ಡಾ|ಎಂ.ಎಸ್.ಭಟ್ಗೆ ಸದ್ಗುರು ಸಂಗೀತ ಶಾಲೆಯ ಗೌರವಾರ್ಪಣೆ
Team Udayavani, Feb 15, 2019, 12:30 AM IST
ವೈದ್ಯಕೀಯ ವೃತ್ತಿ ಯ ಮಧ್ಯೆಯೂ ಸಂಗೀತವನ್ನು ಪ್ರೀತಿಸುವವರು ಬಂಟ್ವಾಳದ ವೈದ್ಯ ಡಾ| ಎಂ.ಎಸ್. ಭಟ್. ಸರಳ ಸಜ್ಜನಿಕೆಯ ವ್ಯಕ್ತಿಯಾದ ಇವರ ಇಡೀ ಕುಟುಂಬವೇ ಸಂಗೀತ ಪರಂಪರೆ. ಎಂ.ಎಸ್. ಭಟ್ ಬಾಲ್ಯದಲ್ಲಿ ಕನ್ಯಾನದ ಬಜಕ್ಕಳ ವಿ| ಗಣಪತಿ ಭಟ್ ಇವರಲ್ಲಿ ಸಂಗೀತವನ್ನು ಕಲಿತರು. ಮುಂದೆ ಮೈಸೂರಿನಲ್ಲಿ ವಿ| ಕೆ.ಜೆ. ವೆಂಕಟಾಚಾರ್ ಮತ್ತು ವಿ|ಎನ್. ನಂಜುಂಡಸ್ವಾಮಿಯವರ ಅಯ್ಯನಾರ್ ಸಂಗೀತ ಶಾಲೆಯಲ್ಲಿ ಸಂಗೀತಾಭ್ಯಾಸವನ್ನು ಮುಂದುವರಿಸಿದರು. ಹಲವಾರು ಕಡೆ ಸಂಗೀತ ಕಾರ್ಯಕ್ರಮವನ್ನು ನೀಡಿದ ಅನುಭವವನ್ನೂ ಹೊಂದಿರುತ್ತಾರೆ. ಡಾ| ಎಂ.ಎಸ್. ಭಟ್ಗೆ ಫೆ.17ರಂದು ಮಂಗಳೂರಿನ ಶಾರದಾ ವಿದ್ಯಾಲಯದಲ್ಲಿ ಶ್ರೀ ಸದ್ಗುರು ಸಂಗೀತ ಶಾಲೆ, ಮಂಗಳೂರು ದಶಮಾನೋತ್ಸವದ ಸಂದರ್ಭದಲ್ಲಿ ಗೌರವಾರ್ಪಣೆ ಮಾಡಲಾಗುವುದು.
ಉಮಾಶಂಕರಿ