ದೋಸೆ ಅಂದ್ರೆ ಏನು? ಅದು ಹೇಗಿರುತ್ತೆ?


Team Udayavani, Nov 13, 2019, 4:00 AM IST

qq-13

ಅಷ್ಟೂ ಬುದ್ಧಿ ಬೇಡ್ವೇನ್ರಿ ನಿಮ್ಗೆ? ಅವನು ಬೇಡ ಬೇಡ ಅಂದ್ರೂ ಒತ್ತಾಯ ಮಾಡಿ ತಿನ್ನಿಸಿದ್ರಂತಲ್ಲ; ಈಗ ಅವನಿಗೆ ಹೊಟ್ಟೆ ಅಪ್‌ಸೆಟ್‌ ಆದ್ರೆ ಏನ್ರೀ ಮಾಡೋದು? ಇವತ್ತು ನಿಮ್ಮಿಂದಾಗಿ ಸ್ಕೂಲ್‌ ಬಸ್ಸೂ ಮಿಸ್ಸಾಯ್ತು…ಆ ಮಗುವಿನ ಅಮ್ಮ ಹೀಗೆಲ್ಲಾ ಹೇಳುತ್ತಲೇ ಹೋದಳು.

ಬೆಳಗ್ಗೆ ಗಂಡ ಮಕಿÛಗೆ ಮೆಂತ್ಯದ ದೋಸೆ, ಕಡಲೆಕಾಯಿ ಚಟ್ನಿ ಮಾಡಿ ಲಂಚ್‌ ಬಾಕ್ಸ್ ಗೆ ತುಂಬಿಸ್ತಾ ಇದ್ದೆ. ಬೆಳಗ್ಗೆ ಎಷ್ಟು ಬೇಗ ಟೈಮ್‌ ಹೋಗಿºಡುತ್ತೆ ಗೊತ್ತಲ್ಲಾ…ಅಡುಗೆಮನೆ ಪೂರ್ತಿ ದೊಂಬಿ ಆಗಿರುತ್ತೆ. ಎಷ್ಟು ಧಾವಂತಪಟ್ರೂ ಒಮ್ಮೊಮ್ಮೆ ಯಾರಾದರೂ ಒಬ್ಬರಿಗೆ ಲೇಟ್‌ ಆಗ್ಬಿಡುತ್ತೆ. ಅವತ್ತೂ ಅಷ್ಟೆ; ಒಂದು ದೋಸೆ ಕಾವಲಿ ಮೇಲೆ ಹಾಕಿ ಸಣ್ಣ ಉರಿಗಿಟ್ಟು, ಗೇಟಾಚೆ ಗುಡಿಸಿ ಹೊಸ್ತಿಲಿಗೆ ನೀರು ಹಾಕಿ, ಕಸದವನು ಬಂದಾಂತ ಕಸದ ಬಕೆಟ್‌ ಹಿಡಿದು ಆಚೆಗೆ ಓಡಿ… ಹೊರಗೂ ಒಳಗೂ ದಡಾಬಡಿ ಮಾಡ್ತಾ ಇದ್ದಾಗಲೇ ಪಕ್ಕದ್ಮನೆ ಪುಟ್ಟ ಬಂದ. (ಸಣ್ಣ ಮಗನನ್ನು ಮಾತನಾಡಿಸಲು ಆಗಾಗ ಬರುತ್ತಿರುತ್ತಾನೆ)

ಪುಟ್ಟ:ಆಂಟಿ…ಹರಿ ಎದ್ದಿದಾನಾ?
ನಾನು: ಇಲ್ಲ ಕಣೋ, ಆಮೇಲೆ ಬಾ. ಬೆಳಗ್ಗೆ ವಾಕಿಂಗ್‌ ಮುಗಿಸಿ, ಆಟ ಆಡಿ, ಈಗ ನಿದ್ದೆ ಮಾಡ್ತಾ ಇದಾನೆ.
ಪು: ಪರ್ವಾಗಿಲ್ಲ ಬಿಡಿ, ನಿಮ್‌ ಹತ್ರ ಮಾತಾಡ್ತೀನಿ.
ನಾ: ನಂಗೆ ಟೈಂ ಇಲ್ಲಪ್ಪ, ನಾನು ದೋಸೆ ಮಾಡ್ತಾ ಇದೀನಿ. ನೀನು ತಿಂಡಿ ತಿಂದ್ಯಾ?
ಪು: ಇಲ್ಲ ಆಂಟಿ, ಅಮ್ಮ ಏನೂ ಮಾಡೇ ಇಲ್ಲ ಇನ್ನೂ.. ತುಂಬಾ ಹಸಿವು..
ನಾ: ಮಾಡ್ತಾ ಇಬೋìದು ಈಗ, ಹೇಗೂ ನಿಂಗೆ ಸ್ಕೂಲ್‌ ಇನ್ನೂ ಲೇಟ್‌ ಅಲ್ವಾ..
ನನ್ನ ಮಾತು ಅರ್ಧಕ್ಕೇ ಕತ್ತರಿಸಿ..
ಪು: ಆಂಟಿ, ದೋಸೆ ಅಂದ್ರೇನು, ಅದು ಹೇಗಿರುತ್ತೆ?
ನಾ : ಆಹಾಹಾ.. ಗೊತ್ತಿಲ್ವೇನೋ ನಿನಗೆ? ಮನೇಲಿ ನಿಮ್ಮಮ್ಮ ಮಾಡಲ್ವಾ?
ಪು : ಇಲ್ಲ. ನಂಗೆ ಲೇಸ್‌, ಕುರ್‌ಕುರೆ, ಸ್ಯಾಂಡ್‌ವಿಚ್‌ ಚೆನ್ನಾಗಿ ಗೊತ್ತು. ಅಮ್ಮ ಬಾಕÕ…ಗೂ ಅದನ್ನೇ ಕೊಡೋದು.
ಈಗಿನ ಕಾಲದ ಮಕ್ಕಳ ಸ್ಥಿತಿ ಕಂಡು “ಅಯ್ಯೋ ಪಾಪ’ ಅನಿಸಿಬಿಟ್ಟಿತು. ಕೆಲಸಕ್ಕೆ ಹೋಗುವ ಈ ಮಗುವಿನ ಅಮ್ಮ, ಬಗೆಬಗೆಯ ಅಡುಗೆ ಮಾಡುವುದು ಕಷ್ಟ ಅಂತ ಹೊರಗಿನ ತಿಂಡಿಯನ್ನೇ ತಿನ್ನಿಸುತ್ತಿದ್ದಾರೇನೋ ಅಂದುಕೊಂಡೆ. ಮಧ್ಯಮ ವರ್ಗದವರಾದರೂ ನಮ್ಮ ಬಾಲ್ಯ ಸಮೃದ್ಧವಾಗಿತ್ತು. ಹೊತ್ತೂತ್ತಿಗೆ ತಿಂಡಿ ತೀರ್ಥಗಳು, ಹಬ್ಬ ಹರಿದಿನಗಳಲ್ಲಿ ಥರಾವರಿ ವ್ಯಂಜನಗಳು, ಜೊತೆಗೆ ಅಕ್ಕ-ತಮ್ಮಂದಿರೊಡನೆ ಜಗಳವಾಡಿಕೊಂಡು ತಿಂದ ಸೀಬೆಕಾಯಿ, ಮಾವಿನ ಹಣ್ಣು, ಕಬ್ಬು, ಕಡಲೆಕಾಯಿ, ಜೋಳ, ಕಲ್ಲಂಗಡಿ ಹಣ್ಣು…ಒಂದೇ ಎರಡೇ…. ಈಗಿನ ಮಕ್ಕಳು ಇವೆಲ್ಲವಿಂದ ಬಿಡಿ, ಅಮ್ಮನ ಕೈಯಡುಗೆಯಿಂದಲೇ ವಂಚಿತರಾಗುತ್ತಿದ್ದಾರಲ್ಲಾ ಅನಿಸಿ ನೋವಾಯಿತು.
ಪುಟ್ಟನಿಗಾಗಿ ಒಂದು ದೋಸೆ ಮಾಡಿ, ತುಪ್ಪದಲ್ಲಿ ಬಳಿದು ತಟ್ಟೆಗೆ ಹಾಕಿಕೊಟ್ಟೆ. ಖುಷಿಯಾಗಿ ಪೂರ್ತಿ ತಿಂದು, “ಸೂಪರ್‌ ಆಗಿದೆ ಆಂಟಿ’ ಅಂತ ಶಭಾಷ್‌ಗಿರಿ ಕೊಟ್ಟ.
ನಾ : ಆಯ್ತು, ಚೆನ್ನಾಗಿ ಕೈತೊಳೆದುಕೊಂಡು ಹೋಗು. ಒಂಬತ್ತು ಗಂಟೆಗೆ ನಿನ್‌ ಸ್ಕೂಲ್‌ ಬಸ್‌ ಬರುತ್ತಲ್ವಾ ..
ಪು : ಹೂಂ..ಬಾಯ್‌ ಆಂಟಿ..
ಹತ್ತು ನಿಮಿಷ ಕೂಡ ಆಗಿಲ್ಲ. ಪುಟ್ಟನ ಅಮ್ಮ ಕೈಬಾಯಿ ತಿರುಗಿಸಿಕೊಂಡು ಬಂದ್ಲು. “ಏನು ನಿಮಗೆ ಅಷ್ಟೂ ಬುದ್ಧಿ ಬೇಡ್ವಾ? ಬೆಳಗ್ಗೆ ತಾನೇ ಎರಡೂವರೆ ದೋಸೆ, ಆಲೂಗಡ್ಡೆ ಪಲ್ಯ ತಿಂದಿದ್ದ. ಅವನು ಬೇಡ ಬೇಡ ಅಂತ ಎಷ್ಟು ಕೇಳ್ಕೊಂಡ್ರೂ “ತಿನ್ನು ತಿನ್ನು’ ಅಂತ ಬಲವಂತವಾಗಿ ದೋಸೆ ತಿನ್ನಿಸಿದಿರಂತಲ್ಲ! ಹೊಟ್ಟೆ ಅಪ್‌ಸೆಟ್‌ ಆದ್ರೆ ಏನ್ಮಾಡೋದೂ.. ನಿಮ್ಮಿಂದ ಅನ್ಯಾಯವಾಗಿ ಇವತ್ತು ಸ್ಕೂಲ್‌ ಬಸ್ಸೂ ಮಿಸ್ಸಾಯ್ತು!’ ಅಂತೆಲ್ಲಾ ಹೇಳಿ ಕಣ್ಣು, ಮುಖ ಇಷ್ಟು ದಪ್ಪ ಮಾಡಿಕೊಂಡು ನನ್ನ ಸಮಜಾಯಿಷಿ ಕೂಡ ಕೇಳಿಸಿಕೊಳ್ಳದೆ ಗುರುವಾರದ ಅರ್ಚನೆ, ಅಭಿಷೇಕ ಮಾಡಿ ಹೋದಳು!
ಏನೋ ಮಗು ಕೇಳ್ತಲ್ಲಾ ಅಂತ ದೋಸೆ ಮಾಡಿಕೊಟ್ರೆ ಹೀಗಾ ಆಡೋದು? “ಆಂಟೀ, ದೋಸೆ ಹೇಗಿರುತ್ತೆ? ನಮ್ಮನೇಲಿ ದೋಸೇನೇ ಮಾಡಲ್ಲ’ ಅಂತ ಅವನು ತಾನೇ ಹೇಳಿದ್ದು? ಆರು ವರ್ಷದ ಮಗು ಕೂಡಾ ಸುಳ್ಳು ಹೇಳುತ್ತೆ ಅನ್ನೋದು ನನಗೆ ಹೇಗೆ ಗೊತ್ತಾಗ್ಬೇಕು! ಏನ್ಮಾಡ್ತೀರಾ, ಎಲ್ಲಾ ನನ್ನ ಗ್ರಹಚಾರ.

-ಜಲಜಾ ರಾವ್‌

ಟಾಪ್ ನ್ಯೂಸ್

PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್‌ ವಿರುದ್ಧ ಬಿಜೆಪಿ ದೂರು

PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್‌ ವಿರುದ್ಧ ಬಿಜೆಪಿ ದೂರು

Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್‌ ವಿರುದ್ಧ ಕಾಂಗ್ರೆಸ್‌ ವಾಗ್ಧಾಳಿ

Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್‌ ವಿರುದ್ಧ ಕಾಂಗ್ರೆಸ್‌ ವಾಗ್ಧಾಳಿ

Election  ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌Election  ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌

Election ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

1-qewqeqw

Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್‌ ವಿರುದ್ಧ ಬಿಜೆಪಿ ದೂರು

PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್‌ ವಿರುದ್ಧ ಬಿಜೆಪಿ ದೂರು

Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್‌ ವಿರುದ್ಧ ಕಾಂಗ್ರೆಸ್‌ ವಾಗ್ಧಾಳಿ

Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್‌ ವಿರುದ್ಧ ಕಾಂಗ್ರೆಸ್‌ ವಾಗ್ಧಾಳಿ

accident

Kunigal; ಬೈಕ್‌ಗೆ ಕಾರು ಡಿಕ್ಕಿ: ಯುವಕರಿಬ್ಬರು ಸ್ಥಳದಲ್ಲೇ ದುರ್ಮರಣ

Election  ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌Election  ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌

Election ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.