Cricket: ಭಾರತ-ಪಾಕಿಸ್ಥಾನ ಬದ್ಧ ವೈರಿಗಳ ಜಂಟಿ ಆತಿಥ್ಯ


Team Udayavani, Sep 25, 2023, 11:16 PM IST

cricekt

ಇಂಗ್ಲೆಂಡ್‌ ಮತ್ತು ಪ್ರುಡೆನ್ಶಿಯಲ್‌ ಕಂಪೆನಿ ಮೊದಲ 3 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಬಳಿಕ ಈ ಕೂಟ ನಿಧಾನವಾಗಿ ಕ್ರಿಕೆಟ್‌ ಜನಕರ ನಾಡಿನಿಂದ ವಿಮುಖವಾಗತೊಡಗಿತು. ವಿಶ್ವದ ಎಲ್ಲ ಕ್ರಿಕೆಟ್‌ ರಾಷ್ಟ್ರಗಳಿಗೂ ಇದನ್ನು ವಿಸ್ತರಿಸಬೇಕೆಂಬ ಒತ್ತಡ ಬಂದಾಗ ಐಸಿಸಿ ಇದಕ್ಕೆ ಮಣಿಯಲೇಬೇಕಾಯಿತು.

ಇಲ್ಲಿನ ಮೊದಲ ಫ‌ಲಾನುಭವಿಗಳೆಂದರೆ ಭಾರತ ಮತ್ತು ಪಾಕಿಸ್ಥಾನ. ರಾಜಕೀಯವಾಗಿ ಬದ್ಧ ವೈರಿಗಳಾಗಿದ್ದ ಈ ಎರಡು ದೇಶಗಳು ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯ ಮೂಲಕ ಬಾಂಧವ್ಯ ವೃದ್ಧಿಸಿಕೊಳ್ಳುವುದು ದೂರದ ಮಾತೇ ಆಗಿದ್ದರೂ ಕೂಟ ಮಾತ್ರ ಅತ್ಯಂತ ಯಶಸ್ವಿಯಾಗಿ ನಡೆದದ್ದು ಸುಳ್ಳಲ್ಲ.

ರಿಲಯನ್ಸ್‌ ವಿಶ್ವಕಪ್‌
1987ರ ಈ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯನ್ನು ಪ್ರಾಯೋಜಿಸಿದ್ದು ರಿಲಯನ್ಸ್‌ ಕಂಪೆನಿ. ಇಂಗ್ಲೆಂಡ್‌ನ‌ಲ್ಲಿ ನಡೆದದ್ದು 60 ಓವರ್‌ಗಳ ಪಂದ್ಯವಾದರೆ, ಏಷ್ಯಾಕ್ಕೆ ಬರುವಾಗ ಇದು 50 ಓವರ್‌ಗಳಿಗೆ ಇಳಿದಿತ್ತು. ಅದೇ 8 ತಂಡಗಳ, 2 ಗ್ರೂಪ್‌ಗ್ಳ, 2 ಸುತ್ತಿನ ಮುಖಾಮುಖೀ ಇದಾಗಿತ್ತು. ಟೆಸ್ಟ್‌ ಮಾನ್ಯತೆ ಪಡೆದಿದ್ದ ಎಲ್ಲ 7 ರಾಷ್ಟ್ರಗಳು ನೇರ ಪ್ರವೇಶ ಪಡೆದ್ದಿವು. ಜಿಂಬಾಬ್ವೆ ಐಸಿಸಿ ಟ್ರೋಫಿ ಗೆದ್ದು ಸತತ 2ನೇ ವಿಶ್ವಕಪ್‌ ಆಡುವ ಅವಕಾಶ ಪಡೆಯಿತು. ಫೈನಲ್‌ನಲ್ಲಿ ಅದು ನೆದರ್ಲೆಂಡ್ಸ್‌ಗೆ ಸೋಲುಣಿಸಿತ್ತು.

ಭಾರತ ಹಾಲಿ ಚಾಂಪಿಯನ್‌ ಆಗಿದ್ದರಿಂದ ಸಹಜವಾಗಿಯೇ ನೆಚ್ಚಿನ ತಂಡವಾಗಿತ್ತು. ಗಡಿಯಾಚೆ ಪಾಕಿಸ್ಥಾನ ಫೇವರಿಟ್‌ ಎನಿಸಿತ್ತು. ಒಂದು ಸೆಮಿಫೈನಲ್‌ ಭಾರತಕ್ಕೆ (ಮುಂಬಯಿ), ಇನ್ನೊಂದು ಸೆಮಿಫೈನಲ್‌ ಪಾಕಿಸ್ಥಾನಕ್ಕೆ (ಲಾಹೋರ್‌) ಮೀಸಲಾಯಿತು. ಫೈನಲ್‌ ಆತಿಥ್ಯ ಕೋಲ್ಕತಾದ ಈಡನ್‌ ಗಾರ್ಡನ್ಸ್‌ ಪಾಲಾಯಿತು.

ಮತ್ತೆ ಕಪಿಲ್‌ ಸಾರಥ್ಯ
1983ರಲ್ಲಿ ಭಾರತಕ್ಕೆ ಐತಿಹಾಸಿಕ ಗೆಲುವು ತಂದುಕೊಟ್ಟಿದ್ದ ಕಪಿಲ್‌ದೇವ್‌ ಅವರೇ ತಂಡದ ಸಾರಥಿಯಾಗಿದ್ದರು. ಕಪಿಲ್‌ ಸೇರಿ ಚಾಂಪಿಯನ್‌ ತಂಡದ 6 ಮಂದಿ ಆಟಗಾರರಿದ್ದರು. “ಎ’ ವಿಭಾಗದಿಂದ ಭಾರತ, ಆಸ್ಟ್ರೇಲಿಯ; “ಬಿ’ ವಿಭಾಗದಿಂದ ಪಾಕಿಸ್ಥಾನ-ಇಂಗ್ಲೆಂಡ್‌ ಸೆಮಿಫೈನಲ್‌ಗೆ ಲಗ್ಗೆಯಿಟ್ಟವು. ಪಾಕಿಸ್ಥಾನಕ್ಕೆ ಲಾಹೋರ್‌ನಲ್ಲಿ, ಭಾರತಕ್ಕೆ ಮುಂಬಯಿಯಲ್ಲಿ ಉಪಾಂತ್ಯ ಪಂದ್ಯ ಆಡುವ ಅವಕಾಶ ಲಭಿಸಿದ್ದರಿಂದ ಆಗಲೇ ಇತ್ತಂಡಗಳ ನಡುವೆ ಫೈನಲ್‌ ವಾತಾವರಣ ಸೃಷ್ಟಿಯಾಗಿತ್ತು. ಆದರೆ ಸಂಭವಿಸಿದ್ದೇ ಬೇರೆ.

ಲಾಹೋರ್‌ನಲ್ಲಿ ನಡೆದ ಮೊದಲ ಉಪಾಂತ್ಯದಲ್ಲಿ ಪಾಕಿಸ್ಥಾನ 18 ರನ್ನುಗಳಿಂದ ಆಸ್ಟ್ರೇಲಿಯಕ್ಕೆ ಶರಣಾಯಿತು. ಮರುದಿನ ಭಾರತ 35 ರನ್ನುಗಳಿಂದ ಇಂಗ್ಲೆಂಡ್‌ಗೆ ತಲೆಬಾಗಿತು. ಅಲ್ಲಿಗೆ ಎರಡೂ ಆತಿಥೇಯ ರಾಷ್ಟ್ರಗಳ ಕತೆ ಮುಗಿಯಿತು. ಭಾರತ ಮಾಜಿ ಆಯಿತು!

ಇಂಗ್ಲೆಂಡ್‌-ಆಸ್ಟ್ರೇಲಿಯ ಫೈನಲ್‌
ಕೋಲ್ಕತಾ ಫೈನಲ್‌ನಲ್ಲಿ ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್‌ ಎದುರಾದವು. ಇತ್ತಂಡಗಳಿಗೂ ಇದು 2ನೇ ಫೈನಲ್‌ ಆಗಿತ್ತು. ಮೊದಲ ಫೈನಲ್‌ನಲ್ಲಿ ಎರಡೂ ತಂಡಗಳು ಎಡವಿದ್ದವು. ಹೀಗಾಗಿ ಇಲ್ಲಿ ಯಾರೇ ಗೆದ್ದರೂ ಇತಿಹಾಸ ನಿರ್ಮಾಣವಾಗುತ್ತಿತ್ತು. ಈ ಅವಕಾಶ ಎರಡೂ ತಂಡಗಳಿಗಿತ್ತು. ಆದರೆ ಇಂಗ್ಲೆಂಡ್‌ ಇದನ್ನು ಕೈಯಾರೆ ಕಳೆದುಕೊಂಡಿತು. 7 ರನ್ನುಗಳಿಂದ ಗೆದ್ದ ಆಸ್ಟ್ರೇಲಿಯ ಕಿರೀಟ ಏರಿಸಿಕೊಂಡಿತು.

ಅಲನ್‌ ಬೋರ್ಡರ್‌ ನೇತೃತ್ವದ ಆಸ್ಟ್ರೇಲಿಯ ಗಳಿಸಿದ್ದು 5ಕ್ಕೆ 253 ರನ್‌. ಇಂಗ್ಲೆಂಡ್‌ 8ಕ್ಕೆ 246 ರನ್‌ ಗಳಿಸಿ ಗೆಲುವಿನ ಗಡಿಯಲ್ಲಿ ಮುಗ್ಗರಿಸಿತು. ಅನಗತ್ಯ ರಿವರ್ಸ್‌ ಸ್ವೀಪ್‌ಗೆ ಮುಂದಾಗಿ ವಿಕೆಟ್‌ ಕೈಚೆಲ್ಲಿದ ಆಂಗ್ಲರ ನಾಯಕ ಮೈಕ್‌ ಗ್ಯಾಟಿಂಗ್‌ ವಿಲನ್‌ ಎನಿಸಿಕೊಂಡರು. ಇಲ್ಲವಾದರೆ, ಬಹುಶಃ ಇಂಗ್ಲೆಂಡ್‌ ಮೊದಲ ವಿಶ್ವಕಪ್‌ ಎತ್ತಲು 2019ರ ತನಕ ಕಾಯಬೇಕಾದ ಸ್ಥಿತಿ ಎದುರಾಗುತ್ತಿರಲಿಲ್ಲವೋ ಏನೋ!

ಟಾಪ್ ನ್ಯೂಸ್

7-

Gundlupete: ಕುಡಿದ ಮತ್ತಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ

Kanchanjunga Express ರೈಲಿಗೆ ಗೂಡ್ಸ್ ರೈಲು ಡಿಕ್ಕಿ; 5 ಮೃತ್ಯು, 25ಕ್ಕೂ ಹೆಚ್ಚು ಗಾಯ

Kanchanjunga Express ರೈಲಿಗೆ ಗೂಡ್ಸ್ ರೈಲು ಡಿಕ್ಕಿ; 5 ಮೃತ್ಯು, 25ಕ್ಕೂ ಹೆಚ್ಚು ಗಾಯ

b-c-patil

Price Hike; ಸರ್ಕಾರ ಜನರನ್ನು ನೇರವಾಗಿ ಸುಲಿಗೆ ಮಾಡುತ್ತಿದೆ…: ಬಿ.ಸಿ.ಪಾಟೀಲ್ ಆಕ್ರೋಶ

Renukaswamy Case; ಪಾರದರ್ಶಕ ವಿಚಾರಣೆಯಾಗಲಿ…: ದರ್ಶನ್ ಬಂಧನದ ಬಗ್ಗೆ ಉಪೇಂದ್ರ ಮಾತು

Renukaswamy Case; ಪಾರದರ್ಶಕ ವಿಚಾರಣೆಯಾಗಲಿ…: ದರ್ಶನ್ ಬಂಧನದ ಬಗ್ಗೆ ಉಪೇಂದ್ರ ಮಾತು

Jharkhand: ಪೊಲೀಸರ ಎನ್‌ ಕೌಂಟರ್‌ ಗೆ ಮಹಿಳೆ ಸೇರಿ ನಾಲ್ವರು ನಕ್ಸಲೀಯರು ಮೃತ್ಯು

Jharkhand: ಪೊಲೀಸರ ಎನ್‌ ಕೌಂಟರ್‌ ಗೆ ಮಹಿಳೆ ಸೇರಿ ನಾಲ್ವರು ನಕ್ಸಲೀಯರು ಮೃತ್ಯು

Mangaluru: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಬಿಜೆಪಿಯಿಂದ ವಿಭಿನ್ನ ಪ್ರತಿಭಟನೆ

Mangaluru: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಬಿಜೆಪಿಯಿಂದ ವಿಭಿನ್ನ ಪ್ರತಿಭಟನೆ

Gautam ಅದಾನಿ, ಭೂತಾನ್‌ ಪ್ರಧಾನಿ, ರಾಜ ಜಿಗ್ಮೆ ಭೇಟಿ; ಹೈಡ್ರೋ ಪ್ಲಾಂಟ್‌ ಒಪ್ಪಂದಕ್ಕೆ ಸಹಿ

Gautam ಅದಾನಿ, ಭೂತಾನ್‌ ಪ್ರಧಾನಿ, ರಾಜ ಜಿಗ್ಮೆ ಭೇಟಿ; ಹೈಡ್ರೋ ಪ್ಲಾಂಟ್‌ ಒಪ್ಪಂದಕ್ಕೆ ಸಹಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ICC T20 World Cup: ಇನ್ನು ಸೂಪರ್ 8 ಕದನ; ಇಲ್ಲಿದೆ ಭಾರತದ ಪಂದ್ಯಗಳ ವಿವರ

ICC T20 World Cup: ಇನ್ನು ಸೂಪರ್ 8 ಕದನ; ಇಲ್ಲಿದೆ ಭಾರತದ ಪಂದ್ಯಗಳ ವಿವರ

1-asdsadsad

T 20 WC; ಸೂಪರ್‌-8 ಗಡಿಯಲ್ಲಿ ಬಾಂಗ್ಲಾ: ನೇಪಾಲ ಕೊನೆಯ ಎದುರಾಳಿ

1-wewwqewq

T20 World Cup; ಐರ್ಲೆಂಡ್ ಎದುರು ಪಾಕ್ ಗೆ ಗೆಲುವಿನ ಸಮಾಧಾನ

1-asddasdsa

ODI ಸ್ಮೃತಿ ಮಂಧನಾ ಅಮೋಘ ಶತಕ; ಮಂಕಾದ ದಕ್ಷಿಣ ಆಫ್ರಿಕಾ

Team India; ಅಶಿಸ್ತಿನ ಕಾರಣದಿಂದ ತಂಡದಿಂದ ಹೊರಬಿದ್ದರೇ ಗಿಲ್; ಸ್ಪಷ್ಟನೆ ನೀಡಿದ ಕೋಚ್

Team India; ಅಶಿಸ್ತಿನ ಕಾರಣದಿಂದ ತಂಡದಿಂದ ಹೊರಬಿದ್ದರೇ ಗಿಲ್; ಸ್ಪಷ್ಟನೆ ನೀಡಿದ ಕೋಚ್

MUST WATCH

udayavani youtube

ಗಂಗೊಳ್ಳಿಯಲ್ಲಿ ಈದ್ ಅಲ್ ಅಝ್ಹಾ ಆಚರಣೆ

udayavani youtube

ಕೆ‌ಎಸ್‌ಆರ್‌ಟಿಸಿ‌ ಬಸ್- ಬೈಕ್ ಮುಖಾಮುಖಿ ಢಿಕ್ಕಿ ; ಸವಾರ ಮೃತ್ಯು

udayavani youtube

ಇಡ್ಲಿ, ವಡೆ, ಚಟ್ನಿ ಗೆ ತುಂಬಾ ಫೇಮಸ್ ಈ ಹೋಟೆಲ್

udayavani youtube

ಕಾಪು ಸರ್ವೀಸ್ ರಸ್ತೆಯಲ್ಲಿ ರಿಕ್ಷಾ ಚಾಲಕ ಮತ್ತು ಬೈಕ್ ಸವಾರನ ನಡುವೆ ಹೊಡೆದಾಟ

udayavani youtube

ದರ್ಶನ್ ಗ್ಯಾಂಗ್ ಕ್ರೌರ್ಯ ಹೇಗಿತ್ತು ಗೊತ್ತಾ..? ವೈರಲ್ ಆಡಿಯೋ ಇಲ್ಲಿದೆ

ಹೊಸ ಸೇರ್ಪಡೆ

7-

Gundlupete: ಕುಡಿದ ಮತ್ತಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ

Kanchanjunga Express ರೈಲಿಗೆ ಗೂಡ್ಸ್ ರೈಲು ಡಿಕ್ಕಿ; 5 ಮೃತ್ಯು, 25ಕ್ಕೂ ಹೆಚ್ಚು ಗಾಯ

Kanchanjunga Express ರೈಲಿಗೆ ಗೂಡ್ಸ್ ರೈಲು ಡಿಕ್ಕಿ; 5 ಮೃತ್ಯು, 25ಕ್ಕೂ ಹೆಚ್ಚು ಗಾಯ

b-c-patil

Price Hike; ಸರ್ಕಾರ ಜನರನ್ನು ನೇರವಾಗಿ ಸುಲಿಗೆ ಮಾಡುತ್ತಿದೆ…: ಬಿ.ಸಿ.ಪಾಟೀಲ್ ಆಕ್ರೋಶ

6-karajola

Holalkere: ರಾಜ್ಯ ಸರ್ಕಾರ ಬೆಲೆ ಏರಿಕೆ ನೀತಿ ಖಂಡಿಸಿ ಗೋವಿಂದ ಕಾರಜೋಳ ಆಕ್ರೋಶ

Renukaswamy Case; ಪಾರದರ್ಶಕ ವಿಚಾರಣೆಯಾಗಲಿ…: ದರ್ಶನ್ ಬಂಧನದ ಬಗ್ಗೆ ಉಪೇಂದ್ರ ಮಾತು

Renukaswamy Case; ಪಾರದರ್ಶಕ ವಿಚಾರಣೆಯಾಗಲಿ…: ದರ್ಶನ್ ಬಂಧನದ ಬಗ್ಗೆ ಉಪೇಂದ್ರ ಮಾತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.