ಯಕ್ಷಕಲಾ ಸಂಸ್ಕೃತಿ – ಗಾನದೀಕ್ಷಾ ಪ್ರದಾನ


Team Udayavani, Mar 29, 2019, 6:00 AM IST

5

ಬೆಳುವಾಯಿ ಯಕ್ಷದೇವ ಮಿತ್ರಕಲಾ ಮಂಡಳಿಯ ಸಂಚಾಲಕ ಎಂ.ದೇವಾನಂದ ಭಟ್ಟರ ಪುತ್ರಿ ಕು| ಶುಭಾಂಜನಾ ಪ್ರಸ್ತುತ ಭಾಗವತಿಕೆಯ ವಿದ್ಯಾರ್ಥಿನಿ. ಸಾರ್ವಜನಿಕ ವೇದಿಕೆಯಲ್ಲಿ ಅವರ ಮೊದಲ ಹಾಡುಗಾರಿಕೆ ಇತ್ತೀಚೆಗೆ ಬೆಳುವಾಯಿಯಲ್ಲಿ ನಡೆಯಿತು.

ಗಂಭೀರ ಸ್ವರಭಾರವನ್ನು ಹೊಂದಿದ ಬಾಲಕಿಯ ಪದ್ಯ ಸುಲಲಿತವಾಗಿ ಸಾಗಿತು. ಹಿರಿಯ ಕಲಾವಿದರ ಮಧ್ಯದಲ್ಲಿ ಕುಳಿತ ಶುಭಾಂಜನಾ ಅಳುಕದೆ ಮೊದಲ ರಂಗ ಪ್ರಯೋಗದಲ್ಲಿ ಗೆದ್ದಿದ್ದಾರೆ. ಕಾಲೇಜು ವ್ಯಾಸಂಗದ ಜೊತೆ ಅವರ ಸಂಗೀತದ ಒಲವಿನ ಪರಿಶ್ರಮ ಫ‌ಲಿಸಿತು. ಅಜ್ಜ ಮಿಜಾರು ಸುಬ್ರಾಯ ಭಟ್ಟರು ಮತ್ತು ತಂದೆ ದೇವಾನಂದ ಭಟ್ಟರು ಮೇಳ ತಿರುಗಾಟದ ಅನುಭವಿ ಕಲಾವಿದರು. ಸೋದರ ಮಾವ ಚಂದ್ರಕಾಂತ ಮೂಡುಬೆಳ್ಳೆ ಪ್ರಸ್ತುತ ಸಾಲಿಗ್ರಾಮ ಮೇಳದ ಭಾಗವತರು. ಹೀಗೆ ಕಲಾ ಪ್ರಭಾವಲಯದಲ್ಲಿ ಬಾಲ್ಯ ಕಳೆದವರು ಶುಭಾಂಜನಾಗೆ ಕಲಾಭಿರುಚಿ ಸಹಜವಾಗಿ ಮೈಗೂಡಿತು. ಯಕ್ಷರಂಗದಲ್ಲಿ ಅವರು ಬೆಳೆಯುವ ಲಕ್ಷಣ ಇಲ್ಲಿ ಅಭಿವ್ಯಕ್ತವಾಯಿತು. ಲೀಲಾವತಿ ಬೈಪಾಡಿತ್ತಾಯ ಮೇಳ ಸಂಚಾರದ ಭದ್ರವಾದ ಹಿನ್ನೆಲೆ ಹೊಂದಿದವರು. “ಭೀಷ್ಮ ವಿಜಯ’ ಪ್ರಸಂಗದ “ಪರಮ ಋಷಿ ಮಂಡಲದಿ…’ ಮತ್ತು ದಕ್ಷಯಾಗದ ಕೆಲವು ಪದ್ಯಗಳನ್ನು ಲೀಲಾಜಾಲವಾಗಿ ತಮ್ಮ ಹಳೆಯ ಶೈಲಿಯಲ್ಲಿ ನಿರೂಪಿಸಿದರು. ತೆಂಕುತಿಟ್ಟಿನ ಬಲಿಪ ಪರಂಪರೆಯ ಪ್ರತಿನಿಧಿ ಶಿವಶಂಕರ ಭಾಗವತರ ಪ್ರಬಲವಾದ ಧ್ವನಿಯ ಪದ್ಯಗಳು ಮತ್ತು ರವಿಚಂದ್ರ ಕನ್ನಡಿಕಟ್ಟೆಯವರ ವೈವಿಧ್ಯ ರಾಗರಂಜನೆಯಲ್ಲಿ ಮೇಳೈಸಿದ ಸಂಗೀತ ರಸಧಾರೆ ಹೃದ್ಯವೆನಿಸಿತು. ಚೆಂಡೆ-ಮದ್ದಳೆಯಲ್ಲಿ ಚೈತನ್ಯ ಪದ್ಯಾಣ ಮತ್ತು ಶ್ರೀಧರ ವಿಟ್ಲ ಉತ್ತಮ ಗುಣಮಟ್ಟದ ಸಾಥಿಯಾದರು. ಸಾಮಾನ್ಯವಾಗಿ ಪ್ರಚಲಿತವಿರುವ ಭರತನಾಟ್ಯ ಪ್ರಥಮ ರಂಗಪ್ರವೇಶದ ಸಮಾರಂಭದಂತೆ “ಗಾನದೀಕ್ಷಾ ಪ್ರದಾನ’ ನೆರವೇರಿತು. ಬಲಿಪ ನಾರಾಯಣ ಭಾಗವತರು ಉದ್ಘಾಟಿಸಿದರು. ಲೀಲಾವತಿ ಬೈಪಾಡಿತ್ತಾಯ ಯಕ್ಷಗಾನ ಹಾಡುಗಾರಿಕೆಯ ಪ್ರಥಮ ಸೊಲ್ಲು “ಗಜಮುಖದವಗೆ ಗಣಪಗೆ………’ ಶುಭಾಂಜನಾಳಿಗೆ ಉಪದೇಶಿಸಿದರು. ಕಲಾದೇವಿಯ ಪ್ರಸಾದದ ಜೊತೆ ಭಾಗವತರ ಜಾಗಟೆಯನ್ನು ವಿದ್ಯಾರ್ಥಿನಿಗೆ ವಿಧಿಯುಕ್ತವಾಗಿ ಹಸ್ತಾಂತರಿಸಲಾಯಿತು. ಪ್ರೊ.| ಎಮ್‌.ಎಲ್‌ ಸಾಮಗ ಮತ್ತು ಡಾ| ಎಮ್‌. ಪ್ರಭಾಕರ ಜೋಷಿ ನುಡಿಸೇಸೆ ನೀಡಿದರು.

ಸುಬ್ರಹ್ಮಣ್ಯ ಬೈಪಾಡಿತ್ತಾಯ ನಂದಳಿಕೆ

ಟಾಪ್ ನ್ಯೂಸ್

1-wqewqewqe

Hubli: ಇಲ್ಲಿ ಮತ ಚಲಾಯಿಸಿ ಬಂದವರಿಗೆ ಸಿಗುತ್ತೆ ಫ್ರೀ ಐಸ್ ಕ್ರೀಮ್!

suicide (2)

Mangaluru: ಆಸ್ಪತ್ರೆಗೆ ದಾಖಲಾಗಿದ್ದ ವಿಚಾರಣಾಧೀನ ಕೈದಿ ಆತ್ಮಹತ್ಯೆ

1-qeewqewqe

Maldives; ಪ್ರವಾಸೋದ್ಯಮದ ಭಾಗವಾಗಿ: ಭಾರತೀಯರನ್ನು ಅಂಗಲಾಚಿದ ಮಾಲ್ಡೀವ್ಸ್!

Lok Sabha Polls ರಬಕವಿ-ಬನಹಟ್ಟಿ: ವಿಶೇಷ ಮತಗಟ್ಟೆಯ ರೂವಾರಿಗಳು ಚಿತ್ರಕಲಾ ಶಿಕ್ಷಕರು

Lok Sabha Polls ರಬಕವಿ-ಬನಹಟ್ಟಿ: ವಿಶೇಷ ಮತಗಟ್ಟೆಯ ರೂವಾರಿಗಳು ಚಿತ್ರಕಲಾ ಶಿಕ್ಷಕರು

India’s first-ever ‘hybrid pitch’ was unveiled at the HPCA stadium

HPCA; ಧರ್ಮಶಾಲಾದಲ್ಲಿ ಭಾರತದ ಮೊದಲ ಹೈಬ್ರಿಡ್ ಪಿಚ್ ಅನಾವರಣ; ಏನಿದು ಹೊಸ ಆವಿಷ್ಕಾರ?

Delhi police Station: ಪೊಲೀಸ್‌ ಠಾಣೆ ಬಾತ್‌ ರೂಂ ಕಿಟಕಿ ಹಾರಿ ಕೊಲೆ ಆರೋಪಿ ಪರಾರಿ!

Delhi police Station: ಪೊಲೀಸ್‌ ಠಾಣೆ ಬಾತ್‌ ರೂಂ ಕಿಟಕಿ ಹಾರಿ ಕೊಲೆ ಆರೋಪಿ ಪರಾರಿ!

1-qweqwqwe

Kerala ಕರಾವಳಿಯಲ್ಲಿ 6 ಮೀನುಗಾರರ ಸಹಿತ ಇರಾನ್ ಹಡಗು ಕೋಸ್ಟ್ ಗಾರ್ಡ್ ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

ಹೊಸ ಸೇರ್ಪಡೆ

1-wqewqewqe

Hubli: ಇಲ್ಲಿ ಮತ ಚಲಾಯಿಸಿ ಬಂದವರಿಗೆ ಸಿಗುತ್ತೆ ಫ್ರೀ ಐಸ್ ಕ್ರೀಮ್!

suicide (2)

Mangaluru: ಆಸ್ಪತ್ರೆಗೆ ದಾಖಲಾಗಿದ್ದ ವಿಚಾರಣಾಧೀನ ಕೈದಿ ಆತ್ಮಹತ್ಯೆ

1-qeewqewqe

Maldives; ಪ್ರವಾಸೋದ್ಯಮದ ಭಾಗವಾಗಿ: ಭಾರತೀಯರನ್ನು ಅಂಗಲಾಚಿದ ಮಾಲ್ಡೀವ್ಸ್!

1-wwwewqwq

Koratagere: ಸಾಲ ಬಾಧೆ ತಾಳಲಾರದೆ ರೈತ ಆತ್ಮಹತ್ಯೆಗೆ ಶರಣು

Lok Sabha Polls ರಬಕವಿ-ಬನಹಟ್ಟಿ: ವಿಶೇಷ ಮತಗಟ್ಟೆಯ ರೂವಾರಿಗಳು ಚಿತ್ರಕಲಾ ಶಿಕ್ಷಕರು

Lok Sabha Polls ರಬಕವಿ-ಬನಹಟ್ಟಿ: ವಿಶೇಷ ಮತಗಟ್ಟೆಯ ರೂವಾರಿಗಳು ಚಿತ್ರಕಲಾ ಶಿಕ್ಷಕರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.