ಒಂದೇ ಒಂದ್ಸಲ ಮಾತಾಡಿಸ್ರಿ ಪ್ಲೀಸ್…
Team Udayavani, Jan 15, 2019, 12:30 AM IST
ಹಾಯ್ ಅಪರಿಚಿತೆ,
ನೀವು ಯಾರೆಂದು ನನಗೆ ಗೊತ್ತು. ಆದ್ರೆ, ನಾನು ಯಾರು ಎಂದು ನಿಮಗೆ ಗೊತ್ತಿಲ್ಲ. ನಿಮ್ಮ ಪರಿಚಯ ಹೇಗಾಯ್ತು ಅಂತ ನಾನೇ ಹೇಳ್ತೀನಿ ಕೇಳಿ.
ಆವತ್ತೂಂದಿನ ನಾನು ಸುಮ್ಮನೆ ಕೂತು ಟಿಕ್ಟಾಕ್ನಲ್ಲಿ ವಿಡಿಯೋಗಳನ್ನು ನೋಡುತ್ತಿದ್ದೆ. ಆಗ ನನ್ನಿಷ್ಟದ ಹಾಡು ಕಾಣಿಸಿತು. ಯಾರು ಪೋಸ್ಟ್ ಮಾಡಿರೋದು ಅಂತ ಪ್ರೊಫೈಲ್ ತೆರೆದು ನೋಡಿದರೆ, ಪ್ರಿಯಾ ಅಂತ ಇತ್ತು. ಅಲ್ಲಿ ನೀವು ಮಾಡಿರುವ ಎಲ್ಲಾ ವಿಡಿಯೋಗಳನ್ನು ನೋಡಿದೆ. ನೋಡುತ್ತಾ, ನೋಡುತ್ತಾ ಕಳೆದು ಹೋದೆ.
ಈಗ ನಿಮ್ಮ ವಿಡಿಯೋಗಳನ್ನು ನೋಡುವುದೇ ಗೀಳಾಗಿ ಹೋಗಿದೆ. ಮೊನ್ನೆ ಹಾಕಿದ್ದ ಮಳೆ ಹಾಡಿನ ಡಬ್ಸ್ಮ್ಯಾಶ್ ಅಂತೂ ಸೂಪರ್. ನನ್ನ ಮೊಬೈಲ್ ಸ್ಟೋರೇಜ್ ತುಂಬಾ ನಿಮ್ಮದೇ ವಿಡಿಯೋಗಳು ತುಂಬಿಕೊಂಡಿವೆ. ನಿಮ್ಮೂರು ಯಾವುದು ಅಂತ ತಲೆ ಕೆಡಿಸಿಕೊಂಡು, ಫೇಸ್ಬುಕ್ನಲ್ಲಿ ಜಾಲಾಡಿದಾಗ ನೀವು ದಾವಣಗೆರೆಯವರೆಂದು ತಿಳಿಯಿತು. ನಿಮ್ಮನ್ನು ಹುಡುಕಿಕೊಂಡು ದಾವಣಗೆರೆಗೂ ಬಂದಿದ್ದೆ ಅಂದರೆ ನೀವು ನಂಬುವುದಿಲ್ಲವೇನೋ! ಒಂದು ವಾರ ದಾವಣಗೆರೆಯ ಗೆಳೆಯನ ಮನೆಯಲ್ಲಿದ್ದು, ಸಾಧ್ಯವಾದ ಕಡೆಗಳಲ್ಲೆಲ್ಲ ಹುಡುಕಿ, ಊರಿಗೆ ವಾಪಸಾದೆ.
ಅದ್ಯಾಕೋ ಗೊತ್ತಿಲ್ಲ, ಒಮ್ಮೆಯಾದರೂ ನಿಮ್ಮನ್ನು ಭೇಟಿಯಾಗಬೇಕಂತ ಆಸೆಯಾಗಿದೆ. ಫೇಸ್ಬುಕ್ನಲ್ಲಿ ರಿಕ್ವೆಸ್ಟ್ ಕಳಿಸಿದ್ದೀನಿ, ಮೆಸೆಂಜರ್ನಲ್ಲಿ ಮೆಸೇಜ್ ಕೂಡ. ಕೊನೇಪಕ್ಷ ಒಮ್ಮೆಯಾದರೂ ನಂಜೊತೆ ಚಾಟ್ ಮಾಡಿ ಪ್ಲೀಸ್. ಇನ್ನೂ ಒಂದು ವಿಷಯ ಗೊತ್ತಾ,
ನಮ್ಮ ಮನೆಯಲ್ಲಿ ಹೊಸ ಟಿ.ವಿ. ತಂದಾಗ ಮೊದಲು ಪ್ಲೇ ಮಾಡಿದ್ದೇ, ನಿಮ್ಮ ವಿಡಿಯೊವನ್ನು. ಮೊಬೈಲ್ ಸ್ಕ್ರೀನ್ಗಿಂತ ಟಿ.ವಿ.ಯಲ್ಲಿ ಇನ್ನೂ ಚೆನ್ನಾಗಿ ಕಾಣಿಸ್ತೀರಿ.
ಪ್ರಿಯಾ, ಮತ್ತೂಮ್ಮೆ ಬೇಡಿಕೊಳ್ತಾ ಇದ್ದೀನಿ; ಈ ಪತ್ರವನ್ನು ಓದಿಯಾದರೂ ನನ್ನ ಜೊತೆ ಚಾಟ್ ಮಾಡಿ. ನಿಮ್ಮ ಮೆಸೇಜ್ಗಾಗಿ ಕಾಯುತ್ತಿರುತ್ತೇನೆ. ಹಾಂ, ಇನ್ನೊಂದೆರಡು ವಾರದಲ್ಲಿ ನಾನು ಮತ್ತೂಮ್ಮೆ ದಾವಣಗೆರೆಗೆ ಬರುತ್ತೇನೆ. ನಿಮ್ಮನ್ನು ಮೀಟ್ ಮಾಡಿಯೇ ವಾಪಸ್ ಹೋಗೋದು, ಸಿಕ್ತೀರ ಅಲ್ವಾ?
-ಹರ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ