ಬಾಡಿಗೆಗೆ ಕರೆದರೂ ಈ ರಸ್ತೆಯಲ್ಲಿ ಬರಲು ಹಿಂದೇಟು

ಹದಗೆಟ್ಟ ಹಕ್ಲಾಡಿ - ತೋಪ್ಲು ಸಂಪರ್ಕಿಸುವ ಮುಖ್ಯ ರಸ್ತೆ

Team Udayavani, Jan 12, 2020, 5:57 AM IST

n-28

ಹೆಮ್ಮಾಡಿ: ತೋಪ್ಲು ಮಾರ್ಗವಾಗಿ ಹಕ್ಲಾಡಿ ಡೈರಿ ಬಳಿಯಿಂದ ಹಕ್ಲಾಡಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಡಾಮರೆಲ್ಲ ಎದ್ದು ಹೋಗಿ, ಹೊಂಡ – ಗುಂಡಿಗಳ ರಸ್ತೆಯಾಗಿದೆ. ಹಕ್ಲಾಡಿಗೆ ಮಾತ್ರವಲ್ಲದೆ ಕುಂದಬಾರಂದಾಡಿ, ನೂಜಾಡಿ, ಬಾರಂದಾಡಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ.

ಹೆದ್ದಾರಿಯಿಂದ ಹಕ್ಲಾಡಿ ಗ್ರಾಮಕ್ಕೆ ಸಂಪರ್ಕಿಸಲು ಪ್ರಮುಖ ಎರಡು ರಸ್ತೆಗಳಿದ್ದು, ಮುಳ್ಳಿಕಟ್ಟೆಯಿಂದ ಆಲೂರು ಮಾರ್ಗ ಒಂದಾದರೆ, ಮತ್ತೂಂದು ಹೆಮ್ಮಾಡಿಯಿಂದ ಮುಂದೆ ಕಟ್ಟು, ತೋಪ್ಲುವಿನಿಂದ ಹಕ್ಲಾಡಿಯ ಹಾಲಿನ ಡೈರಿಗೆ ಸಂಪರ್ಕಿಸುವ ರಸ್ತೆ. ಮುಳ್ಳಿಕಟ್ಟೆಯಿಂದ ಹಕ್ಲಾಡಿಗೆ ಸಂಪರ್ಕಿಸುವ ಸುಮಾರು 3 ಕಿ.ಮೀ. ಉದ್ದದ ರಸ್ತೆಯುದ್ದಕ್ಕೂ ಹೊಂಡ – ಗುಂಡಿಗಳಿದ್ದರೆ, ಸುಮಾರು 2 ಕಿ.ಮೀ. ದೂರದ ತೋಪ್ಲು – ಹಕ್ಲಾಡಿ ರಸ್ತೆಯ ಸ್ಥಿತಿಯಂತೂ ಹೇಳತೀರದಾಗಿದೆ.

ಯಾವೆಲ್ಲ ಊರುಗಳು?
ಹೆಮ್ಮಾಡಿಯಿಂದ ಸ್ವಲ್ಪ ಮುಂದಕ್ಕೆ ಕಟ್ಟುವಿಗೆ ಹೋಗುವ ಮಾರ್ಗದಿಂದ ಆರಂಭವಾಗಿ, ತೋಪ್ಲು, ಹಕ್ಲಾಡಿ ಹಾಲಿನ ಡೈರಿಯಂದ ಆರಂಭವಾಗಿ, ಹಕ್ಲಾಡಿ ಪೇಟೆಯವರೆಗೂ ಸಂಪೂರ್ಣ ಹದಗೆಟ್ಟು ಹೋಗಿದೆ. ದೊಡ್ಡ ದೊಡ್ಡ ಹೊಂಡ – ಗುಂಡಿಗಳಿದ್ದು, ವಾಹನ ವಾಹನ ಸವಾರರು ನಿತ್ಯ ಕಷ್ಟ ಪಟ್ಟು ಸಂಚರಿಸುವಂತಾಗಿದೆ. ಹಕ್ಲಾಡಿ, ನೂಜಾಡಿ, ಕುಂದಬಾರಂದಾಡಿ, ಕಟ್ಟಿನಮಕ್ಕಿ, ಬಾರಂದಾಡಿ, ಹೊಳ್ಮಗೆ ಮತ್ತಿತರ ಊರುಗಳನ್ನು ಈ ರಸ್ತೆ ಸಂಪರ್ಕಿಸುತ್ತದೆ.

ಹತ್ತಿರದ ಮಾರ್ಗ
ನಿತ್ಯ ನೂರಾರು ವಾಹನಗಳು, ಸಾವಿರಾರು ಮಂದಿ ಅವಲಂಬಿಸಿರುವ ಪ್ರಮುಖ ರಸ್ತೆ ಇದಾಗಿದೆ. ಕುಂದಾಪುರದಿಂದ ಮುಳ್ಳಿಕಟ್ಟೆಯಾಗಿ ಹಕ್ಲಾಡಿಗೆ ಸ್ವಲ್ಪ ದೂರದ ಮಾರ್ಗವಾಗಿದ್ದು, ಆದರೆ ತೋಪ್ಲು ಮೂಲಕವಾಗಿ ಕುಂದಾಪುರದಿಂದ ಹಕ್ಲಾಡಿಗೆ ಸಂಪರ್ಕಿಸುವ ಹತ್ತಿರದ ಮಾರ್ಗವಾಗಿದೆ. ಶಾಲಾ – ಖಾಸಗಿ ವಾಹನಗಳು ಕೂಡ ತೆರಳುತ್ತವೆ. ಆದರೆ ಹಲವಾರು ವರ್ಷಗಳಿಂದ ಈ ರಸ್ತೆ ಅಭಿವೃದ್ಧಿಯಾಗಿಲ್ಲ.

ಬಾಡಿಗೆಗೆ ಬರೋದೆ ಇಲ್ಲ
ಈ ಮಾರ್ಗದಲ್ಲಿ ಮನೆಗೆ ಬೇಕಾದ ಅಗತ್ಯ ಸಾಮಗ್ರಿ, ಏನಾದರೂ ವಸ್ತುಗಳನ್ನು ಸಾಗಾಟ ಮಾಡಬೇಕಾದರೆ ಬಾಡಿಗೆ ವಾಹನದಲ್ಲಿ ಬರಬೇಕು. ಆದರೆ ಈ ಹೊಂಡ – ಗುಂಡಿಗಳ ರಸ್ತೆಯ ದುರವಸ್ಥೆಯಿಂದಾಗಿ ರಿಕ್ಷಾವಾಗಲಿ ಅಥವಾ ಬೇರೆ ಯಾವುದೇ ವಾಹನದವರನ್ನು ಬಾಡಿಗೆಗೆ ಕರೆದರೆ ಬರುವುದೇ ಇಲ್ಲ ಅನ್ನುತ್ತಾರೆ ಎನ್ನುವುದು ಸ್ಥಳೀಯರ ಅಳಲು.

ಅನೇಕ ವರ್ಷದಿಂದ ದುರಸ್ತಿಯಿಲ್ಲ
ಈ ತೋಪ್ಲು, ಹಕ್ಲಾಡಿ ರಸ್ತೆಯೂ ದುರಸ್ತಿಯಾಗದೇ ಅನೇಕ ವರ್ಷಗಳೇ ಕಳೆದಿವೆ. ಈ ರಸ್ತೆಗೆ ಮರು ಡಾಮರು ಕಾಮಗಾರಿಯಾಗಿಲ್ಲ. ಅದರಲ್ಲೂ ಅಲ್ಲಿನ ಹಾಲಿನ ಡೈರಿಯಿಂದ ಮುಂದಕ್ಕೆ ರಸ್ತೆಯಲ್ಲಂತೂ ಸಂಚರಿಸಲು ಸಾಧ್ಯವಿಲ್ಲದಂತಾಗಿದೆ. ಕುಂದಾಪುರ ಅಥವಾ ಪೇಟೆಗೆ ಬರಬೇಕಾದರೆ ಸಾಕಷ್ಟು ಪ್ರಯಾಸಪಡಬೇಕಾಗಿದೆ.
– ರಜತ್‌ ಹಕ್ಲಾಡಿ, ಸ್ಥಳೀಯರು

ಶೀಘ್ರ ಕಾಮಗಾರಿ ಆರಂಭ
ತೋಪ್ಲು ಮಾರ್ಗವಾಗಿ ಹಕ್ಲಾಡಿಗೆ ಸಂಚರಿಸುವ ರಸ್ತೆಗೆ ಈಗಾಗಲೇ ಬೈಂದೂರು ಶಾಸಕ ಬಿ.ಎಂ. ಸುಕುಮಾರ್‌ ಶೆಟ್ಟಿಯವರು ನಮ್ಮ ಗ್ರಾಮ – ನಮ್ಮ ರಸ್ತೆ ಯೋಜನೆಯಡಿ 50 ಲಕ್ಷ ರೂ. ಅನುದಾನವನ್ನು ಮೀಸಲಿಟ್ಟಿದ್ದಾರೆ. ಶೀಘ್ರ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡು, ರಸ್ತೆ ಮರು ಡಾಮರೀಕರಣ ಕಾಮಗಾರಿ ಆರಂಭವಾಗಲಿದೆ.
– ಬಾಬು ಶೆಟ್ಟಿ ತಗ್ಗರ್ಸೆ, ಜಿ.ಪಂ. ಸದಸ್ಯರು

ಟಾಪ್ ನ್ಯೂಸ್

Rain ಕರಾವಳಿ ಸಹಿತ ರಾಜ್ಯದ ವಿವಿಧೆಡೆ ಉತ್ತಮ ಮಳೆ, ನಾಲ್ಕು ಜೀವಹಾನಿ

Rain ಕರಾವಳಿ ಸಹಿತ ರಾಜ್ಯದ ವಿವಿಧೆಡೆ ಉತ್ತಮ ಮಳೆ, ನಾಲ್ಕು ಜೀವಹಾನಿ

Ambedkar ಇಲ್ಲದಿದ್ದರೆ ನೆಹರೂ ಮೀಸಲು ನೀಡುತ್ತಿರಲಿಲ್ಲ : ಮೋದಿ

Ambedkar ಇಲ್ಲದಿದ್ದರೆ ನೆಹರೂ ಮೀಸಲು ನೀಡುತ್ತಿರಲಿಲ್ಲ : ಮೋದಿ

ocon

ಲೀಡ್‌ ಕೊಡಿಸದಿದ್ದರೆ ಅಧಿಕಾರವೂ ಸಿಗದು; ಹುದ್ದೆ ಬಯಸುವ ಕಾರ್ಯಕರ್ತರಿಗೆ ಡಿಕೆಶಿ ಚಾಟಿ

Puttur ಅಂಗಳದಲ್ಲಿದ್ದ ವ್ಯಕ್ತಿ ಸಾವು ಸಿಡಿಲಾಘಾತ / ಹೃದಯಾಘಾತ ಶಂಕೆ

Puttur ಅಂಗಳದಲ್ಲಿದ್ದ ವ್ಯಕ್ತಿ ಸಾವು ಸಿಡಿಲಾಘಾತ / ಹೃದಯಾಘಾತ ಶಂಕೆ

Singapore Airlines; 3 ನಿಮಿಷಗಳಲ್ಲಿ 6 ಸಾವಿರ ಅಡಿ ಕುಸಿದ ವಿಮಾನ: 1 ಸಾವು

Singapore Airlines; 3 ನಿಮಿಷಗಳಲ್ಲಿ 6 ಸಾವಿರ ಅಡಿ ಕುಸಿದ ವಿಮಾನ: 1 ಸಾವು

ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಇಬ್ಬರಿಗೆ ಗಾಯ

Vitla ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಇಬ್ಬರಿಗೆ ಗಾಯ

Heavy Rain ಕರಾವಳಿ, ಕೊಡಗು ಜಿಲ್ಲೆಯಲ್ಲಿ ಗುಡುಗು ಸಹಿತ ಬಿರುಸಿನ ಮಳೆ

Heavy Rain ಕರಾವಳಿ, ಕೊಡಗು ಜಿಲ್ಲೆಯಲ್ಲಿ ಗುಡುಗು ಸಹಿತ ಬಿರುಸಿನ ಮಳೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MAHE

MAHE ಟೈಮ್ಸ್‌ ಉನ್ನತ ಶಿಕ್ಷಣ ಯುವ ವಿ.ವಿ. ಶ್ರೇಯಾಂಕ: ಮಾಹೆಗೆ 175ನೇ ಸ್ಥಾನ

Brahmavar ಚೆಂಡು ತೆಗೆಯುವಾಗ ಬಾವಿಗೆ ಬಿದ್ದು ವ್ಯಕ್ತಿ ಸಾವು

Brahmavar ಚೆಂಡು ತೆಗೆಯುವಾಗ ಬಾವಿಗೆ ಬಿದ್ದು ವ್ಯಕ್ತಿ ಸಾವು

Uppunda ಅಪರಿಚಿತ ವಾಹನ ಢಿಕ್ಕಿ; ಕೂಲಿ ಕಾರ್ಮಿಕ ಸಾವು

Uppunda ಅಪರಿಚಿತ ವಾಹನ ಢಿಕ್ಕಿ; ಕೂಲಿ ಕಾರ್ಮಿಕ ಸಾವು

ವಿಚಾರಣಾಧೀನ ಕೈದಿಗೆ ಗಾಂಜಾ ಪೂರೈಕೆ: ಪ್ರಕರಣ ದಾಖಲು

Hiriadka ವಿಚಾರಣಾಧೀನ ಕೈದಿಗೆ ಗಾಂಜಾ ಪೂರೈಕೆ: ಪ್ರಕರಣ ದಾಖಲು

ಟೆಸ್ಟ್‌ ಡ್ರೈವ್‌ ನೆಪದಲ್ಲಿ ಕಾರಿಗೆ ಜಖಂ; ಕಳ್ಳತನಕ್ಕೆ ಯತ್ನ

Udupi ಟೆಸ್ಟ್‌ ಡ್ರೈವ್‌ ನೆಪದಲ್ಲಿ ಕಾರಿಗೆ ಜಖಂ; ಕಳ್ಳತನಕ್ಕೆ ಯತ್ನ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

Balagopal

Kerala; ಕೇಂದ್ರದ ಸವಾಲು ನಡುವೆ ರಾಜ್ಯದ ಆದಾಯ ಹೆಚ್ಚಳ: ಕೇರಳ ಸಚಿವ

Rain ಕರಾವಳಿ ಸಹಿತ ರಾಜ್ಯದ ವಿವಿಧೆಡೆ ಉತ್ತಮ ಮಳೆ, ನಾಲ್ಕು ಜೀವಹಾನಿ

Rain ಕರಾವಳಿ ಸಹಿತ ರಾಜ್ಯದ ವಿವಿಧೆಡೆ ಉತ್ತಮ ಮಳೆ, ನಾಲ್ಕು ಜೀವಹಾನಿ

Ambedkar ಇಲ್ಲದಿದ್ದರೆ ನೆಹರೂ ಮೀಸಲು ನೀಡುತ್ತಿರಲಿಲ್ಲ : ಮೋದಿ

Ambedkar ಇಲ್ಲದಿದ್ದರೆ ನೆಹರೂ ಮೀಸಲು ನೀಡುತ್ತಿರಲಿಲ್ಲ : ಮೋದಿ

ocon

ಲೀಡ್‌ ಕೊಡಿಸದಿದ್ದರೆ ಅಧಿಕಾರವೂ ಸಿಗದು; ಹುದ್ದೆ ಬಯಸುವ ಕಾರ್ಯಕರ್ತರಿಗೆ ಡಿಕೆಶಿ ಚಾಟಿ

Puttur ಅಂಗಳದಲ್ಲಿದ್ದ ವ್ಯಕ್ತಿ ಸಾವು ಸಿಡಿಲಾಘಾತ / ಹೃದಯಾಘಾತ ಶಂಕೆ

Puttur ಅಂಗಳದಲ್ಲಿದ್ದ ವ್ಯಕ್ತಿ ಸಾವು ಸಿಡಿಲಾಘಾತ / ಹೃದಯಾಘಾತ ಶಂಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.