥಾನಕ್ಕೇರಲಿದೆ. ಒಂದು ಸ್ಥಾನದಲ್ಲಿ ಗೆದ್ದಿರುವ ಹೈದರಾಬಾದ್‌ 2 ಅಂಕದೊಂದಿಗೆ 8ನೇ ಸ್ಥಾನದಲ್ಲಿದೆ.

ಸಂಕ್ಷಿಪ್ತ ಸ್ಕೋರ್‌
ರಾಜಸ್ಥಾನ್‌ ರಾಯಲ್ಸ್‌- 165/6(20 ಓವರ್‌) ಶಿಮ್ರಾನ್‌ ಹೆಟ್‌ಮೈರ್‌ 59, ದೇವದತ್ತ ಪಡಿಕ್ಕಲ್‌ 29, ಆರ್‌. ಅಶ್ವಿ‌ನ್‌ 28. ಕೃಷ್ಣಪ್ಪ ಗೌತಮ್‌ 30/2. ಲಕ್ನೋ ಸೂಪರ್‌ ಜೈಂಟ್ಸ್‌- 162/8(20ಓವರ್‌) ಕ್ವಿಂಟನ್‌ ಡಿಕಾಕ್‌ 39, ಸ್ಟೋಯಿ°ಸ್‌ 38, ಹೂಡಾ 25. ಚಹಲ್‌ 41/4, ಬೌಲ್ಟ್ 30/2.

 

ಟಾಪ್ ನ್ಯೂಸ್

G. Parameshwara ದಾದಾಗಿರಿ ಮಾಡಿದವರು ಯಾರೇ ಆದರೂ ಕ್ರಮ

G. Parameshwara ದಾದಾಗಿರಿ ಮಾಡಿದವರು ಯಾರೇ ಆದರೂ ಕ್ರಮ

ನಡು ರಸ್ತೆಯಲ್ಲೇ ಧರಣಿ ಕುಳಿತ ಮಾಜಿ ಸಚಿವ ಆನಂದ ಸಿಂಗ್‌ನಡು ರಸ್ತೆಯಲ್ಲೇ ಧರಣಿ ಕುಳಿತ ಮಾಜಿ ಸಚಿವ ಆನಂದ ಸಿಂಗ್‌

ನಡು ರಸ್ತೆಯಲ್ಲೇ ಧರಣಿ ಕುಳಿತ ಮಾಜಿ ಸಚಿವ ಆನಂದ ಸಿಂಗ್‌

Prajwal Revanna Case ಮೇ 1ರ ಪತ್ರ ಎಲ್ಲಿ ಹೋಯ್ತು? ಕೇಂದ್ರಕ್ಕೆ ಗೃಹ ಸಚಿವರ ಪ್ರಶ್ನೆ

Prajwal Revanna Case ಮೇ 1ರ ಪತ್ರ ಎಲ್ಲಿ ಹೋಯ್ತು? ಕೇಂದ್ರಕ್ಕೆ ಗೃಹ ಸಚಿವರ ಪ್ರಶ್ನೆ

bjp-jdsBJP-JDS ಹೆಚ್ಚುವರಿ ಅಭ್ಯರ್ಥಿ ಕಣಕ್ಕಿಳಿಸಲಿದೆಯೇ ಮಿತ್ರಪಕ್ಷ?

BJP-JDS ಹೆಚ್ಚುವರಿ ಅಭ್ಯರ್ಥಿ ಕಣಕ್ಕಿಳಿಸಲಿದೆಯೇ ಮಿತ್ರಪಕ್ಷ?

H. D. Kumaraswamy ಅನ್ನಭಾಗ್ಯದ ಹಣ ಕೊಡುವ ಯೋಗ್ಯತೆ ಇಲ್ಲ

H. D. Kumaraswamy ಅನ್ನಭಾಗ್ಯದ ಹಣ ಕೊಡುವ ಯೋಗ್ಯತೆ ಇಲ್ಲ

bjp-jdsಮೇಲ್ಮನೆ ಗೆಲುವಿಗೆ ಬಿಜೆಪಿ-ಜೆಡಿಎಸ್‌ ಪಣ

ಮೇಲ್ಮನೆ ಗೆಲುವಿಗೆ ಬಿಜೆಪಿ-ಜೆಡಿಎಸ್‌ ಪಣ

Karnataka ಮಳೆ: ಸಿಡಿಲಿಗೆ ಇಬ್ಬರು ಸಾವು

Karnataka ಮುಂಗಾರು ಪೂರ್ವ ಮಳೆ: ಸಿಡಿಲಿಗೆ ಇಬ್ಬರು ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qqw-qwewqewqeqwe

IPL 2024; ಅಮೋಘ ಆಟವಾಡಿ ಮೂರನೇ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡ ಕೆಕೆಆರ್

1-KKAAD

IPL Final; ಕೆಕೆಆರ್ ಬೌಲರ್ ಗಳ ಕೇಕೆ; ಹೈದರಾಬಾದ್ ಆಟ ಮುಗಿಸಿತು 113 ಕ್ಕೆ!!

1-rrwwqewqe

I miss you, Baba; ತಂದೆಯ 25 ನೇ ಪುಣ್ಯತಿಥಿ: ತೆಂಡೂಲ್ಕರ್ ಭಾವಪೂರ್ಣ ಬರಹ

T20 World Cup 2024: ಬಾಂಗ್ಲಾ ವಿರುದ್ಧದ ಅಭ್ಯಾಸ ಪಂದ್ಯಕ್ಕಿಲ್ಲ ವಿರಾಟ್-ಹಾರ್ದಿಕ್

T20 World Cup 2024: ಬಾಂಗ್ಲಾ ವಿರುದ್ಧದ ಅಭ್ಯಾಸ ಪಂದ್ಯಕ್ಕಿಲ್ಲ ವಿರಾಟ್-ಹಾರ್ದಿಕ್

T20 World Cup: ಅಮೆರಿಕಕ್ಕೆ ಹೊರಟ ರೋಹಿತ್ ಬಳಗ; ವಿಮಾನ ತಪ್ಪಿಸಿಕೊಂಡ ಕೊಹ್ಲಿ, ಹಾರ್ದಿಕ್

T20 World Cup: ಅಮೆರಿಕಕ್ಕೆ ಹೊರಟ ರೋಹಿತ್ ಬಳಗ; ವಿಮಾನ ತಪ್ಪಿಸಿಕೊಂಡ ಕೊಹ್ಲಿ, ಹಾರ್ದಿಕ್

MUST WATCH

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

ಹೊಸ ಸೇರ್ಪಡೆ

G. Parameshwara ದಾದಾಗಿರಿ ಮಾಡಿದವರು ಯಾರೇ ಆದರೂ ಕ್ರಮ

G. Parameshwara ದಾದಾಗಿರಿ ಮಾಡಿದವರು ಯಾರೇ ಆದರೂ ಕ್ರಮ

ನಡು ರಸ್ತೆಯಲ್ಲೇ ಧರಣಿ ಕುಳಿತ ಮಾಜಿ ಸಚಿವ ಆನಂದ ಸಿಂಗ್‌ನಡು ರಸ್ತೆಯಲ್ಲೇ ಧರಣಿ ಕುಳಿತ ಮಾಜಿ ಸಚಿವ ಆನಂದ ಸಿಂಗ್‌

ನಡು ರಸ್ತೆಯಲ್ಲೇ ಧರಣಿ ಕುಳಿತ ಮಾಜಿ ಸಚಿವ ಆನಂದ ಸಿಂಗ್‌

Prajwal Revanna Case ಮೇ 1ರ ಪತ್ರ ಎಲ್ಲಿ ಹೋಯ್ತು? ಕೇಂದ್ರಕ್ಕೆ ಗೃಹ ಸಚಿವರ ಪ್ರಶ್ನೆ

Prajwal Revanna Case ಮೇ 1ರ ಪತ್ರ ಎಲ್ಲಿ ಹೋಯ್ತು? ಕೇಂದ್ರಕ್ಕೆ ಗೃಹ ಸಚಿವರ ಪ್ರಶ್ನೆ

bjp-jdsBJP-JDS ಹೆಚ್ಚುವರಿ ಅಭ್ಯರ್ಥಿ ಕಣಕ್ಕಿಳಿಸಲಿದೆಯೇ ಮಿತ್ರಪಕ್ಷ?

BJP-JDS ಹೆಚ್ಚುವರಿ ಅಭ್ಯರ್ಥಿ ಕಣಕ್ಕಿಳಿಸಲಿದೆಯೇ ಮಿತ್ರಪಕ್ಷ?

H. D. Kumaraswamy ಅನ್ನಭಾಗ್ಯದ ಹಣ ಕೊಡುವ ಯೋಗ್ಯತೆ ಇಲ್ಲ

H. D. Kumaraswamy ಅನ್ನಭಾಗ್ಯದ ಹಣ ಕೊಡುವ ಯೋಗ್ಯತೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.