ಮಕ್ಕಳಲ್ಲಿ ಧ್ವನಿಸಿದ ದ್ರೌಪದಿ ಪ್ರತಾಪ 


Team Udayavani, Jan 4, 2019, 12:30 AM IST

x-57.jpg

ಇತ್ತೀಚೆಗೆ ಬಾರ್ಕೂರಿನಲ್ಲಿ ದೇವಾಡಿಗರ ಸಮಾಜ ಕೋಟೇಶ್ವರ ವಲಯದವರ ಸಂಯೋಜನೆಯಲ್ಲಿ ಯಶಸ್ವಿ ಕಲಾವೃಂದ (ರಿ.)ಕೊಮೆ, ತೆಕ್ಕಟ್ಟೆ ಕಲಾವೃಂದದ ಮಕ್ಕಳಿಂದ “ದ್ರೌಪದಿ ಪ್ರತಾಪ’ ತಾಳಮದ್ದಲೆ ಪ್ರದರ್ಶನಗೊಂಡಿತು. ಪ್ರಾಚಾರ್ಯ ಕೆ.ಪಿ. ಹೆಗಡೆ, ಲಂಬೋದರ ಹೆಗಡೆಯವರ ಜಂಟಿ ಭಾಗವತಿಕೆಗೆ ಲೋಹಿತ್‌ ಕೊಮೆ ಮತ್ತು ಸುದೀಪ್‌ ಉರಾಳ ಮದ್ದಲೆ ಚಂಡೆ ಮೂಲಕ ಸಾಥ್‌ ಕೊಟ್ಟರು. “ಕೇಳಿರಯ್ಯ ಸಹೋದರಾಧ್ಯರು…’ ಮಧ್ಯಮಾವತಿ ಪದ್ಯಕ್ಕೆ ಧರ್ಮರಾಯನಾಗಿ ಮಾ| ಪ್ರತೀಕ್‌ ಗಾಣಿಗ ಶೃತಿಬದ್ಧ ಆರಂಭಕೊಟ್ಟು ಆಕರ್ಷಿಸಿದರು. ತಮ್ಮಂದಿರಾದ ಭೀಮಾರ್ಜುನರನ್ನೊಳಗೊಂಡು ಒಡ್ಡೋಲಗ ಕೊಟ್ಟು ಭಾರತ ಯುದ್ಧ ಗೆದ್ದವರಾರು ಎಂಬ ಪ್ರಶ್ನೆಗೆ ಭೀಮಾರ್ಜುನರ ಆರ್ಭಟ ಪ್ರೇಕ್ಷಕರ ಹುಬ್ಬೇರುವಂತೆ ಮಾಡಿತು. ನಿರ್ಭೀತ ಧ್ವನಿಯಿಂದ ತಾಮೇಲು-ನಾಮೇಲು ಎಂಬ ಕಿತ್ತಾಟ ಯಾವ ಅರ್ಥದಾರಿಗೂ ಕಡಿಮೆ ಇಲ್ಲವೆಂಬಂತೆ ಪ್ರಸಂಗದ ಒಳತಿರುಳನ್ನು ಅರಿತು ಪ್ರದರ್ಶಿಸಿದ ರೀತಿ ಮನೋಜ್ಞವಾಗಿತ್ತು. ಭೀಮಾರ್ಜುನರಾಗಿ ರಂಗದಲ್ಲಿ ಗುರುತಿಸಿಕೊಂಡವರು ಕು| ಅನನ್ಯ ಮತ್ತು ಮಾ| ಸಾತ್ಯಕಿ ಪಂಜಿಗಾರು. ಭೀಮಾರ್ಜುನರ ಘನಘೋರ ಯುದ್ಧವನ್ನು ತಡೆಯುವುದಕ್ಕೆ ಬಂದವರು ನಾರದನಾಗಿ ಮಾ| ಮಿಥುನ್‌ ದೇವಾಡಿಗ. ವಿವೇಕ ಅರಿಯದ ಭೀಮಾರ್ಜುನರನ್ನು ಕೃಷ್ಣನಲ್ಲಿಗೆ ಕೊಂಡೊಯ್ದರೆ ಕು| ಪೂಜಾ ಆಚಾರ್‌ ಕೃಷ್ಣನಾಗಿ ಪ್ರಸಂಗದ ಕೊನೆಯ ತನಕವೂ ನಿರಾಳವಾಗಿ ವಸ್ತುಸ್ಥಿತಿಯನ್ನು ಎಳೆಎಳೆಯಾಗಿ ಬಿಡಿಸಿಕೊಟ್ಟರೂ ಪಥ್ಯವಾಗದಾಗ 18 ದಿನಗಳ ಭಾರತ ಯುದ್ಧವನ್ನು ಕಂಡಿರುವುದು ಬಬ್ರುಸೇನನ ರುಂಡವೆಂದು ಅಲ್ಲಿಗೆ ಕರೆದೊಯ್ದರೆ ಬಬ್ರುಸೇನನಾಗಿ ಅರ್ಥ ಹೇಳಿದವರು 5 ವರ್ಷದ ಬಾಲಕಿ ಕು| ಪರಿಣಿತ ವೈದ್ಯ. ಕೃಷ್ಣ ನಾರದರಲ್ಲಿ ಸಮಸ್ಯೆ ಬಗೆಹರಿಯಲಾಗದಾಗ ಮತ್ತೆ ಕಾಳಗವೇ ಏರ್ಪಟ್ಟು ಕೊನೆಗೂ ಭೀಮನಿಗೆ ಸೋಲಾದಾಗ ಮಡದಿ ದ್ರೌಪದಿಯನ್ನು ಕರೆಸಿ ಅರ್ಜುನನೊಂದಿಗೆ ಕಾಳಗಕ್ಕಿಳಿಸಿದನು. ವಲ್ಲಭನಲ್ಲಿ ಯುದ್ಧ ಸಲ್ಲವೆಂದು ಸಾರಿ ಸಾರಿ ಹೇಳಿದರು ಭೀಮ ಕೇಳದಾದಾಗ ದ್ರೌಪದಿಗೆ ಪತಿಯಲ್ಲಿ ಸಮರಕ್ಕಿಳಿಯುವುದು ಅನಿವಾರ್ಯವಾಯಿತು. ತಡವಿಲ್ಲವೆಂಬಂತೆ ನೇರವಾಗಿ ಪತಿ ಅರ್ಜುನನಲ್ಲಿಗೆ ಬಂದು ನೀರಾ ನಿನಗೆ ನಮಸ್ಕಾರ… ಎಂದು ಔಪಚಾರಿಕ ನಮಸ್ಕಾರ ಹಾಕಿ ಇದಿರಾದವಳು ದ್ರೌಪದಿಯಾಗಿ ಕು| ಪಂಚಮಿ ವೈದ್ಯ. ಅರ್ಜುನ ಸೋತಾಗ ಕೃಷ್ಣನನ್ನು ನೇರವಾಗಿ ಕರೆಸಲು ಮನಸ್ಸಿಲ್ಲದಾಗ ಮಡದಿ ಸೌಭದ್ರೆಯನ್ನು ದ್ರೌಪದಿಯೊಂದಿಗಿನ ಸಮರಕ್ಕೆ ಹುರಿದುಂಬಿಸುತ್ತಾನೆ. ಅರ್ಜುನ ಕರೆದಾಗ ಮಾತನಾಡ ಲಾರಂಬಿಸಿದ ಸುಭದ್ರಾ ಪಾತ್ರದಾರಿ ಕು| ಪ್ರಣಮ್ಯಾ ಬಾಯಿ ಮುಚ್ಚಿಕೊಂಡದ್ದೇ ದ್ರೌಪದಿಯೊಂದಿಗೆ ಸೋತಾಗ. ಮಾತಿನ ಚಕಮಖೀ, ಹೆಂಗಸರ ರಂಪಾಟ, ರಂಗದಲ್ಲಿ ವಿಶೇಷವಾಗಿ ನಿರೂಪಿಸಿದ ಬಾಲಕಿಯರು ಮುಂದಿನ ಕಲಾರಂಗಕ್ಕೆ ಉತ್ತಮ ಭವಿಷ್ಯ ಕೊಡಬಲ್ಲರು ಎಂದು ತೋರಿಸಿಕೊಟ್ಟರು. ಎಲ್ಲರೂ ದ್ರೌಪದಿಯಲ್ಲಿ ಕೈಸೋತಾಗ ಬಲರಾಮನಾಗಿ ಕು| ನಿಶಾ ಮಲ್ಯಾಡಿ ಏರು ಶೃತಿಯ ಮಾತುಗಾರಿಕೆಯಲ್ಲಿ ರಂಗೇರಿಸಿದರು. ಬಳಿಕ ಮತ್ತೆ ಈಶ್ವರ ಪಾರ್ವತಿಯರಾಗಿ ಮಾ| ಸಾತ್ಯಕಿ ಮತ್ತು ಕು| ಧರಣಿ ಬಿರುಸಿನ ಮಾತಿನೊಂದಿಗೆ ಮಂಗಳ ಹಾಡಿದರು. ಕೊçಕೂರು ಸೀತಾರಾಮ ಶೆಟ್ಟಿಯವರ ನಿರ್ದೇಶನದಲ್ಲಿ ಪ್ರಥಮ ಬಾರಿಯ ಪ್ರದರ್ಶನವಾಗಿ ರಂಗದಲ್ಲಿ ಚಿಂದಿ ಉಡಾಯಿಸಿದ ಕೀರ್ತಿ ಯಶಸ್ವಿ ಮಕ್ಕಳದ್ದು.

ಪ್ರಶಾಂತ್‌ ಮಲ್ಯಾಡಿ 

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.