ತ್ರೀ ಫೋಲ್ಡ್‌ ಫೋನು….


Team Udayavani, Aug 19, 2019, 5:00 AM IST

smart1-(2)

ದಕ್ಷಿಣ ಕೊರಿಯಾದ ಎಲೆಕ್ಟ್ರಾನಿಕ್ಸ್‌ ಉತ್ಪನ್ನ ತಯಾರಕ ಸಂಸ್ಥೆ ಎಲ್‌ಜಿ ತಾನು ಅಭಿವೃದ್ಧಿ ಪಡಿಸುತ್ತಿರುವ ಹೊಸ ಸ್ಮಾರ್ಟ್‌ಫೋನ್‌ನ ವಿನ್ಯಾಸದ ಪೇಟೆಂಟ್‌ಗಾಗಿ ಅರ್ಜಿ ಸಲ್ಲಿಸಿತ್ತು. ಅದೀಗ ಸ್ವೀಕೃತಗೊಂಡು ಸ್ಮಾರ್ಟ್‌ಫೋನ್‌ ತಂತ್ರಜ್ಞಾನ ಜಗತ್ತಿನಲ್ಲಿ ಕುತೂಹಲವನ್ನು ಹುಟ್ಟು ಹಾಕಿದೆ. ಏಕೆಂದರೆ ಎಲ್‌ಜಿ ಸಂಸ್ಥೆ ಅಭಿವೃದ್ಧಿ ಪಡಿಸುತ್ತಿರುವ ಈ ಫೋನು ತ್ರೀಫೋಲ್ಡ್‌ ಆಗಿರುತ್ತದೆ.

ತ್ರೀಫೋಲ್ಡ್‌ ಎಂದರೇನು ಎಂಬುದನ್ನು ಅರ್ಥ ಮಾಡಿಕೊಳ್ಳಲು ಒಳ್ಳೆಯ ಉದಾರಣೆ, ಕೊಡೆ. ಅಜ್ಜನ ಕಾಲದ ಉದ್ದದ ಕೊಡೆಯನ್ನು ನೀವೆಲ್ಲರೂ ನೋಡಿರುತ್ತೀರಾ, ಬಳಸಿಯೂ ಇರುತ್ತೀರಾ. ಅದನ್ನು ಎಲ್ಲಾ ಕಡೆ ಹೊತ್ತೂಯ್ಯುವುದು ಕಷ್ಟವೆಂಬ ಕಾರಣಕ್ಕೆ ಟೂ ಫೋಲ್ಡ್‌ ಕೊಡೆಗಳ ಆವಿಷ್ಕಾರವಾದವು. ನಂತರ ಕೊಡೆಯನ್ನು ಇನ್ನಷ್ಟು ಚಿಕ್ಕದಾಗಿಸಲು, ಜೇಬಿನಲ್ಲಿ ಕೊಂಡೊಯ್ಯುವಂತೆ ಮಾಡುವ ಸಲುವಾಗಿ ತ್ರೀಫೋಲ್ಡ್‌ ಕೊಡೆಗಳ ಆವಿಷ್ಕಾರವಾದವು. ಇದೀಗ ಸ್ಮಾರ್ಟ್‌ಫೋನ್‌ ಕೂಡಾ ಕೊಡೆಯ ಹಾದಿಯಲ್ಲಿ ಸಾಗುತ್ತಿರುವುದು ಅಚ್ಚರಿಯ ಬೆಳವಣಿಗೆ.

ಆ ಹಿಂದೆ ಸ್ಯಾಮ್‌ಸಂಗ್‌, ಶಿಯೋಮಿ ಕೂಡಾ ತ್ರೀಫೋಲ್ಡ್‌ ಫೋನುಗಳನ್ನು ಹೊರತರುವ ಬಗ್ಗೆ ಸುದ್ದಿ ಕೇಳಿಬಂದಿತ್ತು. ಇದೀಗ ಎಲ್‌ಜಿ ಸರದಿ. ಮೂರು ಬಾರಿ ಮಡಚಬಲ್ಲ ಸ್ಮಾರ್ಟ್‌ ಫೋನು ನೋಡಲು ಹೇಗಿರುತ್ತದೆ ಎಂಬ ಯೋಚನೆ ಮೊದಲಿಗೆ ಬರುವುದು ಸಹಜ. ಈ ಫೋನು ಇಂಗ್ಲಿಷ್‌ನ ಆಕಾರದಲ್ಲಿ ಮಡಚಿಕೊಳ್ಳುತ್ತದೆ. ಅದನ್ನು ಅರ್ಥ ಮಾಡಿಕೊಳ್ಳಬೇಕೆಂದರೆ ಬ್ರೋಚರ್‌ಗಳನ್ನು ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ಮೂರು ಮಡಿಕೆಯ ಬ್ರೋಚರ್‌ ಅನ್ನು ಹೇಗೆ ಬಿಡಿಸಿ ಓದುತ್ತೇವೆಯೋ ಅದೇ ರೀತಿ ಈ ಹೊಸ ಫೋನು ತೆರೆದುಕೊಳ್ಳಲಿದೆ.

ಇಂದಿನ ಸ್ಮಾರ್ಟ್‌ಫೋನುಗಳಲ್ಲಿ ಎರಡು ಸಿಮ್‌ ಸ್ಲಾಟುಗಳು, ಎರಡು ಕ್ಯಾಮೆರಾಗಳು, ಎರಡು ಲೆನ್ಸ್‌ಗಳು ಹೀಗೆ ಸವಲತ್ತುಗಳನ್ನು ದುಪ್ಪಟ್ಟುಗೊಳಿಸುವ ಟ್ರೆಂಡ್‌ಅನ್ನು ಗಮನಿಸಬಹುದು. ಅಭಿವೃದ್ದಿಗೊಳ್ಳಲಿರುವ ಈ ಫೋನಿನಲ್ಲಿ ಎರಡು ಸ್ಕ್ರೀನ್‌ಗಳು ಇರಲಿವೆ. ಒಂದು ಸ್ಕ್ರೀನ್‌ ಮಾರುಕಟ್ಟೆಯಲ್ಲಿರುವ ಮಿಕ್ಕ ಸ್ಮಾರ್ಟ್‌ಫೋನುಗಳ ಸ್ಕ್ರೀನ್‌ನಷ್ಟೇ ಗಾತ್ರವನ್ನು ಹೊಂದಿದ್ದರೆ, ಎರಡನೇ ಸ್ಕ್ರೀನ್‌ ಅದರ ಎರಡರಷ್ಟು ಗಾತ್ರವನ್ನು ಹೊಂದಲಿದೆ. ಯಾವ ಯಾವ ಸವಲತ್ತುಗಳನ್ನು ಸಂಸ್ಥೆ ಕೊಡಲಿದೆ, ಸ್ಕ್ರೀನ್‌ಗಳು ಹೇಗೆ ಕೆಲಸ ಮಾಡಲಿವೆ ಮುಂತಾದ ಮಾಹಿತಿ ಬೇಕೆಂದರೆ ಅದು ಬಿಡುಗಡೆಯಾಗುವವರೆಗೆ ಕಾಯಬೇಕು. ಅಲ್ಲದೆ, ಮುಂದಿನ ದಿನಗಳಲ್ಲಿ ಮಿಕ್ಕ ಸಂಸ್ಥೆಗಳೂ ತ್ರೀ ಫೋಲ್ಡ್‌ ಫೋನನ್ನು ಬಿಡುಗೊಳಿಸಿದರೆ ಆಶ್ಚರ್ಯವಿಲ್ಲ.

ಟಾಪ್ ನ್ಯೂಸ್

ಸಂಚಾರ ಯೋಗ್ಯವಲ್ಲದ ಹಡಗುಗಳ ಬಗ್ಗೆ ನಿಗಾ: ಡಾ| ರಮಣ

Mangaluru ಸಂಚಾರ ಯೋಗ್ಯವಲ್ಲದ ಹಡಗುಗಳ ಬಗ್ಗೆ ನಿಗಾ: ಡಾ| ರಮಣ

Weather ಕಡಲಬ್ಬರ ತುಸು ಜೋರು; ಗಾಳಿ ಬಿರುಸು

Weather ಕಡಲಬ್ಬರ ತುಸು ಜೋರು; ಗಾಳಿ ಬಿರುಸು

Udupi ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

Udupi ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

Manjeshwar: ಆಟವಾಡುತ್ತಿದ್ದ 8 ವರ್ಷದ ಬಾಲಕಿ ಕುಸಿದು ಬಿದ್ದು ಸಾವು

Manjeshwar: ಆಟವಾಡುತ್ತಿದ್ದ 8 ವರ್ಷದ ಬಾಲಕಿ ಕುಸಿದು ಬಿದ್ದು ಸಾವು

Kota ಕಾರ್ಮಿಕನ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ ದಾಖಲು

Kota ಕಾರ್ಮಿಕನ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ ದಾಖಲು

1-qweqewqe

BSNL 4G; ಆಗಸ್ಟ್‌ನಲ್ಲಿ ದೇಶಾದ್ಯಂತ ಸೇವೆ: ಮೂಲಗಳು

Kasaragod ಸಾರಿಗೆ ಬಸ್‌ಗಳಲ್ಲಿ ಕೆಮರಾ ಅಳವಡಿಕೆ

Kasaragod ಸಾರಿಗೆ ಬಸ್‌ಗಳಲ್ಲಿ ಕೆಮರಾ ಅಳವಡಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

ಹೊಸ ಸೇರ್ಪಡೆ

ಸಂಚಾರ ಯೋಗ್ಯವಲ್ಲದ ಹಡಗುಗಳ ಬಗ್ಗೆ ನಿಗಾ: ಡಾ| ರಮಣ

Mangaluru ಸಂಚಾರ ಯೋಗ್ಯವಲ್ಲದ ಹಡಗುಗಳ ಬಗ್ಗೆ ನಿಗಾ: ಡಾ| ರಮಣ

Weather ಕಡಲಬ್ಬರ ತುಸು ಜೋರು; ಗಾಳಿ ಬಿರುಸು

Weather ಕಡಲಬ್ಬರ ತುಸು ಜೋರು; ಗಾಳಿ ಬಿರುಸು

Udupi ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

Udupi ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

Manjeshwar: ಆಟವಾಡುತ್ತಿದ್ದ 8 ವರ್ಷದ ಬಾಲಕಿ ಕುಸಿದು ಬಿದ್ದು ಸಾವು

Manjeshwar: ಆಟವಾಡುತ್ತಿದ್ದ 8 ವರ್ಷದ ಬಾಲಕಿ ಕುಸಿದು ಬಿದ್ದು ಸಾವು

Kota ಕಾರ್ಮಿಕನ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ ದಾಖಲು

Kota ಕಾರ್ಮಿಕನ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.