ಸತ್ಯದ ಸತ್ವ ಸಾರಿದ ಸತ್ಯಹರಿಶ್ಚಂದ್ರ

ಯಕ್ಷ ಮಿತ್ರ ಬಳಗದ ಪ್ರಸ್ತುತಿ

Team Udayavani, Nov 8, 2019, 4:09 AM IST

cc-12

ಸತ್ಯರೂಢನಾದ ಭೂಪಾಲನಾರು ಎನ್ನುವ ಇಂದ್ರನ ಪ್ರಶ್ನೆಯೊಂದಿಗೆ ಕಥೆ ಆರಂಭ.ವಸಿಷ್ಠರು ಹರಿಶ್ಚಂದ್ರನ ಹೆಸರು ಸೂಚಿಸಿದಾಗ ಕೋಪಗೊಂಡು ವಿರೋಧಿಸಿದ ವಿಶ್ವಾಮಿತ್ರರು ಶಪಥಗೈದು ಸತ್ಯಾನ್ವೇಷಣೆಗೆ ಮುಂದಾಗುತ್ತಾರೆ.ಸಾಲದೆ ಪರೀಕ್ಷಿಸಿ ಕೈಸೋತು ಮುಂದೆ ಹರಿಶ್ಚಂದ್ರನ ಬದುಕಿನಲ್ಲಿ ಕಷ್ಟದ ಸಂದರ್ಭಗಳನ್ನು ಸೃಷ್ಟಿಸುತ್ತಾರೆ.

ಆಲೂರು- ಹಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಉದ್ಘಾಟನಾ ಸಮಾರಂಭದ ಪ್ರಯುಕ್ತ “ಯಕ್ಷ ಮಿತ್ರ ಬಳಗ’ದ ಜನ್ಸಾಲೆ ರಾಘವೇಂದ್ರ ಆಚಾರ್ಯ ನೇತೃತ್ವದಲ್ಲಿ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಕರುಣಾರಸ ಪ್ರಧಾನವಾದ ಜಾನಕೈ ತಿಮ್ಮಪ್ಪ ವೆಂಕಪ್ಪ ಹೆಗಡೆ ವಿರಚಿತ “ಸತ್ಯ ಹರಿಶ್ಚಂದ್ರ’ ಯಕ್ಷಗಾನ ಪ್ರಸಂಗ ಪ್ರದರ್ಶನಗೊಂಡಿತು.

ಸತ್ಯರೂಢನಾದ ಭೂಪಾಲನಾರು ಎನ್ನುವ ಇಂದ್ರನ ಪ್ರಶ್ನೆಯೊಂದಿಗೆ ಕಥೆ ಆರಂಭ.ವಸಿಷ್ಠರು ಹರಿಶ್ಚಂದ್ರನ ಹೆಸರು ಸೂಚಿಸಿದಾಗ ಕೋಪಗೊಂಡು ವಿರೋಧಿಸಿದ ವಿಶ್ವಾಮಿತ್ರರು ಶಪಥಗೈದು ಸತ್ಯಾನ್ವೇಷಣೆಗೆ ಮುಂದಾಗುತ್ತಾರೆ.ಸಾಲದೆ ಪರೀಕ್ಷಿಸಿ ಕೈಸೋತು ಮುಂದೆ ಹರಿಶ್ಚಂದ್ರನ ಬದುಕಿನಲ್ಲಿ ಕಷ್ಟದ ಸಂದರ್ಭ ಗಳನ್ನು ಸೃಷ್ಟಿಸುತ್ತಾರೆ.ವಿಶ್ವಾಮಿತ್ರರೇ ಸೃಷ್ಟಿಸಿದ ಮಾತಾಂಗ ಕನ್ಯೆಯರ ನಾಟ್ಯಕ್ಕೆ ಮನಸೋತ ಹರಿಶ್ಚಂದ್ರನನ್ನೆ ಮದುವೆಯಾಗುವಂತೆ ಪೀಡಿಸಿ, ತಿರಸ್ಕರಿಸಿದಾಗ ಕುಪಿತರಾದ ವಿಶ್ವಾಮಿತ್ರರು ಬದಲಿಯಾಗಿ ರಾಜ್ಯವನ್ನೆ ಕೇಳುತ್ತಾರೆ.ಹಿಂದೆ ಪಡೆದ ದಾನವನ್ನು ಕೊಡುವಂತೆ ಕಾಡಲು ಶಿಷ್ಯನಾದ ನಕ್ಷತ್ರಿಕನನ್ನು ಹರಿಶ್ಚಂದ್ರ,ಚಂದ್ರಮತಿ ಮತ್ತು ಲೋಹಿತಾಶ್ವರೊಂದಿಗೆ ಕಳುಹಿಸುತ್ತಾರೆ.ಮಾರ್ಗಮಧ್ಯದಲ್ಲಿ ಅನೇಕ ಕಷ್ಟನಷ್ಟಗಳನ್ನು ಅನುಭವಿಸಿ ಕಾಶಿ ಪಟ್ಟಣ ಸೇರಿ ಓರ್ವ ಬ್ರಾಹ್ಮಣನಿಗೆ ಚಂದ್ರಮತಿ ಮತ್ತು ಲೋಹಿತಾಶ್ವರನ್ನು ಮಾರಿ ನಕ್ಷತ್ರಿಕನ ಋಣಸಂದಾಯ ಹಾಗೂ ತನ್ನನ್ನೆ ಮಾರಿಕೊಂಡು ವೀರಬಾಹುನಿಂದ ವಿಶ್ವಾಮಿತ್ರರ ಋಣತೀರಿಸಿ ಹರಿಶ್ಚಂದ್ರ ಸ್ಮಶಾನದಲ್ಲಿ ಚಾಂಡಾಳನಾಗುತ್ತಾನೆ.ಬ್ರಾಹ್ಮಣರ ಮನೆಯಲ್ಲಿದ್ದ ಲೋಹಿತಾಶ್ವ ಕಟ್ಟಿಗೆ ತರಲು ಕಾಡಿಗೆ ಹೋದಾಗ ವಿಷಸರ್ಪ ಕಡಿದು ಮಡಿದ ಸುದ್ದಿ ತಿಳಿದ ಚಂದ್ರಮತಿ ನೆಲ ತೆರಿಗೆ ನೀಡದೆ ಸ್ಮಶಾನದಲ್ಲಿ ಶವ ಸುಡಲು ಮುಂದಾದಾಗ ಹರಿಶ್ಚಂದ್ರ ತಡೆದು ನೆಲ ತೆರಿಗೆ ನೀಡುವಂತೆ ಹೇಳುತ್ತಾನೆ.ಮಡಿದವನು ತನ್ನ ಪುತ್ರನೇ,ತಂದವಳು ಮಡದಿ ಚಂದ್ರಮತಿಯೇ ಎಂದು ತಿಳಿದು ಶೋಕಿಸುತ್ತಾನೆ.ತಿರುಗಿ ನೆಲ ತೆರಿಗೆ ತರಲು ಹೊರಟ ಚಂದ್ರಮತಿ,ವಿಶ್ವಾಮಿತ್ರರ ಜಾಲದಲ್ಲಿ ಸಿಲುಕಿ ಕಾಶಿ ರಾಜಪುತ್ರನನ್ನು ಕೊಂದ ಅಪರಾಧಿಯಾಗಿ ಹರಿಶ್ಚಂದ್ರನ ಕೈಯಿಂದಲೇ ಕೊಲ್ಲುವ ಶಿಕ್ಷೆಗೆ ಒಳಪಡುತ್ತಾಳೆ.ಮಡದಿ ಎಂದು ತಿಳಿದರೂ ರಾಜಾಜ್ಞೆ ಪಾಲಿಸಲು ಮುಂದುವರಿದಾಗ ಸಾಕ್ಷಾತ್‌ ಪರಶಿವ,ವಿಶ್ವಾಮಿತ್ರರು ಪ್ರತ್ಯಕ್ಷರಾಗಿ ಹರಿಶ್ಚಂದ್ರನ ಸತ್ಯವನ್ನು ಮೆಚ್ಚಿ ಲೋಕಮುಖಕ್ಕೆ ಸಾರುತ್ತಾರೆ.ಈ ಕಥಾಹಂದರಕ್ಕೆ ನ್ಯಾಯ ಒದಗಿಸಿ ರಂಗದಲ್ಲಿ ಕಟ್ಟಿಕೊಟ್ಟಿದ್ದು ಅಭಿನಂದಾರ್ಹ.

ಇಂದ್ರನ ಸಭೆಯ ಪ್ರಶ್ನೆಗೆ ಸಾತ್ವಿಕ ನೆಲೆಯಲ್ಲಿ ಉತ್ತರಿಸಿ ಪ್ರಬುದ್ಧತೆ ಮರೆದ ವಸಿಷ್ಠರಾಗಿ ಕಾಣಿಕೊಂಡದ್ದು ಈಶ್ವರ್‌ ನಾಯ್ಕ ಮಂಕಿ. ಕಡುಕೋಪಿ ವಿಶ್ವಾಮಿತ್ರರಾಗಿ ಜೀವ ತುಂಬಿದವರು ಜಲವಳ್ಳಿ ವಿದ್ಯಾಧರ ರಾವ್‌.ಹರಿಶ್ಚಂದ್ರನಾಗಿ ಮೆರುಗು ತಂದವರು ಕೃಷ್ಣ ಯಾಜಿ ಬಳ್ಕೂರು.ವನ ಪಾಲಕ ಹಾಗೂ ಬ್ರಾಹ್ಮಣರಾಗಿ ಹಾಸ್ಯದ ಹೊನಲನ್ನು ಹರಿಸಿದವರು ಶ್ರೀಧರ್‌ ಭಟ್‌ ಕಾಸರಗೋಡು. ಮಾತಾಂಗ ಕನ್ಯೆಯರಾಗಿ ನೃತ್ಯ ವೈಭವವನ್ನು ಉಣಬಡಿಸಿದವರು ನಾಗರಾಜ ದೇವಲ್ಕುಂದ ಹಾಗೂ ನಾಗರಾಜ ಕುಂಕಿಪಾಲ. ಚಂಡೆ- ಮದ್ದಳೆಯಲ್ಲಿ ಸಹಕರಿಸಿದವರು ಸುಜನ್‌ ಹಾಲಾಡಿ ಹಾಗೂ ಸುನಿಲ್‌ ಭಂಡಾರಿ ಕಡತೋಕ.

ನಕ್ಷತ್ರಿಕನಾಗಿ ಕಾಡಿದವರು ಹಳ್ಳಾಡಿ ಜಯರಾಮ ಶೆಟ್ಟಿ. ಚಂದ್ರಮತಿಯ ಪಾತ್ರಕ್ಕೆ ಜೀವ ನೀಡಿದವರು ಶಶಿಕಾಂತ್‌ ಶೆಟ್ಟಿ ಕಾರ್ಕಳ.ಲೋಹಿತಾಶ್ವನಾಗಿ ಸನ್ಮಯ್‌ ಭಟ್‌, ಮನೆಯೊಡತಿಯಾಗಿ ನಾಗರಾಜ ದೇವಲ್ಕುಂದ, ವೀರಬಾಹುವಾಗಿ ನರಸಿಂಹ ಗಾಂವ್ಕರ್‌ ಹಾಗೂ ಈಶ್ವರ ಮತ್ತು ಇಂದ್ರನಾಗಿ ಪ್ರಣವ್‌ ಭಟ್‌ ಅಚ್ಚುಕಟ್ಟಾಗಿ ಪಾತ್ರ ನಿರ್ವಹಿಸಿದರು.ಇಡೀ ಪ್ರಸಂಗಕ್ಕೆ ಕರುಣಾ ರಸದ ಕಳೆಕೊಟ್ಟು ಪ್ರೇಕ್ಷಕರನ್ನು ರಂಜಿಸಿದವರು ಗಾನ ಸಾರಥಿ ರಾಘವೇಂದ್ರ ಆಚಾರ್ಯ ಗಾಯನ ಇಂಪು ನೀಡಿತು.

ರಾಘವೇಂದ್ರ. ಡಿ.ಆಲೂರು

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.