ಕಣ ರಂಗ: ರಸ್ತೆ ಮೇಲೆ ಧಾನ್ಯ ರಾಶಿ


Team Udayavani, Mar 9, 2020, 5:57 AM IST

ಕಣ ರಂಗ: ರಸ್ತೆ ಮೇಲೆ ಧಾನ್ಯ ರಾಶಿ

ಸುಗ್ಗಿ ಬಂದರೆ ರೈತರು ಹಿರಿ ಹಿರಿ ಹಿಗ್ಗುವರು. ಮಾಗಿದ ಬೆಳೆಯನ್ನು ಕೊಯ್ದು ಗೂಡು ಹಾಕಿ, ಪೂಜೆ ಮಾಡಿ, ತೆನೆ ಮುರಿದು, ಬಂಡಿಗೆ ತೊಟ್ಟಿಲು ಕಟ್ಟಿ ತರುತ್ತಾರೆ. ಊರ ಮಗ್ಗಲ ಹೊಲದಲ್ಲಿಯ ನೆಲ ಸ್ವತ್ಛ ಮಾಡಿ, ಮುಹೂರ್ತ ನೋಡಿ ಮೇಟಿ ನೆಟ್ಟು, ನೀರು ಹಾಕಿ ದನಕರುಗಳಿಂದ ತುಳಸಿ, ಬಡಮನಿಯಿಂದ ಬಡಿದು, ರೂಲು ಹಾಕಿ ಗಟ್ಟಿ ಮಾಡಿ ಕಣ ಮಾಡುತ್ತಾರೆ. ಸೆಗಣಿಯಿಂದ ಸಾರಿಸಿ ಸಜ್ಜುಗೊಳಿಸುತ್ತಾರೆ. ಹೊಲದಿಂದ ತಂದ ತೆನೆಗಳನ್ನು ತೆಳ್ಳಗೆ ಹರವಿ ಹಂತಿ ಕಟ್ಟುತ್ತಾರೆ. ಆದರೆ… ಆಧುನೀಕರಣದ ಗಾಳಿ ಹಳ್ಳಿಗೂ ಬೀಸಿ ಕಣ ಮಾಡಿ ರಾಶಿ ಮಾಡುವುದು ಕಣ್ಮರೆಯಾಗುತ್ತಿದೆ.

ಹೊಸ ವಿಧಾನ
ಕೆಲಸ ಸುಲಭ ಮಾಡಿಕೊಳ್ಳುತ್ತಿದ್ದಾರೆ. ರಸ್ತೆ ಮೇಲೆ ರಾಶಿ ಮಾಡುವ ಹೊಸ ವಿಧಾನವನ್ನು ಅವರು ಕಂಡುಕೊಂಡಿದ್ದಾರೆ. ಇಂದು ಊರ ಮುಂದೆ ಹಾಯುವ ಟಾರು ರಸ್ತೆಗಳೇ ಅದೆಷ್ಟೋ ರೈತರಿಗೆ ಕಣಗಳಾಗಿವೆ. ಟಾರು ರಸ್ತೆಯ ದಂಡೆಗೆ ಮೇವಿನ ಇಂಡಿಗೆಯ ದಿಂಡುಗಳನ್ನು ಕಟ್ಟುತ್ತಾರೆ. ಮುರಿದು ತಂದ ತೆನೆಗಳನ್ನು ನಡುವೆ ಹರವುತ್ತಾರೆ. ಮಗ್ಗಲು ಮಕ್ಕಳು ಮರಿಗಳೊಂದಿಗೆ ಕೊಡುತ್ತಾರೆ. ಒಮ್ಮೊಮ್ಮೆ ದಂಡೆಗುಂಟ ದಿಂಡುಗಲ್ಲುಗಳನ್ನು ಚೆಲ್ಲಿರುತ್ತಾರೆ. ಅಡ್ಡಾಡುವ ಗಾಡಿಗಳು ತೆನೆಯ ಮೇಲೆ ಹಾದು ಹೋಗಲಿ ಎಂಬುದೇ ಅದರ ಉದ್ದೇಶ. ಅಕಸ್ಮಾತ್‌ ವಾಹನ ಚಾಲಕ ವೇಗ ಕಡಿಮೆ ಮಾಡಿ, ಹಾರ್ನ್ ಹಾಕಿ ಮಗ್ಗಲು ಹಾಸಿ ಹೋದರೆ ಕುಂತವರೆಲ್ಲ ಕೆಂಗಣ್ಣು ಬೀರುತ್ತಾರೆ.

ರಸ್ತೆಯಲ್ಲಿ ವಾಹನಗಳ ಓಡಾಟದಿಂದಲೇ ಕಾಳುಗಳು ಬೇರ್ಪಡುತ್ತವೆ. ಆನಂತರ ಕಂಕಿಗಳನ್ನು ತೆಗೆದು ಕಾಳನ್ನು ತೂರಿದರೆ ರಾಶಿ ಮುಗಿದಂತೆಯೇ. ರಾಶಿಗಾಗಿ ರೈತರು ಕಣ ಮಾಡಬೇಕಾಗಿಲ್ಲ. ಎತ್ತು ಕಟ್ಟಬೇಕಾಗಿಲ್ಲ. ಹಂತಿ ಹೊಡೆಯಬೇಕಾಗಿಲ್ಲ. ರಸ್ತೆಗಳೇ ಕಣಗಳಾಗಿರುತ್ತವೆ. ಜೋಳ, ಸಜ್ಜೆ, ನವಣಿ, ನೆಲ್ಲು, ಕಡಲೆ, ತೊಗರಿ, ಹುರುಳಿ, ಅಗಸಿ, ಎಳ್ಳು, ಹೆಸರು, ಅಲಸಂದಿ… ಇತ್ಯಾದಿಗಳ ರಾಶಿಯನ್ನು ರಸ್ತೆಯ ಮೇಲೆಯೇ ಮಾಡುತ್ತಿದ್ದಾರೆ.

ಗಲೀಜು ನೈರ್ಮಲ್ಯ
ಹಿಂದಿನವರು ಕಣವನ್ನು ಬಹಳ ಜತನದಿಂದ ನೋಡಿಕೊಳ್ಳುತ್ತಿದ್ದರು. ಕಣದ ಸಮೀಪ ಬರುವವರು ತಮ್ಮ ಪಾದರಕ್ಷೆಗಳನ್ನು ದೂರದಲ್ಲಿಯೇ ಬಿಡುತ್ತಿದ್ದರು. ಪಾದರಕ್ಷೆಯ ಧೂಳು ಕಾಳಿನಲ್ಲಿ ಸೇರಬಾರದು ಎಂಬ ಉದ್ದೇಶವೇ ಇರಬೇಕು. ಇನ್ನೂ ಹಲವಾರು ನಿಯಮಗಳನ್ನು ಅವರು ಪಾಲಿಸುತ್ತಿದ್ದರು. ಹಂತಿ ನಡೆದಾಗ ಎತ್ತುಗಳ ಸಗಣಿ, ಮೂತ್ರ ಧಾನ್ಯದಲ್ಲಿ ಬೀಳದಂತೆ ಎಚ್ಚರಿಕೆ ವಹಿಸುತ್ತಿದ್ದರು. ಇಂಥ ಹಂತಿಯಿಂದ ಬಂದ ಕಾಳುಗಳು ನಿರ್ಮಲವಾಗಿರುತ್ತಿದ್ದವು. ಬಳಸಲು ಸಿದ್ಧವಾಗಿರುತ್ತಿದ್ದವು. ಇನ್ನು ರಸ್ತೆ ಮೇಲಿನ ರಾಶಿ ಸ್ಥಿತಿಯನ್ನು ನೋಡಿದರೆ ನಿರ್ಮಲವಾಗಿರುತ್ತದೆ ಎಂದು ಹೇಳಲು ಸಾಧ್ಯವೇ ಇಲ್ಲ. ರಸ್ತೆ ಮೇಲೆ ಅಡ್ಡಾಡುವ ಎತ್ತು, ಎಮ್ಮೆ, ಕತ್ತೆ, ಆಡು, ಕುರಿ, ಕೋಳಿ, ನಾಯಿ, ನರಿಗಳೂ ಸಹ ತಮ್ಮ ಗಂಜಲವನ್ನು ಅಲ್ಲಿ ಸುರಿದಿರುತ್ತವೆ. ವಾಹನಗಳ ಗಾಲಿಗಳ ಮೇಲಿನ ಗಲೀಜು, ರಸ್ತೆ ಮೇಲಿನ ಗಲೀಜು ಇವೆಲ್ಲದರಿಂದಾಗಿ ಆ ಕಾಳುಗಳಿಗೂ ಗಲೀಜು ಮೆತ್ತಿಕೊಳ್ಳುವುದು. ಟಯರಿನ ಸುಟ್ಟ ವಾಸನೆ, ಡಾಂಬರಿನ ದುರ್ಗಂಧ, ಸೈಲೆನ್ಸರ್‌ ಪೈಪು ಕಾರುವ ಕಪ್ಪು ಹೊಗೆಯಲ್ಲಿಯ ವಿಷ ಇವೆಲ್ಲವುಗಳ ಲೇಪನ ಕಾಳು ಕಡ್ಡಿಗಳಿಗೆ ಸಿಗುವುದು. ಅದನ್ನು ಸೇವಿಸಿದವರ ಆರೋಗ್ಯದ ಗತಿ ದೇವರೇ ಬಲ್ಲ!

ಕಾಳಿನಲ್ಲಿ ಕ್ಯಾನ್ಸರ್‌ಕಾರಕ ಅಂಶ
ರಸ್ತೆಯ ಡಾಂಬರು ಕಾಳುಗಳಿಗೆ ಡಾಂಬರಿನ ಲೇಪನ ಕೊಡಬಹುದು. ಅದು ಹೇಗೆಂದರೆ, ಉರಿಬಿಸಿಲಿನಲ್ಲಿ ಡಾಂಬರು ಮೆತ್ತಗಾಗಿರುತ್ತದೆ. ಆ ಸ್ಥಿತಿಯಲ್ಲಿ ವಾಹನ ಅದರ ಮೇಲೆ ಹರಿದಾಗ ಡಾಂಬರು ಕಾಳುಗಳಿಗೆ ಅಂಟಿಕೊಳ್ಳುವ ಸ್ಥಿತಿಯಲ್ಲಿ ಇರುತ್ತದೆ. ಡಾಂಬರು ಕ್ಯಾನ್ಸರ್‌ ತರುತ್ತದೆಂದು ನೂರಾರು ವರ್ಷಗಳ ಮೊದಲೇ ಖಚಿತವಾಗಿದೆ. ಹೀಗಾಗಿ ಧಾನ್ಯ ಕ್ಯಾನ್ಸರ್‌ಕಾರಕವೂ ಆಗುವ ಸಾಧ್ಯತೆ ಇರುತ್ತದೆ. ಇನ್ನಾದರೂ ರೈತರು ರಸ್ತೆಯಲ್ಲಿ ರಾಶಿ ಮಾಡುವುದನ್ನು ತಡೆದು ವಿದಾಯ ಹೇಳಿ, ಅನವಶ್ಯಕ ಅವಘಡಗಳನ್ನು ತಪ್ಪಿಸಲಿ !

ರಸ್ತೆ ಮೇಲೆ ರಾಶಿ ಮಾಡುವುದು ಕಾನೂನುಬಾಹಿರ. ರೈತರು ರಸ್ತೆಯ ಮೇಲೆ ರಾಶಿ ಮಾಡಲು ಬಳಸುವ ಯಂತ್ರೋಪಕರಣ, ಯಂತ್ರೋಪಕರಣದ ಬಿಡಿಭಾಗಗಳನ್ನು ಮತ್ತಿತರ ವಸ್ತುಗಳನ್ನು ರಸ್ತೆಯ ಮೇಲೆ ಎಲ್ಲೆಂದರಲ್ಲಿ ಬಿಟ್ಟಿರುತ್ತಾರೆ. ಇದರಿಂದ ರಾತ್ರಿ ವೇಳೆಯಲ್ಲಷ್ಟೇ ಅಲ್ಲ, ಹಗಲಿನಲ್ಲಿಯೇ ರಸ್ತೆ ಸಂಚಾರಕ್ಕೆ ತೊಂದರೆಯುಂಟಾಗುತ್ತದೆ. ದ್ವಿಚಕ್ರ ವಾಹನಗಳು ಅದರ ಮೇಲೆ ಬರ್ರನೆ ಹೋದರೆ ಆಯ ತಪ್ಪಿ ಬೀಳುವ ಸಾಧ್ಯತೆ ಇರುತ್ತದೆ.

ಚಿತ್ರ ಲೇಖನ: ಡಾ. ಕರವೀರಪ್ರಭು ಕ್ಯಾಲಕೊಂಡ

ಟಾಪ್ ನ್ಯೂಸ್

Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್‌ಗೆ ಮತಹಾಕಲಿ: ಯೋಗೇಂದ್ರ ಯಾದವ್

Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್‌ಗೆ ಮತಹಾಕಲಿ: ಯೋಗೇಂದ್ರ ಯಾದವ್

ರಜಿನಿಕಾಂತ್‌ ʼಕೂಲಿʼಯಲ್ಲಿ ಅನುಮತಿಯಿಲ್ಲದೆ ಹಾಡು ಬಳಕೆ: ಲೀಗಲ್‌ ನೋಟಿಸ್‌ ಕಳುಹಿಸಿದ ಇಳಯರಾಜ

ರಜಿನಿಕಾಂತ್‌ ʼಕೂಲಿʼಯಲ್ಲಿ ಅನುಮತಿಯಿಲ್ಲದೆ ಹಾಡು ಬಳಕೆ: ಲೀಗಲ್‌ ನೋಟಿಸ್‌ ಕಳುಹಿಸಿದ ಇಳಯರಾಜ

Viral: ಮದುವೆಯ ದಿನ ವಧುವಿಗೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಭಾವಚಿತ್ರ ಉಡುಗೊರೆ ನೀಡಿದ ವರ

Viral: ಮದುವೆಯ ದಿನ ವಧುವಿಗೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಭಾವಚಿತ್ರ ಉಡುಗೊರೆ ನೀಡಿದ ವರ

15-1

ಖಡಕ್ ಬಿಸಿಲು- ಪೊಲೀಸ್ ತಳ್ಳಾಟದಿಂದ ಸಂಸದ ಡಾ.‌ಜಾಧವ್ ಅಸ್ವಸ್ಥ: ಆಸ್ಪತ್ರೆಗೆ ದಾಖಲು

14-bidar

Prajwal Pendrive Case: ವಿಶ್ವದ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಘಟನೆ ಇದು

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು ವಿಳಂಬವಾಗಿಲ್ಲ: ಗೃಹ ಸಚಿವ ಜಿ.‌ಪರಮೇಶ್ವರ್

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು ವಿಳಂಬವಾಗಿಲ್ಲ: ಗೃಹ ಸಚಿವ ಜಿ.‌ಪರಮೇಶ್ವರ್

ಸಲ್ಮಾನ್‌ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್‌ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ

ಸಲ್ಮಾನ್‌ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್‌ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್‌ಗೆ ಮತಹಾಕಲಿ: ಯೋಗೇಂದ್ರ ಯಾದವ್

Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್‌ಗೆ ಮತಹಾಕಲಿ: ಯೋಗೇಂದ್ರ ಯಾದವ್

Manipal ಆಸ್ಪತ್ರೆಯ ಡಾ.ರಾಮದಾಸ್‌ ಪೈ ಬ್ಲಾಕ್; 161 ವಿಶೇಷ ಹಾಸಿಗೆಗಳ ವಾರ್ಡ್‌ ಸೇವೆ ಆರಂಭ

Manipal ಆಸ್ಪತ್ರೆಯ ಡಾ.ರಾಮದಾಸ್‌ ಪೈ ಬ್ಲಾಕ್; 161 ವಿಶೇಷ ಹಾಸಿಗೆಗಳ ವಾರ್ಡ್‌ ಸೇವೆ ಆರಂಭ

ರಜಿನಿಕಾಂತ್‌ ʼಕೂಲಿʼಯಲ್ಲಿ ಅನುಮತಿಯಿಲ್ಲದೆ ಹಾಡು ಬಳಕೆ: ಲೀಗಲ್‌ ನೋಟಿಸ್‌ ಕಳುಹಿಸಿದ ಇಳಯರಾಜ

ರಜಿನಿಕಾಂತ್‌ ʼಕೂಲಿʼಯಲ್ಲಿ ಅನುಮತಿಯಿಲ್ಲದೆ ಹಾಡು ಬಳಕೆ: ಲೀಗಲ್‌ ನೋಟಿಸ್‌ ಕಳುಹಿಸಿದ ಇಳಯರಾಜ

Viral: ಮದುವೆಯ ದಿನ ವಧುವಿಗೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಭಾವಚಿತ್ರ ಉಡುಗೊರೆ ನೀಡಿದ ವರ

Viral: ಮದುವೆಯ ದಿನ ವಧುವಿಗೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಭಾವಚಿತ್ರ ಉಡುಗೊರೆ ನೀಡಿದ ವರ

ಅಯ್ಯೋ ಬಿಸಿಲು! ಕರಾವಳಿಯಲ್ಲಿ ಮಣ್ಣಿನ ತೇವಾಂಶ ಕಡಿಮೆ: ನೀರಿಲ್ಲ, ಫಸಲಿಲ್ಲ

ಅಯ್ಯೋ ಬಿಸಿಲು! ಕರಾವಳಿಯಲ್ಲಿ ಮಣ್ಣಿನ ತೇವಾಂಶ ಕಡಿಮೆ: ನೀರಿಲ್ಲ, ಫಸಲಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.