ಹಾಡುಗಳು ಅಳಿಸುತ್ತಿವೆ,  ಸಂತೈಸುತ್ತಿವೆ


Team Udayavani, Jan 1, 2019, 12:30 AM IST

10.jpg

ಈ ಜಗತ್ತು ಯಾವಾಗ ಪ್ರೀತಿಸುವ ಜೀವಗಳನ್ನು ಒಂದು ಮಾಡಿದೆ ಹೇಳು? ನಿನ್ನ ಮನೆಯಲ್ಲಿ ನಿನ್ನನ್ನು ಕೂಡಿ ಹಾಕಿದರು. ನನ್ನ ಬೆನ್ನ ಮೇಲೆ ಬಾಸುಂಡೆಗಳು ಮೂಡಿದವು. ಆರ್ಕೆಸ್ಟ್ರಾದಿಂದ ಗೇಟ್‌ ಪಾಸ್‌ ನೀಡಲಾಯಿತು. ಏನೆಲ್ಲಾ ಆಗಿ ಹೋದವು ಆ ವಿಷಮ ಸನ್ನಿವೇಶದಲ್ಲಿ. ಆನಂತರ ಒಮ್ಮೆಯೂ ನಿನ್ನ ಮುಖ ನಾನು ಕಾಣಲೇ ಇಲ್ಲ.    

“ಕಾಣದ ಕಡಲಿಗೆ ಹಂಬಲಿಸಿದೆ ಮನ’ ಅಂತ ದೊಡ್ಡ ಧ್ವನಿಯಲ್ಲಿ, ಸಿ. ಅಶ್ವಥ್‌ ಅವರನ್ನೇ ಇಮಿಟೇಟ್‌ ಮಾಡುತ್ತಾ ಹಾಡುತ್ತಿದ್ದ ಘಳಿಗೆಯಲ್ಲೇ ಕಂಡವಳು ನೀನು. “ಅದೆಷ್ಟು ತನ್ಮಯತೆಯಿಂದ ಹಾಡ್ತೀರಿ ನೀವು’ ಅಂತ ನೀನು ಬೆನ್ನು ತಟ್ಟಿದ ಮೇಲೆ ಕಾಲು ನೆಲದ ಮೇಲೆ ನಿಲ್ಲಲಿಲ್ಲ. ಆಗಷ್ಟೇ ಅರಳಿದ ಕುಸುಮದ ಹಾಗೆ, ಮೊಗದ ಮೇಲೆ ತಾಜಾ ನಗು, ಬೆಳದಿಂಗಳಂಥ ಬಣ್ಣ, ನೋಡಿದಷ್ಟೂ ನಿಗೂಢವೆನಿಸುವ, ಏನನ್ನೂ ಬಿಟ್ಟು ಕೊಡದ ಬೊಗಸೆ ಕಣ್ಣುಗಳು, ಹಣೆ ಮೇಲೆ ಕಚಗುಳಿಯಿಡುತ್ತಿದ್ದ ಮುಂಗುರುಳು, ಕೆಂಪು ಚೂಡಿಯ ಮೇಲೆ ಬಿಳಿಯ ವೇಲ್‌ ಧರಿಸಿದ ನಿನ್ನನ್ನು ನೋಡಿದ ಮೇಲೆ, ಯಾವ ಹುಡುಗ ತಾನೆ ಪ್ರೀತಿಯಲ್ಲಿ ಬೀಳದೆ ಇರಬಲ್ಲ ಹೇಳು? ನನಗೂ ಅದೇ ಆಗಿದ್ದು! 

ವಿದ್ಯೆ ತಲೆಗೆ ಹತ್ತದೆ ಇದ್ದಾಗ, ತುತ್ತಿನ ಚೀಲ ತುಂಬಿಸಲು ನೆರವಾದದ್ದೇ ನನ್ನ ದನಿ. ಸ್ಥಳೀಯ ಆರ್ಕೆಸ್ಟ್ರಾದಲ್ಲಿ ಹಾಡುಗಾರನಾಗಿ ಸೇರಿ ಮದುವೆ, ರಿಸೆಪ್ಷನ್‌, ಮನರಂಜನಾ ಕಾರ್ಯಕ್ರಮಗಳಲ್ಲಿ ಹಾಡುತ್ತಲೇ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೆ.

ಅಂದು ನಮ್ಮಿಬ್ಬರ ಮಧ್ಯೆ ನಡೆದ ಮಾತು, ಅಭಿರುಚಿಗಳ ವಿನಿಮಯವೇ ಇಬ್ಬರನ್ನೂ ತೀರಾ ಹತ್ತಿರವಾಗಿಸಿತ್ತು. ಅದಾದ ನಂತರ ಪ್ರತಿ ಕಾರ್ಯಕ್ರಮದಲ್ಲೂ ನಿನ್ನ ಉಪಸ್ಥಿತಿ, ಹಾಡಿಗೆ ಮತ್ತಷ್ಟು ಹುರುಪು ನೀಡುತ್ತಿತ್ತು. “ಬಡವನಾದರೆ ಏನು ಪ್ರಿಯೆ, ಕೈತುತ್ತು ತಿನಿಸುವೆ’ ಎಂದು ನಾನು ಹಾಡುವಾಗ ನಿನ್ನ ಕಣ್ಣೊಳಗೆ ಸಣ್ಣಗೆ ಸುಳಿಯುವ ಚಕ್ರತೀರ್ಥ. “ನವಿಲೂರಿನೊಳಗೆಲ್ಲ ನೀನೆ ಬಲು ಚೆಲುವೆ ಅದಕೆ ನಮ್ಮಿಬ್ಬರಿಗೆ ನಾಳೆಯೇ ಮದುವೆ’ ಎಂದು ಹಾಡಿದಾಗ ನಾಚಿ ನೀರಾಗುತ್ತಿದ್ದ ನೀನು ಇನ್ನಷ್ಟು ಅಂದವಾಗಿ ಕಾಣುತ್ತಿದ್ದೆ. ನಾನು ಎದೆತುಂಬಿ ಹಾಡುತ್ತಿದ್ದ ಭಾವಗೀತೆಗಳೇ ನಮ್ಮಿಬ್ಬರ ಹೃದಯಗಳು ಒಂದಾಗಲು ಕಾರಣವಾಗಿದ್ದು ನನಗಿಂದಿಗೂ ಅಚ್ಚರಿ. 

ಕೇರಿಯ ಕೊನೆಯ ತಿರುವಿನಲ್ಲಿ ಈಗಲೋ ಆಗಲೋ ಬೀಳುತ್ತಿದ್ದ ಮುರುಕು ಗುಡಿಸಲಿನ ಹುಡುಗ ನಾನು. ನೀನೋ ಮಹಲಿನ ರಾಣಿ. ಆದರೆ ಪ್ರೀತಿ ಅರಳಲು ಅಂತಸ್ತು ಅಡ್ಡಿಯಾಗಲಿಲ್ಲ. “ನೀನು ಭಾವಗೀತೆಗಳನ್ನೇ ಏಕೆ ಹಾಡುತ್ತೀಯಾ?’ ಎಂದವಳಿಗೆ, “

ನನ್ನ ದುಃಖದ ಕ್ಷಣಗಳಲ್ಲಿ ಆಸರೆಯಾಗಿದ್ದು ಇದೇ ಭಾವಗೀತೆಗಳು. ಬದುಕಿನಿಂದ ಎದ್ದು ನಡೆದು ಬಿಡಬೇಕು ಅಂತ ತೀರಾ ಹತಾಶನಾದಾಗ ಕೈಡಿದು ಬದುಕಿಗೆ ಹುರುಪು ತುಂಬಿದ್ದೂ ಇವೇ ಗೀತೆಗಳು. ಈಗ ನೋಡು ನನಗೀಗ ಅವೇ ಅನ್ನ ಹಾಕುತ್ತಿವೆ’ ಅಂದಾಗ, “ಮೌನ ತಬ್ಬಿತು ನೆಲವ ಜುಮ್ಮೆನೆ ಪುಳಕಗೊಂಡಿತು ಧಾರಿಣಿ’ ಎನ್ನುವ ಹಾಗೆ ಗಟ್ಟಿಯಾಗಿ ತಬ್ಬಿಕೊಂಡ ನಿನ್ನ ತಲೆ ನೇವರಿಸುತ್ತಿದ್ದೆ.

ಭಾವಗೀತದ ದೋಣಿ ಹಾಯಾಗಿ ಹರಿಸುತ್ತಿದ್ದ ಘಳಿಗೆಯಲ್ಲೇ ಆಕಾಶ ಬಿಕ್ಕುವ ಸದ್ದು ಎದೆ ನಡುಗಿಸಿದ್ದು ಸುಳ್ಳಲ್ಲ. ಈ ಜಗತ್ತು ಯಾವಾಗ ಪ್ರೀತಿಸುವ ಜೀವಗಳನ್ನು ಒಂದು ಮಾಡಿದೆ ಹೇಳು? ನಿನ್ನ ಮನೆಯಲ್ಲಿ ನಿನ್ನನ್ನು ಕೂಡಿ ಹಾಕಿದರು. ನನ್ನ ಬೆನ್ನ ಮೇಲೆ ಬಾಸುಂಡೆಗಳು ಮೂಡಿದವು. ಆರ್ಕೆಸ್ಟ್ರಾದಿಂದ ಗೇಟ್‌ ಪಾಸ್‌ ನೀಡಲಾಯಿತು. ಏನೆಲ್ಲಾ ಆಗಿ ಹೋದವು ಆ ವಿಷಮ ಸನ್ನಿವೇಶದಲ್ಲಿ. ಆನಂತರ ಒಮ್ಮೆಯೂ ನಿನ್ನ ಮುಖ ನಾನು ಕಾಣಲೇ ಇಲ್ಲ. ಈಗ ಕೊರಳ ಸೆರೆಯುಬ್ಬಿ “ಹೇಳಿ ಹೋಗು ಕಾರಣ ಹೋಗುವ ಮೊದಲು’ ಅನ್ನುವ ಹಾಡನ್ನಷ್ಟೇ ಹಾಡುತ್ತಿದ್ದೇನೆ. ಸಾಂತ್ವನಗೈಯಲು ಯಾರೂ ಇಲ್ಲ. ನೀನುಳಿಸಿ ಹೋದ ಭಾವಗೀತೆಗಳ ವಿನಹ.  

ನಾಗೇಶ್‌ ಜೆ. ನಾಯಕ, ಉಡಿಕೇರಿ

ಟಾಪ್ ನ್ಯೂಸ್

eshwarappa

Modi ಫೋಟೋ ಬಳಕೆ ಹಕ್ಕು 140 ಕೋಟಿ ಜನರಿಗೂ ಇದೆ: ಈಶ್ವರಪ್ಪ

1——asdsad

IPL ರೋಚಕ ಪಂದ್ಯ:ರಾಜಸ್ಥಾನ್‌ ವಿರುದ್ಧ ಹೈದರಾಬಾದ್ ಗೆ 1 ರನ್ ಜಯ

Boeing aircraft: ಬೋಯಿಂಗ್‌ ವಿಮಾನದ ದೋಷ ಪತ್ತೆ ಮಾಡಿದ್ದ ಮಾಹಿತಿದಾರ ದಿಢೀರ್‌

Boeing aircraft: ಬೋಯಿಂಗ್‌ ವಿಮಾನದ ದೋಷ ಪತ್ತೆ ಮಾಡಿದ್ದ ಮಾಹಿತಿದಾರ ದಿಢೀರ್‌

1-wewqewqe

BJP; ಭಾರತ ವಿಶ್ವ ಮಟ್ಟದಲ್ಲಿ ಮಿಂಚಿದ್ದು ಮೋದಿ ಅಭಿವೃದ್ಧಿಯಿಂದ: ಅಣ್ಣಾಮಲೈ

1-asdsad

Farmers ಸಂಪೂರ್ಣ ಸಾಲ ಮನ್ನಾ ಮಾಡದಿದ್ದರೆ ಬೀದಿಗಿಳಿದು ಹೋರಾಟ:ಯಡಿಯೂರಪ್ಪ

Jignesh Mevani: ಮೋದಿ ಪರಿವಾರ ಎಂದರೆ ಪ್ರಜ್ವಲ್‌ ರೇವಣ್ಣನಂಥವರಾ?; ಜಿಗ್ನೇಶ್‌

Jignesh Mevani: ಮೋದಿ ಪರಿವಾರ ಎಂದರೆ ಪ್ರಜ್ವಲ್‌ ರೇವಣ್ಣನಂಥವರಾ?; ಜಿಗ್ನೇಶ್‌

MP D.K. Suresh: ದೇವೇಗೌಡರ ಕುಟುಂಬವನ್ನು 420 ಎಂದು ಕರೆಯಲ್ಲ: ಡಿಕೆಸು

MP D.K. Suresh: ದೇವೇಗೌಡರ ಕುಟುಂಬವನ್ನು 420 ಎಂದು ಕರೆಯಲ್ಲ: ಡಿಕೆಸು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

eshwarappa

Modi ಫೋಟೋ ಬಳಕೆ ಹಕ್ಕು 140 ಕೋಟಿ ಜನರಿಗೂ ಇದೆ: ಈಶ್ವರಪ್ಪ

Exam 2

ಕೆಸೆಟ್‌: ತಾತ್ಕಾಲಿಕ ಅಂಕ ಪ್ರಕಟ

35

Siddaramaiah: ಚುನಾವಣೆ ಬಂದಾಗ ಮೋದಿಗೆ ರಾಜ್ಯದ ನೆನಪು; ಸಿದ್ದು

1——asdsad

IPL ರೋಚಕ ಪಂದ್ಯ:ರಾಜಸ್ಥಾನ್‌ ವಿರುದ್ಧ ಹೈದರಾಬಾದ್ ಗೆ 1 ರನ್ ಜಯ

Prajwal Revanna: ಪ್ರಜ್ವಲ್‌ ಶೀಘ್ರ ಬಂಧನ: ಡಾ| ಜಿ. ಪರಮೇಶ್ವರ್‌

Prajwal Revanna: ಪ್ರಜ್ವಲ್‌ ಶೀಘ್ರ ಬಂಧನ: ಡಾ| ಜಿ. ಪರಮೇಶ್ವರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.