ಧರ್ಮ ಸಮನ್ವಯತೆ ಸಾರುವ ಕೇರಿಗೊರಿ ಕೇಸರಿ

ಜನಮನ್ನಣೆ ಗಳಿಸಿದ ತುಳು ನಾಟಕ

Team Udayavani, Jan 24, 2020, 6:58 PM IST

JAN-4

ರಾಷ್ಟ್ರಭಕ್ತಿ ಮತ್ತು ಸರ್ವಧರ್ಮ ಸಮನ್ವಯತೆಯನ್ನು ಸಾರುವ ನಾಟಕವಿದು. ರಾಷ್ಟ್ರಭಕ್ತಿ, ಧರ್ಮಗಳ ಸಂಘರ್ಷಗಳ ಸಂದೇಶದ ನಡುವೆಯೂ ನಾಟಕದ ಹಾಸ್ಯ ಸನ್ನಿವೇಶಗಳು ನಿರಂತರವಾಗಿ ನಗೆಗಡಲಲ್ಲಿ ತೇಲುವಂತೆ ಮಾಡುತ್ತವೆ.

ಎರಡು ದಶಕಗಳಿಂದ ತುಳು ರಂಗಭೂಮಿಯಲ್ಲಿ ಸುಮಾರು 30ಕ್ಕೂ ಮಿಕ್ಕಿ ವಿಭಿನ್ನ ಪರಿಕಲ್ಪನೆಯ ತುಳು ನಾಟಕಗಳನ್ನು ನೀಡಿ ಜನಪ್ರಿಯತೆ ಗಳಿಸಿರುವ ಶರತ್‌ ಶೆಟ್ಟಿ ನೇತೃತ್ವದ ಕಿನ್ನಿಗೋಳಿಯ ವಿಜಯಾ ಕಲಾವಿದರು ನಾಟಕ ಸಂಸ್ಥೆಯ ಈ ವರ್ಷದ “ಕೇರಿಗೊರಿ ಕೇಸರಿ’ ತುಳು ನಾಟಕ ಈಗಾಗಲೇ ಭಾರೀ ಜನಮನ್ನಣೆ ಗಳಿಸಿದೆ.

ಹರೀಶ್‌ ಪಡುಬಿದ್ರೆಯವರ ರಚನೆಯ ದಿನೇಶ್‌ ಅತ್ತಾವರ್‌ರವರ ನಿರ್ದೇಶನದ “ಕೇರಿಗೊರಿ ಕೇಸರಿ’ ರಾಷ್ಟ್ರಭಕ್ತಿ ಮತ್ತು ಸರ್ವಧರ್ಮ ಸಮನ್ವಯತೆಯನ್ನು ಸಾರು ತ್ತದೆ.

ನಿವೃತ್ತ ಮುಖ್ಯ ಶಿಕ್ಷಕನೋರ್ವನ ಕುಟುಂಬದ ಸುತ್ತ ಹೆಣೆಯಲಾದ ನಾಟಕದಲ್ಲಿ ತಂಡದ ಎಲ್ಲಾ ಕಲಾವಿದರೂ ಪರಿಪೂರ್ಣ ಅಭಿನಯದೊಂದಿಗೆ ಜೀವ ತುಂಬಿದ್ದಾರೆ. ಶಿಕ್ಷಕನ ಪುತ್ರ ಸಂಘಟನೆಯ ಪ್ರಮುಖನಾಗಿ ಸಮಾಜ ಸೇವೆಯ ಜತೆ ಎಲ್ಲಾ ಧ‌ರ್ಮಗಳ ಜನರ ಕಷ್ಟಗಳಿಗೆ ಬೆಂಗಾವಲಾಗಿ ನಿಂತು ಪ್ರೀತಿ ವಿಶ್ವಾಸಗಳೊಂದಿಗೆ ಊರಿಗೆ ಉಪಕಾರಿಯೆನಿಸುತ್ತಾನೆ. ಮನೆಗೆ ಮಾರಿಯೆಂಬ ರೀತಿಯಲ್ಲಿ ಆತನ ಸಮಾಜಸೇವೆ ಸಂಘಟನೆಗಳನ್ನು ಬದುಕಿನುದ್ದಕ್ಕೂ ದ್ವೇಷಿಸುತ್ತಾ ಬಂದಿರುವ ಶಿಕ್ಷಕ ತನ್ನ ಮಗನ ಬಗ್ಗೆ ಕೊನೆಗೆ ತಳೆಯುವ ನಿರ್ಧಾರ ಇಡೀ ನಾಟಕದ ಪ್ರಧಾನ ಅಂಶ.

ಸಂಘಟನೆಗಳ ಸಾಧಕ-ಬಾಧಕಗಳನ್ನು ನಾಟಕದಲ್ಲಿ ಸಂದೇಶಗಳ ಮೂಲಕ ಎತ್ತಿ ತೋರಿಸಲಾಗಿದ್ದು ನಾಟಕ ಮುಂದುವರಿದಂತೆಲ್ಲಾ ಇದು ನಮ್ಮ ಸಮಾಜದಲ್ಲಿ, ನಮ್ಮ ಪರಿಸರಗಳಲ್ಲಿ ನಡೆಯುತ್ತಿರುವ ವಾಸ್ತವವೋ ಎನ್ನುವಷ್ಟು ತಲ್ಲೀನಕ್ಕೊಳಗಾಗಿಸುತ್ತದೆ. ಜಾತಿ ಧರ್ಮಗಳ ಸಂಘರ್ಷ, ಈ ದೇಶದಲ್ಲಿ ಓರ್ವ ಮಹಿಳೆ ಹೇಗಿರಬೇಕು, ನಮ್ಮ ರಾಜಕಾರಣಿಗಳ ಸ್ಥಿತ್ಯಂತರ ಇವೆಲ್ಲವುಗಳನ್ನು ಎತ್ತಿ ತೋರಿಸಿದ ನಾಟಕ ಕೊನೆಗೆ ಧರ್ಮವೇ ಗೆಲ್ಲುತ್ತದೆ ಎನ್ನುವುದನ್ನು ಸಾರಿ ಹೇಳಿದೆ.

ರಾಷ್ಟ್ರಭಕ್ತಿ, ಧರ್ಮಗಳ ಸಂಘರ್ಷಗಳ ಸಂದೇಶದ ನಡುವೆಯೂ ನಾಟಕದ ಹಾಸ್ಯ ಸನ್ನಿವೇಶಗಳು ನಿರಂತರವಾಗಿ ನಗೆಗಡಲಲ್ಲಿ ತೇಲುವಂತೆ ಮಾಡಿವೆ.

ಸಂಘಟನೆಯ ಪ್ರಮುಖ ಗುಣಕರನ ಪಾತ್ರವನ್ನು ನಿರ್ವಹಿಸಿದ ನಿತೇಶ್‌ ಕಾಂತಾವರ ಪ್ರಧಾನ ಪಾತ್ರಧಾರಿಯಾಗಿ ಮನ ಮುಟ್ಟುವ ಅಭಿನಯ ನೀಡಿದ್ದಾರೆ. ಪುತ್ರನನ್ನು ವಿರೋಧಿಸುವ ತಂದೆಯಾಗಿ ನಿವೃತ್ತ ಶಿಕ್ಷಕ ರಾಮದಾಸ ಮಾಸ್ತರರ ಪಾತ್ರದಲ್ಲಿ ಉದಯ ಕುಮಾರ್‌ ಹಳೆಯಂಗಡಿ ನಾಟಕದ ಗೆಲುವಿಗೆ ಕಾರಣರಾಗಿದ್ದಾರೆ. ಮಾಸ್ತರರ ಹಿರಿಯ ಮಗ ಶುಭಕರನ ಪಾತ್ರವನ್ನು ನಿರ್ವಹಿಸಿದ ಭಾಸ್ಕರ ಪಕ್ಷಿಕೆರೆ, ಮಾಸ್ತರರ ಪತ್ನಿ ಭಾರತಿಯಾಗಿ ಆಭಿನಯಿಸಿದ ಚಿತ್ರಲೇಖಾ ಭಗವಾನ್‌,ಶುಭಕರನ ಪತ್ನಿ ಸೋನುವಿನ ಪಾತ್ರ ನಿರ್ವಹಿಸಿದ ಸುಶ್ಮಿತಾ ಏಳಿಂಜೆ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

ಗುಣಕರನ ಮಿತ್ರ ಶಿಲೀಂದ್ರನಾಗಿ ಹರೀಶ್‌ ಪಡುಬಿದ್ರೆ ಹಾಗೂ ಇನ್ನೋರ್ವ ಮಿತ್ರ ಯಾದವನಾಗಿ ಹಾಸ್ಯನಟ ಸೀತಾರಾಮ ಶೆಟ್ಟಿ ಎಳತ್ತೂರು ಹಾಸ್ಯದ ಹೊನಲು ಹರಿಸಿದ್ದಾರೆ. ಪ್ರಬುದ್ಧ ಹಾಸ್ಯನಟ ಭಗವಾನ್‌ ಸುರತ್ಕಲ್‌ ಸಂಗೀತ ಶಿಕ್ಷಕ ಸಾರಂಗಿಯಾಗಿ ವಿಭಿನ್ನ ಸಂಭಾಷಣೆ ಹಾಗೂ ಹಾಡುಗಳಿಂದ ಗಮನ ಸೆಳೆದಿದ್ದಾರೆ. ಸಾರಂಗಿಯ ಪತ್ನಿ ಟಿಕ್‌ಟಾಕ್‌ ತಾರಾಳ ಪಾತ್ರದಲ್ಲಿ ನರೇಂದ್ರ ಕೆರೆಕಾಡು ನಿರಂತರವಾಗಿ ಹಾಸ್ಯದ ಸನ್ನಿವೇಶ ಹಾಗೂ ಡೈಲಾಗ್‌ಗಳಿಗೆ ಪಂಚ್‌ ನೀಡಿದ್ದಾರೆ. ಮಾಡರ್ನ್ ಹುಡುಗಿ ಸಂಗೀತಳ ಪಾತ್ರದಲ್ಲಿ ರಕ್ಷಿತಾ ಸುದೀರ್‌ ನಂದಳಿಕೆ ಮನೋಜ್ಞ ಅಭಿನಯ ನೀಡಿದ್ದಾರೆ.

ಸುಧಾಕರ ಸಾಲ್ಯಾನ್‌ ಕ್ರೈಸ್ತ ಕುಟುಂಬದವರಾಗಿ ಮೆಸ್ಕಾಂ ಲೈನ್‌ಮ್ಯಾನ್‌ ಆಲ್ವಿನ್‌ನ ಪಾತ್ರದಲ್ಲಿ ನಕ್ಕು ನಗಿಸಿದರೆ ಆತನ ಪತ್ನಿ ಲಿಲ್ಲಿಯಾಗಿ ಸತೀಶ್‌ ಶಿರ್ವ ಸುಧಾಕರನ ಜತೆ ಕೊಂಕಣಿ ಸಂಭಾಷಣೆಗಳ ಮೂಲಕ ಗಮನ ಸೆಳೆದಿದ್ದಾರೆ. ಬಾಲ ಕಲಾವಿದೆ ಮಂಜೂಷಾ ಭಗವಾನ್‌ ಈ ದಂಪತಿಯ ಪುತ್ರಿ ಶಾಲೆಟ್‌ಳ ಪಾತ್ರದಲ್ಲಿ ಭಾವನಾತ್ಮಕ ಅಭಿನಯ ನೀಡಿದ್ದಾರೆ.

ಆಹಾರ ವಿತರಣ ಸಂಸ್ಥೆಯ ಪ್ರತಿನಿಧಿಯ ಪಾತ್ರವನ್ನು ನಿರ್ವಹಿಸಿದ ಹರಿಪ್ರಸಾದ್‌ ನಂದಳಿಕೆ ಹಾಸ್ಯದ ಪಂಚ್‌ ಮೂಲಕ ಮನರಂಜಿಸಿದರೂ ಕೊನೆಗೆ ಭಾವನಾತ್ಮಕ ಡೈಲಾಗ್‌ ಮೂಲಕ ಮನದಲ್ಲಿ ನಿಲ್ಲುವ ನಿರ್ವಹಣೆ ಮಾಡಿದ್ದಾರೆ. ಶರತ್‌ ಶೆಟ್ಟಿ ಶಾಸಕ ಭಗವಾನ್‌ದಾಸರಾಗಿ ಒಂದು ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ.

ಅಶೋಕ್‌ ಪಳ್ಳಿಯವರ ರಚನೆಯ ರಾಷ್ಟ್ರಭಕ್ತಿಯ ಟೈಟಲ್‌ ಸಾಂಗ್‌, ನಾಟಕದ ಮಧ್ಯೆ ಬರುವ ಗ್ರೂಪ್‌ ಹಾಡು ಹಾಗೂ ಕೊನೆಗೆ ಬರುವ ಮಾರ್ಮಿಕ ಪ್ಯಾಥೋ ಹಾಡು ಕೇರಿಗೊರಿ ಕೇಸರಿಯನ್ನು ಗೆಲ್ಲಿಸಿದೆ. ಮುಂಡ್ಕೂರು ದಿನೇಶ್‌ ಪಾಪುರವರ ಹಿನ್ನೆಲೆ ಸಂಗೀತ, ಹಮ್ಮಿಂಗ್ಸ್‌ಗಳು, ಸಂಗೀತದ ತುಣುಕುಗಳು ನಾಟಕದ ಯಶಸ್ಸಿನ ಪ್ರಧಾನ ಅಂಶಗಳಾಗಿವೆ.

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.