ಬರಿದಾದ ಪಾಪನಾಶಿನಿ ಒಡಲು
•ಕುಮಟಾ-ಹೊನ್ನಾವರಗಳಿಗೆ ನೀರಿನ ಬವಣೆ•ದೀವಳ್ಳಿಯಲ್ಲಿ ಆಗಬೇಕಿದೆ ಚೆಕ್ ಡ್ಯಾಂ
Team Udayavani, May 27, 2019, 11:02 AM IST
ಹೊನ್ನಾವರ: ಬರಿದಾದ ಅಘನಾಶಿನಿ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿರುವುದು.
ಹೊನ್ನಾವರ: ಈ ವರ್ಷವೂ ಮೇ ತಿಂಗಳಲ್ಲಿ ಕುಮಟಾ, ಹೊನ್ನಾವರ ನೀರಿಗೆ ಪರದಾಡುತ್ತಿದೆ. ನಗರಸಭೆ, ಪಟ್ಟಣ ಪಂಚಾಯತ ಪೂರೈಸುವ ನೀರನ್ನು ಅವಲಂಬಿಸಿರುವ ಉಭಯ ನಗರಗಳ 50 ಸಾವಿರ ಜನ ಎರಡು ದಿನಕ್ಕೊಮ್ಮೆ ನೀರು ಪಡೆಯಲು ತೊಡಗಿ ತಿಂಗಳಾಯಿತು. ಇದರಲ್ಲಿ ನಗರಸಭೆ, ಪಟ್ಟಣ ಪಂಚಾಯತಗಳ ತಪ್ಪೇನಿಲ್ಲ. ಪರವಾನಗಿ ಇಲ್ಲದೆ ಅಘನಾಶಿನಿಗೆ ಕೂರಿಸಿದ ಪಂಪ್ಸೆಟ್ಗಳು ಮೂರು, ನಾಲ್ಕು ಕಿಮೀ ದೂರ ಹಗಲು, ರಾತ್ರಿ ನೀರು ಒಯ್ಯುವ ಕಾರಣ ಈ ಕೃತ್ರಿಮ ಬರಗಾಲ ಸೃಷ್ಟಿಯಾಗಿದೆ.
ಕಳೆದ ವರ್ಷದಂತೆ ನೀರಿನ ಬರ ಹೆಚ್ಚಾದ ಕಾರಣ ಜಿಲ್ಲಾಧಿಕಾರಿಗಳು ಪಂಪ್ಸೆಟ್ಗಳನ್ನು ತೆರವುಗೊಳಿಸುವಂತೆ ಆದೇಶಿಸಿದ ಕಾರಣ ಕೆಲವು ಪಂಪ್ಸೆಟ್ಗಳನ್ನು ಸ್ಥಗಿತಗೊಳಿಸಲಾಗಿದೆ. ಮೊದಲು 24 ತಾಸು ಪಂಪ್ಸೆಟ್ಗಳು ನೀರೆತ್ತುತ್ತಿದ್ದವು. ಈಗ ಮೂರು ತಾಸು ಮಾತ್ರ 3ಫೇಸ್ ಕರೆಂಟ್ ಒದಗಿಸುವ ಕಾರಣ ನೀರಿನ ಯದ್ವಾತದ್ವಾ ಬಳಕೆ ನಿಂತಿದೆ. ಹೊಳೆಯ ನೀರು ಸಾರ್ವಜನಿಕರ ಸೊತ್ತು. ಪಂಪ್ಸೆಟ್ ಬಳಸಿ ನೀರೆತ್ತುವಾಗ ಸರ್ಕಾರದ ಪರವಾನಗಿ ಬೇಕು. ಇದು ಗೊತ್ತಿದ್ದು ಯಾವುದೋ ಸರ್ವೇ ನಂಬರ್ ತೋರಿಸಿ ಹೊಳೆಯ ಬದಿಗೆ ಪಂಪ್ಸೆಟ್ ಕೂರಿಸಿ ನೀರು ಒಯ್ಯುವುದರಿಂದ ಬರಗಾಲ ಬಂದಿದೆ. ಹಳ್ಳಿಯಲ್ಲಿ ರಾತ್ರಿ ಪಂಪ್ಸೆಟ್ ಚಾಲು ಮಾಡಿ ಬೆಳಗ್ಗೆ ಹೋಗಿ ಬಂದು ಮಾಡುವವರಿದ್ದಾರೆ. ಹೆಸ್ಕಾಂನವರು ಕಠಿಣ ಕ್ರಮ ಕೈಗೊಳ್ಳುವುದಿಲ್ಲ. ಹೊಳೆಬದಿಗೆ ಕಂಬ ನಿಲ್ಲಿಸಿದವರಿಗೂ 3ಫೇಸ್ ಕೊಟ್ಟಿದ್ದಾರೆ.
ಅತಿಕ್ರಮಣ ಭೂಮಿಯವರಿಗೆ ಹೊಳೆಯ ನೀರು ಪಡೆಯಲು ಅವಕಾಶ ನೀಡಬಾರದು. ಕಂದಾಯ ಭೂಮಿಯವರಿಗೆ ಕ್ಷೇತ್ರದ ಆಧಾರದ ಮೇಲೆ ಎಷ್ಟು ಅಶ್ವಶಕ್ತಿ ಪಂಪ್ ಬಳಸಬೇಕು, ಎಷ್ಟು ಅವಧಿ ನೀರೆತ್ತಬಹುದು ಎಂಬುದನ್ನು ನಿರ್ಧರಿಸಿ ಪರವಾನಗಿ ಕೊಡಬೇಕು. ಬೇಕಾಬಿಟ್ಟಿ ನೀರನ್ನು ಬಳಸುವುದರಿಂದ ನ್ಯಾಯವಾಗಿ ಅಗತ್ಯವಿದ್ದವರಿಗೆ ನೀರು ಸಿಗುವುದಿಲ್ಲ. ಗೇರುಸೊಪ್ಪಾದಿಂದ 10 ಗ್ರಾಮ ಸಹಿತ ಹೊನ್ನಾವರಕ್ಕೆ ನೀರು ಹರಿಸುವ ಯೋಜನೆ ಕಾರ್ಯರೂಪಕ್ಕೆ ಬರಲು 10ವರ್ಷ ಬೇಕು. ಕುಮಟಾಕ್ಕೆ ಶಾಶ್ವತವಾಗಿ ಅಘನಾಶಿನಿಯ ನೀರು ಪೂರೈಕೆಯಾಗಬೇಕು. ಆದ್ದರಿಂದ ಕುಮಟಾ, ಹೊನ್ನಾವರಕ್ಕೆ ನೀರು ಪೂರೈಕೆಯಾಗಲು ದೀವಳ್ಳಿಯಲ್ಲಿ ಚೆಕ್ ಡ್ಯಾಂ ನಿರ್ಮಾಣ ಆಗಬೇಕಾಗಿದೆ. ಅಲ್ಲದೆ ಡ್ಯಾಂನ ಮೇಲ್ಗಡೆ 5ಕಿಮೀ ಅನಧಿಕೃತ ಪಂಪ್ಸೆಟ್ಗಳನ್ನು ನಿಷೇಧಿಸಬೇಕು, ಅಧಿಧಿಕೃತವಾದವುಗಳನ್ನು ನಿಯಂತ್ರಿಸಬೇಕು. ಈ ನಿರ್ಧಾಕ್ಷಿಣ್ಯ ಕ್ರಮಕೈಗೊಳ್ಳದಿದ್ದರೆ ಅವಳಿ ನಗರಗಳು ಮುಂದಿನ ದಿನಗಳಲ್ಲಿ ಗಂಭೀರ ಸಮಸ್ಯೆ ಎದುರಿಸಬೇಕಾಗುತ್ತದೆ.
•ಜೀಯು, ಹೊನ್ನಾವರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dudhsagar: ದೂದ್ ಸಾಗರ ಜಲಪಾತದಲ್ಲಿ ಮುಳುಗುತ್ತಿದ್ದ 3 ವರ್ಷದ ಬಾಲಕಿಯ ರಕ್ಷಣೆ
Yellapura: ಅಪರಿಚಿತ ವಾಹನ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ… ಗೃಹ ಸಚಿವರು ಅಸಹಾಯಕರಾಗಿದ್ದಾರೆ; ಕಾಗೇರಿ
Kumta: ಯುವತಿಯ ಪ್ರಿಯಕರನಿಗೆ ಚಾಕು ಇರಿದು ಹಲ್ಲೆ ಮಾಡಿದ ಮಾಜಿ ಪ್ರಿಯಕರ
Sirsi: ತಂಜಾವೂರಿನಲ್ಲಿ ನಡೆಯುವ ಭಾರತದ ರಾಜವಂಶಸ್ಥರ ಬೈಟಕ್ ಗೆ ಸೋಂದಾ
MUST WATCH
ಹೊಸ ಸೇರ್ಪಡೆ
Hubli; ಅಂಜಲಿ ನಿವಾಸದಲ್ಲಿ ಸಿಐಡಿ ತಂಡದಿಂದ ಸ್ಥಳ ಮಹಜರು
IPL: ಸಿರಾಜ್, ದಯಾಳ್, ವೈಶಾಖ್ ಗೆ ಮುಗಿಯಿತಾ ಆರ್ ಸಿಬಿ ಪಯಣ; ಕೋಚ್ ಫ್ಲವರ್ ಹೇಳಿದ್ದೇನು?
ಮಂಗಳೂರು ಉತ್ತರ ವಲಯ: ಚಿಣ್ಣರು ಬರುತ್ತಿದ್ದಾರೆ, ಶಾಲೆಗಳು ಸುರಕ್ಷಿತವಾಗಿರಲಿ
POCSO Case: ಅನ್ಯ ಕೋಮಿನ ಯುವಕನಿಂದ ಅಪ್ರಾಪ್ತೆಗೆ ಕಿರುಕುಳ: ಪೋಕ್ಸೋ ಕೇಸ್ ದಾಖಲು!
Udupi; ಯಕ್ಷರಂಗಕ್ಕೆ ಜಿವ ತುಂಬುವ ಮಟ್ಟು ಲಕ್ಷ್ಮಣ ಶೆಟ್ಟಿಗಾರರ ಕೈಮಗ್ಗದ ಸೀರೆ