ಪಂಪ್‌ಸೆಟ್‌ ಆಧಾರ್‌ ಜೋಡಣೆಗೆ ರೈತರಿಗಿಲ್ಲ ಆಸಕ್ತಿ

ಸಂಘಟನೆಗಳ ವಿರೋಧ, ರೈತರ ನಿರುತ್ಸಾಹ

Team Udayavani, Feb 15, 2020, 6:08 AM IST

vidyuth-cut

ಮೆಸ್ಕಾಂ ಪಂಪ್‌ಸೆಟ್‌ ಸಂಪರ್ಕ ಹೊಂದಿರುವವರ ಆಧಾರ್‌ ಸಂಗ್ರಹ ಮಾಡುತ್ತಿದೆ. ಇತರ ಸಂಪರ್ಕಗಳಿಗೆ ಬಿಲ್‌ ಪಾವತಿ ಇದ್ದರೆ ಆ ಸಂದರ್ಭವಾದರೂ ಮಾಹಿತಿ ಪಡೆಯಬಹುದಾಗಿದೆ.

ಕುಂದಾಪುರ: ರೈತರ ಪಂಪ್‌ಸೆಟ್‌ಗಳ ಸಂಪರ್ಕಕ್ಕೆ ಆಧಾರ್‌ ಸಂಖ್ಯೆ ಜೋಡಣೆಗೆ ಮೆಸ್ಕಾಂ ನೀಡಿದ್ದ ಸೂಚನೆಗೆ ರೈತರು ನಿರುತ್ಸಾಹ ತೋರಿಸಿದ್ದಾರೆ. ಇನ್ನೂ ಶೇ.25ರಷ್ಟು ಮಂದಿ ಕೂಡ ಆಧಾರ್‌ ಪ್ರತಿ ನೀಡಿಲ್ಲ. ಇದೀಗ ಮೆಸ್ಕಾಂ ಲೈನ್‌ಮೆನ್‌ಗಳು ಮನೆ ಮನೆ ತಿರುಗಿ ಆಧಾರ್‌ ಸಂಗ್ರಹಿಸುವ ಕೆಲಸದಲ್ಲಿ ತೊಡಗಿದ್ದಾರೆ. ಜ.31 ಇದ್ದ ಗಡುವನ್ನು ಫೆ.29ರ ವರೆಗೆ ವಿಸ್ತರಿಸಲಾಗಿದೆ.

ಆಧಾರ್‌ ಜೋಡಣೆ
ರಾಜ್ಯದ ಎಲ್ಲ ಕೃಷಿ ಪಂಪ್‌ಸೆಟ್‌ಗಳು ಮತ್ತು ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಸೌಲಭ್ಯ ಪಡೆಯುವವರ ಕುರಿತು ಜ. 31ರೊಳಗೆ ವರದಿ ಒಪ್ಪಿಸುವಂತೆ ಮೆಸ್ಕಾಂ ಸೇರಿದಂತೆ ಎಲ್ಲ ವಿದ್ಯುತ್ಛಕ್ತಿ ಸರಬರಾಜು ಕಂಪೆನಿಗಳಿಗೆ ರಾಜ್ಯದ ಆರ್ಥಿಕ ಇಲಾಖೆ ನಿರ್ದೇಶಿಸಿದೆ. ಆದರೆ ಮೆಸ್ಕಾಂ ಪಂಪ್‌ಸೆಟ್‌ ಸಂಪರ್ಕ ಹೊಂದಿರುವವರ ಆಧಾರ್‌ ಸಂಗ್ರಹ ಮಾಡುತ್ತಿದೆ. ಇತರ ಸಂಪರ್ಕಗಳಿಗೆ ಬಿಲ್‌ ಪಾವತಿ ಇದ್ದರೆ ಆ ಸಂದರ್ಭವಾದರೂ ಮಾಹಿತಿ ಪಡೆಯಬಹುದಾಗಿದ್ದು ಪಂಪ್‌ಸೆಟ್‌ಗಳಿಗೆ ಉಚಿತವಾದ ಕಾರಣ ಮಾಹಿತಿಯನ್ನು ತಂದು ಕೊಡದೇ ಇದ್ದರೆ ಹೋಗಿಯೇ ಸಂಗ್ರಹಿಸಬೇಕಾಗುತ್ತದೆ.

ಅರ್ಹರ ಪತ್ತೆ
ಆಧಾರ್‌ ಸಂಗ್ರಹದ ಹಿಂದೆ ಬೇರೆಯದೇ ಸಂಶಯ ರೈತರನ್ನು ಕಾಡುತ್ತಿದೆ. ಅಸಲಿಗೆ 10 ಎಚ್‌ಪಿವರೆಗೆ ಮಾತ್ರ ರೈತರಿಗೆ ಉಚಿತ ವಿದ್ಯುತ್‌ ನೀಡಬಹುದಾಗಿದ್ದು ಅದಕ್ಕಿಂತ ಹೆಚ್ಚಿನ ಸಾಮರ್ಥ್ಯದ ಸಂಪರ್ಕ ಪಡೆದರೆ ಬಳಕೆಯ ದರ ವಿಧಿಸಬಹುದು. ಕೆಲವು ರೈತರು 10 ಎಚ್‌ಪಿಗಿಂತಲೂ ಹೆಚ್ಚು ಸಾಮರ್ಥ್ಯದ ಸಂಪರ್ಕಗಳನ್ನು ಹೊಂದಿದ್ದಾರೆ. ಇನ್ನು ಕೆಲವು ರೈತರು ರಾಜ್ಯದ ಬೇರೆ ಬೇರೆ ಕಡೆ ತೋಟಗಳನ್ನು ಹೊಂದಿದ್ದರೆ, ಅಲ್ಲಿಯೂ ಪಂಪ್‌ಸೆಟ್‌ ಸಂಪರ್ಕ ಪಡೆದಿದ್ದು ಅವುಗಳೆಲ್ಲ ಒಟ್ಟಾಗುವಾಗ 10 ಎಚ್‌ಪಿ ದಾಟುತ್ತದೆ. ಇದನ್ನು ಕಂಡು ಹಿಡಿಯುವುದು ಕೂಡ ಉದ್ದೇಶ. ಈ ಮೂಲಕ 10 ಎಚ್‌ಪಿಗಿಂತ ಕಡಿಮೆ ಸಾಮರ್ಥ್ಯದ ಸಂಪರ್ಕ ಹೊಂದಿದ ರೈತರು ಎಷ್ಟು ಎಂದು ಪತ್ತೆ ಹಚ್ಚುವುದು ಕೂಡ ಈ ಕ್ರಮದಲ್ಲಿ ಸೇರಿದೆ.

ವಿರೋಧ
ಭಾರತೀಯ ಕಿಸಾನ್‌ ಸಂಘದ ಕುಂದಾಪುರ ತಾಲೂಕು ಸಮಿತಿ ಆಧಾರ್‌ ದಾಖಲೆಗಳನ್ನು ನೀಡದಿರಲು ತೀರ್ಮಾನಿಸಿದೆ. ಕರಾವಳಿಯಲ್ಲಿ 4ರಿಂದ 5 ತಿಂಗಳು ಮಾತ್ರ ರೈತರು ಕೃಷಿ ಪಂಪುಗಳ ಮೂಲಕ ವಿದ್ಯುತ್‌ ಬಳಕೆ ಮಾಡುತ್ತಿದ್ದು, 2010ರಲ್ಲಿ ಮೆಸ್ಕಾಂ ಮೀಟರ್‌ ಅಳವಡಿಸಿ, ರೀಡಿಂಗ್‌ ಮಾಡಿ ನೀಡಿದ ಲೆಕ್ಕದಂತೆ ಪ್ರತಿ ಪಂಪಿನ ವಾರ್ಷಿಕ ವಿದ್ಯುತ್‌ ಬಳಕೆ 1,000 ಯುನಿಟ್‌ಗಿಂತ ಕಡಿಮೆ ಇದೆ. ಆದರೆ ಮೆಸ್ಕಾಂ ಕಂಪೆನಿಯು ಸರಾಸರಿ ಬಳಕೆಯ ಆಧಾರದಲ್ಲಿ ಪ್ರತಿ ಪಂಪಿಗೆ ಸರಕಾರದಿಂದ 5,500 ಯುನಿಟ್‌ಗಳಿಗೆ ಸಹಾಯಧನವನ್ನು ಪಡೆಯುತ್ತಿದೆ. ಪ್ರತಿ ಯುನಿಟ್‌ಗೆ 5.51 ರೂ.ನಂತೆ ಸರಕಾರಿ ಸಹಾಯಧನವನ್ನು ಭರಿಸಿಕೊಂಡಿದೆ. ಭಾ.ಕಿ.ಸಂ. ರೈತರ ಆಧಾರ್‌ ದಾಖಲೆಯನ್ನು ನೀಡದಿರಲು ತೀರ್ಮಾನಿಸಿದೆ.

ಯಾಕಾಗಿ?
10 ಎಚ್‌ಪಿ ಮತ್ತು ಕಡಿಮೆ ಸಾಮರ್ಥ್ಯದ ಕೃಷಿ ನೀರಾವರಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್‌ ಸೌಲಭ್ಯ ಇದೆ. ಇದಕ್ಕೆ ವಿದ್ಯುತ್ಛಕ್ತಿ ಕಂಪೆನಿಗಳಿಗೆ ಸರಕಾರದಿಂದ ಹಣ ಪಾವತಿಯಾಗುತ್ತಿದೆ. ಕೃಷಿ ಪಂಪ್‌ಸೆಟ್‌ ಹೊಂದಿದ್ದೂ ಈ ವರೆಗೆ ಆಧಾರ್‌ ಮೊದಲಾದ ದಾಖಲೆಗಳನ್ನು ನೀಡದೆ ಇರುವ ಗ್ರಾಹಕರಿಂದ ಅವುಗಳನ್ನು ಸಂಗ್ರಹಿಸುವುದು, ರಾಜ್ಯದಲ್ಲಿ ಎಷ್ಟು ರೈತರು ಕೃಷಿ ಪಂಪ್‌ ಸೆಟ್‌ ಹೊಂದಿದ್ದಾರೆ? ಯಾರಿಗೆ ಯಾವ ರೀತಿಯ ಸಬ್ಸಿಡಿ ದೊರೆಯುತ್ತಿದೆ? ಎಂದು ತಿಳಿಯುವುದು ಇದರ ಮೊದಲ ಉದ್ದೇಶ.

ಉಚಿತ ವಿದ್ಯುತ್ ಕಟ್
ಆಧಾರ್‌ ಜೋಡಣೆಯಾದ ಬಳಿಕ 10 ಎಚ್‌ಪಿಗಿಂತ ಹೆಚ್ಚು ಸಾಮರ್ಥ್ಯ ಹೊಂದಿರುವ ರೈತರ ಪಂಪ್‌ಸೆಟ್‌ ಸಂಪರ್ಕದ ಉಚಿತ ವಿದ್ಯುತ್‌ಗೆ ಕೊಕ್ಕೆ ಬೀಳಲಿದೆಯೇ ಎಂಬ ಆತಂಕ ರೈತರಲ್ಲಿದೆ. ಅಷ್ಟಲ್ಲದೇ 10ಎಚ್‌ಪಿ ಸಾಮರ್ಥ್ಯದವರೆಗಿನ ಸಂಪರ್ಕಗಳಿಗೆ ಮಾತ್ರ ಸರಕಾರ ಸಬ್ಸಿಡಿ ನೀಡಲಿದೆಯೇ, ರೈತರು ಬಿಲ್‌ ಪಾವತಿಸಿ ಸರಕಾರ ರೈತರ ಖಾತೆಗೆ ಸಬ್ಸಿಡಿ ಹಾಕಲಿದೆಯೇ ಎಂಬಂತಹ ಅನುಮಾನಗಳೂ ಮೂಡಿವೆ.

– ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

Cyclone ಬಾಂಗ್ಲಾ ಕರಾವಳಿಗೆ ರೆಮಲ್‌; ಧಾರಾಕಾರ ಮಳೆ,ತಾಸಿಗೆ 130 ಕಿ.ಮೀ.ವೇಗದಲ್ಲಿ ಚಂಡಮಾರುತ

Cyclone ಬಾಂಗ್ಲಾ ಕರಾವಳಿಗೆ ರೆಮಲ್‌; ಧಾರಾಕಾರ ಮಳೆ,ತಾಸಿಗೆ 130 ಕಿ.ಮೀ.ವೇಗದಲ್ಲಿ ಚಂಡಮಾರುತ

ಕರಾವಳಿಯಲ್ಲಿ ಸಾಧಾರಣ ಮಳೆ; ಇಂದು “ಎಲ್ಲೋ ಅಲರ್ಟ್‌’ಕರಾವಳಿಯಲ್ಲಿ ಸಾಧಾರಣ ಮಳೆ; ಇಂದು “ಎಲ್ಲೋ ಅಲರ್ಟ್‌’

Rain ಕರಾವಳಿಯಲ್ಲಿ ಸಾಧಾರಣ ಮಳೆ; ಇಂದು “ಎಲ್ಲೋ ಅಲರ್ಟ್‌’

ಸರಣಿ ರಜೆ ಶಾಲಾ ಮಕ್ಕಳ ಬೇಸಗೆ ರಜೆ ಮುಕ್ತಾಯ; ಕರಾವಳಿಯ ದೇವಸ್ಥಾನಗಳಲ್ಲಿ ಭಕ್ತಸ್ತೋಮ

ಸರಣಿ ರಜೆ ಶಾಲಾ ಮಕ್ಕಳ ಬೇಸಗೆ ರಜೆ ಮುಕ್ತಾಯ; ಕರಾವಳಿಯ ದೇವಸ್ಥಾನಗಳಲ್ಲಿ ಭಕ್ತಸ್ತೋಮ

ಚರಂಡಿಗೆ ಆಟೋ ಬಿದ್ದು ಚಾಲಕ ಸಾವು ಪ್ರಕರಣ; ತಾತ್ಕಾಲಿಕ ಮುಂಜಾಗ್ರತೆ ಕ್ರಮ

ಚರಂಡಿಗೆ ಆಟೋ ಬಿದ್ದು ಚಾಲಕ ಸಾವು ಪ್ರಕರಣ; ತಾತ್ಕಾಲಿಕ ಮುಂಜಾಗ್ರತೆ ಕ್ರಮ

rahul gandhi

Adani ಗಾಗಿ ಕೆಲಸ ಮಾಡುವಂತೆ ಮೋದಿಗೆ ಬಹುಶಃ ದೇವರು ಹೇಳಿರಬೇಕು: ರಾಹುಲ್‌

Manipal ಆರೋಗ್ಯ, ಶಿಕ್ಷಣಕ್ಕೆ ಮಾಹೆ ಸದಾ ಬೆಂಬಲ; ಡಾ| ಎಚ್‌.ಎಸ್‌. ಬಲ್ಲಾಳ್‌

Manipal ಆರೋಗ್ಯ, ಶಿಕ್ಷಣಕ್ಕೆ ಮಾಹೆ ಸದಾ ಬೆಂಬಲ; ಡಾ| ಎಚ್‌.ಎಸ್‌. ಬಲ್ಲಾಳ್‌

ನೈಋತ್ಯ ಶಿಕ್ಷಕರ, ಪದವೀಧರರ ಕ್ಷೇತ್ರ; ಕಾಂಗ್ರೆಸ್‌ ಗೆಲುವು ಖಚಿತ: ಸಲೀಂ

ನೈಋತ್ಯ ಶಿಕ್ಷಕರ, ಪದವೀಧರರ ಕ್ಷೇತ್ರ; ಕಾಂಗ್ರೆಸ್‌ ಗೆಲುವು ಖಚಿತ: ಸಲೀಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Manipal ಆರೋಗ್ಯ, ಶಿಕ್ಷಣಕ್ಕೆ ಮಾಹೆ ಸದಾ ಬೆಂಬಲ; ಡಾ| ಎಚ್‌.ಎಸ್‌. ಬಲ್ಲಾಳ್‌

Manipal ಆರೋಗ್ಯ, ಶಿಕ್ಷಣಕ್ಕೆ ಮಾಹೆ ಸದಾ ಬೆಂಬಲ; ಡಾ| ಎಚ್‌.ಎಸ್‌. ಬಲ್ಲಾಳ್‌

Part-time ಉದ್ಯೋಗ ಆಮಿಷ: ಲಕ್ಷಾಂತರ ರೂ.ಕಳೆದುಕೊಂಡ ಯುವಕ

Part-time ಉದ್ಯೋಗ ಆಮಿಷ: ಲಕ್ಷಾಂತರ ರೂ.ಕಳೆದುಕೊಂಡ ಯುವಕ

Gangolli ಪತ್ನಿಗೆ ಹಿಂಸೆ; ಪತಿಯ ವಿರುದ್ಧ ಪ್ರಕರಣ ದಾಖಲು

Gangolli ಪತ್ನಿಗೆ ಹಿಂಸೆ; ಪತಿಯ ವಿರುದ್ಧ ಪ್ರಕರಣ ದಾಖಲು

Udupi ಧರ್ಮ ಸಂರಕ್ಷಣೆಯಲ್ಲಿ ಪುರೋಹಿತರು, ವಿದ್ವಾಂಸರ ಪಾತ್ರ ಅಪಾರ: ಪುತ್ತಿಗೆ ಶ್ರೀ

Udupi ಧರ್ಮ ಸಂರಕ್ಷಣೆಯಲ್ಲಿ ಪುರೋಹಿತರು, ವಿದ್ವಾಂಸರ ಪಾತ್ರ ಅಪಾರ: ಪುತ್ತಿಗೆ ಶ್ರೀ

ಉಚ್ಚಾಟಿಸಿದರೇನಂತೆ.. ಜಗದೀಶ್‌ ಶೆಟ್ಟರ್‌ ಮಾದರಿ ಕಣ್ಣ ಮುಂದೆಯೇ ಇದೆ: ರಘುಪತಿ ಭಟ್‌  

ಉಚ್ಚಾಟಿಸಿದರೇನಂತೆ.. ಜಗದೀಶ್‌ ಶೆಟ್ಟರ್‌ ಮಾದರಿ ಕಣ್ಣ ಮುಂದೆಯೇ ಇದೆ: ರಘುಪತಿ ಭಟ್‌  

MUST WATCH

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

ಹೊಸ ಸೇರ್ಪಡೆ

Vimana 2

Bird hit; ಲೇಹ್‌ಗೆ ಹೊರಟಿದ್ದ ವಿಮಾನಕ್ಕೆ ಹಕ್ಕಿ ಢಿಕ್ಕಿ: ದಿಲ್ಲಿಗೆ ವಾಪಸ್‌

Cyclone ಬಾಂಗ್ಲಾ ಕರಾವಳಿಗೆ ರೆಮಲ್‌; ಧಾರಾಕಾರ ಮಳೆ,ತಾಸಿಗೆ 130 ಕಿ.ಮೀ.ವೇಗದಲ್ಲಿ ಚಂಡಮಾರುತ

Cyclone ಬಾಂಗ್ಲಾ ಕರಾವಳಿಗೆ ರೆಮಲ್‌; ಧಾರಾಕಾರ ಮಳೆ,ತಾಸಿಗೆ 130 ಕಿ.ಮೀ.ವೇಗದಲ್ಲಿ ಚಂಡಮಾರುತ

Donald-Trumph

US ಬೈಡೆನ್‌ ಕೆಟ್ಟ ಅಧ್ಯಕ್ಷ ಎಂದ ಟ್ರಂಪ್‌ಗೆ ಜನರಿಂದ ಛೀಮಾರಿ

supreem

NDA ಗೆದ್ದ ಬಳಿಕ ಕೊಲಿಜಿಯಂ ವ್ಯವಸ್ಥೆ ರದ್ದು: ಉಪೇಂದ್ರ ಕುಶ್ವಾಹ

ಕರಾವಳಿಯಲ್ಲಿ ಸಾಧಾರಣ ಮಳೆ; ಇಂದು “ಎಲ್ಲೋ ಅಲರ್ಟ್‌’ಕರಾವಳಿಯಲ್ಲಿ ಸಾಧಾರಣ ಮಳೆ; ಇಂದು “ಎಲ್ಲೋ ಅಲರ್ಟ್‌’

Rain ಕರಾವಳಿಯಲ್ಲಿ ಸಾಧಾರಣ ಮಳೆ; ಇಂದು “ಎಲ್ಲೋ ಅಲರ್ಟ್‌’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.