ಪ್ರವೀಣ ಕುಮಾರ್‌ ನಂದಳಿಕೆ ಹಡಿನಬಾಳ ಶ್ರೀಪಾದ ಹೆಗಡೆಗೆ ಪ್ರಶಸ್ತಿ


Team Udayavani, Oct 25, 2019, 3:46 AM IST

q38

ಉಡುಪಿಯ ಚಿಟ್ಟಾಣಿ ಅಭಿಮಾನಿ ಬಳಗ ಹನ್ನೆರಡು ವರ್ಷಗಳಿಂದ ಚಿಟ್ಟಾಣಿ ಯಕ್ಷಗಾನ ಸಪ್ತಾಹ ನಡೆಸುತ್ತಾ ಬಂದಿದ್ದು ಸಮಾರೋಪದಂದು ಈರ್ವರು ಕಲಾವಿದರಿಗೆ ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಪ್ರಶಸ್ತಿ ಮತ್ತು ಟಿ. ವಿ. ರಾವ್‌ ಪ್ರಶಸ್ತಿ ಪ್ರದಾನ ಮಾಡುತ್ತಿದೆ. ಈ ವರ್ಷದ ಪ್ರಶಸ್ತಿ ಪ್ರದಾನ ಅ.25ರಂದು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಸಂಪನ್ನಗೊಳ್ಳಲಿದೆ.

ಟಿ. ವಿ. ರಾವ್‌ ಪ್ರಶಸ್ತಿ – ಪ್ರವೀಣ ಕುಮಾರ್‌ ನಂದಳಿಕೆ
ಹವ್ಯಾಸಿ ಭಾಗವತ ನಂದಳಿಕೆ ಪ್ರವೀಣ ಕುಮಾರ್‌ ಮಾವ ಮಟ್ಟು ಕೃಷ್ಣಕುಮಾರ್‌ರಿಂದ ಪ್ರೇರಿತರಾಗಿ ಮಟ್ಟು ಲಕ್ಷ್ಮೀನಾರಾಯಣ ರಾವ್‌ ಅವರಲ್ಲಿ ಯಕ್ಷಗಾನ ಭಾಗವತಿಕೆಯ ಆರಂಭಿಕ ಪಾಠ ಪಡೆದು ಮುಂದೆ ನೀಲಾವರ ಲಕ್ಷ್ಮೀನಾರಾಯಣರಿಂದ ತರಬೇತಿ ಪಡೆದರು. ಮಟ್ಟುವಿನ ಶ್ರೀವಿಷ್ಣುಮೂರ್ತಿ ಯಕ್ಷಗಾನ ಕಲಾಸಂಘ ಮತ್ತು ಕಟಪಾಡಿಯ ಮಂಜುಳಾ ಯಕ್ಷಗಾನ ಸಂಘದಲ್ಲಿ ಟ.ವಿ. ರಾವ್‌ ಅವರ ಒಡನಾಡಿಯಾಗಿ ಹಲವು ವರ್ಷಗಳಿಂದ ಕಲಾ ಸೇವೆಗೈಯುತ್ತಾ ಬಂದಿರುತ್ತಾರೆ. ಮಾರ್ಪಳ್ಳಿ ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿ, ಶಾರದಾ ಹವ್ಯಾಸಿ ಬಳಗ ಕುಂಜಿಬೆಟ್ಟು ಸೇರಿದಂತೆ ಹಲವಾರು ಸಂಘಟನೆಗಳಲ್ಲಿ ತೊಡಗಿಸಿ ಕೊಂಡಿರುತ್ತಾರೆ. 20 ವರ್ಷಗಳಿಂದ ಮಂಗಳೂರು ಆಕಾಶವಾಣಿಯಲ್ಲಿ ಇವರ ಯಕ್ಷಗಾನದ ಹಾಡುಗಳು ಬಿತ್ತರಗೊಳ್ಳುತ್ತಿವೆ.

ಚಿಟ್ಟಾಣಿ ಪ್ರಶಸ್ತಿ – ಹಡಿನಬಾಳ ಶ್ರೀಪಾದ ಹೆಗಡೆ
ಹಡಿನಬಾಳ ಶ್ರೀಪಾದ ಹೆಗಡೆ ಬಡಗುತಿಟ್ಟಿನ ಪ್ರಸಿದ್ಧ ವೇಷಧಾರಿ. ಇವರ ಸೋದರಮಾವ ಸತ್ಯ ಹೆಗಡೆ ಶ್ರೇಷ್ಠ ಯಕ್ಷಗಾನ ಕಲಾವಿದರು. ಹಲವು ವರ್ಷ ಗುಂಡುಬಾಳ ಮೇಳದ ಯಜಮಾನರಾಗಿದ್ದವರು. ಇವರು ಅಜ್ಜನಮನೆಯಲ್ಲಿ ಬೆಳೆಯುವಂತಾದುದು ಯಕ್ಷಗಾನ ಕಲಾವಿದರಾಗಲು ಕಾರಣವಾಯಿತು. ಹೈಸ್ಕೂಲ್‌ ವಿದ್ಯಾಭ್ಯಾಸದ ನಂತರ ಬದುಕಿಗಾಗಿ ಟೈಲರಿಂಗ್‌, ಗೂಡಂಗಡಿ ನಡೆಸಿಕೊಂಡು ಕೆಲವು ವರ್ಷ ಕಳೆದರೂ ಅವರೊಳಗಿನ ಕಲಾ ಪ್ರತಿಭೆ ಗುಂಡುಬಾಳದಲ್ಲಿ ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿ ಕಲಾವಿದನಾಗುವಂತೆ ಮಾಡಿತು. ಅಲ್ಲಿ ಸೋದರ ಮಾವ ಮತ್ತು ಗಣಪತಿ ಯಾಜಿಯವರಿಂದ ಯಕ್ಷಗಾನದ ಮೂಲ ಪಾಠ ಕಲಿತು ಮುಂದೆ ಮಹಾನ್‌ ನಟ ಕೆರೆಮನೆ ಮಹಾಬಲ ಹೆಗಡೆಯವರ ಶಿಷ್ಯತ್ವದಲ್ಲಿ ಪರಿಪೂರ್ಣ ಕಲಾವಿದರಾಗಿ ರೂಪುಗೊಂಡರು. ಗುಂಡುಬಾಳ, ಅಮೃತೇಶ್ವರಿ, ಹಿರೇಮಹಾಲಿಂಗೇಶ್ವರ, ಪೆರ್ಡೂರು, ಶಿರಸಿ, ಸಾಲಿಗ್ರಾಮ, ಇಡಗುಂಜಿ, ಬಚ್ಚಗಾರು, ಮಂದಾರ್ತಿ ಮೇಳಗಳಲ್ಲಿ ನಾಲ್ಕು ದಶಕಗಳ ಕಲಾಸೇವೆ ಮಾಡಿರುತ್ತಾರೆ. ಆಂಜನೇಯ, ದಕ್ಷ, ಭೀಮ, ರಾವಣ, ಬ್ರಹ್ಮ, ರಕ್ತಜಂಘ, ಋತುಪರ್ಣ, ಘಟೋತ್ಕಚ, ಅರ್ಜುನ, ಬಲರಾಮ, ಜಾಂಬವ ಮೊದಲಾದ ಪೌರಾಣಿಕ ಪಾತ್ರಗಳನ್ನು ಮನೋಜ್ಞವಾಗಿ ನಿರ್ವಹಿಸಿದವರು. ಬಣ್ಣಗಾರಿಕೆ, ಅಭಿನಯ, ಮಾತು, ಗತ್ತುಗಾರಿಕೆಯಿಂದ ಹಲವು ಪಾತ್ರಗಳಿಗೆ ತಮ್ಮದೇ ಛಾಪು ಒತ್ತಿದವರು. ಮೃಣ್ಮಯ ಗಣಪತಿ ನಿರ್ಮಿಸುವಲ್ಲಿ ಸಿದ್ಧಹಸ್ತರು. ಅರ್ಥಧಾರಿಯಾಗಿಯೂ ಕೂಟಗಳ ಕಳೆಯೇರಲು ಕಾರಣರಾದವರು. ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು.

ಪ್ರೊ| ನಾರಾಯಣ ಎಂ. ಹೆಗಡೆ

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.