ಬಸ್ ಪ್ರಯಾಣ ದರ ಏರಿಕೆ ಅನಿವಾರ್ಯ: ಡಿ.ಸಿ.ತಮ್ಮಣ್ಣ
Team Udayavani, Sep 16, 2018, 6:50 AM IST
ಶಿವಮೊಗ್ಗ: ಪ್ರತಿದಿನವೂ ಡೀಸೆಲ್ -ಪೆಟ್ರೋಲ್ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿದೆ. ಇದರಿಂದ ಕೆಎಸ್ಆರ್ಟಿಸಿ, ಬಿಎಂಟಿಸಿ ನಷ್ಟ ಅನುಭವಿಸುತ್ತಿದ್ದು, ಅನಿವಾರ್ಯವಾಗಿ ಬಸ್ ಪ್ರಯಾಣ ದರ ಏರಿಸಬೇಕಾಗಿದೆ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಡೀಸೆಲ್ 58 ರೂ.ಇದ್ದದ್ದು ಈಗ 78 ರೂ ಆಗಿದೆ. ಇದರಿಂದಾಗಿ ವಾರ್ಷಿಕ 100 ಕೋಟಿಯಿಂದ 200 ಕೋಟಿ ನಷ್ಟವಾಗುತ್ತಿದೆ. ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವುದರಿಂದ ನಷ್ಟ ತಡೆಗೆ ಅನಿವಾರ್ಯವಾಗಿ ಬಸ್ ಪ್ರಯಾಣ ದರ ಏರಿಸಬೇಕಾದ ಸ್ಥಿತಿಯಿದೆ ಎಂದರು.
ಜತೆಗೆ, ಎಲ್ಲ ಬಸ್ ನಿಲ್ದಾಣಗಳಲ್ಲೂ ತಾಯಿ ಮಡಿಲು ಕೊಠಡಿ ಆರಂಭಿಸಲಾಗುವುದು. ಪ್ರತಿ ನಿಲ್ದಾಣದಲ್ಲೂ ಎಂಎಸ್ಐಎಲ್ ಉತ್ಪನ್ನಗಳ ಮಳಿಗೆಗಳನ್ನು ತೆರೆಯಲಾಗುವುದು. ಬಸ್ಗಳ ಹಳೇ ಚೆಸ್ಸಿಗೆ ಹೊಸ ಬಾಡಿ ಕಟ್ಟುವ ಯೋಜನೆ ಜಾರಿಗೆ ತಂದು ನಷ್ಟ ಸರಿದೂಗಿಸಲಾಗುವುದು ಎಂದರು.