ಮಾಗಿದ ಉಳುಮೆ: ಮಾಗಿಯಿಂದ ಕೀಟ ನಿಯಂತ್ರಣ


Team Udayavani, Apr 8, 2019, 10:09 AM IST

pest-

ಕಳೆದ ಮೂರು ದಶಕಗಳಿಂದ ಬೆಳೆಗಳಿಗೆ ಸಸ್ಯರೋಗ, ಕೀಟ ಬಾಧೆ ಹೆಚ್ಚಾಗುತ್ತಿದೆ. ಬಹುತೇಕ ರೈತರು ಮಾಗಿ ಉಳುಮೆ ಮಾಡುವುದನ್ನು ಮರೆತಿರುವುದು ಇದಕ್ಕೆ ಪ್ರಮುಖ ಕಾರಣ.ಮಾಗಿ ಉಳುಮೆ ಮಾಡುವುದರಿಂದ ಅನೇಕ ರೀತಿಯ ಪ್ರಯೋಜನಗಳಿವೆ. ಆದ್ದರಿಂದಲೇಹಿರಿಯರು “ಬಡವನ ಮಾಗಿ ಉಳುಮೆಸಾಹುಕಾರ ಹಾಕುವ ಗೊಬ್ಬರಕ್ಕೆ ಸಮಾನ’ ಎಂದು ಉದಾಹರಿಸುತ್ತಿದ್ದರು.

“ಬಿರುಸಾದ ಬೇಸಿಗೆ ಮಳೆ ಬರುವುದಕ್ಕೆ ಮುಂಚೆ ಜಮೀನನ್ನು ಚೆನ್ನಾಗಿ ಉಳುಮೆ ಮಾಡು ವುದು ಸೂಕ್ತ.ಏಪ್ರಿಲ… 15ರ ಆಸುಪಾಸಿನಲ್ಲಿ ಸಾಮಾನ್ಯವಾಗಿ ರಭಸದ ಮಳೆ ಬೀಳುತ್ತದೆ. ಹೀಗಾಗಿ, ಹೊಲವನ್ನು ಉತ್ತು ಹದ ಮಾಡಿದರೆ ಮುಂದಿನ ಹಂಗಾಮಿನಲ್ಲಿ ಬೆಳೆ ಇಳುವರಿ ಸಮೃದ್ಧ. ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿ ಜೊತೆಗೆ ಪರಿಣಾಮಕಾರಿಯಾಗಿಕೀಟಗಳನ್ನು ನಿಯಂತ್ರಿಸಬಹುದು’ ಎನ್ನುತ್ತಾರೆ, ಕೀಟ ನಿಯಂತ್ರಣಾ ವಿಧಾನಗಳ ಸಂಶೋಧಕ ಲೋಕೇಶ್‌ ಮಾಕಮ್‌.ಬೇಸಿಗೆ ಮತ್ತು ಮುಂಗಾರುಮಳೆ ಆರಂಭಕ್ಕೂ ಮುನ್ನ ಉಳುಮೆ ಮಾಡುವುದರಿಂದ ಹೆಂಟೆಗಳು ಹೊಡೆಯುತ್ತವೆ. ಮಣ್ಣಿನ ಕಣಗಳರಚನೆಯೂ ಸುಧಾರಿಸುತ್ತದೆ. ಮಣ್ಣು ತುಂಬ ಸಡಿಲವಾಗಿರುವುದರಿಂದ, ಬಿದ್ದ ಮಳೆನೀರು ಹರಿದು ಹೋಗದೇ ಒಳಗೆ ಇಳಿಯುತ್ತದೆ. ಇದರಿಂದ ಜಮೀನು ದೀರ್ಘ‌ಕಾಲ ಹಸಿರಾಗಿ, ಸುತ್ತಲಿನ ಅಂತರ್ಜಲ ಮಟ್ಟ ಗಣನೀಯವಾಗಿ ಹೆಚ್ಚಳವಾಗಿ, ತೆರೆದ ಕೊಳವೆ ಬಾವಿಗಳಲ್ಲಿ ನೀರು ಸಮೃದ್ಧವಾಗಿರುತ್ತದೆ. ಉಳುಮೆ ಮಾಡಿದ ನಂತರ ಗಟ್ಟಿಯಾದ ಬದುಗಳನ್ನು ನಿರ್ಮಿಸಬೇಕು. ಇದರಿಂದ ನೀರು ಹೊರಗೆ ಹರಿದು ಹೋಗಲು ಆಸ್ಪದವಿರುವುದಿಲ್ಲ. ಜಮೀನಿನ ಇಳಿಜಾರಿಗೆ ಅಡ್ಡಲಾಗಿ ಉಳುಮೆ ಮಾಡುವುದು ಸೂಕ್ತ.

ಬೇಸಿಗೆಮಳೆ ಆರಂಭಕ್ಕೂ ಮುನ್ನ ಉಳುಮೆ ಮಾಡುವುದರಿಂದ ಗರಿಕೆ ಹುಲ್ಲು, ಇತರ ಕಳೆಗಳನ್ನು ನಿಯಂತ್ರಿಸಬಹುದು. ಕೀಟ ಬಾಧೆ ನಿಯಂತ್ರಣ ಏಪ್ರಿಲ್‌ನಿಂದ ಜೂನ್‌ 15ರ ತನಕ ಬಿಸಿಲಿನ ಪ್ರಖರತೆ ಹೆಚ್ಚುತ್ತಲೇ ಇರುತ್ತದೆ. ಮಾಗಿ ಉಳುಮೆ ಮಾಡಿದ್ದರೆ ಮಣ್ಣಿನ ಕೆಳ ಪದರದಲ್ಲಿ ಇರುವ ರೋಗಾಣುಗಳು-ರೋಗಕಾರಕ ಶಿಲೀಂಧ್ರ ಗಳು ನಾಶವಾಗುತ್ತವೆ. ಮಣ್ಣು ಮಗುಚುವುದರಿಂದ ಕೀಟಗಳು; ಅವುಗಳ ಕೋಶಗಳು ಮೇಲ್ಪದರಕ್ಕೆ ಬಂದು, ಬಿಸಿಲಿನಿಂದ ನಾಶವಾಗುವುದರ ಜೊತೆಗೆ ಹಕ್ಕಿಗಳಿಗೆ ಆಹಾರವಾಗುತ್ತವೆ. ಬೆಳೆ ಸಂದರ್ಭದಲ್ಲಿ ಮಿಡತೆಗಳ ಸಂಖ್ಯೆ ಹೆಚ್ಚಳವಾದರೆ ತುಂಬ ಕಷ್ಟ. ಇದನ್ನು ಸಿ¨ªೆಗುಮ್ಮ, ಕುದುರೆ ಹುಳು ಎಂದೆಲ್ಲ ಕರೆಯಲಾಗುತ್ತದೆ. ಈ ಮಿಡತೆಗಳು ಸಾಯುವುದಕ್ಕೂ ಮೊದಲು ಮಣ್ಣಿನ ಎರಡರಿಂದ ಮೂರು ಇಂಚು ಆಳದಲ್ಲಿ ಇರುತ್ತವೆ. ಕೆಂಪು ತಲೆ ಕಂಬಳಿ ಹುಳುಗಳು ಮೇಲ್ಮಣ್ಣಿನಿಂದ ಮೂರರಿಂದ ನಾಲ್ಕು ಇಂಚು ಒಳಭಾಗದಲ್ಲಿ ಕೋಶಾವಸ್ಥೆ ಯ ಲ್ಲಿರುತ್ತವೆ. ಮಳೆಗಾಲ ಆರಂಭವಾ ಗುತ್ತಿದಂತೆ ಆಚೆ ಬರುವ ಇವುಗಳು ಬೆಳೆಯನ್ನು ಬಾಧಿಸುತ್ತವೆ.

ಮುಂಗಾರು ಮಳೆ ಆರಂಭವಾದಂತೆ ಬಿತ್ತನೆ ಬೀಜಗಳು ಮೊಳಕೆಯೊಡೆದಾಗ, ಇದರೊಂದಿಗೆ ಆಸರೆ ಕಳೆಗಳು ಮೊಳಕೆಯೊಡೆ ಯುತ್ತವೆ. ಇದೇ
ಸಂದರ್ಭದಲ್ಲಿ ಮಣ್ಣಿನ ಮೇಲ್ಪದರದಿಂದ ಕೆಳಗೆ ಇರುವ ಕೋಶಗಳಿಂದ ಹಿಲಿಯೋಥಿಸ್‌ ಕೋಶಗಳು ಹೊರ ಬೀಳುತ್ತವೆ. ಜೂನ್‌ ತಿಂಗಳಿನಿಂದಲೇ ಚಟುವಟಿಕೆ ಪ್ರಾರಂಭಿಸುವ ಈ ಪತಂಗಗಳು ರಾತ್ರಿ ಸಮಯ ಹೆಚ್ಚು ಚಟುವಟಿಕೆಯಿಂದಿರುತ್ತವೆ. ಒಂದೇ ಬೆಳೆ ಬೇಡ ಹಿಲಿಯೋಥಿಸ್‌ ಕೀಟಗಳು 181 ಕ್ಕೂ ಹೆಚ್ಚು ವಿವಿಧ ತಳಿಗಳನ್ನು ಆಶ್ರಯಿಸಿವೆ. ನೆಲಗಡಲೆ, ಉದ್ದು, ಅಲಸಂದೆ, ಹೆಸರು, ಸಾಸಿವೆ, ಸೂರ್ಯಕಾಂತಿ, ಕುಸುಬೆ, ತೊಗರಿ, ಜೋಳ, ಗೋವಿನ ಜೋಳ, ಆಲೂಗಡ್ಡೆ, ಈರುಳ್ಳಿ, ಕ್ಯಾರೆಟ್‌, ಬೆಂಡೆಕಾಯಿ, ಟೊಮೆಟೊ,
ಎಲೆಕೋಸು, ಬಟಾಣಿ ಮುಂತಾದ ಬೆಳೆಗಳಿಗೆ ಇವುಗಳು ಮಾಡುವ ಹಾನಿ ಅಪಾರ. ಮುಖ್ಯವಾಗಿ ಹತ್ತಿ, ಕಡಲೆ, ತೊಗರಿ ಮತ್ತು ಸೂರ್ಯಕಾಂತಿಗೆ ಇವುಗಳ ಬಾಧೆ ತೀವ್ರ. ಇವುಗಳು ವೃದ್ಧಿಸಿದರೆ ನಿಯಂತ್ರಣ ಬಹಳ ಕಷ್ಟ. ಇಂಥ ಕೀಟಗಳು ಕಳೆ ಸಸ್ಯಗಳಲ್ಲಿ ಆಶ್ರಯ ಪಡೆದಿರುತ್ತವೆ. ಬೇಸಿಗೆಮಳೆಗೂ ಮುನ್ನ ಉಳುಮೆ ಮಾಡಿದಾಗ ಇವುಗಳ ಕೋಶಗಳು ಮಣ್ಣಿನ ಮೇಲು ಭಾಗಕ್ಕೆ ಬರುತ್ತವೆ. ಪ್ರಖರ ಬಿಸಿಲಿನಿಂದ ಸಾಯುತ್ತವೆ. ಕೀಟಭಕ್ಷಕಗಳಿಗೆ ಆಹಾರವಾಗುತ್ತವೆ ಎನ್ನುತ್ತಾರೆ ಲೋಕೇಶ್‌. ಒಂದೇ ಬೆಳೆಯನ್ನು ನಿರಂತರವಾಗಿ ಬೆಳೆಯುವುದರಿಂದಲೂಕೀಟ ಬಾಧೆ, ಸಸ್ಯರೋಗಗಳು ಹೆಚ್ಚಾಗುವುದಲ್ಲದೇ ಬೆಳೆ ಇಳುವರಿಯೂ ಕುಗ್ಗುತ್ತದೆ. ಇವುಗಳಲ್ಲದೇ ಮಣ್ಣಿನ ಫ‌ಲವತ್ತತೆಯೂಗಣನೀಯವಾಗಿ ಕಡಿಮೆಯಾಗುತ್ತದೆ. ಇಂಥ ಅನೇಕ ಸಮಸ್ಯೆಗಳನ್ನು ಬೆಳೆ ಪರಿವರ್ತನೆ ಮಾಡುವುದರಿಂದ ಪರಿಣಾಮಕಾರಿಯಾಗಿ
ತಡೆಗಟ್ಟಬಹುದು.

ಕುಮಾರ ರೈತ

ಟಾಪ್ ನ್ಯೂಸ್

ಕೆರೆ ಅಭಿವೃದ್ಧಿಗೆ ಒಮ್ಮೆಯೂ ತಲೆ ಎತ್ತಿ ನೋಡದ ಇಲಾಖೆ; ಆಟದ ಮೈದಾನದಂತಾದ ಬಾವದಕೆರೆ

ಕೆರೆ ಅಭಿವೃದ್ಧಿಗೆ ಒಮ್ಮೆಯೂ ತಲೆ ಎತ್ತಿ ನೋಡದ ಇಲಾಖೆ; ಆಟದ ಮೈದಾನದಂತಾದ ಬಾವದಕೆರೆ

1-24-sunday

Daily Horoscope: ವಿರಾಮ ಆಚರಣೆಯ ನಡುವೆ ಹೊಸ ಕಾರ್ಯಗಳ ಪ್ರಸ್ತಾವ

Kundapura ತಾಯಿಯ ಶವದೊಂದಿಗೆ 72 ಗಂಟೆ ಕಳೆದಿದ್ದ ಪುತ್ರಿ!

Kundapura ತಾಯಿಯ ಶವದೊಂದಿಗೆ 72 ಗಂಟೆ ಕಳೆದಿದ್ದ ಪುತ್ರಿ!

ಎಸೆಸೆಲ್ಸಿ ಪಾಠಕ್ಕೆ ತ್ರಿವಳಿ ಪರೀಕ್ಷೆ ಅಡ್ಡಿ !

ಎಸೆಸೆಲ್ಸಿ ಪಾಠಕ್ಕೆ ತ್ರಿವಳಿ ಪರೀಕ್ಷೆ ಅಡ್ಡಿ !

ನಾನು 100 ಕೋ.ರೂ. ಆಮಿಷ ಒಡ್ಡಿದ್ದರೆ ಲೋಕಾಯುಕ್ತಕ್ಕೆ ದೂರು ಕೊಡಿ: ಡಿಕೆಶಿ ಸವಾಲು

ನಾನು 100 ಕೋ.ರೂ. ಆಮಿಷ ಒಡ್ಡಿದ್ದರೆ ಲೋಕಾಯುಕ್ತಕ್ಕೆ ದೂರು ಕೊಡಿ: ಡಿಕೆಶಿ ಸವಾಲು

1-qweewq

IPL ಇಂದು ಲೀಗ್‌ ಪಂದ್ಯಗಳಿಗೆ ತೆರೆ: KKR vs RR ಟೇಬಲ್‌ ಟಾಪರ್‌ಗಳ ಸೆಣಸಾಟ

Siddaramaiah ಸರಕಾರಕ್ಕೆ ನಾಳೆಗೆ 1ವರ್ಷ; ಸಂಭ್ರಮಾಚರಣೆಗೆ ಚುನಾವಣೆ ನೀತಿ ಸಂಹಿತೆ ಅಡ್ಡಿ

Siddaramaiah ಸರಕಾರಕ್ಕೆ ನಾಳೆಗೆ 1ವರ್ಷ; ಸಂಭ್ರಮಾಚರಣೆಗೆ ಚುನಾವಣೆ ನೀತಿ ಸಂಹಿತೆ ಅಡ್ಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

ಕೆರೆ ಅಭಿವೃದ್ಧಿಗೆ ಒಮ್ಮೆಯೂ ತಲೆ ಎತ್ತಿ ನೋಡದ ಇಲಾಖೆ; ಆಟದ ಮೈದಾನದಂತಾದ ಬಾವದಕೆರೆ

ಕೆರೆ ಅಭಿವೃದ್ಧಿಗೆ ಒಮ್ಮೆಯೂ ತಲೆ ಎತ್ತಿ ನೋಡದ ಇಲಾಖೆ; ಆಟದ ಮೈದಾನದಂತಾದ ಬಾವದಕೆರೆ

1-24-sunday

Daily Horoscope: ವಿರಾಮ ಆಚರಣೆಯ ನಡುವೆ ಹೊಸ ಕಾರ್ಯಗಳ ಪ್ರಸ್ತಾವ

Kundapura ತಾಯಿಯ ಶವದೊಂದಿಗೆ 72 ಗಂಟೆ ಕಳೆದಿದ್ದ ಪುತ್ರಿ!

Kundapura ತಾಯಿಯ ಶವದೊಂದಿಗೆ 72 ಗಂಟೆ ಕಳೆದಿದ್ದ ಪುತ್ರಿ!

ಎಸೆಸೆಲ್ಸಿ ಪಾಠಕ್ಕೆ ತ್ರಿವಳಿ ಪರೀಕ್ಷೆ ಅಡ್ಡಿ !

ಎಸೆಸೆಲ್ಸಿ ಪಾಠಕ್ಕೆ ತ್ರಿವಳಿ ಪರೀಕ್ಷೆ ಅಡ್ಡಿ !

ನಾನು 100 ಕೋ.ರೂ. ಆಮಿಷ ಒಡ್ಡಿದ್ದರೆ ಲೋಕಾಯುಕ್ತಕ್ಕೆ ದೂರು ಕೊಡಿ: ಡಿಕೆಶಿ ಸವಾಲು

ನಾನು 100 ಕೋ.ರೂ. ಆಮಿಷ ಒಡ್ಡಿದ್ದರೆ ಲೋಕಾಯುಕ್ತಕ್ಕೆ ದೂರು ಕೊಡಿ: ಡಿಕೆಶಿ ಸವಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.