ಬಾಳಿಗೊಂದು ಭರವಸೆ


Team Udayavani, Feb 7, 2020, 4:02 AM IST

flower-asa

ಬರಗಾಲದ ದಿನಗಳು, ಅಂದು ನೀರಿನ ಕೊರತೆಯ ಕಾರಣ ಜನರು ತುಂಬಾ ದುಃಖೀತರಾಗಿದ್ದರು. ಟೋನ್‌ ಎಂಬ ಹುಡುಗನಿಗೆ ಒಣಗಿದ ಒಂದು ಹಣ್ಣು ಸಿಕ್ಕಿತ್ತು. ಆ ಹಣ್ಣನ್ನು ಕಂಡು ದುಃಖಪಡುತ್ತಿದ್ದ ಸಮಯದಲ್ಲಿ ಅಪರಿಚಿತ ವ್ಯಕ್ತಿಯು ಅಲ್ಲಿಗೆ ಬಂದ. ಆ ಊರಿನ ಜನರ ಪರಿಸ್ಥಿತಿಯನ್ನು ಕಂಡು ತುಂಬಾ ದುಃಖೀತನಾದ. ಟೋನ್‌ನ ಕೈಯಲ್ಲಿದ್ದ ಒಣಗಿದ ಹಣ್ಣನ್ನು ಕಂಡು,”ನಿಮ್ಮ ಈ ಊರಿನ ಪರಿಸ್ಥಿತಿಯು ಬೇಗನೇ ನಿವಾರಣೆಯಾಗಲಿದೆ. ಇನ್ನು ಒಂದು ವಾರದಲ್ಲಿ ಈ ಊರಿಗೆ ಮಳೆ ಬರಲಿದೆ. ಆ ಮಳೆಯ ನೀರನ್ನು ಹಾಳುಮಾಡದೇ ಸಂಗ್ರಹಿಸಿಡಿ. ಇದರಿಂದಾಗಿ ಎಂದೂ ಈ ಊರಿಗೆ ಬರಗಾಲದ ಸಮಸ್ಯೆ ಕಾಡದು’ ಎಂದನು. ಆ ಅಪರಿಚಿತ ವ್ಯಕ್ತಿಯ ಮಾತು ಕೇಳಿ ಜನರ ಭರವಸೆಯ ಕಿರಣ ಮನದಲ್ಲಿ ಮೂಡಿತ್ತು. “ಇವತ್ತಿನವರೆಗೆ ನಿಮ್ಮನ್ನು ಈ ಊರಿನಲ್ಲಿ ಕಂಡಿಲ್ಲ, ನೀವು ಯಾವ ಊರಿನವರು’ ಎಂದು ಟೋನ್‌ ಪ್ರಶ್ನಿಸಿದನು. ಆಗ ಅಪರಿಚಿತ ವ್ಯಕ್ತಿಯು ಮುಗುಳು ನಗುತ್ತ, “ನಾನು ನಿನ್ನ ಹಿತೈಷಿ ಎಂದು ತಿಳಿಯಪ್ಪಾ’ ಎಂದನು. ಆಗ ಟೋನ್‌ ತನ್ನ ದುಃಖವನ್ನು ಆ ಅಪರಿಚಿತ ವ್ಯಕ್ತಿಯ ಬಳಿ ಹೇಳಿದನು. “ನೋಡಿ ಹಲವಾರು ವರ್ಷಗಳಾದರೂ ಮಳೆಬರುವ ಒಂದು ಕುರುಹೂ ಇಲ್ಲ. ಈ ಊರಿನ ಅನೇಕ ಜನರು ನೀರಿನ ಕೊರತೆಯಿಂದ ಬಳಲಿ ತಮ್ಮ ಪ್ರಾಣವನ್ನು ಕಳೆದುಕೊಂಡರು’ ಎಂದನು. ಅಪರಿಚಿತ ವ್ಯಕ್ತಿಯು ಆಕಾಶದತ್ತ ತೋರಿಸುತ್ತ, “ಮೋಡ ಕಾಣಿಸುತ್ತಿದೆಯೇ, ಇದೇ ಮೋಡ ನಿಮ್ಮ ಭರವಸೆಯ ಪ್ರತೀಕ’ ಎಂದು ಸಂತೈಸಿದ. ಕೆಲ ಕ್ಷಣದಲ್ಲಿಯೇ ವ್ಯಕ್ತಿಯು ಮಾಯವಾಗಿದ್ದನು.

ಅಂತೆಯೇ ಕೊನೆಗೂ ಆ ಊರಿಗೆ ಮಳೆಬಂದು ಜನರು ಕುಣಿದು ಕುಪ್ಪಳಿಸಿದರು.

ಟೋನ್‌ ಆ ಅಪರಿಚಿತ ವ್ಯಕ್ತಿಯ ಸಂದೇಶ ಜನರಲ್ಲಿ ಪಸರಿಸಿ ನೀರಿನ ಸಂಗ್ರಹಣೆಯ ವ್ಯವಸ್ಥೆಯ ಮಾಡಿದನು. ಇದರಿಂದ ಯಾವತ್ತೂ ಆ ಊರಿಗೆ ಬರಗಾಲದ ಸಮಸ್ಯೆ ಕಾಡಲಿಲ್ಲ. ಟೋನ್‌ಗೆ ನಿಧಾನಕ್ಕೆ ಅರಿವಾಯಿತು, ಆ ಅಪರಿಚಿತ ವ್ಯಕ್ತಿ ಮತ್ಯಾರೂ ಅಲ್ಲ. ಪ್ರತಿಯೊಬ್ಬರ ಮನಸ್ಸಿನೊಳಗೆ ಇರುವ “ಬದುಕಿನ ಭರವಸೆ’.

ಪ್ರಜ್ಞಾ ಶೆಣೈ
ತೃತೀಯ ಬಿ.ಎ. ಶ್ರೀ ವೆಂಕಟರಮಣ ಮಹಿಳಾ ಕಾಲೇಜು, ಕಾರ್ಕಳ

ಟಾಪ್ ನ್ಯೂಸ್

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.