ಶೌಚಾಲಯ ನಿರುಪಯುಕ್ತ
ದೇವತಗಲ್-ನವಿಲಗುಡ್ಡದಲ್ಲಿ ಬಯಲನ್ನೇ ಆಶ್ರಯಿಸಿದ ಮಹಿಳೆಯರು-ಗ್ರಾಮಸ್ಥರು
Team Udayavani, Jan 6, 2020, 12:31 PM IST
ದೇವದುರ್ಗ: ತಾಲೂಕಿನ ದೇವತಗಲ್ ಗ್ರಾಮದ ಹೊರವಲಯದಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ವತಿಯಿಂದ ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಿಸಿದ ಮಹಿಳೆಯರ ಹೈಟೆಕ್ ಶೌಚಾಲಯ ಉದ್ಘಾಟನೆ ಮಾಡದ್ದರಿಂದ ನಿರುಪಯುಕ್ತವಾಗಿದೆ.
ಶೌಚಾಲಯ ನಿರ್ಮಿಸಿ ವರ್ಷವೇ ಗತಿಸಿದರೂ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಉದ್ಘಾಟನೆಗೆ ನಿರ್ಲಕ್ಷ್ಯ ವಹಿಸಿದ್ದಾರೆ. ಹೀಗಾಗಿ ಗ್ರಾಮದ
ಮಹಿಳೆಯರು ಶೌಚಕ್ಕೆ ಬಯಲು, ಜಾಲಿಗಿಡಗಳ ಮರೆಯನ್ನೇ ಆಶ್ರಯಿಸುವಂತಾಗಿದೆ.
ಸುತ್ತಲೂ ಜಾಲಿಗಿಡಗಳು ಕಟ್ಟಡದೆತ್ತರಕ್ಕೆ ಬೆಳೆದಿದ್ದು, ಶೌಚಾಲಯ ಕಾಣದಂತಾಗಿದೆ.
ರಾಷ್ಟ್ರೀಯ ಮಹಾತ್ಮ ಗಾಂ ಧಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಶೌಚಾಲಯ
ಸುತ್ತಲೂ ತಡೆಗೋಡೆ ನಿರ್ಮಿಸಲಾಗಿದೆ. ಸರ್ಕಾರ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಸಹಾಯಧನ ನೀಡುತ್ತಿದ್ದರೂ ಕೆಲ ಗ್ರಾಮಗಳಲ್ಲಿ ನೀರಿನ ಸಮಸ್ಯೆಯಿಂದಾಗಿ ಗ್ರಾಮಸ್ಥರು ವೈಯಕ್ತಿಕ ಶೌಚಗೃಹ ನಿರ್ಮಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಇನ್ನೊಂದೆಡೆ ಸರ್ಕಾರದಿಂದ ನಿರ್ಮಿಸಿದ ಸಾರ್ವಜನಿಕ ಶೌಚಾಲಯಕ್ಕೆ ಸಮರ್ಪಕ ನೀರು, ನಿರ್ವಹಣೆ, ವಿದ್ಯುತ್ ಸೌಲಭ್ಯ ಒದಗಿಸದ್ದರಿಂದ ನಿರುಪಯುಕ್ತವಾಗಿವೆ.
ಕೆಲವೆಡೆ ಶೌಚಾಲಯ ನಿರ್ಮಿಸಿ ವರ್ಷಗಳೇ ಕಳೆದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಉದ್ಘಾಟನೆಗೆ ಮುಂದಾಗದ್ದರಿಂದ ಮಹಿಳೆಯರು, ಗ್ರಾಮಸ್ಥರು ಇಂದಿಗೂ
ಶೌಚಕ್ಕೆ ಬಯಲನ್ನೇ ಆಶ್ರಯಿಸುವಂತಾಗಿದೆ. ನಿರ್ಮಿಸಿದ ಶೌಚಾಲಯ ಕಟ್ಟಡಗಳು ಉದ್ಘಾಟನೆಗೆ ಮುನ್ನವೇ ಹಾಳಾಗಿ ಹಾಳು ಕೊಂಪೆಯಂತಾಗುತ್ತಿವೆ. ಸರ್ಕಾರದ ಲಕ್ಷಾಂತರ ರೂ. ನೀರಿನಲ್ಲಿ ಹೋಮ ಮಾಡಿದಂತಾಗುತ್ತಿದೆ.
ನವಿಲಗುಡ್ಡ: ಸಮೀಪದ ನವಿಲಗುಡ್ಡ ಗ್ರಾಮದ ಹೊರವಲಯದಲ್ಲಿ ಎರಡು ಹೈಟೆಕ್
ಶೌಚಾಲಯ ನಿರ್ಮಿಸಲಾಗಿದೆ. ಇವುಗಳಿಗೆ ನೀರಿನ ಸೌಲಭ್ಯ ಕಲ್ಪಿಸದ್ದರಿಂದ ಎರಡು
ವರ್ಷಗಳಿಂದ ನಿರುಪಯುಕ್ತವಾಗಿವೆ. ಈ ಶೌಚಾಲಯಗಳನ್ನು ಗ್ರಾಮದಿಂದ ಅರ್ಧ ಕಿ.ಮೀ. ಅಂತರದಲ್ಲಿ, ಮಹಿಳೆಯರು ಒಬ್ಬರೇ ಹೋಗಲಾರದಂತ ಜಾಗದಲ್ಲಿ
ನಿರ್ಮಿಸಲಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಆಗ್ರಹ: ತಾಲೂಕಿನ ದೇವತಗಲ್, ನವಿಲಗುಡ್ಡ ಗ್ರಾಮದಲ್ಲಿ ನಿರ್ಮಿಸಿದ
ಶೌಚಾಲಯಗಳಿಗೆ ನೀರಿನ ಸೌಲಭ್ಯ ಕಲ್ಪಿಸಿ ಉದ್ಘಾಟಿಸಿ ಮಹಿಳೆಯರಿಗೆ ಅನುಕೂಲ
ಕಲ್ಪಿಸಬೇಕೆಂದು ಗ್ರಾಮಸ್ಥರಾದ ರಂಗಪ್ಪ, ಹುಸೇನ್ ಪಾಷಾ ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rain ಕರಾವಳಿಯಲ್ಲಿ ಸಾಧಾರಣ ಮಳೆ; ಇಂದು “ಎಲ್ಲೋ ಅಲರ್ಟ್’
ಸರಣಿ ರಜೆ ಶಾಲಾ ಮಕ್ಕಳ ಬೇಸಗೆ ರಜೆ ಮುಕ್ತಾಯ; ಕರಾವಳಿಯ ದೇವಸ್ಥಾನಗಳಲ್ಲಿ ಭಕ್ತಸ್ತೋಮ
ಚರಂಡಿಗೆ ಆಟೋ ಬಿದ್ದು ಚಾಲಕ ಸಾವು ಪ್ರಕರಣ; ತಾತ್ಕಾಲಿಕ ಮುಂಜಾಗ್ರತೆ ಕ್ರಮ
Manipal ಆರೋಗ್ಯ, ಶಿಕ್ಷಣಕ್ಕೆ ಮಾಹೆ ಸದಾ ಬೆಂಬಲ; ಡಾ| ಎಚ್.ಎಸ್. ಬಲ್ಲಾಳ್
ನೈಋತ್ಯ ಶಿಕ್ಷಕರ, ಪದವೀಧರರ ಕ್ಷೇತ್ರ; ಕಾಂಗ್ರೆಸ್ ಗೆಲುವು ಖಚಿತ: ಸಲೀಂ