“ಆರೇ’ ಅಳಲು: ಇಂದು ವಿಶೇಷ ವಿಚಾರಣೆ
Team Udayavani, Oct 7, 2019, 5:57 AM IST
ಹೊಸದಿಲ್ಲಿ: ಮುಂಬಯಿನ ಆರೇ ಕಾಲೋನಿ ವ್ಯಾಪ್ತಿಯಲ್ಲಿ ಜಾರಿಗೊಳ್ಳಲಿರುವ ಮೆಟ್ರೋ ಕಾಮಗಾರಿಗಾಗಿ 2,600 ಮರಗಳನ್ನು ಕತ್ತರಿಸುವ ವಿಚಾರ ಈಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಮರಗಳನ್ನು ಉಳಿಸುವಂತೆ ಪ್ರತಿಭಟನಾಕಾರರು ಸಿಜೆಐ ರಂಜನ್ ಗೊಗೋಯ್ರಿಗೆ ಮನವಿ ಸಲ್ಲಿಸಿದ್ದು, ಅದನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯೆಂದು ಪರಿಗಣಿಸಿ ಸೋಮವಾರ ವಿಚಾರಣೆಗೆತ್ತಿಕೊಳ್ಳಲು ಸಿಜೆಐ ತೀರ್ಮಾನಿಸಿದ್ದಾರೆ. ಇದಕ್ಕಾಗಿ ವಿಶೇಷ ನ್ಯಾಯ ಪೀಠವನ್ನೂ ರಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಶನಿವಾರ, ಮರ ಕತ್ತರಿಸುವುದರ ವಿರುದ್ಧ ಪ್ರತಿಭಟನೆ ನಡೆದಿತ್ತು. 29 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಈ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳ ನಿಯೋಗ ರವಿವಾರ, ಸಿಜೆಐ ನಿವಾಸಕ್ಕೆ ತೆರಳಿ, ಮರ ಕತ್ತರಿಸದಂತೆ ಸಿಜೆಐ ತಮ್ಮ ವಿಶೇಷಾಧಿಕಾರ ಉಪಯೋಗಿಸಿ ಆದೇಶ ಹೊರಡಿಸಬೇಕೆಂದು ಮನವಿ ಸಲ್ಲಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pune ಪೋರ್ಶೆ ಕಾರು ಅಪಘಾತ ಕೇಸು: ಇಬ್ಬರು ವೈದ್ಯರ ಸೆರೆ
BJP ಅರ್ಜಿ ತಿರಸ್ಕರಿಸಿದ ಸುಪ್ರೀಂ; ಪ್ರತಿಸ್ಪರ್ಧಿ ಎಂದರೆ ವೈರಿ ಅಲ್ಲ…
Rajkot ದುರಂತ; ಗುಜರಾತ್ ಸರಕಾರದ ಮೇಲೆ ಭರವಸೆಯಿಲ್ಲ: ಹೈಕೋರ್ಟ್ ತರಾಟೆ
Cyclone Remal ಅಪಾರ ಹಾನಿ ; ಪ.ಬಂಗಾಲದಲ್ಲಿ 6, ಬಾಂಗ್ಲಾದಲ್ಲಿ 7 ಸಾವು
ಕೇರಳದಲ್ಲೂ ದಿಲ್ಲಿ ಮಾದರಿ ಮದ್ಯ ಹಗರಣ: ಸಿಬಿಐ ತನಿಖೆಗೆ ಸಚಿವ ಮುರಳೀಧರನ್ ಆಗ್ರಹ