ಅತಿರಥರ ಮಹಾರಥ

ಭಾರತಾಂಬೆ, ಗಾಂಧೀಜಿ, ಅಣ್ಣಾವ್ರು, ಭೈರಪ್ಪ...

Team Udayavani, Jan 4, 2020, 7:11 AM IST

atiratha

ಇದು ಅಪ್ಪಟ ರಾಷ್ಟ್ರಪ್ರೇಮದ ತೇರು. ಗಾಂಧೀಜಿಯಿಂದ ಮೊದಲ್ಗೊಂಡು ರಾಜ್‌ಕುಮಾರ್‌, ವಿಷ್ಣುವರ್ಧನ್‌, ಎಸ್‌.ಎಲ್‌. ಭೈರಪ್ಪ ಅವರ ಉಬ್ಬು ಚಿತ್ರಗಳೂ ಈ ತೇರನ್ನು ಅಲಂಕರಿಸಿವೆ…

ತೇರು ಎಂದರೆ, ಅದೇ ಧಾರ್ಮಿಕ ಕಲ್ಪನೆಯ ರಚನೆ. ತಳಿರು ತೋರಣದ ವಿನ್ಯಾಸ. ದೇವ- ದೇವತೆಯರ ವಿಗ್ರಹಗಳ ಸಾಲು ಸಾಲು ಕೆತ್ತನೆ. ಸಾಮಾನ್ಯವಾಗಿ ಈ ಚೌಕಟ್ಟಿನಲ್ಲಿಯೇ ನಮ್ಮ ಕಲ್ಪನೆಯ ತೇರಿನ ಚಿತ್ರ ಮೂಡುತ್ತದೆ. ಆದರೆ, ಈ ತೇರು ಹಾಗಿಲ್ಲ; ಇದರಲ್ಲಿ ಭಾರತಾಂಬೆ ಇದ್ದಾಳೆ. ಗಾಂಧೀಜಿಯಿಂದ ಮೊದಲ್ಗೊಂಡು ರಾಜ್‌ಕುಮಾರ್‌, ವಿಷ್ಣುವರ್ಧನ್‌, ಎಸ್‌.ಎಲ್‌. ಭೈರಪ್ಪ ಅವರ ಉಬ್ಬು ಚಿತ್ರಗಳೂ ಈ ತೇರನ್ನು ಅಲಂಕರಿಸಿವೆ.

ಹೌದು, ಇದು ಅಪ್ಪಟ ರಾಷ್ಟ್ರಪ್ರೇಮದ ತೇರು. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಬೆಲಗೂರಿನ ವೀರ ಪ್ರತಾಪ ಅಂಜನೇಯ ಸ್ವಾಮಿಯ ಸನ್ನಿಧಿಯ ವಿಶಿಷ್ಟ ಆಕರ್ಷಣೆ. “ಭಾರತಾಂಬೆಯ ತೇರು’ ಅಂತಲೇ ಪ್ರಸಿದ್ಧಿ ಪಡೆಯುತ್ತಿದೆ. ಈ ರಥದಲ್ಲಿ ಅಡಿಯಿಂದ ಮುಡಿಯವರೆಗೆ ದೇಶಕ್ಕಾಗಿ ಜೀವ- ಜೀವನವನ್ನು ಮುಡುಪಾಗಿಟ್ಟವರ ಚಿತ್ರಗಳನ್ನು ಕೆತ್ತಿದ್ದಾರೆ. ಗಾಲಿಗಳ ಮೇಲ್ಭಾಗದಿಂದ ಹಿಡಿದು, ನಡುಭಾಗದ ಸುತ್ತ ಹಾಗೂ ಶಿಖರದವರೆಗೆ ಮಹಾತ್ಮರ ಉಬ್ಬು ಶಿಲ್ಪಗಳು ಮನಸೂರೆಗೊಳ್ಳುತ್ತವೆ.

ಇದು ಮೂಲತಃ ಲಕ್ಷ್ಮಿ ನಾರಾಯಣನ ತೇರು; ಆದರೆ, ದೇವರ ಕಲಾಕೃತಿಗಳು ಬಹಳ ಕಡಿಮೆ. ಸಾಗುವಾನಿ, ಹೊನ್ನೇಮರದಿಂದ ನಿರ್ಮಿತವಾದ ದೇವರಥ. 59 ಅಡಿ ಎತ್ತರ, 21 ಅಡಿ ಅಗಲ, 500 ಕಿಲೋಗೂ ಅಧಿಕ ತೂಗುತ್ತದೆ. 40 ರಥಶಿಲ್ಪಿಗಳು, 8 ತಿಂಗಳ ಶ್ರಮವಹಿಸಿ, ರಾಜಶೇಖರ ಹೆಬ್ಟಾರ್‌ ಅವರ ನೇತೃತ್ವದಲ್ಲಿ ಈ ವಿಸ್ಮಯ ಸೃಷ್ಟಿಯಾಗಿದೆ. ರಾಜಶೇಖರ ಹೆಬ್ಟಾರ್‌ ಪರಿಣತ ಕಾಷ್ಠ ಕಲಾವಿದರು. 58 ದೇಗುಲಗಳು, 13 ಬೃಹತ್‌ ತೇರುಗಳನ್ನು ನಿರ್ಮಿಸಿದ ಅನುಭವ ಅವರಿಗಿದೆ. ಬೆಲಗೂರಿನ ಮಾರುತಿ ಗುರುಪೀಠದ ಅವಧೂತ ಬಿಂದು ಮಾಧವ ಶರ್ಮ ಅವರ ಮಾರ್ಗದರ್ಶನ ಈ ರಥಕ್ಕೆ ಸಿಕ್ಕಿದೆ.

ರಥದಲ್ಲಿನ ಅತಿರಥ ಮಹಾರಥರು: ಮಹಾತ್ಮ ಗಾಂಧೀಜಿ, ಡಾ.ಬಿ.ಆರ್‌. ಅಂಬೇಡ್ಕರ್‌, ಲಾಲ್‌ ಬಹದ್ದೂರ್‌ ಶಾಸ್ತ್ರಿ, ಸರ್ದಾರ್‌ ಪಟೇಲ್, ಚಂದ್ರಶೇಖರ್‌ ಆಜಾದ್‌, ಭಗತ್‌ ಸಿಂಗ್‌, ಛತ್ರಪತಿ ಶಿವಾಜಿ, ಮದಕರಿ ನಾಯಕ, ಝಾನ್ಸಿ ರಾಣಿ, ಚನ್ನಮ್ಮ, ಶ್ರೀ ಕೃಷ್ಣದೇವರಾಯ, ಸರ್‌ ಎಂ. ವಿಶ್ವೇಶ್ವರಯ್ಯ, ಶಂಕರಾಚಾರ್ಯ, ಮಧ್ವಾಚಾರ್ಯ, ರಾಮಾನುಜಾಚಾರ್ಯ, ಜಗಜ್ಯೋತಿ ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ಪುರಂದರದಾಸ, ಕನಕದಾಸ, ವಾಲ್ಮೀಕಿ, ಕಾಳಿದಾಸ, ಅಗಸ್ತ್ಯ, ಜಮದಗ್ನಿ, ರಾಮಕೃಷ್ಣ ಪರಮಹಂಸ, ಪಂಪ, ರನ್ನ, ಜನ್ನ, ತ.ರಾ.ಸು., ಎಂ.ಕೆ. ಇಂದಿರಾ, ಕುವೆಂಪು, ದ.ರಾ. ಬೇಂದ್ರೆ, ಡಾ. ರಾಜ್‌ಕುಮಾರ್‌, ಜಿ.ಎಸ್‌. ಶಿವರುದ್ರಪ್ಪ, ಎಸ್‌.ಎಲ್‌. ಭೈರಪ್ಪ, ಅಬ್ದುಲ್‌ ಕಲಾಂ, ಸಿ.ಎನ್‌.ಆರ್‌. ರಾವ್‌, ವಿಷ್ಣುವರ್ಧನ್‌, ಲೀಲಾವತಿ, ಎಂ.ಎಸ್‌. ಸುಬ್ಬುಲಕ್ಷ್ಮೀ ಸೇರಿದಂತೆ ಹಲವು ಮಹನೀಯರ ವಿಗ್ರಹಗಳನ್ನು ಕೆತ್ತಲಾಗಿದೆ.

* ಚಿತ್ರ ಲೇಖನ: ಡಾ.ಕರವೀರಪ್ರಭು ಕ್ಯಾಲಕೊಂಡ

ಟಾಪ್ ನ್ಯೂಸ್

13

Gangolli: ಮಹಿಳೆಗೆ ಬೈಕ್‌ ಢಿಕ್ಕಿ; ಗಾಯ

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

15-hunsur

Hunsur: ಕುಡಿತದ ಚಟಕ್ಕೆ ಯುವಕ ಬಲಿ

Koppala; ಸಿಎಂ ಸಿದ್ದರಾಮಯ್ಯ ಎದುರೇ ಸ್ಪೋಟಗೊಂಡ ಗಂಗಾವತಿ ಕಾಂಗ್ರೆಸ್ ಬಣ ಬಡಿದಾಟ

Koppala; ಸಿಎಂ ಸಿದ್ದರಾಮಯ್ಯ ಎದುರೇ ಸ್ಪೋಟಗೊಂಡ ಗಂಗಾವತಿ ಕಾಂಗ್ರೆಸ್ ಬಣ ಬಡಿದಾಟ

12

Karkala: ಹಿಮ್ಮುಖ ಚಲಿಸಿದ ಟಿಪ್ಪರ್‌; ಸ್ಕೂಟರ್‌ ಜಖಂ

ಮಗನ ಪರ ಸೆರಗೊಡ್ಡಿ ಮತಯಾಚಿಸಿದ ಸಚಿವೆ ಹೆಬ್ಬಾಳಕರ್

ಮಗನ ಪರ ಸೆರಗೊಡ್ಡಿ ಮತಯಾಚಿಸಿದ ಸಚಿವೆ ಹೆಬ್ಬಾಳಕರ್

11-udupi

Udupi: ಬಸ್‌ ಢಿಕ್ಕಿ: ಮಹಿಳೆಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

13

Gangolli: ಮಹಿಳೆಗೆ ಬೈಕ್‌ ಢಿಕ್ಕಿ; ಗಾಯ

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

15-hunsur

Hunsur: ಕುಡಿತದ ಚಟಕ್ಕೆ ಯುವಕ ಬಲಿ

Koppala; ಸಿಎಂ ಸಿದ್ದರಾಮಯ್ಯ ಎದುರೇ ಸ್ಪೋಟಗೊಂಡ ಗಂಗಾವತಿ ಕಾಂಗ್ರೆಸ್ ಬಣ ಬಡಿದಾಟ

Koppala; ಸಿಎಂ ಸಿದ್ದರಾಮಯ್ಯ ಎದುರೇ ಸ್ಪೋಟಗೊಂಡ ಗಂಗಾವತಿ ಕಾಂಗ್ರೆಸ್ ಬಣ ಬಡಿದಾಟ

12

Karkala: ಹಿಮ್ಮುಖ ಚಲಿಸಿದ ಟಿಪ್ಪರ್‌; ಸ್ಕೂಟರ್‌ ಜಖಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.