ನೀ ಬರುವ ದಾರಿಯಲ್ಲಿ ಹೃದಯ ಹಾಸಿ ನಿಲ್ಲುವೆ…!


Team Udayavani, Feb 13, 2018, 3:20 PM IST

hrudaya-hasi-nilluve.jpg

ನಿನ್ನ ನುಡಿಯಲ್ಲಿ ಜೇನ ಸಿಹಿ ಅಡಗಿದೆ. ನಿನ್ನ ಸ್ಪರ್ಶದಲ್ಲಿ ತಾಯ ಮಮತೆ ತುಂಬಿದೆ. ನಿನ್ನ ಕಣ್ಣ ತುದಿಯಲ್ಲಿ ಸಾವಿರ ಸಾಂತ್ವನದ ಹಾರೈಕೆಗಳಿವೆ. ಎದೆ ತುಂಬ ನೋವು ತುಂಬಿಕೊಂಡಿದ್ದರೂ, ಹೃದಯ ಗಾಯಗೊಂಡು ಚೀರುತ್ತಿದ್ದರೂ, ಮನಸ್ಸು ಮೌನವಾಗಿ ರೋದಿಸುತ್ತಿದ್ದರೂ, ನಿನ್ನ ನೆನಪಿನ ಮಡಿಲಿಗೆ ಬಿದ್ದ ತಕ್ಷಣ, ಸಾವಿರ ನೋವುಗಳು ಮಂಜಿನಂತೆ ಕರಗಿ ಹೋಗುತ್ತವೆ. 

ನನ್ನ ಪ್ರೀತಿಯ ಹುಡುಗಿ…..
ಪ್ರಯತ್ನಪೂರ್ವಕವಾಗಿ ನಿದ್ರಿಸಲು ಯತ್ನಿಸುತ್ತಿದ್ದೇನೆ. ನಿದ್ದೆ ಹತ್ತಿರ ಸುಳಿಯುತ್ತಿಲ್ಲ. ಕತ್ತಲು ಬೆಳೆಯುತ್ತಿದೆಯೇನೋ ಎನ್ನಿಸುತ್ತಿದೆ. ಎಚ್ಚರವಿದ್ದಾಗ ಎದುರಿಗೆ ನಿಂತು, ಕಣ್ಣು ಮುಚ್ಚಿದಾಗ ರೆಪ್ಪೆಯ ಮೇಲ್ಗಡೆ ಕೂತು ನೀನು ಕಾಡುವ ಪರಿ ನಿಜಕ್ಕೂ ವಿಸ್ಮಯ! ರಾತ್ರಿಗಳು ಯಾಕಾದರೂ ಬರುತ್ತಾವೋ? ಈ ಅಸಹನೀಯ ಒಬ್ಬಂಟಿತನ ಕಿತ್ತು ತಿನ್ನುತ್ತಿದೆ. ಮನಸ್ಸು ನಿನ್ನ ಮೃದು ಸ್ಪರ್ಶಕ್ಕೆ ಹಾತೊರೆಯುತ್ತಿದೆ. ನಿನಗೂ ಹಾಗೆನಿಸುತ್ತಿರಬಹುದೇ? ಗೊತ್ತಿಲ್ಲ.

ಮನೆಗೆ ಕಾಲಿಟ್ಟ ತಕ್ಷಣ ಮೌನದ ಮೂರ್ತಿಯಾಗುವ ನಾನು, ನಿನ್ನೊಂದಿಗೆ ಮಾತ್ರ ಹಠಕ್ಕೆ ಬಿದ್ದವನಂತೆ ಮಾತಿಗಿಳಿಯುತ್ತೇನೆ. ನನ್ನ ಸುಖ-ದುಃಖಗಳೆರಡನ್ನು ನಿನ್ನೆದುರು ಬಿಚ್ಚಿಡುತ್ತೇನೆ. ನಿನ್ನ ಸಂತೈಕೆಗೆ, ನಿನ್ನ ನೇವರಿಕೆಗೆ ಉಸಿರು ಬಿಗಿ ಹಿಡಿದು ಕಾಯುತ್ತೇನೆ. ನಿನ್ನ ನುಡಿಯಲ್ಲಿ ಜೇನ ಸಿಹಿ ಅಡಗಿದೆ. ನಿನ್ನ ಸ್ಪರ್ಶದಲ್ಲಿ ತಾಯ ಮಮತೆ ತುಂಬಿದೆ. ನಿನ್ನ ಕಣ್ಣ ತುದಿಯಲ್ಲಿ ಸಾವಿರ ಸಾಂತ್ವನದ ಹಾರೈಕೆಗಳಿವೆ. ಎದೆ ತುಂಬ ನೋವು ತುಂಬಿಕೊಂಡಿದ್ದರೂ, ಹೃದಯ ಗಾಯಗೊಂಡು ಚೀರುತ್ತಿದ್ದರೂ, ಮನಸ್ಸು ಮೌನವಾಗಿ ರೋದಿಸುತ್ತಿದ್ದರೂ, ನಿನ್ನ ನೆನಪಿನ ಮಡಿಲಿಗೆ ಬಿದ್ದ ತಕ್ಷಣ, ಸಾವಿರ ನೋವುಗಳು ಮಂಜಿನಂತೆ ಕರಗಿ ಹೋಗುತ್ತವೆ. ಅಂತರಂಗದಲ್ಲಿ ಕವಿದ ದುಃಖದ ಕಾರ್ಮೋಡಗಳೆಲ್ಲ ಸರಿದು, ಸ್ವತ್ಛಂದ ಮನದ ಮುಗಿಲಲ್ಲಿ ನಿನ್ನೊಂದಿಗೆ ಕಳೆದ, ಗತಕಾಲದ ಘಟನೆಗಳೆಲ್ಲ ಮೂಡಿ ಲವಲವಿಕೆಯನ್ನು ತಂದೊಡ್ಡುತ್ತವೆ.

ನಿನ್ನಲ್ಲಿ ಅದೆಂಥದೋ ಮೋಡಿ ಅಡಗಿದೆ. ಬದುಕನ್ನು ಬೆಳಕಾಗಿಸುವ, ಬೇಸರಕ್ಕೆ ಸೊಗಸು ತುಂಬುವ, ಸಕಲ ಕಷ್ಟಗಳಿಗೂ ಬೆಂಗಾವಲಾಗಿರುವ, ಮೈ ಮನಗಳಿಗೆ ವಿಶಿಷ್ಟವಾದ ಚೈತನ್ಯ ತುಂಬುವ ಅದ್ಭುತವಾದ ದಿವ್ಯ ಔಷಧಿ ನಿನ್ನಲ್ಲಿದೆ. ನನ್ನೆದೆಯಲ್ಲಿ ಒಪ್ಪ ಓರಣವಾಗಿ ಬಿಡಿಸಿಟ್ಟ ಬಣ್ಣದ ರಂಗೋಲಿ ನೀನು. ನನ್ನ ಹೃದಯ ಬಡಿತ, ನನ್ನುಸಿರು, ಜೀವದ ಜೀವ ನೀನೇ ಆಗಿರುವಾಗ, ನಿನ್ನಗಲುವ ಸಂದರ್ಭವೇ ಬರದು. ನಿನ್ನ ಬರುವಿಕೆಗೆ ಕಣ್ಣ ನೆಟ್ಟು, ಜೀವ ಅಂಗೈಯಲ್ಲಿ ಹಿಡಿದು, ಕನಸುಗಳ ಹರವಿ ಕಾಯುತ್ತೇನೆ. ನನಗೆ ಗೊತ್ತು, ನನ್ನ ನಿರೀಕ್ಷೆಯನ್ನು ನೀನು ಹುಸಿಗೊಳಿಸಲಾರೆ. ಹೆಚ್ಚು ದಿನ ನನ್ನನ್ನು ಕಾಯಿಸಲಾರೆ. ಬಿರಿದ ಧರಣಿಯ ತಣಿಸಲು, ವರುಣರಾಯ ಧರೆಗಿಳಿದು ಓಡೋಡಿ ಬಂದಂತೆ, ರಚ್ಚೆ ಹಿಡಿದ ಮಗುವ ಕಂಡು ತಾಯಿ ದುಗುಡದಿಂದ ಎತ್ತಿಕೊಂಡು ರಮಿಸಿದಂತೆ, ಕಡಲ ಕೆನೆತಕ್ಕೆ ಹುಣ್ಣಿಮೆ ಹರಿದು ಬಂದಂತೆ ಬಂದೇ ಬರುತ್ತೀಯ; ಅಲ್ಲಿಯವರೆಗೂ ಕಾಯುತ್ತೇನೆ!

ಬಾನ ಹಕ್ಕಿ ಹಾಡುವ ವೇಳೆ
ಉದಯ ರವಿಯು ಮೂಡುವ ವೇಳೆ
ನೀ ಬರುವ ದಾರಿಯಲ್ಲಿ
ಹೃದಯ ಹಾಸಿ ನಿಲ್ಲುವೆ…!

-ನಾಗೇಶ್‌ ಜೆ. ನಾಯಕ 

ಟಾಪ್ ನ್ಯೂಸ್

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

1-wqe-qweq

Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

6-Fibromyalgia

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.