ಜೀವ ಬಂತು, ಹಾಸ್ಟೆಲ್ ಸಿಕ್ಕಿತು…
ಮೂರು ನಿಮಿಷದ ಮನುಷ್ಯ
Team Udayavani, Apr 2, 2019, 6:00 AM IST
ಸ್ನಾತಕೋತ್ತರ ಪದವಿ ಓದಬೇಕೆಂಬ ಹಂಬಲದಿಂದ ಕುವೆಂಪು ವಿವಿಗೆ ಬಂದಿದ್ದೆ. ಸಹ್ಯಾದ್ರಿಯ ತಪ್ಪಲಿನಲ್ಲಿರುವ ವಿವಿ, ಹಸಿರಿನಿಂದ ಕಂಗೊಳಿಸುತ್ತಿತ್ತು. ಸೋನೆ ಮಳೆಯ ಸೊಬಗು ಬೇರೆ. ಪ್ರವೇಶಕ್ಕೆ ಅರ್ಜಿ ಹಾಕಲು ಬಂದ್ದಿದ್ದ ನಾನು ಕೌನ್ಸೆಲಿಂಗ್ ಮುಗಿಸಿದ್ದಾಯಿತು. ಇನ್ನು ಹಾಸ್ಟೆಲ್ ಸೇರುವ ಕತೆ… ನನ್ನ ವಿಭಾಗದ ಪ್ರೊಫೆಸರ್ ಬಳಿ ಸಹಿ ಹಾಕಿಸಿಕೊಂಡು ಹಾಸ್ಟೆಲ… ವಾರ್ಡನ್ ಬಳಿ ಅರ್ಜಿಯನ್ನು ಕೊಟ್ಟೆ. ಅದರಲ್ಲಿ ವಿದ್ಯಾರ್ಥಿ ಪ್ರತಿಯನ್ನು ವಾಪಸ್ ಕೊಟ್ಟರು. ಆ ಪ್ರತಿ ತುಂಬಾ ಮುಖ್ಯ. ಆದರೆ, ಫೈಲ…ನಲ್ಲಿ ಹಾಕುವಾಗ ಅದನ್ನು ಎಲ್ಲೋ ಕೆಳಗೆ ಬೀಳಿಸಿಕೊಂಡಿದ್ದೆ.
ಆ ಪ್ರತಿಯನ್ನು ಇನ್ನೊಂದು ವಿಭಾಗಕ್ಕೆ ಕೊಡಲು ಹೋದಾಗ, ಫೈಲ್ನಲ್ಲಿ ಪ್ರತಿಯೇ ಕಾಣಿಸಲಿಲ್ಲ. ಎದೆಬಡಿತ ಜೋರಾಗಿ, ಕಂಗಾಲಾಗಿ ಕುಳಿತೆ. “ಎಲ್ಲೋ ಕಳೆದೇ ಹೋಯಿತು, ಇನ್ನೇನು ಹಾಸ್ಟೆಲ್ ಸಿಗೋದಿಲ್ಲ’ ಎಂದು ದುಃಖ ಉಮ್ಮಳಿಸಿ ಬಂತು. ಅಷ್ಟರಲ್ಲೇ ಒಬ್ಬ ಹುಡುಗ, ದೇವರಂತೆ ಬಂದ. “ಮೇಡಂ, ತಗೊಳ್ಳಿ… ನಿಮ್ಮ ಪ್ರತಿಯನ್ನು ಕೆಳಕ್ಕೆ ಬೀಳಿಸಿಕೊಂಡಿದ್ದೀರಿ’ ಎಂದು ವಾಪಸ್ ಹಿಂತಿರುಗಿಸಿ, ಮಾಯವಾದರು. ಆ ಕ್ಷಣಕ್ಕೆ ಹೋದ ಜೀವ ಮರಳಿ ಬಂದಾಯಿತು. ಕೊನೆಗೂ ಹಾಸ್ಟೆಲ್ ಸಿಕ್ಕಿತು. ಅದಕ್ಕೆ ಆ ವ್ಯಕ್ತಿಯೇ ಕಾರಣ.
ಭಾಗ್ಯಶ್ರೀ ಎಸ್. ಶಿವಮೊಗ್ಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
IPL; ಮೆಕ್ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ