ನನ್ನ ಎದಿ ಬ್ಯಾನಿಗ ನೀನ, ಡಾಕ್ಟ್ರು


Team Udayavani, Jun 5, 2018, 6:00 AM IST

c-9.jpg

ಈ ಸಲ ಮಲ್ಲಿಗೆ ಹೂವ ತರಾಂವ ನಾ. ಇಷ್ಟು ದಿನ ಚಾಕ್ಲೇಟು ಪಾಕ್ಲೇಟು ತಂದು ನನಗೂ ಬ್ಯಾಸರಗೇತಿ. ರೆಡಿಮೇಡ್‌ ಪ್ಯಾಕ್ಡ್ ಪ್ರೀತಿ ಮ್ಯಾಲೆ ನನಗ ನಂಬಿಕೆ ಇಲ್ಲ. ತಾಜಾ ತಾಜಾ ಕಂಪಿನ ಇಂಪಿನ ಮಲ್ಲಿಗೆ ಹೂವ ಕೂಡ ನಿನ್ನ ಮುಂಗುರುಳನ್ಯಾಗ ನನ್ನ ಹೃದಯದ ಜೋಕಾಲಿ ಆಡಬೇಕ. ಮತ್ತ ನಿನ್ನ ಗಲ್ಲದ ಗುಳಿಯಾಗ ನನ್ನ ಮನಸ್ಸು ಬೆಚ್ಚಗ ಕುಂತುಬಿಡಬೇಕು ಅನ್ನೂ ಮನಸಾಗೇತಿ

ಡಿಯರ್‌ ಡಾಕ್ಟರ್‌,     
ಏನ್‌ ಇಂವ ನನ್ನನ್ನೇನು ಟಿವಿ ಪೋ›ಗ್ರಾಮರ್‌ ಅನ್ಕೊಂಡಾನಾ ಏನ್‌ ಕಥಿ? ಅನ್ನಬ್ಯಾಡ. ನಿನ್ನ ನೆನಪಾದರ ಸಾಕು; ಎದಿಯೊಳಗ ಬಡಿದಾಟ ಒಮ್ಮೊಮ್ಮಿ ಹೆಚ್ಚಾದಂಗ ಒಮ್ಮೊಮ್ಮಿ ನಿಂತಂಗ ಆಗುತ್ತ. ಈ ಪರಿ ಆಗಾಕುಂತೈತಿ ಅಂದ್ರ ಅದು ಪ್ರೀತಿ ಇರಬಹುದು, ಇಲ್ಲಾಂದ್ರ ವಿರಹ ಕಾಡಿರಬಹುದು ಅನಿಸುತ್ತ ನನಗ.     

ಸಧ್ಯಕ್ಕ ಇವೆರಡರ ನಡುವೆ ಸಿಕ್ಕಾಂಡಾಂವನಾ ಅಥವ ನಿನ್ನೊಳಗೆ ಕಳುª ಹೋದಾಂವನಾ ಅನ್ನೂದು ತಿಳಿವಲ್ದಾಗಿ ಈ ಪತ್ರ ಬರದೇನಿ. ನನ್ನ ಎದಿಬ್ಯಾನಿಗೆ ನೀನ ಡಾಕ್ಟ್ರು ಅನ್ನೂದು ನನ್ನ ಬಲವಾದ ನಂಬಿಕೆ. ಇಷ್ಟ ನಂಬಿಕೆ ನಿನ್ನ ಮ್ಯಾಲ ಇಟ್ಟಿನಂದ್ರ ನೀನ ತಿಳಕೊ ನಾ ಏನಾಗಿರಬೇಕ? ಅಲ್ಲ, ಈ ಹುಡುಗೀರಿಗೆ ಯಾಕ ಇಂತ ಬುದ್ಧಿ ಅನ್ನೂದ ತಿಳಕೊಂಡ ಗಣಮಗ ನಾನನ್ನಾಂವ ಈ ಭೂಮಿ ಮ್ಯಾಲೆ ಇಲ್ಲ ಬಿಡು. ಹಂಗಂತ ನೀನು ನನ್ನ ಮ್ಯಾಲ ಜೀವಾಂನ ಇಟಗೊಂಡಿಯಲ್ಲ, ಅದು ಸುಳ್ಳು ಅನ್ನಾಕ ನನಗ ಮನಸಿಲ್ಲ.       

ಏನಾರ ಆಗಲಿ, ಈ ಸಲ ಸುಬ್ರಮಣ್ಯ ಷಷ್ಠಿ ಜಾತ್ರ್ಯಾಗ ನಿನ್ನ ಹೆಸರು ನನ್ನ ಎದಿ ಮ್ಯಾಲೆ ಹಚ್ಚಿ ಹಾಕಿಸ್ಕೊನಾಂವ ಇದೀನಿ. ಯಾಕ? ಒಳಗಿಲ್ಲೇನು ಅಂತ ಅನುಮಾನ ಪಡಬ್ಯಾಡ. ಜೀಂವಕ್ಕ ತ್ರಾಸಕ್ಕೆತಿ. ಏನಪ ಎಡವಟ್‌ ಸಿದ್ಲಿಂಗ ಟ್ಯಾಟೂ ಹಾಕೊಸ್ಕೋಳ್ಳೊ ಕಾಲ್ದಾಗ ಇರಾಕಿ ನಾ. ನೀನು ನೋಡಿದ್ರ ದ್ವಾಪರದ ಕೃಷ್ಣನಂಗ ಅದೀಯಲ್ಲ ಅಂತೀ ಅಂತಾನೂ ಗೊತ್ತು ನನಗ. ಆದ್ರ ನನ್ನ ಮನಸ್ಸಿನ್ಯಾಗ ಹಚ್ಚ ಹಸಿರಾಗಿ ಇರಬೇಕ ನೀ. ಅಲ್ಲಿ ಅರಳ್ಳೋ ಮಲ್ಲಿಗ ಹೂವಿನ ಪರಿಮಳಂಗ ನನ್ನ ಪ್ರೀತಿ ಅಂತ ಹೇಳಾಂವ ನಾ. ತಿಳಿತಾ, ಇಲ್ಲವಾ ಹೇಳು. ತಿಳಿಲಿಲ್ಲ ಅಂದ್ರ ಖುದ್ದು ಭೇಟಿ ಆಗಿ ನಿನ್ನ ಕಣ್ಣಗಿ ಕಟ್ಟುವಂಗ ಹೇಳೆ¤àನಿ. ಈ ಸಲ ಮಲ್ಲಿಗೆ ಹೂವ ತರಾಂವ ನಾ. ಇಷ್ಟು ದಿನ ಚಾಕ್ಲೇಟು ಪಾಕ್ಲೇಟು ತಂದು ನನಗೂ ಬ್ಯಾಸರಗೇತಿ. ರೆಡಿಮೇಡ್‌ ಪ್ಯಾಕ್ಡ್ ಪ್ರೀತಿ ಮ್ಯಾಲೆ ನನಗ ನಂಬಿಕೆ ಇಲ್ಲ. ತಾಜಾತಾಜಾ ಕಂಪಿನ ಇಂಪಿನ ಮಲ್ಲಿಗೆ ಹೂವ ಕೂಡ ನಿನ್ನ ಮುಂಗುರುಳನ್ಯಾಗ ನನ್ನ ಹೃದಯದ ಜೋಕಾಲಿ ಆಡಬೇಕ. ಮತ್ತ ನಿನ್ನ ಗಲ್ಲದ ಗುಳಿಯಾಗ ನನ್ನ ಮನಸ್ಸು ಬೆಚ್ಚಗ ಕುಂತುಬಿಡಬೇಕು ಅನ್ನೂ ಮನಸಾಗೇತಿ, ಏನಂತಿ? ಲಗೂನ ಹೇಳು.    

ಥೋ, ತಲಿಕೆಟ್ಟವ°ಂಗ ಮಾತಾಡಕತ್ತೀನಿ. ಬ್ಯಾಸರ ಮಾಡಾಬ್ಯಾಡ. ಮೊದಲ ಬರದೇನಿ ನನಗೇನೂ ತಿಳೀವಲುª ಅಂತ. ನಿನ್ನ ಬಿಟ್ಟು ದೂರ ಅದೀನಲ್ಲ ಅದಕ್ಕ ಹಿಂಗಾಗಕತ್ತೆçತಿ ಅಂದ್ರ ಅದು ವಿರಹಾನಾ ಅಲ್ಲದ ಮತ್ತಿನ್ನೇನು? ವಿರಹ ಆಗೇತಿ ಅಂದ್ರ ಅದರ ಹಿಂದ ಪ್ರೀತಿ ಐತಿ ಅಂತಾನಾ ಅಲ್ಲೇನು? ಹಂಗಿದ್ಮಾಲೆ ನೀನರ ನಮ್ಮೂರಿಗೆ, ಬಾ. ಇಲ್ಲಂದ್ರ  ನಾನರ ನಿಮ್ಮೂರಿಗೆ ಬರ್ತಿನಿ. ಒಮ್ಮೆ ನಿನ್ನನ್ನು ನೋಡುವಾಸೆ ಎಲ್ಲಿರುವೆ ಅನ್ನುವ ಹಾಡಿಗೆ ಎದೆ ತಾಳ ಹಾಕಾಕುಂತೈತಿ. ನೀನು ಸೇರಿದರ ನಿನ್ನ ಹೆಜ್ಜೆಯ ಗೆಜ್ಜ ನಾದ ಸೇರುತೈತಿ. ಹಾಡಿಗೆ ಮ್ಯೂಸಿಕ್‌ ಸಿಕ್ಕಂಗಾಗುತ್ತ. ಲಗೂನ ಪತ್ರ ಬರೀ…                              

ಪೋಸ್ಟ್‌ಮ್ಯಾನ್‌ ಜೀಂವಾ ತಿನ್ಕೋತಾ ಕಾಯುವ 

ನಿನ್ನಾಂವ  

ಟಾಪ್ ನ್ಯೂಸ್

ವಯನಾಡಲ್ಲಿ ರಾಹುಲ್‌ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ

Kerala ವಯನಾಡಲ್ಲಿ ರಾಹುಲ್‌ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ

ಸಂಸದ ಶ್ರೀನಿವಾಸ್‌ ಪ್ರಸಾದ್‌ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು

ಸಂಸದ ಶ್ರೀನಿವಾಸ್‌ ಪ್ರಸಾದ್‌ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ವಯನಾಡಲ್ಲಿ ರಾಹುಲ್‌ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ

Kerala ವಯನಾಡಲ್ಲಿ ರಾಹುಲ್‌ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ

ಸಂಸದ ಶ್ರೀನಿವಾಸ್‌ ಪ್ರಸಾದ್‌ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು

ಸಂಸದ ಶ್ರೀನಿವಾಸ್‌ ಪ್ರಸಾದ್‌ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.